Home namma chikmagalur chikamagalur ಶತೃದೇಶದ 93 ಸಾವಿರ ಸೈನಿಕರನ್ನು ಶರಣಾಗತಿಗೊಳಿಸಿದ ಕೀರ್ತಿ ಭಾರತ
chikamagalurHomeLatest Newsnamma chikmagalur

ಶತೃದೇಶದ 93 ಸಾವಿರ ಸೈನಿಕರನ್ನು ಶರಣಾಗತಿಗೊಳಿಸಿದ ಕೀರ್ತಿ ಭಾರತ

Share
Share

ಚಿಕ್ಕಮಗಳೂರು: ಇಂಡೋ-ಪಾಕ್‌ನ ೭೧ರ ಯುದ್ಧದಲ್ಲಿ ಮೊಟ್ಟ ಮೊದಲ ಬಾರಿಗೆ ಶತೃದೇಶದ ೯೩ ಸಾವಿರ ಸೈನಾಧಿಕಾರಿ ಮತ್ತು ಸೈನಿಕರನ್ನು ಶರಣಾಗತಿಗೊಳಿಸಿದ ಕೀರ್ತಿ ಭಾರತೀಯ ಹೆಮ್ಮೆಯ ಸೈನಿಕರಿಗೆ ಸಲ್ಲುತ್ತದೆ ಎಂದು ಲೆ.ಕರ್ನಲ್ ಹಾಗೂ ಸರ್ಕಾರಿ ವೈದ್ಯ ಡಾ|| ರಾಜೀವ್ ಹೇಳಿದರು.

ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಭಾನುವಾರ ಚಿಕ್ಕಮಗಳೂರು ಮಾಜಿ ಸೈನಿಕರ ಸಂಘದಿಂದ ಆಯೋಜಿಸಿದ್ಧ ೧೯೭೧ರ ಯುದ್ಧದ ೫೫ನೇ ವಿಜಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅಂದಿನ ೭೧ರ ಯುದ್ಧದಲ್ಲಿ ಕ್ಯಾಪ್ಟನ್ ಮಾಣಿಕ್ ಶಾ ಅವರ ನಾಯಕತ್ವದಲ್ಲಿ ಪೂರ್ವ ತಯಾರಿ ನಡೆಸಿ ದ ಇಂಡೋ-ಪಾಕ್ (ಬಾಂಗ್ಲಾ) ಯುದ್ಧದಲ್ಲಿ ನಮ್ಮ ಸೈನಿಕರನ್ನು ಅಣಿಗೊಳಿಸಿತು. ನೆರೆದೇಶದ ಹಿಂಸಾತ್ಮಕ ಕೃತ್ಯಗಳಿಗೆ ಕಡಿವಾಣ ಹಾಕಲು ತಂತ್ರಗಾರಿಕೆ ನಡೆಸಿ ಯುದ್ಧದಲ್ಲಿ ಸಂಪೂರ್ಣ ಯಶಸ್ವಿಕಂಡಿತು ಎಂದರು.

ಭಾರತ ಏಕನಡೆಯೊಂದಿಗೆ ಎಂದಿಗೂ ಯುದ್ಧವನ್ನು ಸಾರಿಲ್ಲ. ಅಲ್ಲಿನ ಜಾತಿ ಆಧಾರದಲ್ಲಿ ನಡೆದ ಕೊ ಲೆ, ಸುಲಿಗೆ ಹಾಗೂ ದರೋಡೆಕೋರರನ್ನು ಮಟ್ಟಹಾಕಲು ಮತ್ತು ಭಾರತ ಗಡಿಭಾಗದಲ್ಲಿ ನುಸುಳುಕೋರರ ನ್ನು ತಡೆಗಟ್ಟಲು ಯುದ್ದವನ್ನು ಸಾರಿತು. ಅಲ್ಲದೇ ಬಂಧಿಸಿದ ನೆರೆದೇಶದ ಸೈನಿಕರನ್ನು ಸುರಕ್ಷಿತವಾಗಿ ವಾಪ ಸ್ ಕಳುಹಿಸಿಕೊಟ್ಟಿದೆ ಎಂದು ಹೇಳಿದರು.

ಪೂರ್ವ ಪಾಕಿಸ್ತಾನವನ್ನು, ಪಾಕಿಸ್ತಾನದ ದೌರ್ಜನ್ಯದಿಂದ ವಿಮುಕ್ತಿಗೊಳಿಸಿ, ಪ್ರತ್ಯೇಕ ‘ಬಾಂಗ್ಲಾದೇಶ’ ರಾ?ದ ಉಗಮಕ್ಕೆ ಕಾರಣವಾದ ಭಾರತದ ಹೋರಾಟಕ್ಕೆ ಗೆಲುವು ಸಿಕ್ಕ ವಿಜಯದ ದಿನವಿದು. ಈ ಹೋ ರಾಟದಲ್ಲಿ ರಾಷ್ಟ್ರದ ಹಲವಾರು ಸೈನಿಕರು ಬಲಿದಾನಗೈದಿದ್ದು, ಇಂದಿಗೂ ಕೆಲವರು ನಮ್ಮ ಜೊತೆಗಿರುವುದು ಹೆಮ್ಮೆಯ ಕ್ಷಣ ಎಂದರು.

ಹಿರಿಯ ನ್ಯಾಯವಾದಿ ಬಿ.ಎಂ.ಲಕ್ಷ್ಮಣಗೌಡ ಮಾತನಾಡಿ ಅಮೇರಿಕಾ ದೇಶ ಜಗತ್ತಿನ ಎದುರು ಬಲಾ ಡ್ಯ ರಾಷ್ಟ್ರವೆಂದು ಬಿಂಬಿಸಿಕೊಂಡು, ಭಾರತದ ಮೇಲೆ ವಿಪರೀತ ತೆರಿಗೆ ಏರಿಸುತ್ತಿದೆ. ಇದೀಗ ಆಧುನಿಕ ಭಾರ ತವು ಪ್ರಪಂಚದ ಮೂರನೇ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದ್ದು ಸದ್ಯದಲ್ಲೇ ಅಮೇರಿಕಾವನ್ನು ದೊಡ್ಡಣ್ಣ ಸ್ಥಾನದಿಂದ ಕೆಳಗಿಳಿಸಿ, ಭಾರತ ದೊಡ್ಡಣ್ಣನ ಪಟ್ಟಕ್ಕೆರಲಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಮಾಜಿ ಸೈನಿಕರ ಸಂಘ ದಿನೇ ದಿನೇ ಗಟ್ಟಿಯಾಗುತ್ತಿದೆ. ಬೆರಳಣಿಕೆಯಷ್ಟಿದ್ಧ ಸಂಘವು ಇಂ ದು ಅನೇಕ ಹಿರಿಯ ಅಧ್ಯಕ್ಷರ ನೇತೃತ್ವದಲ್ಲಿ ಬೃಹತ್ ಹೆಮ್ಮರವಾಗಿ ಬೆಳೆದಿದೆ. ಅಲ್ಲದೇ ಸಭೆ, ಸಮಾರಂಭ ಹಾಗೂ ವಿಜಯೋತ್ಸವ ಕಾರ್ಯಕ್ರಮ ಹಮ್ಮಿಕೊಂಡು ಶಕ್ತಿಯುತವಾಗುತ್ತಿದೆ ಎಂದು ತಿಳಿಸಿದರು.

ಮಾಜಿ ಸೈನಿಕರ ಸಂಘದ ಅಧ್ಯಕ್ಷ ಸಿ.ಎಸ್.ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿ ಭಾರತ ಸಾವಿ ರಾರು ಮೈಲುಗಳಲ್ಲಿ ಗಡಿಯ ವಿಸ್ತಾರ ಹಂಚಿಕೊಂಡಿದೆ. ಗಡಿರೇಖೆಯಲ್ಲಿ ಭಾರತೀಯ ನೆಲವನ್ನು ಕಾಪಾಡಿ ಕೊಳ್ಳಲು ನಮ್ಮ ಸೈನಿಕರು ಚಳಿ, ಬಿಸಿಲೆನ್ನದೇ ಹಗಲು-ರಾತ್ರಿಯಲ್ಲೂ ಕಾದು ದೇಶವನ್ನು ರಕ್ಷಿಸುವುದನ್ನು ಮ ರೆಬಾರದು ಎಂದರು.

ಸ್ವಾತಂತ್ರ್ಯ ಪೂರ್ವದಲ್ಲಿ ರಾಷ್ಟ್ರವು ಅನೇಕ ಯುದ್ಧಗಳನ್ನು ಎದುರಿಸಿತು. ಆದರೆ ಇಂಡೋ-ಪಾಕ್ ಯುದ್ಧವು ಭಾರತೀಯ ಸೈನ್ಯಕ್ಕೆ ಮನ್ನಣೆ ತಂದುಕೊಟ್ಟಿದೆ. ೭೧ರಲ್ಲಿ ನಡೆದ ೧೩ ದಿನಗಳ ಯುದ್ಧವು ಪಾಕಿಸ್ತಾ ನದೊಂದಿಗೆ ನಡೆದಿದ್ದು, ಇದನ್ನು ಬಾಂಗ್ಲಾದೇಶ ಯುದ್ಧವೇಂದೇ ಪ್ರತೀಕವಾಗಿದೆ. ಈ ಯುದ್ಧವು ಭಾರತದ ಇತಿಹಾಸದಲ್ಲಿ ಸದಾ ನೆನಪಿಸಲಿದೆ ಎಂದು ಹೇಳಿದರು.

ಇದೇ ವೇಳೆ ರೋಟರಿ ಕ್ಲಬ್‌ನಿಂದ ಮಾಜಿ ಸೈನಿಕರ ಸಂಘಕ್ಕೆ ಉಚಿತವಾಗಿ ಕಂಪ್ಯೂಟರ್ ಕೊಡುಗೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ಕೃಷ್ಣೇಗೌಡ, ಕಾರ್ಯದರ್ಶಿ ಪ್ರದೀಪ್ ಕೋಟೆ, ಖಜಾಂಚಿ ರಾಜೇಗೌಡ, ಮಾಜಿ ಅಧ್ಯಕ್ಷ ನಾಗರಾಜ್, ರೋಟರಿ ಕ್ಲಬ್ ಅಧ್ಯಕ್ಷ ಲಿಖಿತ್ ಉಪಸ್ಥಿತರಿದ್ದರು.

India is credited with surrendering 93000 enemy soldiers.

 

Share

Leave a comment

Leave a Reply

Your email address will not be published. Required fields are marked *

Don't Miss

ನಾಮಫಲಕದಲ್ಲಿ ಶೇ.೬೦ರಷ್ಟು ಕನ್ನಡಕ್ಕೆ ಪ್ರಾಧಾನ್ಯತೆಗೆ ಸೂಚನೆ

ಚಿಕ್ಕಮಗಳೂರು: ಮುಂದಿನ ಒಂದು ವಾರದೊಳಗೆ ಉದ್ಯಮದ ಎಲ್ಲಾ ನಾಮಫಲಕಗಳಲ್ಲಿ ಸರ್ಕಾರದ ನಿಯಮಗಳ ಅನ್ವಯ ಶೇ. ೬೦ರಷ್ಟು ಕನ್ನಡ ನಾಮಫಲಕ ಇರುವಂತೆ ಕ್ರಮ ಕೈಗೊಳ್ಳಬೇಕು. ತಪ್ಪಿದಲ್ಲಿ ನಗರಸಭೆಯಿಂದ ನಾಮಫಲಕಗಳನ್ನು ತೆರವುಗೊಳಿಸಿ ಕಾನೂನು ರೀತಿ...

ಮದುವೆ ಮನೆಯಲ್ಲಿ ₹3.75 ಲಕ್ಷ ಮೌಲ್ಯದ ಚಿನ್ನಾಭರಣ ಕಳವು

ಚಿಕ್ಕಮಗಳೂರು: ಜಿಲ್ಲೆಯ ಬಾಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮದುವೆ ಕಾರ್ಯಕ್ರಮಕ್ಕೆ ತೆರಳಿದ್ದ ವೇಳೆ ಸುಮಾರು ₹3.75 ಲಕ್ಷ ಮೌಲ್ಯದ ಚಿನ್ನಾಭರಣ ಕಳುವಾಗಿರುವ ಘಟನೆ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಇಬ್ಬರು ಸಂಬಂಧಿಕರ...

Related Articles

ಮನೆಯಲ್ಲಿ ಇಟ್ಟಿದ್ದ ಚಿನ್ನಾಭರಣ-20 ಸಾವಿರ ನಗದು ಕಳವು

ಚಿಕ್ಕಮಗಳೂರು: ಮನೆಯ ಬೀರುವಿನಲ್ಲಿ ಇರಿಸಿದ್ದ ಸುಮಾರು ೨೮ ಗ್ರಾಂ ಚಿನ್ನಾಭರಣ ಹಾಗೂ ?೨೦ ಸಾವಿರ ನಗದು...

ವೃದ್ದಾಪ್ಯ, ಅಂಗವಿಕಲ ವೇತನ ವಿಳಂಬ ಖಂಡಿಸಿ ಬಿಜೆಪಿ ಪ್ರತಿಭಟನೆ

ಚಿಕ್ಕಮಗಳೂರು: ವೃದ್ದಾಪ್ಯ, ವಿಧವಾ, ವಿಕಲಚೇತನ ಹಾಗೂ ಬಿಪಿಎಲ್ ಕಾರ್ಡ್ ರದ್ದು ಪಡಿಸಿರುವ ರಾಜ್ಯದ ಕಾಂಗ್ರೆಸ್ ಸರ್ಕಾರದ...

19 ಲಕ್ಷ ಜನರ ಪಿಂಚಣಿ ರದ್ದು: ಸರ್ಕಾರದ ವಿರುದ್ಧ ವಿಧಾನಮಂಡಲದಲ್ಲಿ ಸಂಗ್ರಾಮ

ಸಖರಾಯಪಟ್ಟಣ: ರಾಜ್ಯದಲ್ಲಿ 19 ಲಕ್ಷಕ್ಕೂ ಹೆಚ್ಚು ಜನರ ವೃದ್ಧಾಪ್ಯ, ವಿಧವಾ ಹಾಗೂ ಅಂಗವಿಕಲ ಪಿಂಚಣಿಯನ್ನು ರದ್ದುಪಡಿಸಲಾಗಿದೆ....

ಸಖರಾಯಪಟ್ಟಣದ ಮೂಲಸೌಕರ್ಯ ಸಮಸ್ಯೆ ಪರಿಹಾರಕ್ಕೆ 5 ಬೇಡಿಕೆ

ಚಿಕ್ಕಮಗಳೂರು: ಜಿಲ್ಲೆಯ ಪ್ರಮುಖ ಗ್ರಾಮ ಪಂಚಾಯಿತಿಗಳಲ್ಲಿ ಒಂದಾಗಿರುವ ಸಖರಾಯಪಟ್ಟಣದಲ್ಲಿ ಮೂಲಭೂತ ಸೌಲಭ್ಯಗಳ ಕೊರತೆಯಿಂದ ಜನರು ತೊಂದರೆ...