ಚಿಕ್ಕಮಗಳೂರು: ಸಖರಾಯಪಟ್ಟಣದ ಕಾಂಗ್ರೆಸ್ ಮುಖಂಡ ಗಣೇಶ (35) ಕ್ಷುಲ್ಲಕ ಕಾರಣಕ್ಕೆ ಕೊಲೆಯಾಗಿದ್ದಾನೆ, ಜೆ.ಡಿ.ಎಸ್ ನಲ್ಲಿ ಗುರ್ತಿಸಿ ಕೊಂಡಿದ್ದು ಅಲ್ಲಿ ರಗಳೆ ಮಾಡಿಕೊಂಡು ಕಾಂಗ್ರೆಸ್ ಸೇರಿಕೊಂಡು ರಾಜಕೀಯವಾಗಿ ಬೆಳೆಯಲು ಪ್ರಾರಂಭ ಮಾಡಿದ್ದ ,ಗ್ರಾಮ ಪಂಚಾಯತಿ ಸದಸ್ಯನಾಗಿ ಜಿಲ್ಲಾ ಒಕ್ಕಲಿಗರ ಸಂಘದ ನಿರ್ದೇಶಕನಾಗಿ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದ ಗಣೇಶ ಮುಂಬರುವ ಜಿಲ್ಲಾ ಪಂಚಾಯತಿಗೆ ಸ್ಪರ್ಧೆ ಮಾಡಲು ತಯಾರಿ ನಡೆಸಿದ್ದ ಎನ್ನಲಾಗಿದೆ.
ದತ್ತ ಜಯಂತಿ ಹಿನ್ನೆಲೆಯಲ್ಲಿ ಭಜರಂಗದಳದವರು ಬ್ಯಾನರ್ ಕಟ್ಟಿದ್ದನ್ನು ಪೊಲೀಸ್ ರು ತೆರುವು ಗೊಳಿಸಲು ಸೂಚನೆ ಕೊಟ್ಟಿದ್ದ ಹಿನ್ನೆಲೆಯಲ್ಲಿ ಸಂಜು ಎಂಬಾತ ಟ್ರಾಕ್ಟರ್ ನಲ್ಲಿ ಬಂದು ಬ್ಯಾನರ್ ಬಿಚ್ಚಿಸಿ ಕೊಂಡು ಬರುವಾಗ ಇನ್ನೊಬ್ಬ ಭಜರಂಗದಳದ ನಿತನ್ ಎಂಬಾತ ಬರುವಾಗ ಟ್ರಾಕ್ಟರ್ ಅವನ ಮೇಲೆ ಚಲಾಯಿಸುವಂತೆ ಬಂದಿದ್ದಾನೆ. ಅಲ್ಲಿದ್ದ ಗಣೇಶ ನಿಮ್ಮದು ಅತಿಯಾಯಿತು ಎಂದು ಗದರಿದ್ದಾನೆ ಎನ್ನಲಾಗಿದೆ. ಮಾತಿಗೆ ಮಾತು ಬೆಳೆದಾಗ ಸಂಜುಗೆ ಗಣೇಶ ಹೊಡೆದ ಎನ್ನಲಾಗುತ್ತಿದೆ. ಇದರಿಂದಾಗಿ ಸಂಜು ಮತ್ತಿತರರು ಗಣೇಶನ ಶರ್ಟ್ ಹರಿದು ಹಾಕಿದ್ದಾರೆ. ಅಲ್ಲಿದ್ದ ಜನ ಗಲಾಟೆ ಬಿಡಿಸಿ ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ.
ಮಚ್ಚು ತಂದಿದ್ದವರು ಯಾರು ?
ನನಗೆ ಅವಮಾನವಾಯಿತು ಎಂದು ಗಣೇಶ ಅಪ್ಪುಗೌಡ, ಚಂದು, ಕತ್ತೆ ಸಂದೀಪ್ ಮತ್ತಿತರರನ್ನು ಕರೆದುಕೊಂಡು ಸಂಜು ಮತ್ತಿತರರನ್ನು ಹುಡುಕಿಕೊಂಡು ಹೋದಾಗ ಕೆಳಗಡೆ ಬಸ್ ನಿಲ್ದಾಣದ ಬಳಿ ನಾಗಭೂಷಣ್ ಸಿಕ್ಕಿದ್ದಾನೆ ಅವನಿಗೆ ಮಚ್ಚಿನಿಂದ ಹೊಡೆದಿದ್ದು ಅಲ್ಲಿಂದ ತಪ್ಪಿಸಿಕೊಂಡು ಕೊಂಡು ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.ಈ ವಿಷಯ ತಿಳಿದ ಸಂಜು ಇತರರು ಸೈನ್ಸ್ ಸೀನ ತೋಟದ ಬಳಿ ಸೇರಿದ್ದಾರೆ .ಈ ವಿಷಯ ತಿಳಿದು ಗಣೇಶನ ತಂಡ ಅಲ್ಲಿಗೆ ಬಂದಿದೆ ಕೈಗೆ ಸಿಕ್ಕ ಸಂಜುಗೆ ಮಚ್ಚಿನಿಂದ ಹೊಡೆದಿದ್ದಾರೆ ಹೆಚ್ಚು ಕಡಿಮೆ ಆದರೆ ಎಂದು ಗಣೇಶನ ಜೊತೆಗೆ ಬಂದ ಕೆಲವರು ಅಲ್ಲಿಂದ ಕಳಚಿಕೊಂಡಿದ್ದಾರೆ ಎನ್ನಲಾಗಿದೆ.
ಗಣೇಶ ಸೇರಿದಂತೆ ಮೂರು ಜನ ಹಿಂದುರಿಗೆ ಬರುವಾಗ ಗಣೇಶ ನ ಕೈನಲ್ಲಿದ್ದ ಮಚ್ಚನ್ನು ಕಿತ್ತುಕೊಂಡು ತಲೆಗೆ ಬಲವಾಗಿ ಹೊಡೆದಿದ್ದಾರೆ ಬಲವಾದ ಪೆಟ್ಟು ಬಿದ್ದಾಗ ಗಣೇಶ ಸ್ಥಳದಲ್ಲಿ ಪ್ರಾಣ ಕಳೆದುಕೊಂಡಿದ್ದಾನೆ.ಮಚ್ಚಿನಿಂದ ಹೊಡೆದವರು ಯಾರು ಎಂದು ಪೊಲೀಸ್ ತನಿಖೆಯಿಂದ ತಿಳಿದು ಬರ ಬೇಕಾಗಿದೆ. ಕ್ಷುಲ್ಲಕ ಕಾರಣದಿಂದ ಪ್ರಾಣ ಹೋಯಿತು ಈಗ ಸಖರಾಯಪಟ್ಟಣದಲ್ಲಿ ಕಾಂಗ್ರೆಸ್ v/s ಬಿಜೆಪಿ ಎಂಬ ಸಮರ ಶುರುವಾಗಿದೆ. ಗಣೇಶನ ಮೃತ ದೇಹವನ್ನು ಸಖರಾಯಪಟ್ಟಣದಲ್ಲಿ ಮೆರವಣಿಗೆ ನಡೆಸಿದರು, ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು. ಮಾಜಿ ಸಭಾಪತಿ ಬಿ.ಎಲ್ ಶಂಕರ್ ಸೇರಿದಂತೆ ಕಾಂಗ್ರಸ್ ಪಕ್ಷದ ಮುಖಂಡರು ಇದ್ದರು. ತನಿಖೆ ನಡಸುತ್ತಿರುವ ಪೊಲೀಸರು ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
Ganesh’s riot ends in murder
Leave a comment