ಸುಖರಾಯಪಟ್ಟಣ:ಜನಪ್ರತಿನಿಧಿಗಳು,ಅಧಿಕಾರಿಗಳು, ಹೋರಾಟಗಾರರು ಲಕ್ಷ, ಲಕ್ಷ ಅಲಕ್ಷ್ಯ ಮಾಡುತ್ತಿರುವುದೇಕೆ? ಯಾರಾದರೂ ಲಕ್ಷ, ಲಕ್ಷ ನಿರ್ಲಕ್ಷ್ಯ ಮಾಡಲು ಸಾಧ್ಯವೇ? ಹೌದು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಇಲ್ಲಿನ ರೈತರ ಕೊರಗು.
ಲಕ್ಷ ಎಂದ ತಕ್ಷಣ ಜೊಲ್ಲು ಸುರಿಸುವ ಗಿರಾಕಿಗಳು ಈ ಬಗ್ಗೆ ಅಸಡ್ಡೆಯ ಮಾತುಗಳನ್ನು ಹೇಳುತ್ತಿರುವುದು ಏಕೆ? ಇದು ಲಕ್ಷ ಲಕ್ಷ ವ್ಯವಹಾರದ ಕತೆಯಲ್ಲಾ,ಅಂದರೆ ಸಖರಾಯಪಟ್ಟಣದ ಬಳಿ ಇರುವ ಲಕ್ಕ ಸಾಗರ ಕೆರೆಯ ಕತೆ ಇದು. ಹಾಯುವಳಿ ಕೆರೆಯಲ್ಲ ನಿಜ ಆದರೆ ಈ ಕೆರೆ ತುಂಬಿಸುವುದರಿಂದ ಕೆರೆಯ ಕೆಳಭಾಗದ ಹಳ್ಳಿಗಳಲ್ಲಿ ಅಂತರಜಲ ವೃದ್ದಿಯಾಗಿ ಕುಡಿಯುವ ನೀರು ಹಾಗು ಕೊಳವೆ ಬಾವಿಗಳು ತುಂಬುತ್ತವೆ ಎಂಬ ಸಾಮಾನ್ಯ ಜ್ಞಾನ ನಮ್ಮ ಜನಪ್ರತಿನಿಧಿಗಳಿಗಿಲ್ಲದಿರುವುದು ಈ ಭಾಗದ ರೖತರ ದೌರ್ಬಾಗ್ಯ.
ಈ ಕೆರೆ ತುಂಬಿಸಿದರೆ ಜನರಿಗೆ, ರೈತರಿಗೆ, ಪ್ರಾಣಿಗಳಿಗೆ ಉಪಯೋಗವಾಗುತ್ತದೆ. ಅದರೆ ನಮಗೇನು ಉಪಯೋಗ ಎಂದು ಜನ ಪ್ರತಿನಿಧಿಗಳು ಮತ್ತು ಅಧಿಕಾರಿಗಳ ನಿರ್ಲಕ್ಷ್ಯ ಎಂದು ಈ ಭಾಗದ ಜನ ದೂರುತ್ತಿದ್ದಾರೆ.
ಕಡೂರು ತಾಲೂಕಿನ ಸಖರಾಯ ಪಟ್ಟಣದ ಹಸ್ತಿನಾಪುರದ ಸರ್ವೇ ನಂಬರ್ 6 ರಲ್ಲಿ 40 ಎಕರೆ ಪ್ರದೇಶದಲ್ಲಿ ಹಳೆಯ ಕೆರೆಯಿದೆ ಈ ಜಾಗವನ್ನು ಅರಣ್ಯ ಇಲಾಖೆಯವರು ಸೇರಿದಂತೆ ಒತ್ತುವರಿ ಮಾಡಲಾಗಿದೆ ಎಂಬ ದೂರಿದೆ ಈ ಬಗ್ಗೆ ಸ್ಥಳೀಯರು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ.
ಹಲವು ಸಭೆ ನಡೆಸಿ ಒತ್ತುವರಿ ಜಾಗ ತೆರವುಗೊಳಿಸಲು ಒತ್ತಾಯ ಮಾಡಿದ್ದಾರೆ. ಅರಣ್ಯ ಇಲಾಖೆಯವರು ಜಾಗ ತೆರವು ಮಾಡಿ ಕೊಡಲು ಮೌಖಿಕವಾಗಿ ಹೇಳಿ ಸರ್ವೇ ಮಾಡಿಸಲು ಸೂಚನೆ ಸಹ ಕೊಟ್ಟಿದ್ದಾರೆ.ಎರಡು ಬಾರಿ ಸ್ಥಳಕ್ಕೆ ಹೋದ ಸರ್ವೇ ಇಲಾಖೆಯವರು ಇಲ್ಲ,ಸಲ್ಲದ ಕಾರಣಗಳನ್ನು ಹೇಳಿ ಪರಾರಿಯಾಗಿದ್ದಾರೆ.ಇದರಿಂದ ನಮಗೆ ಏನಾದರೂ ಸಿಗುತ್ತದೆ ಎಂದು ಹೋದ ಸರ್ವೇ ಇಲಾಖೆಯವರು ಕಾಸಿಲ್ಲ,ಕರಿಮಣಿ ಏಕೆ ಎಂದು ನಾಪತ್ತೆಯಾಗಿದ್ದಾರೆ ಎಂದು ರೈತರು ಹೇಳುತ್ತಿದ್ದಾರೆ.
ಶಾಸಕ ಹೆಚ್.ಡಿ.ತಮ್ಮಯ್ಯ ಬಳಿ ಹೇಳಲು ಹೋದರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಕಡೆ ಕೈ ತೋರಿಸುತ್ತಾರೆ ಎನ್ನಲಾಗಿದೆ. ಜಿಲ್ಲಾಧಿಕಾರಿ ಕಛೇರಿಯಿಂದ ಕಂದಾಯ ಇಲಾಖೆ, ಅರಣ್ಯ ಇಲಾಖೆ ಮತ್ತು ಸರ್ವೇ ಇಲಾಖೆಯವರು ಜಂಟಿ ಸರ್ವೇ ಮಾಡಲು ಮತ್ತೊಮ್ಮೆ ಸೂಚನೆ ಹೋಗಿರುವುದರಿಂದ ರೈತರ ಮುಖದಲ್ಲಿ ಗೆಲವಿನ ನಗೆ ಬಂದಿದೆ ಅದರೆ ಜನ ಪ್ರತಿನಿಧಿ ಶಾಸಕ ತಮ್ಮಯ್ಯ ಇನ್ನೊಬ್ಬರ ಕಡೆ ಬೆರಳು ತೋರಿಸುವ ಬದಲು ನಮ್ಮ ರೈತರಿಗೆ ಅನುಕೂಲ ಕಲ್ಪಿಸಿದರೆ ಮಾತ್ರ ಸಾಧ್ಯ ಲಕ್ಕ ಸಾಗರ ಕೆರೆ ಇತ್ತು ಎಂಬ ಹೆಸರು ಹೇಳ ಬಹುದು .
Financial matters are not smooth.
Leave a comment