Home namma chikmagalur chikamagalur ಲಕ್ಷ, ಲಕ್ಷ, ಅಲಕ್ಷ್ಯ ! ಹಣಕಾಸಿನ ವ್ಯವಹಾರ ಕುದುರುವುದಿಲ್ಲವೇ ?
chikamagalurHomeLatest Newsnamma chikmagalur

ಲಕ್ಷ, ಲಕ್ಷ, ಅಲಕ್ಷ್ಯ ! ಹಣಕಾಸಿನ ವ್ಯವಹಾರ ಕುದುರುವುದಿಲ್ಲವೇ ?

Share
Share

ಸುಖರಾಯಪಟ್ಟಣ:ಜನಪ್ರತಿನಿಧಿಗಳು,ಅಧಿಕಾರಿಗಳು, ಹೋರಾಟಗಾರರು ಲಕ್ಷ, ಲಕ್ಷ ಅಲಕ್ಷ್ಯ ಮಾಡುತ್ತಿರುವುದೇಕೆ? ಯಾರಾದರೂ ಲಕ್ಷ, ಲಕ್ಷ ನಿರ್ಲಕ್ಷ್ಯ ಮಾಡಲು ಸಾಧ್ಯವೇ? ಹೌದು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಇಲ್ಲಿನ ರೈತರ ಕೊರಗು.

ಲಕ್ಷ ಎಂದ ತಕ್ಷಣ ಜೊಲ್ಲು ಸುರಿಸುವ ಗಿರಾಕಿಗಳು ಈ ಬಗ್ಗೆ ಅಸಡ್ಡೆಯ ಮಾತುಗಳನ್ನು ಹೇಳುತ್ತಿರುವುದು ಏಕೆ? ಇದು ಲಕ್ಷ ಲಕ್ಷ ವ್ಯವಹಾರದ ಕತೆಯಲ್ಲಾ,ಅಂದರೆ ಸಖರಾಯಪಟ್ಟಣದ ಬಳಿ ಇರುವ ಲಕ್ಕ ಸಾಗರ ಕೆರೆಯ ಕತೆ ಇದು. ಹಾಯುವಳಿ ಕೆರೆಯಲ್ಲ ನಿಜ ಆದರೆ ಈ ಕೆರೆ ತುಂಬಿಸುವುದರಿಂದ ಕೆರೆಯ ಕೆಳಭಾಗದ ಹಳ್ಳಿಗಳಲ್ಲಿ ಅಂತರಜಲ ವೃದ್ದಿಯಾಗಿ ಕುಡಿಯುವ ನೀರು ಹಾಗು ಕೊಳವೆ ಬಾವಿಗಳು ತುಂಬುತ್ತವೆ ಎಂಬ ಸಾಮಾನ್ಯ ಜ್ಞಾನ ನಮ್ಮ ಜನಪ್ರತಿನಿಧಿಗಳಿಗಿಲ್ಲದಿರುವುದು ಈ ಭಾಗದ ರೖತರ ದೌರ್ಬಾಗ್ಯ.

ಈ ಕೆರೆ ತುಂಬಿಸಿದರೆ ಜನರಿಗೆ, ರೈತರಿಗೆ, ಪ್ರಾಣಿಗಳಿಗೆ ಉಪಯೋಗವಾಗುತ್ತದೆ. ಅದರೆ ನಮಗೇನು ಉಪಯೋಗ ಎಂದು ಜನ ಪ್ರತಿನಿಧಿಗಳು ಮತ್ತು ಅಧಿಕಾರಿಗಳ ನಿರ್ಲಕ್ಷ್ಯ ಎಂದು ಈ ಭಾಗದ ಜನ ದೂರುತ್ತಿದ್ದಾರೆ.
ಕಡೂರು ತಾಲೂಕಿನ ಸಖರಾಯ ಪಟ್ಟಣದ ಹಸ್ತಿನಾಪುರದ ಸರ್ವೇ ನಂಬರ್ 6 ರಲ್ಲಿ 40 ಎಕರೆ ಪ್ರದೇಶದಲ್ಲಿ ಹಳೆಯ ಕೆರೆಯಿದೆ ಈ ಜಾಗವನ್ನು ಅರಣ್ಯ ಇಲಾಖೆಯವರು ಸೇರಿದಂತೆ ಒತ್ತುವರಿ ಮಾಡಲಾಗಿದೆ ಎಂಬ ದೂರಿದೆ ಈ ಬಗ್ಗೆ ಸ್ಥಳೀಯರು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ.

ಹಲವು ಸಭೆ ನಡೆಸಿ ಒತ್ತುವರಿ ಜಾಗ ತೆರವುಗೊಳಿಸಲು ಒತ್ತಾಯ ಮಾಡಿದ್ದಾರೆ. ಅರಣ್ಯ ಇಲಾಖೆಯವರು ಜಾಗ ತೆರವು ಮಾಡಿ ಕೊಡಲು ಮೌಖಿಕವಾಗಿ ಹೇಳಿ ಸರ್ವೇ ಮಾಡಿಸಲು ಸೂಚನೆ ಸಹ ಕೊಟ್ಟಿದ್ದಾರೆ.ಎರಡು ಬಾರಿ ಸ್ಥಳಕ್ಕೆ ಹೋದ ಸರ್ವೇ ಇಲಾಖೆಯವರು ಇಲ್ಲ,ಸಲ್ಲದ ಕಾರಣಗಳನ್ನು ಹೇಳಿ ಪರಾರಿಯಾಗಿದ್ದಾರೆ.ಇದರಿಂದ ನಮಗೆ ಏನಾದರೂ ಸಿಗುತ್ತದೆ ಎಂದು ಹೋದ ಸರ್ವೇ ಇಲಾಖೆಯವರು ಕಾಸಿಲ್ಲ,ಕರಿಮಣಿ ಏಕೆ ಎಂದು ನಾಪತ್ತೆಯಾಗಿದ್ದಾರೆ ಎಂದು ರೈತರು ಹೇಳುತ್ತಿದ್ದಾರೆ.

ಶಾಸಕ ಹೆಚ್.ಡಿ.ತಮ್ಮಯ್ಯ ಬಳಿ ಹೇಳಲು ಹೋದರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಕಡೆ ಕೈ ತೋರಿಸುತ್ತಾರೆ ಎನ್ನಲಾಗಿದೆ. ಜಿಲ್ಲಾಧಿಕಾರಿ ಕಛೇರಿಯಿಂದ ಕಂದಾಯ ಇಲಾಖೆ, ಅರಣ್ಯ ಇಲಾಖೆ ಮತ್ತು ಸರ್ವೇ ಇಲಾಖೆಯವರು ಜಂಟಿ ಸರ್ವೇ ಮಾಡಲು ಮತ್ತೊಮ್ಮೆ ಸೂಚನೆ ಹೋಗಿರುವುದರಿಂದ ರೈತರ ಮುಖದಲ್ಲಿ ಗೆಲವಿನ ನಗೆ ಬಂದಿದೆ ಅದರೆ ಜನ ಪ್ರತಿನಿಧಿ ಶಾಸಕ ತಮ್ಮಯ್ಯ ಇನ್ನೊಬ್ಬರ ಕಡೆ ಬೆರಳು ತೋರಿಸುವ ಬದಲು ನಮ್ಮ ರೈತರಿಗೆ ಅನುಕೂಲ ಕಲ್ಪಿಸಿದರೆ ಮಾತ್ರ ಸಾಧ್ಯ ಲಕ್ಕ ಸಾಗರ ಕೆರೆ ಇತ್ತು ಎಂಬ ಹೆಸರು ಹೇಳ ಬಹುದು .

Financial matters are not smooth.

Share

Leave a comment

Leave a Reply

Your email address will not be published. Required fields are marked *

Don't Miss

ನಾಮಫಲಕದಲ್ಲಿ ಶೇ.೬೦ರಷ್ಟು ಕನ್ನಡಕ್ಕೆ ಪ್ರಾಧಾನ್ಯತೆಗೆ ಸೂಚನೆ

ಚಿಕ್ಕಮಗಳೂರು: ಮುಂದಿನ ಒಂದು ವಾರದೊಳಗೆ ಉದ್ಯಮದ ಎಲ್ಲಾ ನಾಮಫಲಕಗಳಲ್ಲಿ ಸರ್ಕಾರದ ನಿಯಮಗಳ ಅನ್ವಯ ಶೇ. ೬೦ರಷ್ಟು ಕನ್ನಡ ನಾಮಫಲಕ ಇರುವಂತೆ ಕ್ರಮ ಕೈಗೊಳ್ಳಬೇಕು. ತಪ್ಪಿದಲ್ಲಿ ನಗರಸಭೆಯಿಂದ ನಾಮಫಲಕಗಳನ್ನು ತೆರವುಗೊಳಿಸಿ ಕಾನೂನು ರೀತಿ...

ಮದುವೆ ಮನೆಯಲ್ಲಿ ₹3.75 ಲಕ್ಷ ಮೌಲ್ಯದ ಚಿನ್ನಾಭರಣ ಕಳವು

ಚಿಕ್ಕಮಗಳೂರು: ಜಿಲ್ಲೆಯ ಬಾಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮದುವೆ ಕಾರ್ಯಕ್ರಮಕ್ಕೆ ತೆರಳಿದ್ದ ವೇಳೆ ಸುಮಾರು ₹3.75 ಲಕ್ಷ ಮೌಲ್ಯದ ಚಿನ್ನಾಭರಣ ಕಳುವಾಗಿರುವ ಘಟನೆ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಇಬ್ಬರು ಸಂಬಂಧಿಕರ...

Related Articles

ಮನೆಯಲ್ಲಿ ಇಟ್ಟಿದ್ದ ಚಿನ್ನಾಭರಣ-20 ಸಾವಿರ ನಗದು ಕಳವು

ಚಿಕ್ಕಮಗಳೂರು: ಮನೆಯ ಬೀರುವಿನಲ್ಲಿ ಇರಿಸಿದ್ದ ಸುಮಾರು ೨೮ ಗ್ರಾಂ ಚಿನ್ನಾಭರಣ ಹಾಗೂ ?೨೦ ಸಾವಿರ ನಗದು...

ವೃದ್ದಾಪ್ಯ, ಅಂಗವಿಕಲ ವೇತನ ವಿಳಂಬ ಖಂಡಿಸಿ ಬಿಜೆಪಿ ಪ್ರತಿಭಟನೆ

ಚಿಕ್ಕಮಗಳೂರು: ವೃದ್ದಾಪ್ಯ, ವಿಧವಾ, ವಿಕಲಚೇತನ ಹಾಗೂ ಬಿಪಿಎಲ್ ಕಾರ್ಡ್ ರದ್ದು ಪಡಿಸಿರುವ ರಾಜ್ಯದ ಕಾಂಗ್ರೆಸ್ ಸರ್ಕಾರದ...

19 ಲಕ್ಷ ಜನರ ಪಿಂಚಣಿ ರದ್ದು: ಸರ್ಕಾರದ ವಿರುದ್ಧ ವಿಧಾನಮಂಡಲದಲ್ಲಿ ಸಂಗ್ರಾಮ

ಸಖರಾಯಪಟ್ಟಣ: ರಾಜ್ಯದಲ್ಲಿ 19 ಲಕ್ಷಕ್ಕೂ ಹೆಚ್ಚು ಜನರ ವೃದ್ಧಾಪ್ಯ, ವಿಧವಾ ಹಾಗೂ ಅಂಗವಿಕಲ ಪಿಂಚಣಿಯನ್ನು ರದ್ದುಪಡಿಸಲಾಗಿದೆ....

ಸಖರಾಯಪಟ್ಟಣದ ಮೂಲಸೌಕರ್ಯ ಸಮಸ್ಯೆ ಪರಿಹಾರಕ್ಕೆ 5 ಬೇಡಿಕೆ

ಚಿಕ್ಕಮಗಳೂರು: ಜಿಲ್ಲೆಯ ಪ್ರಮುಖ ಗ್ರಾಮ ಪಂಚಾಯಿತಿಗಳಲ್ಲಿ ಒಂದಾಗಿರುವ ಸಖರಾಯಪಟ್ಟಣದಲ್ಲಿ ಮೂಲಭೂತ ಸೌಲಭ್ಯಗಳ ಕೊರತೆಯಿಂದ ಜನರು ತೊಂದರೆ...