ಚಿಕ್ಕಮಗಳೂರು: ನೈಋತ್ಯ ರೈಲ್ವೆಯು ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಯಂತ್ರಿಸಲು ಹುಬ್ಬಳ್ಳಿ ಮತ್ತು ಚಿಕ್ಕಮಗಳೂರು ನಡುವೆ ವಿಶೇಷ ಎಕ್ಸ್ಪ್ರೆಸ್ ರೈಲನ್ನು ಓಡಿಸಲು ನಿರ್ಧರಿಸಿದೆ.
ಈ ವಿಶೇಷ ರೈಲುಗಳು ಜೂನ್ ೨೦, ಮತ್ತು ೨೧ ರಂದು ಶನಿವಾರ ಮತ್ತು ಭಾನುವಾರ ಕಾರ್ಯಾಚರಣೆ ನಡೆಸಲಿವೆ. ರೈಲು ಸಂಖ್ಯೆ ೦೭೩೪೧ ಹುಬ್ಬಳ್ಳಿಯಿಂದ ಮುಂಜಾನೆ ೫ ಗಂಟೆಗೆ ಹೊರಟು, ಅದೇ ದಿನ ಬೆಳಿಗ್ಗೆ ೧೧.೧೫ ಕ್ಕೆ ಚಿಕ್ಕಮಗಳೂರು ತಲುಪಲಿದೆ.
ಮರುಪ್ರಯಾಣದಲ್ಲಿ ರೈಲು ಸಂಖ್ಯೆ ೦೭೩೪೨ ಚಿಕ್ಕಮಗಳೂರಿನಿಂದ ಸಂಜೆ ೧೭.೩೦ ಕ್ಕೆ ಹೊರಟು, ರಾತ್ರಿ ೨೩.೨೦ ಕ್ಕೆ ಹುಬ್ಬಳ್ಳಿಯನ್ನು ತಲುಪಲಿದೆ. ಈ ವಿಶೇಷ ರೈಲುಗಳು ಎರಡೂ ದಿಕ್ಕಿನಲ್ಲಿ ತಲಾ ೨ ಟ್ರಿಪ್ಗಳಂತೆ ಸಂಚರಿಸಲಿವೆ. ಪ್ರಯಾಣದ ಮಧ್ಯೆ ಈ ರೈಲುಗಳು ಪ್ರಮುಖವಾಗಿ ಹಾವೇರಿ, ರಾಣೇಬೆನ್ನೂರು, ಹರಿಹರ, ದಾವಣಗೆರೆ, ಚಿಕ್ಕಜಾಜೂರು, ಕಡೂರು ಮತ್ತು ಬೀರೂರು ನಿಲ್ದಾಣಗಳಲ್ಲಿ ನಿಲ್ಲಲಿವೆ.
ಈ ರೈಲು ಒಟ್ಟು ೧೦ ಬೋಗಿಗಳನ್ನು ಹೊಂದಿದ್ದು, ಇದರಲ್ಲಿ ಒಂದು ಸ್ಲಿಪರ್, ಏಳು ಸಾಮಾನ್ಯ ಮತ್ತು ಎರಡು ಎಸ್ಎಲ್ಆರ್ ಬೋಗಿಗಳನ್ನು ಒಳಗೊಂಡಿರುತ್ತವೆ. ಪ್ರಯಾಣಿಕರ ಅನುಕೂಲಕ್ಕಾಗಿ ಈ ವಿಶೇಷ ಸೇವೆಯನ್ನು ಕಲ್ಪಿಸಲಾಗಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
Special express train runs between Hubballi-Chikkamagaluru
Leave a comment