ಚಿಕ್ಕಮಗಳೂರು: ಮಲೆನಾಡು ಪ್ರದೇಶಗಳಲ್ಲಿ ಮಳೆ ಬರುತ್ತಿದೆ ಆದರೆ ಬಯಲು ಪ್ರದೇಶದಲ್ಲಿ ಮಳೆ ಬಾರದೆ ರೈತರು ಮತ್ತು ಜನತೆ ತಲೆ ಮೇಲೆ ಕೈ ಹೊತ್ತುಕೊಂಡು ಪರಿತಾಪಿಸುತ್ತಿದ್ದಾರೆ.
ಮಲೆನಾಡು ಪ್ರದೇಶದ ಬಾಳೆಹೊನ್ನೂರು,ಕೊಪ್ಪ,ಕಳಸ ಮೂಡಿಗೆರೆ ಮತ್ತು ಶೃಂಗೇರಿಯಲ್ಲಿ ಎಡ ಬಿಡದೆ ಮಳೆ ಬರುತ್ತಿದೆ.ಚಿಕ್ಕಮಗಳೂರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳೆಗಾರರಿಗೆ ಮತ್ತು ರೈತರಿಗೆ ಸಮಾಧಾನ ತರುವಂತ ಮಳೆ ಬರುತ್ತಿದೆ. ಆದರೆ ಕೆರೆ ಕಟ್ಟೆಗಳಿಗೆ ನೀರು ತುಂಬಿಲ್ಲಾ ಆದರೂ ಮುಂದಿನ ದಿನಗಳಲ್ಲಿ ಮಳೆ ಬರುವ ಸಾಧ್ಯತೆ ಇದೆ.
ಬಯಲು ಸೀಮೆಯ ಕಡೂರು, ಬೀರೂರು ಮತ್ತು ತರೀಕೆರೆಯಲ್ಲಿ ಒಂದೆರಡು ದಿನ ಮಳೆ ಬಂದರು ಭೂಮಿ ತಂಪಾಗಿಲ್ಲ,ಇನ್ನುಳಿದಂತೆ ಕಡೂರು ತಾಲ್ಲೂಕಿನ ಯಗಟಿ,ಸಿಂಗಟಗೆರೆ ಪಂಚನಳ್ಳಿ ಮತ್ತು ಚೌಳಹಿರಿಯೂರು,ಹಿರೇನಲ್ಲೂರು ಮತಿಘಟ್ಟ ಪ್ರದೇಶಕ್ಕೆ ಮಳೆ ಬಂದಿಲ್ಲ
ಇದೇ ರೀತಿಯಲ್ಲಿ ಅಜ್ಜಂಪುರ ತಾಲ್ಲೂಕಿನ ಅಜ್ಜಂಪುರ ಮತ್ತು ಶಿವನಿ ಭಾಗದಲ್ಲಿ ಹನಿ ಮಳೆ ಬಾರದಿರುವುದು ರೈತರು ಸಂಕಷ್ಟದಿಂದ ನರಳುತ್ತಿದ್ದಾರೆ.ತೋಟಗಳು ಒಣಗುತ್ತಿವೆ ಭೂಮಿ ಬಿರುಕು ಬಿಟ್ಟಿದೆ ದನಕರುಗಳಿಗೆ ನೀರಿಲ್ಲ ಜೊತೆಗೆ ಜನರಿಗೂ ನೀರಿನ ಕಷ್ಟ ಹೇಳತೀರದಾಗಿದೆ.ಮುಂದುವರಿದು ಆಮೃತಾಪುರ ಸುತ್ತಮುತ್ತಲಿನಲ್ಲಿ ಆಗೊಮ್ಮೆ ಈಗೊಮ್ಮೆ ಮಳೆ ಹನಿಗಳು ಬಂದು ಹೋದರು ಜನರಿಗೆ ಉಪಯೋಗವಾಗುತ್ತಿಲ್ಲ.
ಲಕ್ಕವಳ್ಳಿ,ಲಿಂಗದಳ್ಳಿ ಪ್ರದೇಶದಲ್ಲಿ ಮತ್ತು ತರೀಕೆರೆ ಸುತ್ತ ಮುತ್ತ ಕೂಡ ಯಾವಾಗ ಹದ ಮಳೆ ಬರಬಹುದು ಎಂದು ಆಕಾಶದತ್ತ ಜನರ ಕಣ್ಣುಗಳು ನೋಡತೊಡಗಿವೆ. ಜೂನ್ ತಿಂಗಳಲ್ಲಿ ಮುಂಗಾರು ಮಳೆ ಬರುತ್ತದೆ ಎಂದು ನಿರೀಕ್ಷೆ ಮಾಡುವುದು ಸಹಜ ಆದರೆ ಜೂನ್ ಅರ್ಧ ತಿಂಗಳು ಮುಗಿಯುತ್ತಾ ಬಂದರು ಬಯಲು ಪ್ರದೇಶದಲ್ಲಿ ಮಳೆಯ ಸುಳಿವಿಲ್ಲ.ಭೂಮಿ ಹದ ಮಾಡಿ ಬಿತ್ತನೆ ಬೀಜ ಮತ್ತು ರಸಗೊಬ್ಬರ ಶೇಖರಣೆ ಮಾಡಿಕೊಂಡು ಕೈ,ಕೈ ಹಿಸಕಿ ಕೊಂಡು ಕತ್ತು ಮುಗಿಲು ನೋಡುತ್ತಿವೆ.
ರೈತರ ಮತ್ತು ಜನರ ಕಷ್ಟ ಕೇಳ ಬೇಕಾದ ಜನಪ್ರತಿನಿಧಿಗಳು ಮಂತ್ರಿ ಸ್ಥಾನ,ಬೋರ್ಡ್ ನೇತಾಕಿಕೊಂಡು ಬರುತ್ತೇವೆ ಎಂದು ಬೆಂಗಳೂರಿನಲ್ಲಿ ಲಾಭಿ ಮಾಡಿಕೊಂಡು ಮುಖಂಡರ ಹಿಂದೆ ಮುಂದೆ ಸುತ್ತುತ್ತಿದ್ದಾರೆ.
ಇನ್ನೂ ಒಂದು ವಾರದಲ್ಲಿ ಮಳೆ ಬರದಿದ್ದರೆ ಇಲ್ಲಿನ ರೈತರು ಮತ್ತು ಜನ ಗುಳೆ ಹೋಗುವ ದುಸ್ಥಿತಿ ಒದಗಿಬರುವುದು ಖಚಿತ. ದೇವರು ಪೂಜೆ ಪುನಸ್ಕಾರಲ್ಲಿ ಜನ ದಿನಗಳನ್ನು ದೂಡುತ್ತಿದ್ದಾರೆ.ಪ್ರಕೃತಿ ಮುಂದೆ ಯಾರು ಏನು ಮಾಡುವುದು ಎಂದು ಗೊಣಗುತ್ತಿದ್ದಾರೆ.
ದೃಶ್ಯ ಮಾಧ್ಯಮ ಮತ್ತು ಪತ್ರಿಕೆಗಳು ನೈಜ ಸ್ಥಿತಿ ಹೇಳದೆ ಚಿಕ್ಕಮಗಳೂರಿನಲ್ಲಿ ಮಳೆ ಬಂದರೆ ಸಿಂಗಟಗೆರೆ,ಶಿವನಿಯಲ್ಲಿ ಛತ್ರಿ ಹಿಡಿದುಕೊಂಡು ವರದಿ ಮಾಡುತ್ತಿದ್ದಾರೆ.ಜನಪ್ರತಿನಿಧಿಗಳು ಮಂತ್ರಿ ಸ್ಥಾನ ಬೋರ್ಡ್ ನೆತಾಕಿಕೊಂಡು ಬರಲು ಸಾಧ್ಯವಿಲ್ಲ ಎಂದು ಜನರ ಸಂಕಷ್ಟ ನಿವಾರಣೆಗೆ ಮುಂದಾಗದಿದ್ದರೆ ಜನ ಚುನಾವಣೆ ಎಂಬ ಮಾರಿ ಹಬ್ಬಕ್ಕೆ ಕಾಯುತ್ತಿದ್ದಾರೆ.
Rain in the hills – drought in the plains
Leave a comment