Home namma chikmagalur chikamagalur ಮಲೆನಾಡಿನಲ್ಲಿ ಮಳೆ – ಬಯಲ ಸೀಮೆಯಲ್ಲಿ ಬರ-ಬರ
chikamagalurHomeLatest Newsnamma chikmagalur

ಮಲೆನಾಡಿನಲ್ಲಿ ಮಳೆ – ಬಯಲ ಸೀಮೆಯಲ್ಲಿ ಬರ-ಬರ

Share
Share

ಚಿಕ್ಕಮಗಳೂರು:  ಮಲೆನಾಡು ಪ್ರದೇಶಗಳಲ್ಲಿ ಮಳೆ ಬರುತ್ತಿದೆ ಆದರೆ ಬಯಲು ಪ್ರದೇಶದಲ್ಲಿ ಮಳೆ ಬಾರದೆ ರೈತರು ಮತ್ತು ಜನತೆ ತಲೆ ಮೇಲೆ ಕೈ ಹೊತ್ತುಕೊಂಡು ಪರಿತಾಪಿಸುತ್ತಿದ್ದಾರೆ.

ಮಲೆನಾಡು ಪ್ರದೇಶದ ಬಾಳೆಹೊನ್ನೂರು,ಕೊಪ್ಪ,ಕಳಸ ಮೂಡಿಗೆರೆ ಮತ್ತು ಶೃಂಗೇರಿಯಲ್ಲಿ ಎಡ ಬಿಡದೆ ಮಳೆ ಬರುತ್ತಿದೆ.ಚಿಕ್ಕಮಗಳೂರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳೆಗಾರರಿಗೆ ಮತ್ತು ರೈತರಿಗೆ ಸಮಾಧಾನ ತರುವಂತ ಮಳೆ ಬರುತ್ತಿದೆ. ಆದರೆ ಕೆರೆ ಕಟ್ಟೆಗಳಿಗೆ ನೀರು ತುಂಬಿಲ್ಲಾ ಆದರೂ ಮುಂದಿನ ದಿನಗಳಲ್ಲಿ ಮಳೆ ಬರುವ ಸಾಧ್ಯತೆ ಇದೆ.

ಬಯಲು ಸೀಮೆಯ ಕಡೂರು, ಬೀರೂರು ಮತ್ತು ತರೀಕೆರೆಯಲ್ಲಿ ಒಂದೆರಡು ದಿನ ಮಳೆ ಬಂದರು ಭೂಮಿ ತಂಪಾಗಿಲ್ಲ,ಇನ್ನುಳಿದಂತೆ ಕಡೂರು ತಾಲ್ಲೂಕಿನ ಯಗಟಿ,ಸಿಂಗಟಗೆರೆ ಪಂಚನಳ್ಳಿ ಮತ್ತು ಚೌಳಹಿರಿಯೂರು,ಹಿರೇನಲ್ಲೂರು ಮತಿಘಟ್ಟ ಪ್ರದೇಶಕ್ಕೆ ಮಳೆ ಬಂದಿಲ್ಲ

ಇದೇ ರೀತಿಯಲ್ಲಿ ಅಜ್ಜಂಪುರ ತಾಲ್ಲೂಕಿನ ಅಜ್ಜಂಪುರ ಮತ್ತು ಶಿವನಿ ಭಾಗದಲ್ಲಿ ಹನಿ ಮಳೆ ಬಾರದಿರುವುದು ರೈತರು ಸಂಕಷ್ಟದಿಂದ ನರಳುತ್ತಿದ್ದಾರೆ.ತೋಟಗಳು ಒಣಗುತ್ತಿವೆ ಭೂಮಿ ಬಿರುಕು ಬಿಟ್ಟಿದೆ ದನಕರುಗಳಿಗೆ ನೀರಿಲ್ಲ ಜೊತೆಗೆ ಜನರಿಗೂ ನೀರಿನ ಕಷ್ಟ ಹೇಳತೀರದಾಗಿದೆ.ಮುಂದುವರಿದು ಆಮೃತಾಪುರ ಸುತ್ತಮುತ್ತಲಿನಲ್ಲಿ ಆಗೊಮ್ಮೆ ಈಗೊಮ್ಮೆ ಮಳೆ ಹನಿಗಳು ಬಂದು ಹೋದರು ಜನರಿಗೆ ಉಪಯೋಗವಾಗುತ್ತಿಲ್ಲ.

ಲಕ್ಕವಳ್ಳಿ,ಲಿಂಗದಳ್ಳಿ ಪ್ರದೇಶದಲ್ಲಿ ಮತ್ತು ತರೀಕೆರೆ ಸುತ್ತ ಮುತ್ತ ಕೂಡ ಯಾವಾಗ ಹದ ಮಳೆ ಬರಬಹುದು ಎಂದು ಆಕಾಶದತ್ತ ಜನರ ಕಣ್ಣುಗಳು ನೋಡತೊಡಗಿವೆ. ಜೂನ್ ತಿಂಗಳಲ್ಲಿ ಮುಂಗಾರು ಮಳೆ ಬರುತ್ತದೆ ಎಂದು ನಿರೀಕ್ಷೆ ಮಾಡುವುದು ಸಹಜ ಆದರೆ ಜೂನ್ ಅರ್ಧ ತಿಂಗಳು ಮುಗಿಯುತ್ತಾ ಬಂದರು ಬಯಲು ಪ್ರದೇಶದಲ್ಲಿ ಮಳೆಯ ಸುಳಿವಿಲ್ಲ.ಭೂಮಿ ಹದ ಮಾಡಿ ಬಿತ್ತನೆ ಬೀಜ ಮತ್ತು ರಸಗೊಬ್ಬರ ಶೇಖರಣೆ ಮಾಡಿಕೊಂಡು ಕೈ,ಕೈ ಹಿಸಕಿ ಕೊಂಡು ಕತ್ತು ಮುಗಿಲು ನೋಡುತ್ತಿವೆ.

ರೈತರ ಮತ್ತು ಜನರ ಕಷ್ಟ ಕೇಳ ಬೇಕಾದ ಜನಪ್ರತಿನಿಧಿಗಳು ಮಂತ್ರಿ ಸ್ಥಾನ,ಬೋರ್ಡ್ ನೇತಾಕಿಕೊಂಡು ಬರುತ್ತೇವೆ ಎಂದು ಬೆಂಗಳೂರಿನಲ್ಲಿ ಲಾಭಿ ಮಾಡಿಕೊಂಡು ಮುಖಂಡರ ಹಿಂದೆ ಮುಂದೆ ಸುತ್ತುತ್ತಿದ್ದಾರೆ.
ಇನ್ನೂ ಒಂದು ವಾರದಲ್ಲಿ ಮಳೆ ಬರದಿದ್ದರೆ ಇಲ್ಲಿನ ರೈತರು ಮತ್ತು ಜನ ಗುಳೆ ಹೋಗುವ ದುಸ್ಥಿತಿ ಒದಗಿಬರುವುದು ಖಚಿತ. ದೇವರು ಪೂಜೆ ಪುನಸ್ಕಾರಲ್ಲಿ ಜನ ದಿನಗಳನ್ನು ದೂಡುತ್ತಿದ್ದಾರೆ.ಪ್ರಕೃತಿ ಮುಂದೆ ಯಾರು ಏನು ಮಾಡುವುದು ಎಂದು ಗೊಣಗುತ್ತಿದ್ದಾರೆ.

ದೃಶ್ಯ ಮಾಧ್ಯಮ ಮತ್ತು ಪತ್ರಿಕೆಗಳು ನೈಜ ಸ್ಥಿತಿ ಹೇಳದೆ ಚಿಕ್ಕಮಗಳೂರಿನಲ್ಲಿ ಮಳೆ ಬಂದರೆ ಸಿಂಗಟಗೆರೆ,ಶಿವನಿಯಲ್ಲಿ ಛತ್ರಿ ಹಿಡಿದುಕೊಂಡು ವರದಿ ಮಾಡುತ್ತಿದ್ದಾರೆ.ಜನಪ್ರತಿನಿಧಿಗಳು ಮಂತ್ರಿ ಸ್ಥಾನ ಬೋರ್ಡ್ ನೆತಾಕಿಕೊಂಡು ಬರಲು ಸಾಧ್ಯವಿಲ್ಲ ಎಂದು ಜನರ ಸಂಕಷ್ಟ ನಿವಾರಣೆಗೆ ಮುಂದಾಗದಿದ್ದರೆ ಜನ ಚುನಾವಣೆ ಎಂಬ ಮಾರಿ ಹಬ್ಬಕ್ಕೆ ಕಾಯುತ್ತಿದ್ದಾರೆ.

Rain in the hills – drought in the plains

Share

Leave a comment

Leave a Reply

Your email address will not be published. Required fields are marked *

Don't Miss

ನಾಗಲಕ್ಷ್ಮಿ ಚಿತ್ರಮಂದಿರದ ಪ್ರದರ್ಶನ ಸ್ಥಗಿತ

ಚಿಕ್ಕಮಗಳೂರು: ಅಗ್ನಿ ಸುರಕ್ಷತಾ ಪರಿಕರಗಳನ್ನು ಅಳವಡಿಸದ ಕಾರಣಕ್ಕೆ ನಗರದ ನಾಗಲಕ್ಷ್ಮಿ ಚಿತ್ರಮಂದಿರದಲ್ಲಿ ಚಲನಚಿತ್ರ ಪ್ರದರ್ಶನಗಳನ್ನು ಅಧಿಕಾರಿಗಳು ಬಂದ್ ಮಾಡಿಸಿದರು. ಕಂದಾಯ ಇಲಾಖೆ, ಪೊಲೀಸ್, ಅಗ್ನಿಶಾಮಕ ಅಧಿಕಾರಿಗಳು ಶುಕ್ರವಾರ ಭೇಟಿ ನೀಡಿ ಚಿತ್ರಮಂದಿರದಲ್ಲಿ...

ನಕಲಿ ಛಾಪಕಾಗದ ಸೃಷ್ಟಿಸಿ ಸರ್ಕಾರದ ಬೊಕ್ಕಸಕ್ಕೆ ವಂಚನೆ

ನರಸಿಂಹರಾಜಪುರ: ನಕಲಿ ಛಾಪಕಾಗದ ಸೃಷ್ಟಿಸಿ ಸರ್ಕಾರದ ಬೊಕ್ಕಸಕ್ಕೆ ವಂಚಿಸಿದ ಆರೋಪದ ಮೇಲೆ ಡಿಜಿಟಲ್ ಸಂಸ್ಥೆ ಮತ್ತು ಗುತ್ತಿಗೆದಾರನ ವಿರುದ್ಧ ಪೊಲೀಸರು ಎಫ್‌ಐಆ‌ರ್ ದಾಖಲಿಸಿದ್ದಾರೆ. ಶೃಂಗೇರಿ ವಿಧಾನಸಭಾ ಕ್ಷೇತ್ರದ ನರಸಿಂಹರಾಜಪುರ ಉಪವಿಭಾಗದ ವ್ಯಾಪ್ತಿಯಲ್ಲಿ...

Related Articles

ಯುವಕರ ಗುಂಪಿನಿಂದ ನಡುರಸ್ತೆಯಲ್ಲೇ ಪರಸ್ಪರ ಹೊಡೆದಾಟ

ಚಿಕ್ಕಮಗಳೂರು: ಮಧ್ಯರಾತ್ರಿ ಯುವಕರ ಗುಂಪೊಂದು ನಡುರಸ್ತೆಯಲ್ಲೇ ಪರಸ್ಪರ ಹೊಡೆದಾಡಿಕೊಂಡಿರುವ ಆತಂಕಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಚಿಕ್ಕಮಗಳೂರು...

ಮಗಳ ಅಶ್ಲೀಲ ಫೋಟೋ – ತಾಯಿಗೇ ಹಣಕ್ಕಾಗಿ ಬ್ಲ್ಯಾಕ್‌ಮೇಲ್

ಚಿಕ್ಕಮಗಳೂರು: ಮಗಳ ಅಶ್ಲೀಲ ಫೋಟೋಗಳನ್ನು ಆಕೆಯ ತಾಯಿಗೇ ಕಳುಹಿಸಿ ಹಣಕ್ಕಾಗಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಬೆಂಗಳೂರು ಮೂಲದ...

ಕಿಡಿಗೇಡಿಗಳ ಅಟ್ಟಹಾಸಕ್ಕೆ ವಾಹನಗಳ ಗಾಜಿಗೆ ಹಾನಿ

ಚಿಕ್ಕಮಗಳೂರು:  ನಗರದ ತಮಿಳು ಕಾಲೋನಿಯ ಅಕ್ಸ ಮಸೀದಿ ರಸ್ತೆಯಲ್ಲಿ ಕಿಡಿಗೇಡಿಗಳು ಅಟ್ಟಹಾಸ ಮೆರೆದಿದ್ದು, ರಸ್ತೆ ಬದಿಯಲ್ಲಿ...

ಬೈಕ್‌ಗೆ ಡಿಕ್ಕಿಯಾಗಿ ತೋಟಕ್ಕೆ ನುಗ್ಗಿದ ಕೆ.ಎಸ್.ಆರ್.ಟಿ.ಸಿ ಬಸ್

ಚಿಕ್ಕಮಗಳೂರು : ಜಿಲ್ಲೆ ಅಜ್ಜಂಪುರ ತಾಲೂಕಿನ ನಾರಾಯಣಪುರ ಗ್ರಾಮದಲ್ಲಿ ರಸ್ತೆ ದಾಟುತ್ತಿದ್ದ ನಾಗರಹಾವನ್ನು ಕಂಡು ಬೈಕ್...