Home namma chikmagalur chikamagalur ಪ್ರಾಣೇಶ್ ರಾಜಕೀಯ ಪೌರಷ ಕಟ್-ಉಪ ಸಭಾಪತಿ ಸ್ಥಾನ ಔಟ್?
chikamagalurHomeLatest Newsnamma chikmagalur

ಪ್ರಾಣೇಶ್ ರಾಜಕೀಯ ಪೌರಷ ಕಟ್-ಉಪ ಸಭಾಪತಿ ಸ್ಥಾನ ಔಟ್?

Share
Share

ಚಿಕ್ಕಮಗಳೂರು: ಉಪ ಸಭಾಪತಿ ಸ್ಥಾನದಿಂದ ಪ್ರಾಣೇಶ್ ಅನಿವಾರ್ಯವಾಗಿ ಇಳಿಯಬೇಕಾಗಿದೆ. ಪ್ರಾಣೇಶ್ ಗೆ ಉಪ ಸಭಾಪತಿ ಸ್ಥಾನ ಬಯಸದೇ ಬಂದ ಭಾಗ್ಯ. ಧರ್ಮೇಗೌಡರ ಆಕಸ್ಮಿಕ ಸಾವಿನಿಂದಾಗಿ ಪ್ರಾಣೇಶ್ ಗೆ ಅವಕಾಶ ದೊರೆಯಿತು. ಈಗ ಕಾಲ ಚಕ್ರ ಉರುಳಿದೆ ಆಕಸ್ಮಿಕವಾಗಿ ಉಪ ಸಭಾಪತಿ ಸ್ಥಾನ ಕಟ್ ಆಗುತ್ತದೆ.

ವಿಧಾನ ಪರಿಷತ್ ನಲ್ಲಿ ಬಿಜೆಪಿ ಮತ್ತು ದಳದ ಹೊಂದಾಣಿಕೆಯಿಂದಾಗಿ ಬಹುಮತ ಪಡೆದಿತ್ತು ಹೀಗಾಗಿ ಬಿಜೆಪಿಯ ಹೊರಟ್ಟಿ ಸಭಾಪತಿಯಾದರೆ ದಳದ ಧರ್ಮೇಗೌಡರು ಉಪ ಸಭಾಪತಿಯಾದರು ಆಕಸ್ಮಿಕವಾಗಿ ಅಸುನೀಗಿದ್ದು ಪ್ರಾಣೇಶ್ ಉಪ ಸಭಾಪತಿ ಸ್ಥಾನ ದೊರೆಯಿತು.

ಬಿಜೆಪಿ ಮತ್ತು ದಳದ ವಿಧಾನ ಪರಿಷತ್ ಸದಸ್ಯರ ಸಂಖ್ಯೆ 27 ಆದರೆ ಕಾಂಗ್ರೆಸ್ ನಾಮನಿರ್ದೇಶನ ಗೊಂಡರೆ 43 ಸ್ಥಾನಕ್ಕೆ ಏರಿಕೆ ಆಗಲಿದೆ ಮುಂದಿನ ಅಧಿವೇಶನದಲ್ಲಿ ಹೊರಟ್ಟಿ ಮತ್ತು ಪ್ರಾಣೇಶ್ ಸ್ಥಾನಕ್ಕೆ ಕಾಂಗ್ರೆಸ್ ನವರು ಆಯ್ಕೆಯಾಗಲಿದ್ದಾರೆ.

ಪ್ರಾಣೇಶ್ ವಿಧಾನ ಪರಿಷತ್ ಸ್ಥಾನ ಈಗ ಹೋಗುತ್ತದೆ ಎಂದು ಕತ್ತು ಎತ್ತಿ ನೋಡುತ್ತಿದ್ದವರು ಸದ್ಯ ಉಪ ಸಭಾಪತಿ ಸ್ಥಾನ ಹೋಯಿತು ಎಂದು ಹಾಲು ಕುಡಿಯಬಹುದು.ವಿಧಾನ ಪರಿಷತ್ ಗೆ ಆಯ್ಕೆ ಆಗಿರುವ ಬಗ್ಗೆ ಕಳೆದ ನಾಲ್ಕು ವರ್ಷಗಳಿಂದ ಸೆಣಸಾಡಿ ತೀರ್ಪು ಕೂಡ ಬರಬೇಕಿತ್ತು ಆದರೆ ತೀರ್ಪು ಬರಲಿಲ್ಲ ಎಂದು ವಿಲ, ವಿಲ ಎನ್ನುತ್ತಿರುವ ಗಾಯಿತ್ರಿ ಶಾಂತೇಗೌಡ ಯಾವಾಗ ಬರುತ್ತದೆ ಎಂದು ನಿಟ್ಟುಸಿರು ಬಿಡುತ್ತಿದ್ದಾರೆ.ಪ್ರಾಣೇಶ್ ನಾಮನಿರ್ದೇಶನ ಸದಸ್ಯರ ಮತ ಪಡೆದಿರುವುದು ಅಕ್ರಮ ಚುನಾವಣೆಯಾಗಿದೆ ಎಂದು ತಕರಾರು ಸಲ್ಲಿಸಿದ್ದರು. ಹೀಗಾಗಿ ಪ್ರಾಣೇಶ್ ಗ್ರೇಸ್ ಮಾರ್ಕ್ಸ್ ನಲ್ಲಿ ಕಾಲ ಕಳೆಯುತ್ತಿದ್ದಾರೆ.

ಪ್ರಾಣೇಶ್ ಕಳೆದ ಹತ್ತು ವರ್ಷಗಳಿಂದ ವಿಧಾನ ಪರಿಷತ್ ಸದಸ್ಯ ನಯಾ ಪೈಸೆಯಷ್ಟು ಕೆಲಸ ಮಾಡಲಿಲ್ಲ ಎಂದು ಬಿಜೆಪಿಯವರು ಪಿಟಿ,ಪಿಟಿ ಎನ್ನುತ್ತಿದ್ದಾರೆ.ಪ್ರಾಣೇಶ್ ಮುಂದೆ ಯಾವುದೇ ಚುನಾವಣೆಗೆ ಸ್ಪರ್ಧಿಸಿದರೆ ರಾಜಕೀಯವಾಗಿ ಔಟ್ ಆಗುವುದು ಖಚಿತ.

ಪ್ರಾಣೇಶ್ ಉಪ ಸಭಾಪತಿ ಸ್ಥಾನ ಕಳೆದು ಕೊಂಡರೆ ಗಾಯಿತ್ರಿ ಶಾತೇಗೌಡ ಖುಷಿ ಪಡ ಬೇಕು ಆದರೆ ಮೂಡಿಗೆರೆ ಮಾಜಿ ಶಾಸಕ ಕುಮಾರಸ್ವಾಮಿಗೆ ಖುಷಿಯೋ,ಖುಷಿ.ಏಕೆ ಎಂಬುದನ್ನು ಅವರನ್ನೇ ಕೇಳ ಬೇಕು.ಒಟ್ಟಾರೆ ಪ್ರಾಣೇಶ್ ರಾಜಕೀಯವಾಗಿ ರಿಸ್ಕ್ ತೆಗೆದುಕೊಳ್ಳುವವರಲ್ಲ ಹೀಗಾಗಿ ರಾಜಕೀಯವಾಗಿ ಔಟ್ ಎಂದು ವಿಶ್ಲೇಷಣೆ ಮಾಡುತ್ತಿದ್ದಾರೆ.

Pranesh Politician Cut-Out Vice Chairman?

Share

Leave a comment

Leave a Reply

Your email address will not be published. Required fields are marked *

Don't Miss

ಅಪ್ರಾಪ್ತೆ ಅತ್ಯಾಚಾರ ಆರೋಪಿಗೆ 20ವರ್ಷ ಜೈಲು ಶಿಕ್ಷೆ

ಚಿಕ್ಕಮಗಳೂರು:  ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಆರೋಪಿಗೆ ಚಿಕ್ಕಮಗಳೂರು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ಎಫ್ ಟಿಎಸ್ ಸಿ ಪೋಕ್ಸೋ ನ್ಯಾಯಾಲಯ 20 ವರ್ಷ ಜೈಲು ಶಿಕ್ಷೆ ಹಾಗೂ 25...

ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು

ಚಿಕ್ಕಮಗಳೂರು: ತೋಟ ಹಾಗೂ ಮನೆಯ ಕೆಲಸಗಾರನಾಗಿ ಸುಮಾರು ಎರಡು ವರ್ಷಗಳಿಂದ ನಂಬಿಕಸ್ಥನಾಗಿದ್ದ ವ್ಯಕ್ತಿಯೊಬ್ಬನೇ ಮಾಲೀಕರ ಮನೆಯ ಲಾಕರ್‌ನಿಂದ ಭಾರಿ ಪ್ರಮಾಣದ ಚಿನ್ನಾಭರಣ ಹಾಗೂ ನಗದು ಕಳ್ಳತನ ಮಾಡಿಕೊಂಡು ಪರಾರಿಯಾಗಿರುವ ಘಟನೆ ಚಿಕ್ಕಮಗಳೂರು...

Related Articles

ಪ್ರತ್ಯೇಕ ರೈತ ಸಂಘಟನೆ ಘೋಷಣೆಗೆ ನಿರ್ಧಾರ

ಚಿಕ್ಕಮಗಳೂರು: ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಅವರು ರೈತ ಸಂಘದಲ್ಲಿ ಸಕ್ರೀಯರಾಗಿದ್ದ...

ಎರಡು ಪ್ರತ್ಯೇಕ ಪೋಕೋ ಪ್ರಕರಣದಲ್ಲಿ ಇಬ್ಬರ ಬಂಧನ

ಬಾಳೆಹೊನ್ನೂರು: ಅಪ್ರಾಪ್ತರ ಮೇಲಿನ ದೌರ್ಜನ್ಯ ಕುರಿತಂತೆ 2 ಪ್ರತ್ಯೇಕ ಪೋಕೋ ಪ್ರಕರಣ ದಾಖಲಾಗಿದ್ದು, ಇಬ್ಬರನ್ನು ಬಾಳೆಹೊನ್ನೂರು...

ವೈದ್ಯರ ಬೇಜವಾಬ್ದಾರಿತನಕ್ಕೆ ಮೂರು ತಿಂಗಳ ಹಸುಗೂಸು ಸಾವು

ಚಿಕ್ಕಮಗಳೂರು: ವೈದ್ಯರ ಬೇಜವಾಬ್ದಾರಿತನ ಹಾಗೂ ನಿರ್ಲಕ್ಷ್ಯದ ಆರೋಪಕ್ಕೆ ಮೂರು ತಿಂಗಳ ಹಸುಗೂಸೊಂದು ಬಲಿಯಾಗಿರುವ ಘಟನೆ ಚಿಕ್ಕಮಗಳೂರು...

ಜಿಲ್ಲೆಯಾದ್ಯಂತ ಮೊಹರಂ ಹಬ್ಬ ಆಚರಣೆ

ಚಿಕ್ಕಮಗಳೂರು: ತ್ಯಾಗ ಮತ್ತು ಬಲಿದಾನದ ಸಂಕೇತವಾಗಿರುವ ಮೊಹರಂ ಹಬ್ಬವನ್ನು ಮುಸ್ಲಿಮರು ಜಿಲ್ಲೆಯಾದ್ಯಂತ ಶುಕ್ರವಾರ ಶ್ರದ್ದಾಭಕ್ತಿಯಿಂದ ಆಚರಿಸಿದರು....