ಚಿಕ್ಕಮಗಳೂರು: ನಗರಾದ್ಯಂತ ವಾಹನ ಪಾರ್ಕಿಂಗ್ ಅವ್ಯವಸ್ಥೆ ಮತ್ತು ಪಾದಚಾರಿ ಮಾರ್ಗದಲ್ಲಿ ಪ್ರತಿನಿತ್ಯವ ಸಾರ್ವಜನಿಕರು ಸಂಚರಿಸಲು ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ಇಂದಿನ ನಗರಸಭೆ ಆಡಳಿತ ಮಂಡಳಿ ಸಾಮಾನ್ಯ ಸಭೆ ಹಲವು ಚರ್ಚೆಗಳಿಗೆ ಎಡೆಮಾಡಿಕೊಟ್ಟಿತು.
ನಗರಸಭಾ ಕಚೇರಿಯ ಸಭಾಂಗಣದಲ್ಲಿ ಅಧ್ಯಕ್ಷೆ ಶೀಲಾ ದಿನೇಶ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಗರದ ಬಹುತೇಕ ಕಡೆಗಳಲ್ಲಿ ನಾಲ್ಕು ಹಾಗೂ ಎರಡು ಚಕ್ರದ ವಾಹನಗಳ ನಿಲುಗಡೆಗೆ ತೀವ್ರ ಸಮಸ್ಯೆ ಉಂ ಟಾಗಿದೆ. ಈ ಬಗ್ಗೆ ಸಮಗ್ರವಾಗಿ ಚರ್ಚೆಗಳು, ಸಾರ್ವಜನಿಕರ ಸಮಸ್ಯೆ ಪರಿಹರಿಸಬೇಕು ಎಂದು ಸದಸ್ಯರು ಗಳು ಪಟ್ಟುಹಿಡಿದರು.
ಶಾಸಕ ಹೆಚ್.ಡಿ.ತಮ್ಮಯ್ಯ ಮಾತನಾಡಿ ಪ್ರವಾಸಿ ತಾಣವಾದ ಜಿಲ್ಲೆಯಲ್ಲಿ ವಾಹನ ಪಾರ್ಕಿಂಗ್ ಸಮ ಸ್ಯೆ ಹೆಚ್ಚಳಗೊಂಡಿದೆ. ಈ ಬಗ್ಗೆ ಜಿಲ್ಲಾ ಪೊಲೀಸ್ ಇಲಾಖೆಯ ಸಭೆ ಕರೆ ಪಾರ್ಕಿಂಗ್ ವ್ಯವಸ್ಥೆಗೆ ಸೂಕ್ತ ಕ್ರಮ ನಡೆಸಲಾಗುವುದು. ಕೆಲವು ಅಂಗಡಿ ಮಳಿಗೆಗಳ ಎದುರು ವಾಹನ ನಿಲುಗಡೆಗೆ ಸೆಲರ್ ನಿರ್ಮಿಸಿದ್ದು ಇದ ರಿಂದ ಪಾರ್ಕಿಂಗ್ ಅನಿವಾರ್ಯತೆ ಉಂಟಾಗಿದ್ದು ನಗರಸಭಡ ಅಧಿಕಾರಿಗಳು ಸೂಕ್ತ ಕ್ರಮ ವಹಿಸಬೇಕು ಎಂದು ಸೂಚಿಸಿದರು.
ನಗರದ ಎಲ್ಲಾ ವಾರ್ಡ್ಗಳಲ್ಲಿ ರಸ್ತೆ ಡಾಂಬರೀಕರಣ ಕಾಮಗಾರಿಕ್ಕೆ ಚಾಲನೆ ನೀಡಲಾಗಿದ್ದು ಕೆಲವು ರಸ್ತೆಗಳ ಡಾಂಬರೀಕರಣ ಬಾಕಿಯಿದ್ದು ಸದ್ಯದಲ್ಲೇ ಪೂರ್ಣಗೊಳ್ಳಲಿದೆ ಜೊತೆಗೆ ಒಳಚರಂಡಿ ವ್ಯವಸ್ಥೆ, ಶು ದ್ಧ ಕುಡಿಯುವ ಹೆಸರಲ್ಲಿ ರಸ್ತೆಗಳನ್ನು ಅಗೆಯುವುದು ಕಂಡುಬAದಲ್ಲಿ ಸಂಬAಧಪಟ್ಟ ಅಧಿಕಾರಿಗಳನ್ನು ಹೊ ಣೆಯಾಗಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸದಸ್ಯ ಟಿ.ರಾಜಶೇಖರ್ ಮಾತನಾಡಿ ವಿಜಯಪುರದ ಗಣಪತಿ ಪೆಂಡಾಲ್ ಸಮೀಪದಿಂದ ರತ್ನಗಿರಿ ರಸ್ತೆಯನ್ನು ಜನಪ್ರತಿನಿಧಿಗಳು, ವರಿಷ್ಟಾಧಿಕಾರಿಗಳು ಪರಿಶೀಲನೆ ನಡೆಸಿ ಏಕಮುಖ ರಸ್ತೆಯನ್ನಾಗಿ ಮಾರ್ಪ ಡಿಸಬೇಕು. ಬಾರ್ಲೈನ್ ರಸ್ತೆಯಲ್ಲಿ ಹೆಚ್ಚಿನ ವಹಿವಾಟು ಇರುವದರಿಂದ ಪಾದಚಾರಿ, ವಾಹನ ಸವಾರರಿಗೆ ತೀವ್ರ ಸಂಕಷ್ಟ ಎದುರಾಗುತ್ತಿದೆ ಎಂದರು.
ಬಸವನಹಳ್ಳಿ ಮುಖ್ಯರಸ್ತೆಯ ಅಕ್ಕಪಕ್ಕದಲ್ಲಿ ಬೀದಿಗಾಡಿಗಳನ್ನು ನಿಲ್ಲಿಸಿ ವ್ಯಾಪಾರ ನಡೆಸಲಾಗುತ್ತಿದೆ. ಇ ದು ಪ್ರತಿನಿತ್ಯ ಸಂಚರಿಸುವ ಸಾರ್ವಜನಿಕರಿಗೆ ತೊಂದರೆಯಾಗಿದೆ. ಬಾರ್ಲೈನ್ ಹೆಚ್ಚು ದ್ವಿಚಕ್ರ ದುರಸ್ಥಿ ಮಳಿ ಗೆಗಳು ಹೆಚ್ಚಿರುವ ಕಾರಣ ರಸ್ತೆಯಲ್ಲೇ ಬೈಕ್ಗಳ ದುರಸ್ಥಿ ಕಾರ್ಯ ನಡೆಯುತ್ತಿದ್ದು ಇದಕ್ಕೆ ನಗರಸಭೆ ಬೇರೆ ವ್ಯವಸ್ಥೆ ಕಲ್ಪಿಸಿಕೊಡಬೇಕು ಎಂದು ತಿಳಿಸಿದರು.
ಸದಸ್ಯ ಮಧುಕುಮಾರ್ ರಾಜ್ ಅರಸ್ ಮಾತನಾಡಿ ಚಂದ್ರಶೇಖರ್ ಆಜಾದ್ ವೃತ್ತದಲ್ಲಿ ಸಂಘ- ಸಂಸ್ಥೆಗಳು, ವಿವಿಧ ರಾಜಕೀಯ ಪಕ್ಷಗಳು ಪ್ರತಿಭಟನೆ ಸ್ಥಳ ನಿಗಧಿಯಾಗಿತ್ತು. ಆದರೆ ಕೆಲವು ವೇದಿಕೆಗಳು ದೊಡ್ಡಪ್ರಮಾಣದ ಆಯೋಜಿಸುವ ಹಿನ್ನೆಲೆ ಪ್ರತಿನಿತ್ಯ ಸಂಚರಿಸುವ ನೂರಾರು ವಾಹನ ಸವಾರರಿಗೆ ಅಡಚ ಣೆಯುಂಟಾಗುತ್ತಿದೆ ಎಂದರು.
ಸದಸ್ಯ ಎ.ಸಿ.ಕುಮಾರಗೌಡ ಮಾತನಾಡಿ ಸಾರ್ವಜನಿಕರು ಸಂಚರಿಸುವ ಪಾದಚಾರಿ ಮಾರ್ಗದಲ್ಲಿ ವ್ಯಾಪಾರಿಗಳ ಅಂಗಡಿಗಳನ್ನು ತೆರವುಗೊಳಿಸಲಾಗಿತ್ತು. ಆದರೆ ತೆರವುಗೊಳಿಸಿದ ನಂತರ ಕೆಲವು ದಿನಗಳಲ್ಲಿ ಮತ್ತೆ ಪಾದಚಾರಿ ಮಾರ್ಗದಲ್ಲಿ ಅಂಗಡಿಗಳು ಹಾಕಲಾಗುತ್ತಿದ್ದು ನಗರಸಭಾ ಆಡಳಿತ ಸೂಕ್ತ ನಿರ್ದೇಶನ ನೀಡಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಕೊಡಬೇಕು ಎಂದರು.
ಸದಸ್ಯೆ ಕವಿತಾಶೇಖರ್ ಮಾತನಾಡಿ ಬೀದಿನಾಯಿಗಳ ಹಾವಳಿ ನಗರದಲ್ಲಿ ಹೆಚ್ಚಿರುವ ಕಾರಣ ಮಹಿ ಳೆಯರು, ಹಿರಿಯರು ಹಾಗೂ ಶಾಲಾಮಕ್ಕಳು ಸಂಚರಿಸದ ಸ್ಥಿತಿ ಉದ್ಬವಿಸಿದೆ. ನ್ಯಾಯಾಲಯವು ಬೀದಿನಾ ಯಿಗಳ ಹಾವಳಿಗೆ ಬೇರೆ ವ್ಯವಸ್ಥೆ ಕಲ್ಪಿಸಲು ಸೂಚಿಸಿದ್ದು ನಗರಸಭಡ ಆಡಳಿತ ಮಂಡಳಿ ಕ್ರಮಕೈಗೊಳ್ಳಬೇ ಕು ಎಂದು ಹೇಳಿದರು.
ಸಭೆಯಲ್ಲಿ ನಗರಸಭೆ ಉಪಾಧ್ಯಕ್ಷೆ ರವಿನಾಯ್ಕ್, ಪೌರಾಯುಕ್ತ ಬಿ.ಸಿ.ಬಸವರಾಜ್, ಸದಸ್ಯರಾದ ಲಕ್ಷö್ಮಣ್, ವರಸಿದ್ದಿ ವೇಣುಗೋಪಾಲ್, ರೂಪಕುಮಾರ್, ಗುರುಮಲ್ಲಪ್ಪ, ಗೋಪಿ, ಅರುಣ್, ಶಾದಬ್ ಆಲಂಖಾನ್ ಇದ್ದರು.
Municipal Council General Meeting discusses vehicle parking chaos
Leave a comment