ಚಿಕ್ಕಮಗಳೂರು : ಸ್ವಾತಂತ್ರ್ಯ ಹೋರಾಟಗಾರ ಬಿ.ಎಂ.ಏಕೋರಾಮಸ್ವಾಮಿ ನೆನಪಿಗಾಗಿ ಅಜ್ಜಂಪುರದಲ್ಲಿ ಇದೇ ಜನವರಿ ಐದರಿಂದ ಹತ್ತನೇ ತಾರೀಖಿನವರೆಗೆ ರಂಗೋತ್ಸವ ಕಾರ್ಯಗಳು ನಡೆಯಲಿವೆ. ರಂಗ ಚಟುವಟಿಕೆಗಳ ತಾಣ,ಜಾನಪದ ಕಲೆಗಳ ನಾಡು ಕಲಾವಿದರ ಸಂಗಮವನ್ನೇ ಹೊಂದಿರುವ ಅಜ್ಜಂಪುರದಲ್ಲಿ ಪ್ರತಿ ವರ್ಷದಂತೆ ಈ ಕಾರ್ಯಕ್ರಮಗಳನ್ನು ಆಯೋಜಿಸುವ ಗೆಳೆಯರ ಬಳಗದ ಅಧ್ಯಕ್ಷ ಎ.ಸಿ.ಚಂದ್ರಪ್ಪ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಿ ಮಾಹಿತಿ ನೀಡಿದ್ದಾರೆ.
ಕೈಲಾಸಂ ರಂಗಮಂದಿರದಲ್ಲಿ ನಡೆಯುವ ಕಾರ್ಯಕ್ರಮದ ಮುಖ್ಯ ದ್ವಾರಕ್ಕೆ ಹೆಸರಾಂತ ವೈದ್ಯರಾದ ನಾಗರಾಜ್ ಹೆಸರಿಡಲಾಗಿದ್ದು ಊರಿನ ಹಿರಿಯರಾದ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಜನಾರ್ದನ ರಾವ್ ಮತ್ತು ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಎಸ್.ತಿಪ್ಪೇರುದ್ರಪ್ಪರವರನ್ನು ಗೌರವಿಸಲಾಗುವುದು. ಕಾರ್ಯಕ್ರಮದಲ್ಲಿ ಚಟ್ನಳ್ಳಿ ಮಹೇಶ್ ಮತ್ತು ಇಮ್ರಾನ್ ಅಹಮದ್ ಬೇಗ್ ಮತ್ತಿತರರು ಭಾಗವಹಿಸಲಿದ್ದಾರೆ.
ಜನವರಿ ಐದರಂದು ಬಂಗಾರದ ಮನುಷ್ಯ ನಾಟಕ ಪ್ರದರ್ಶನಗೊಳ್ಳಲಿದೆ. ಜನವರಿ ಆರರಂದು ತುಲಾಭಾರ ನಾಟಕ ಜನವರಿ ಏಳರಂದು ಕೋಳೂರು ಕೊಡೆಗಾಸು ನಾಟಕ, ಜನವರಿ ಎಂಟರಂದು ಸರ ಸತಿಯಾಗಲೊಲ್ಲೆ, ಜನವರಿ ಒಂಬತ್ತುರಂದು ಮೋಳಿಗೆ ಮಾರಯ್ಯ ಹಾಗು ಜನವರಿ ಹತ್ತರಂದು ನಗೆ ಕಾರ್ಯಕ್ರಮ ಆಯೋಜಿಸಲಾಗಿದೆ. ಜನವರಿ ಏಳರಂದು ಜಿಲ್ಲಾ ಮಟ್ಟದ ಭಾವಗೀತೆ ಮತ್ತು ಜಾನಪದಗೀತೆಗಳ ಸ್ಪರ್ಧೆ ನಡೆಯಲಿದ್ದು ಗೆಳೆಯರ ಬಳಗ ಮತ್ತು ಕಸಾಪದ ಹೆಚ್.ಆರ್.ಚಂದ್ರಪ್ಪ ಮತ್ತು ಕೃಷ್ಣಮೂರ್ತಿ, ಮೋಹನ್ ರಾವ್,ನವೀನ್ ಕುಮಾರ್ ಮತ್ತು ಪ್ರಶಾಂತ ಇಟಗಿ ಕಾರ್ಯಕ್ರಮದಲ್ಲಿ ಇದ್ದರು.
Leave a comment