ಚಿಕ್ಕಮಗಳೂರು: ಬಿಜೆಪಿ ಸರ್ಕಾರದಲ್ಲಿ ಶಾಸಕರ ನಡುವೆ ಕ್ಷೇತ್ರದ ಅಭಿವೃದ್ಧಿಗೆ ಪೈಪೋಟಿ ನಡೆದರೆ, ಕಾಂಗ್ರೆಸ್ ಆಡಳಿತದಲ್ಲಿ ಭ್ರಷ್ಟಾಚಾರ,ಲೂಟಿಗಾಗಿ ಪೈಪೋಟಿ ನಡೆಯುತ್ತಿದೆ. ಇದೇ ಪರಿಸ್ಥಿತಿ ಮುಂದುವರೆದರೆ ರಾಜಕೀಯವಾಗಿ ರಸ್ತೆಬಿದ್ದಿರುವ ಗುಂಡಿಯಲ್ಲಿ ಮುಚ್ಚುತ್ತಾರೆಂದು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಎಚ್ಚರಿಸಿದರು.
ಆಲ್ದೂರು ಮಂಡಲದ ಯುವಮೋರ್ಚಾದಿಂದ ಶನಿವಾರ ಹಮ್ಮಿಕೊಂಡಿದ್ದ ಪಾದಯಾತ್ರೆಯ ನಗರ ತಲುಪಿ ಆಜಾದ್ ಮೈದಾನದಲ್ಲಿ ಹಮ್ಮಿಕೊಂಡಿದ್ದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿ, ಸಕಾರವನ್ನು ಎಚ್ಚರಿಸುವ ಸಲುವಾಗಿ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. ಇದು ಆರಂಭವಷ್ಟೆ ಬಿಜೆಪಿ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹೋರಾಟ ನಡೆಸಲಿದೆ ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ಮುಖಂಡರು ಧ್ವನಿ ಎತ್ತಿದರೆ ಶಾಸಕರು ನ್ಯಾಯಾಲಯದ ಮೂಲಕ ನೋಟಿಸ್ ಕೊಡಿಸುತ್ತಿದ್ದಾರೆ. ಪಕ್ಷದ ಮುಖಂಡರು ತುರ್ತು ಪರಿಸ್ಥಿತಿಗೆ ಹೆದರಲಿಲ್ಲ ನಿಮ್ಮೆ ನೋಟಿಸ್ಗೆ ಹೆದರುತ್ತಾರೆಯೇ ಎಂದು ಹೇಳಿದ ಅವರ, ವಾಹನದಲ್ಲಿ ತೆರಳುವಾಗ ಗುಂಡಿದಾಟಿದ ಬಳಿಕ ಹಿಡಿಶಾಪ ಹಾಕುತ್ತಿದ್ದಾರೆ. ಇದೇ ಪರಿಸ್ಥಿತಿ ಮುಂದುವರೆದಲ್ಲಿ ಮುಂದಿನ ದಿನಗಳಲ್ಲಿ ನಿಮ್ಮನ್ನು ರಸ್ತೆಯ ಗುಂಡಿಗೆ ನೂಕುತ್ತಾರೆಂದು ತಿಳಿಸಿದರು.
ಗ್ಯಾರಂಟಿ ಯೋಜನೆಗೆ ಕಲ್ಲುಬಿದ್ದಿದೆ. ಕಾಂಗ್ರೆಸ್ ಆಡಳಿತದಲ್ಲಿ ಶಾಸಕರುಗಳ ಮನೆಗೆ ಲಕ್ಷ್ಮಿಬರುತ್ತಿದ್ದಾಳೆ ಆದರೆ ವೃದ್ಧರ, ವಿಧೆವೆಯರ, ವಿಕಲಚೇತನರಿಗೆ ೬ತಿಂಗಳಿನಿಂದ ಮಾಶಾಸನ ಸ್ಥಗಿತಗೊಂಡಿದೆ.ರಾಜ್ಯದಲ್ಲಿ ೬೭ಸಾವಿರ ಜನರಿಗೆ ಮಾಸಿಕ ಪಿಂಚಣಿ ಬರುತ್ತಿಲ್ಲ.ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ, ಶೂ ಬಂದಿಲ್ಲ, ವಿದ್ಯಾರ್ಥಿವೇತನವೂ ಬಂದಿಲ್ಲವೆಂದು ಟೀಕಿಸಿ ಇನ್ನೂ ರಾಜ್ಯ ರಸ್ತೆಸಾರಿಗೆ ಸಂಸ್ಥೆಯ ಬಸ್ಗಳು ಎಲ್ಲೆಂದರಲ್ಲಿ ಕೆಟ್ಟುನಿಲ್ಲುತ್ತಿವೆ. ಅವುಗಳನ್ನು ದೂಡುವ ಪರಿಸ್ಥಿತಿ ಉಂಟಾಗಿದೆ. ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕೂ ದೂಡುವ ಪರಿಸ್ಥಿತಿ ತಲೆದೋರಿದೆ ಎಂದು ಹೇಳಿದರು.
ಕಾಲಗುಣದಿಂದ ಕೆರೆಗಳಿಗೆ ನೀರುತುಂಬಿದೆ. ದಶದಿಕ್ಕುಗಳು ಅಭಿವೃದ್ಧಿಕಾಣುತ್ತಿವೆ ಎಂದು ಈ ಕ್ಷೇತ್ರದ ಶಾಸಕರು ಹೇಳುತ್ತಾರೆ. ದಶದಿಕ್ಕುಗಳು ಅಭಿವೃದ್ಧಿಕಂಡಿಲ್, ಬಾರ್ಗಳು ತಲೆಎತ್ತಿವೆ. ಕಾಲಹೀಗೆಯೆ ಇರುವುದಿಲ್ಲ, ಕಾರ್ಯಕರ್ತರಿಗೆ ತೊಂದರೆ ನೀಡಿದರೆ ಲೆಕ್ಕಚುಕ್ತಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜಶೆಟ್ಟಿ ಮಾತನಾಡಿ,ಆಲ್ದೂರಿನ ಬಿರಂಜಿಹಳ್ಳದ ಬಳಿ ನಿರ್ಮಿಸಿದ್ದ ೮೦೦ ಮೀಟರ್ ರಸ್ತೆ ೩ ತಿಂಗಳಲ್ಲೇ ಮಾಯವಾಗಿದೆ. ಶಾಸಕರಿಗೆ ಎಷ್ಟು ಹಮೀಷನ್ಹೋಗಿದೆ. ಇದು ಕಾಂಗ್ರೆಸ್ ಸರ್ಕಾರದ ಲೂಟಿಯಲ್ಲವೇ?ಚಿಕ್ಕಮಗಳೂರು ಕ್ಷೇತ್ರದಲ್ಲಿ ಬೇನಾಮಿ ಹೆಸರಿನಲ್ಲಿ ಬಾರ್ಗಳು ಓಪನ್ ಆಗುತ್ತಿವೆ. ಕ್ಷೇತ್ರದ ಅಭಿವೃದ್ಧಿಗೆ ಅನುದಾನ ತರುವ ಬದಲು ಶಾಸಕರು ಮದ್ಯದಂಗಡಿಗಳನ್ನು ತರುತ್ತಿದ್ದಾರೆಂದು ಆರೋಪಿಸಿದರು.
ಬಿಜೆಪಿ ನೀಚಕೆಲಸ ಸಹಿಸುವುದಿಲ್ಲ, ಭ್ರಷ್ಟಾಚಾರದ ವಿರುದ್ಧ ಮಾತನಾಡಿದರೆ ಕೇಸುಹಾಕುವ ಕೆಲಸ ನಡೆಯುತ್ತಿದೆ. ಮುಂದಿನ ಚುನಾವಣೆಯಲ್ಲಿ ನೀವುಗಳು ಗೆಲ್ಲುವುದಿಲ್ಲ ಈಗಲಾದರೂ ನಿಮ್ಮನ್ನು ಗೆಲ್ಲಿಸಿದ ಜನರ ಋಣ ತೀರಿಸುವ ಕೆಲಸಕ್ಕೆ ಮುಂದಾಗಿ ಎಂದು ಹೇಳಿದರು.
ರೈತಮೋರ್ಚಾದ ರಾಜ್ಯ ಪ್ರಧಾನಕಾರ್ಯದರ್ಶಿ ಹೆಚ್.ಸಿ.ಕಲ್ಮರಡಪ್ಪ ಮಾತನಾಡಿ, ಬಿಜೆಪಿ ಜನಪರಹೋರಾಟವನ್ನು ಕೈಗೆತ್ತಿಕೊಂಡಿದ್ದು, ಇದು ಮುಂದುವರೆಯಲಿದೆ. ಜಿಲ್ಲೆಯಶಾಸಕರು ಹನಿಮೂನ್ ಅವಧಿಯಿಂದ ಹೊರಬಂದಿಲ್ಲ. ಜಿಲ್ಲೆಯ ೫ಶಾಸಕರು ಅಚ್ಚರಿಯ ಗೆಲುವು ಸಾಧಿಸಿದ್ದೀರಿ, ಮುಖ್ಯಮಂತ್ರಿ ನಿಮ್ಮ ಮಾತಿಗೆ ಕವಡೆಕಾಸಿನ ಕಿಮ್ಮತ್ತು ಕೊಡುತ್ತಿಲ್ಲ,ಹಿಂದಿನ ಶಾಸಕರು ತಂದಿರುವ ಅನುದಾನದಲ್ಲೇ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ ಎಂದು ತಿಳಿಸಿದರು.
ಬಿಜೆಪಿ ಯುವಮೋರ್ಚಾ ಜಿಲ್ಲಾಕಾರ್ಯದರ್ಶಿ ಶಶಿಆಲ್ದೂರು ಮಾತನಾಡಿ, ಪಂಚಾಯಿತಿ ಮಟ್ಟದಿಂದ ಯುವಮೋರ್ಚಾ ಹೋರಾಟ ರೂಪಿಸಲಿದೆ ಎಂದು ಹೇಳಿದರು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ದೀಪಕ್ದೊಡ್ಡಯ್ಯ ಮಾತನಾಡಿ, ಅಭಿವೃದ್ಧಿ ಕೆಲಸಕ್ಕೆ ಒತ್ತುನೀಡದಿದ್ದರೆ ಶಾಸಕರ ಮನೆಗೆ ಮುತ್ತಿಗೆ ಹಾಕುವ ಕೆಲಸಮಾಡಲಾಗುವುದು ಎಂದು ತಿಳಿಸಿದರು.
ಬಿಜೆಪಿ ಮುಖಂಡರಾದ ನರೇಂದ್ರ, ಚಂಪಕ್, ಸಂಗೀತ ಪ್ರಸಾದ್, ಕನಕರಾಜ್ ಅರಸ್, ಕೋಟೆ ರಂಗನಾಥ, ದಿನೇಶ್ಕೋಟೆ, ವೈ.ಜಿ.ಸುರೇಶ್,ಜಯಪಾಲ್, ಅರವಿಂದ್, ಸಂತೋಷ್ಕೋಟ್ಯಾನ್, ಚಂಪಾಜಗದೀಶ್ ಸೇರಿದಂತೆ ಹಲವು ಬಿಜೆಪಿ ಮುಖಂಡರು ಇದ್ದರು.
Corruption and competition for loot in the Congress regime
Leave a comment