ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಿನಲ್ಲಿ ನೂತನ ರೈಲಿಗೆ ಚಾಲನೆ ಸಿಕ್ಕಿದೆ. ಈ ಸಂದರ್ಭದಲ್ಲಿ ಭಕ್ತಿಭಾವದ ದೃಶ್ಯವೊಂದು ಗಮನ ಸೆಳೆಯಿತು. ತಿರುಪತಿಗೆ ಹೊಸದಾಗಿ ಪ್ರಾರಂಭವಾಗಿರುವ ರೈಲಿಗೆ ವೃದ್ಧೆಯೊಬ್ಬರು ಮೂರು ಬಾರಿ ಅಡ್ಡ ಬಿದ್ದು ಭಕ್ತಿಯಿಂದ ನಮಸ್ಕಾರ ಸಲ್ಲಿಸಿದರು.
ಹಿರೇಮಗಳೂರಿನ ನಿವಾಸಿ ಲಕ್ಷ್ಮೀ ಬಾಯಿ, ವರ್ಷಕ್ಕೆ ಮೂರರಿಂದ ನಾಲ್ಕು ಬಾರಿ ತಮ್ಮ ಮನೆದೇವರಾದ ತಿರುಪತಿ ವೆಂಕಟೇಶ್ವರನ ದರ್ಶನಕ್ಕಾಗಿ ತೆರಳುತ್ತಾರೆ. ಇದೀಗ ಚಿಕ್ಕಮಗಳೂರಿನಿಂದ ತಿರುಪತಿಗೆ ನೇರವಾಗಿ ರೈಲು ಸಂಚಾರ ಪ್ರಾರಂಭವಾದ ಹಿನ್ನಲೆಯಲ್ಲಿ ಲಕ್ಷ್ಮೀ ಬಾಯಿ, ರೈಲಿಗೆ ‘ಭಕ್ತಿಯ ಬೀಳ್ಕೊಡುಗೆ’ ನೀಡಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಸೋಮಣ್ಣ ಪ್ರಧಾನ ಮಂತ್ರಿ ಮೋದಿ ಅವರ ವಿಕಸಿತ ಭಾರತದ ಕಲ್ಪನೆಯಿಂದ ಇದು ಸಾಧ್ಯವಾಗಿದೆ. ಹೀಗಾಗಿ ಆ ತಾಯಿಗೆ ತಿರುಪತಿಗೆ ರೈಲು ಆರಂಭವಾಗಿರುವುದಕ್ಕೆ ಸಂತೋಷವಾಗಿದೆ. ತಿರುಪತಿ ತಿಮ್ಮಪ್ಪನಿಗೆ ಎಷ್ಟು ನಮಸ್ಕಾರ ಸಲ್ಲಿಸುತ್ತೇನೋ ಅಷ್ಟು ನಮಸ್ಕಾರವನ್ನು ಆ ತಾಯಿಗೆ ಸಲ್ಲಿಸುತ್ತೇನೆ ಎಂದರು.
An old woman saluted the Tirupati train
Leave a comment