ಚಿಕ್ಕಮಗಳೂರು: ಕನ್ನಡ ರಾಜ್ಯೋತ್ಸವ ಕೇವಲ ನವೆಂಬರ್ ತಿಂಗಳಿಗೆ ಸೀಮಿತವಾಗಬಾರದು ಎಂಬ ಉದ್ದೇಶದೊಂದಿಗೆ ಕನ್ನಡಸೇನೆ ಕರ್ನಾಟಕದಿಂದ ಕನ್ನಡ ನಿತ್ಯೋತ್ಸವ ಶೀರ್ಷಿಕೆ ಅಡಿಯಲ್ಲಿ ಡಿ.೨೪ ರಂದು ಬುಧವಾರ ನಗರದಲ್ಲಿ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಿಸಲಾಗುವುದು ಎಂದು ಕನ್ನಡ ಸೇನೆ ಜಿಲ್ಲಾಧ್ಯಕ್ಷ ಪಿ.ಸಿ.ರಾಜೇಗೌಡ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಡಿ.೨೪ ಮಧ್ಯಾಹ್ನ ೨ ಗಂಟೆಗೆ ಹಳ್ಳಿವಾದ್ಯ, ಹುಲಿವೇಷ, ವೀರಗಾಸೆ, ಕೋಲಾಟ ಮತ್ತಿತರೆ ಜನಪದ ಕಲಾ ತಂಡಗಳೊಂದಿಗೆ ಕನ್ನಡ ತಾಯಿ ಭುವನೇಶ್ವರಿ ವಿಗ್ರಹದ ಮೆರವಣಿಗೆ ಶ್ರೀರಾಮ ದೇವಸ್ಥಾನದಿಂದ ಹೊರಟು ಎಂಜಿ ರಸ್ತೆ ಮೂಲಕ ಆಜಾದ್ಪಾರ್ಕ್ ತಲುಪಲಿದೆ.
ಸಮಾಜಸೇವಕಿ ಪಲ್ಲವಿ ಸಿ.ಟಿ.ರವಿ ಮೆರವಣಿಗೆ ಉದ್ಘಾಟಿಸಲಿದ್ದು, ಬ್ರಹ್ಮಕುಮಾರೀಸ್ ಭಾಗ್ಯ, ಕಾಂಗ್ರೆಸ್ ಮುಖಂಡರಾದ ರೇಖಾಹುಲಿಯಪ್ಪಗೌಡ ಜತೆಗಿರುವರು. ಸಂಜೆ ೪.೩೦ ಕ್ಕೆ ಆಜಾದ್ ಪಾರ್ಕಿನಲ್ಲಿ ನಡೆಯುವ ವೇದಿಕೆ ಕಾರ್ಯಕ್ರಮವನ್ನು ಕನ್ನಡ ಸೇನೆ ರಾಜ್ಯಾಧ್ಯಕ್ಷ ಕೆ.ಆರ್.ಕುಮಾರ್ ಉದ್ಘಾಟಿಸಲಿದ್ದು, ಪಿ.ಸಿ.ರಾಜೇಗೌಡ ಆದ ನಾನು ಅಧ್ಯಕ್ಷತೆ ವಹಿಸಲಿದ್ದು, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಚೈತ್ರಾಗೌಡ, ಶಾಸಕ ಎಚ್.ಡಿ.ತಮ್ಮಯ್ಯ, ಎಂಎಲ್ಸಿ ಸಿ.ಟಿ.ರವಿ, ಬೋಜೇಗೌಡ, ಮಾಜಿ ಶಾಸಕರಾದ ವೈಎಸ್ವಿ ದತ್ತಾ, ಗಾಯತ್ರಿಶಾಂತೇಗೌಡ, ಎಸ್ಪಿ ಡಾ. ವಿಕ್ರಂ ಆಮಟೆ, ವಿವಿಧ ರಾಜಕೀಯ ಪಕ್ಷ, ಸಂಘಟನೆಗಳ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಸಂಜೆ ೫ ಗಂಟೆಗೆ ಹಾಸ್ಯ ಸಂಜೆ ಮತ್ತು ರಸಮಂಜರಿ ಕಾರ್ಯಕ್ರಮ ನಡೆಯಲಿದ್ದು, ಕನ್ನಡದ ಖ್ಯಾತ ಹಾಸ್ಯ ಕಲಾವಿದ ಟೆನ್ನಿಸ್ ಕೃಷ್ಣ, ಮಿಮಿಕ್ರಿ ಗೋಪಿ, ಕಾಮಿಡಿ ಕಿಲಾಡಿಗಳು ಖ್ಯಾತಿಯ ನಯನ, ಗಾಯಕರಾದ ಕಂಬದ ರಂಗಯ್ಯ, ಅಖಿಲಾ ಪಜಿಮಣ್ಣು, ಗಂಧರ್ವ ಮಂಜು, ವಿನಯ್ ಆಲಾಪ್ ಅವರು ಸಾಂಸ್ಕೃತಿಕ ರಸಸಂಜೆ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಎಂದರು.
ಸಮಾಜ ಸೇವಕರಾದ ಎಂ.ಎಸ್.ಲಿಂಗಪ್ಪಗೌಡ, ದಯಾನಂದಶಾಸ್ತ್ರಿ, ಬಿಂಡಿಗ ದೇವೀರಮ್ಮ ಟ್ರಸ್ಟ್ ಅಧ್ಯಕ್ಷ ಕುಲಶೇಖರ, ಗುರುವೇಶ್, ಮಲ್ಲೇಶಸ್ವಾಮಿ, ಡಾ. ಸುಂದರ್ಗೌಡ, ವಿಜಯಲಕ್ಷ್ಮಿ ವಿಶ್ವನಾಥ್, ಎಸ್.ಶೃತಿ, ಎಂ.ಜಿ.ರಮೇಶ್ ಮತ್ತು ಪ್ರೆಸ್ಕ್ಲಬ್ ಅಧ್ಯಕ್ಷ ಸಿ.ಡಿ ಚಂದ್ರೇಗೌಡ ಸೇರಿದಂತೆ ನೂತನ ಪದಾಧಿಕಾರಿಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಗುವುದು ಎಂದರು.
ಕನ್ನಡ ಸೇನೆಯ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಚೈತ್ರಾಗೌಡ, ನಗರ ಘಟಕ ಅಧ್ಯಕ್ಷೆ ಮಂಜುಳ, ಪದಾಧಿಕಾರಿಗಳಾದ ಕಳವಾಸೆ ರವಿ, ಲಕ್ಷ್ಮಣ ಹುಣಸೇಮಕ್ಕಿ, ಜಯಪ್ರಕಾಶ, ಸತೀಶ್, ಅನ್ವರ್, ನವೀನ್, ಹರೀಶ್ ಮತ್ತಿತರರಿದ್ದರು.
A grand Kannada festival will be held in the city on December 24th.
Leave a comment