Home ಅಪ್ಪಟ ಗ್ರಾಮೀಣ ಪ್ರತಿಭೆ ಹೆಚ್.ಎಂ.ರವಿಗೆ ಜಾನಪದ ಅಕಾಡೆಮಿ ಪ್ರಶಸ್ತಿ.
HomeKadurLatest Newsnamma chikmagalur

ಅಪ್ಪಟ ಗ್ರಾಮೀಣ ಪ್ರತಿಭೆ ಹೆಚ್.ಎಂ.ರವಿಗೆ ಜಾನಪದ ಅಕಾಡೆಮಿ ಪ್ರಶಸ್ತಿ.

Share
Share

ಕಡೂರು: ಕಿರಿಯ ವಯಸ್ಸಿನಲ್ಲಿ ಹಿರಿಯ ಸಾಧನೆ ಮಾಡಿರುವ ಹೆಚ್.ಎಂ.ರವಿಗೆ ಜಾನಪದ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಕಡೂರು ತಾಲ್ಲೂಕಿನ ಅಂತರಘಟ್ಟೆ ಸಮೀಪವಿರುವ ಕುಗ್ರಾಮ ಹುಲಿಹಳ್ಳಿಯ ರವಿಗೆ ಓದು ತಲೆಗತ್ತಲಿಲ್ಲಾ,ಒಂಬತ್ತನೇ ತರಗತಿಗೆ ಗುಡ್ ಬೈ ಹೇಳಿ ಊರಿನಲ್ಲಿ ಕುಣಿಯುತ್ತಿದ್ದ ವೀರಗಾಸೆ ನೋಡಿ ಆಕರ್ಷಿಕನಾದವ ಅಂದಿನಿಂದ ಇಂದಿನವರೆಗೂ “ವೀರಗಾಸೆ” ಯಲ್ಲಿ ಬೆರೆತು ಹೋಗಿದ್ದಾರೆ.

ಒಂದು ಕಡೆ ಬಡತನ ಜೊತೆಗೆ ಕುಗ್ರಾಮ ಮತ್ತೊಂದು ಕಡೆ ತಲೆಗೆ ಹತ್ತದ ವಿದ್ಯೆ ಇವುಗಳನ್ನು ಮೆಟ್ಟಿ ನಿಂತು ಏನಾದರೂ ಸಾಧನೆ ಮಾಡಬಹುದು ಎಂಬುದನ್ನು ನಿರೂಪಿಸಿದ್ದಾರೆ.ಈತನ ಸಾಧನೆ ಜಾನಪದ ಅಕಾಡೆಮಿ ಮಟ್ಟಕ್ಕೆ ತಲುಪಿರುವುದೇ ರೋಚಕ.

ಸಣ್ಣಪುಟ್ಟ ಕಾರ್ಯಕ್ರಮ ಗಳಲ್ಲಿ ವೀರಗಾಸೆ ಪ್ರದರ್ಶನ ಮಾಡಿ ಅದೇ ಕಲೆಯನ್ನು ಕಸುಬು ಮಾಡಿಕೊಂಡಿರುವ ರವಿ 2004 ರಲ್ಲಿ ಯುವಜನ ಮೇಳದಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆಯುವುದರಿಂದ ಪ್ರಾರಂಭವಾದ ಪ್ರಶಸ್ತಿ ಸರಮಾಲೆಗೆ ಲೆಕ್ಕವಿಲ್ಲಾ.

ಜಾತ್ರೆ, ಉತ್ಸವ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ವೀರಗಾಸೆ ಪ್ರದರ್ಶನ ಮಾಡಿರುವ ಪಟ್ಟಿ ನೋಡಿದರೆ ಆಶ್ಚರ್ಯವಾಗುತ್ತದೆ.

ಹಳ್ಳಿ, ಹಳ್ಳಿ ಗ್ರಾಮ,ಗ್ರಾಮದಲ್ಲಿ ಹೋಬಳಿ ಮಟ್ಟದಿಂದ ಹಿಡಿದು ತಾಲ್ಲೂಕು ಜಿಲ್ಲೆ, ರಾಜ್ಯ, ಹೊರ ರಾಜ್ಯ, ದೇಶ,ವಿದೇಶಗಳಲ್ಲಿ ವೀರಗಾಸೆ ಪ್ರದರ್ಶನ ಮಾಡಿ ಕೀರ್ತಿ ತಂದಿದ್ದಾರೆ.ಈತನ ಬಳಿಯಿರುವ ಪ್ರದರ್ಶನಗಳ ಪಟ್ಟಿ ನೋಡಿದರೆ ಆಶ್ಚರ್ಯದ ಜೊತೆಗೆ ಕೋಟಿ ವಿದ್ಯೆಗಿಂತ ಕಲಾವಿದ್ಯೆಯೇ ಈತನನ್ನು ಬೆಳೆಸಿದೆ ಬೆಳಗಿಸಿದೆ.

ಹಲವರಿಗೆ ವೀರಗಾಸೆ ಕಲಿಸುತ್ತಿರುವ ರವಿ ವೀರಗಾಸೆಗೆ ಬೇಕಾದ ಸಲಕರಣೆಗಳನ್ನು ತಯಾರು ಮಾಡುವ ಕಲೆಗಾರಿಕೆಯನ್ನು ಕಲಿತಿರುವುದು ಮೆಚ್ಚಲೇ ಬೇಕು.

ವೀರಗಾಸೆ “ರವಿ” ಎಂದು ಕರೆಯಿಸಿ ಕೊಳ್ಳುವ ರವಿಗೆ ನನ್ನಂತೆ ಹಲವು ಯುವಕರು ಕಲೆಯನ್ನು ಕಲಿತು ಹೆಸರುಗಳಿಸಲಿ ಎಂಬ ಹಂಬಲವಿದೆ.ಅವನ ಕನಸಿ ನೆನಸಾಗಲಿ ಅವನ ಕಲೆಯ ಭವಿಷ್ಯ ಉಜ್ವಲವಾಗಲಿ ಮತ್ತಷ್ಟು ಪ್ರಶಸ್ತಿ ಮತ್ತು ಗೌರವ ಮನ್ನಣೆ ಗಳಿಸಲಿ.

H.M. Ravi Janapada Academy Award for Pure Rural Talent.

Share

Leave a comment

Leave a Reply

Your email address will not be published. Required fields are marked *

Don't Miss

ಎಸ್‌ಎಸ್‌ಎಲ್‌ಸಿ ಪರೀಕ್ಷೆ: ಜಿಲ್ಲೆಯಲ್ಲಿ ಅಗತ್ಯ ಸಿದ್ಧತೆ-ಜಿಲ್ಲಾಧಿಕಾರಿ

ಚಿಕ್ಕಮಗಳೂರು: ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ ಇದೇ ಮಾರ್ಚ್ ೧೮ ರಿಂದ ಪ್ರಾರಂಭವಾಗಲಿದ್ದು, ಪರೀಕ್ಷೆಗಳು ಸುಸೂತ್ರವಾಗಿ ನಡೆಯಲು ಎಲ್ಲಾ ರೀತಿಯ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್ ತಿಳಿಸಿದರು. ಜಿ.ಪಂ.ನ ಅಬ್ದುಲ್...

ಜಿಲ್ಲೆಯಲ್ಲಿ ಗೃಹಬಳಕೆ ಸಿಲಿಂಡರ್‌ಗೆ ಕೊರತೆ ಇಲ್ಲ

ಚಿಕ್ಕಮಗಳೂರು, ಮಾ.೧೩: ಜಿಲ್ಲೆಯಲ್ಲಿ ಗೃಹಬಳಕೆ ಗ್ಯಾಸ್ ಸಿಲಿಂಡರ್‌ಗಳ ಸಮರ್ಪಕ ಸಂಗ್ರಹ ಮತ್ತು ಸರಬರಾಜು ಲಭ್ಯವಿರುವುದನ್ನು ದೃಢಪಡಿಸಿ ಎಂದಿನಂತೆ ಎಲ್‌ಪಿಜಿ ವಿತರಕರು ಗ್ರಾಹಕರ ಮನೆಬಾಗಿಲಿಗೆ ಸರಬರಾಜು ಮಾಡಲಿದ್ದಾರೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಜಿಲ್ಲೆಯಲ್ಲಿ...

Related Articles

ವಿದ್ಯುತ್ ಸ್ಪರ್ಶಕ್ಕೆ ಯುವಕನ ಧಾರುಣ ಸಾವು

ಅಜ್ಜಂಪುರ: ವಿದ್ಯುತ್ ಸ್ಪರ್ಶದಿಂದ ಪ್ರವೀಣ್ ಎಂಬ ಯುವಕ ಮೃತಪಟ್ಟಿದ್ದಾನೆ ಸೊಕ್ಕೆ ಪರಮೇಶಣ್ಣ ಅವರ ಮಗ. ಹೆಬ್ಬೂರು...

ಏಕಲವ್ಯ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳ ಮೇಲೆ ಮನಸೋಇಚ್ಛೆ ಹಲ್ಲೆ

ಮೂಡಿಗೆರೆ:  ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ತರುವೆ ಗ್ರಾಮದಲ್ಲಿರುವ ಏಕಲವ್ಯ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳ...

ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯ 25ಕ್ಕೂ ಹೆಚ್ಚುಕಡೆ ಬೆಂಕಿ

ಚಿಕ್ಕಮಗಳೂರು: ಬಿಸಿಲ ಬೇಗೆಗೆ ಅಪರೂಪದ ಶೋಲಾ ಹುಲ್ಲುಗಾವಲು  ಹೊತ್ತಿ ಉರಿಯುತ್ತಿದೆ. ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿ...

3.50 ಕೋಟಿ ರೂ ವೆಚ್ಚದ ವಿವಿಧ ರಸ್ತೆಗಳ ಲೋಕಾರ್ಪಣೆ

ಚಿಕ್ಕಮಗಳೂರು:  ಬಡವರ ಬಗ್ಗೆ ಕಾಳಜಿ ಇಲ್ಲದ ಕೇಂದ್ರ ಸರ್ಕಾರ ಧರ್ಮ ಧರ್ಮಗಳ ಮಧ್ಯೆ ವಿಷಬೀಜ ಬಿತ್ತಿ...