Home namma chikmagalur ವ್ಯಕ್ತಿ ಓರ್ವ ವ್ಯಕ್ತಿತ್ವ ಹಲವು : ಗೊ.ರು.ಚ ಸರ್ವಾಂತರ್ಯಾಮಿ
namma chikmagalur

ವ್ಯಕ್ತಿ ಓರ್ವ ವ್ಯಕ್ತಿತ್ವ ಹಲವು : ಗೊ.ರು.ಚ ಸರ್ವಾಂತರ್ಯಾಮಿ

Share
Share

ಚಿಕ್ಕಮಗಳೂರು : ಗೊರುಚ ಅವರಿಗೆ ನೆನ್ನೆಯಿಂದ ರಾಜ್ಯದ ಎಲ್ಲಾ ಕಡೆಯಿಂದ ಶುಭಾಶಯಗಳು ಹರಿದು ಬರುತ್ತಿವೆ. ಅದರಲ್ಲೂ ತವರು ಜಿಲ್ಲೆ ಚಿಕ್ಕಮಗಳೂರಲ್ಲಿ ಅಭಿನಂದನೆ,ಶುಭಾಶಯ,ಪ್ರಶಂಸೆಯ ಮಹಾಪೂರ,

ಗೊಂಡೆದಹಳ್ಳಿ ರುದ್ರಪ್ಪ ಚನ್ನಬಸಪ್ಪ ಚಿರಪರಿಚಿತರಾಗಿರುವುದು ಗೊರುಚ ಎಂಬ ಹೃಸ್ವನಾಮದಿಂದ. ವ್ಯಕ್ತಿಗೆ ಒಂದು ಮುಖ,ವ್ಯಕ್ತಿತ್ವಕ್ಕೆ ನಾನಾ ಮುಖಗಳು ಅಂದು ೧0ನೇ ತರಗತಿ ಪಾಸು ಮಾಡಲಾಗದ ಒಬ್ಬ ವಿದ್ಯಾರ್ಥಿ ಇಂದು ಅಖಿಲ ಭಾರತ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯ ಗೌರವಕ್ಕೆ ಭಾಜನರಾಗಿರುವುದು ಮತ್ತು ಫಿ ಹೆಚ್ ಡಿ ಮಾಡುವ ಸಂಶೋಧನ ವಿದ್ಯಾರ್ಥಿಗಳಿಗೆ ವಿಷಯವಾಗಿರುವುದು ಅಚ್ಚರಿಯ ಸಂಗತಿ.

ಗೊರುಚ ಅವರದು ಹಳ್ಳಿಯ ಹುಟ್ಟು. ಹಳ್ಳಿಗಳು ಅನೇಕ ಸಿರಿತನಗಳಿಂದ ಶ್ರೀಮಂತಿಕೆಯಿಂದ ಕೂಡಿದ್ದರೂ ಕೂಡ, ಯುವಕ ಯುವತಿಯರು ತಮ್ಮ ಬಾಲ್ಯದ ಜೀವನದಲ್ಲಿ ಶೈಕ್ಷಣಿಕ ವಿಚಾರವಾಗಿ ಕೆಲವು ಸಂಗತಿಗಳಿಂದ ವಂಚಿತರಾಗಿ ಬೆಳೆಯಬೇಕಾಗುತ್ತದೆ. ಇದಕ್ಕೆ ಗೊರುಚ ಅವರು ಹೊರತಲ್ಲ,
ಈ ಕಾರಣ ಗೊರುಚ ಅವರು ಯಾವುದೇ ವಿಶ್ವವಿದ್ಯಾಲದ ಒಳಗೆ ಹೋಗಿ ಕಲಿಯಲಾಗಲಿಲ್ಲ. ಆದರೆ ಔಪಚಾರಿಕವಾಗಿ ವಿಶ್ವವಿದ್ಯಾಲಯಗಳು ಕಲಿಸುವುದಕ್ಕಿಂತ ನೂರುಪಟ್ಟು ಹೆಚ್ಚಾಗಿ ಸಮಾಜವನ್ನು ನೋಡುತ್ತಾ, ಸಮಾಜದ ಮಾತುಗಳಿಗೆ ಕಿವಿಯಾಗುತ್ತಾ, ಸಾವಿರ ಸಾವಿರ ಸಂಖ್ಯೆಯ ಜನಮನವನ್ನು ಓದುತ್ತಾ ಅನುಭವದ ಶ್ರೀಮಂತಿಕೆಯ ಪದವಿ ಪಡೆದು, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಕನ್ನಡ ಸಾಹಿತ್ಯ ಪರಿಷತ್ತು ಸೇರಿದಂತೆ ಸಾಹಿತ್ಯಕವಾಗಿ, ಸಾಂಸ್ಕೃತಿಕವಾಗಿ, ಸಂಘಟನಾತ್ಮಕವಾಗಿ ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರು.

ಸಾಹಿತ್ಯ ಮತ್ತು ಸಾಂಸ್ಕೃತಿಕ ಕೆಲಸಕ್ಕಾಗಿ ಅನೇಕ ಪ್ರಶಸ್ತಿಗಳಿಗೂ ಮಾನ್ಯರಾಗಿ, ನಾಡೋಜ ಗೌರವಕ್ಕೂ ಪಾತ್ರರಾಗಿರುವ ಗೊರುಚ ತಮ್ಮ ಜೀವತಾವಧಿಯಲ್ಲಿ ಎದುರುಗೊಂಡ ಮುಖ್ಯ ಮೇರು ಸಂಗತಿಗಳಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯ ಜವಾಬ್ದಾರಿ ಹೊತ್ತಿರುವುದು ಒಂದಾಗಿದೆ. ಈಗ ಬಹು ಮುಖ್ಯವಾಗಿ ಮಾತನಾಡಲೇಬೇಕಾದಂತಹ ಜವಾಬ್ದಾರಿ ಮತ್ತು ಕರ್ತವ್ಯ ತಮ್ಮದಾಗಿದೆ.

ಸಮಾಜಿಕ ಬದುಕಿನ ಸ್ವರೂಪದ ಕಡೆಗೆ ಕನ್ನಡಿಗರ ಮೊಗವನ್ನು ಭ್ರಾತೃತ್ವ, ಸಹಿಷ್ಣುತೆ, ಬಹುತ್ವ ಮತ್ತು ಬಹುರೂಪಿ ಕಡೆ ತಿರುಗಿಸುವ ಹಾಗೆ,ಕನ್ನಡ ಸಾಹಿತ್ಯ ಪರಿಷತ್ತಿನ ನಿಜವಾದ ಧ್ಯೇಯೋದ್ದೇಶಗಳನ್ನು ಮತ್ತೊಮ್ಮೆ ಪುನರ್ ಮನನ ಮಾಡುತ್ತಾ, ಕನ್ನಡ ಸಾಹಿತ್ಯ ಪರಿಷತ್ತಿಗೆ ಕೆಲವು ಸಂಗತಿಗಳಲ್ಲಿ ಹೇಳಲೇಬೇಕಾದ ಕಿವಿ ಮಾತನ್ನು ಹೇಳುವುದರೊಟ್ಟಿಗೆ ಸರ್ವಾಧ್ಯಕ್ಷತೆ ನುಡಿಗಳು ಕರುನಾಡ ತುಂಬೆಲ್ಲ ಸಂಚರಿಸಲಿ, ಆ ಸಂಚಾರದ ಮೂಲಕ ನಿಮ್ಮ ಮಾತುಗಳು ಮುಂದಿನ ದಿನಗಳಲ್ಲಿ ಫಸಲು ತೆಗೆದು ಮಗದಷ್ಟು ಸಮೃದ್ಧವಾಗಿ ಸಾಹಿತ್ಯ ಪರಿಷತ್ತು ಈ ನೆಲದ ಕಟ್ಟೆ ಕಡೆಯ ಜನರಿಗೂ ತಲುಪಲಿ ಎಂಬ ಅಭಿಲಾಷೆ ಮತ್ತು ನಿರೀಕ್ಷೆ ನಮ್ಮದು….

ವರದಿ
✒️
ಡಿ.ಎಂ.ಮಂಜುನಾಥ್

Share

Leave a comment

Leave a Reply

Your email address will not be published. Required fields are marked *

Don't Miss

‘ದೇಶ ಮೊದಲು’ ಎಂಬ ಭಾವನೆಯೊಂದಿಗೆ ಕರ್ತವ್ಯ ನಿರ್ವಹಿಸಿ

ಚಿಕ್ಕಮಗಳೂರು:  ಸ್ವಾತಂತ್ರ್ಯದ ೮೦ನೇ ವರ್ಷದ ಸಂಭ್ರಮ ಕೇವಲ ಹಬ್ಬದ ಆಚರಣೆಯಾಗದೆ, ಸ್ವಾತಂತ್ರ್ಯ ಹೋರಾಟಗಾರರಿಗೆ ಕೃತಜ್ಞತೆ ಸಲ್ಲಿಸುವ, ದೇಶದ ಸಾಧನೆಗಳನ್ನು ಸ್ಮರಿಸುವ, ಸ್ವಾತಂತ್ರ್ಯದ ಮೌಲ್ಯಗಳನ್ನು ಅರಿತು ಉತ್ತಮ ಭವಿಷ್ಯ ರೂಪಿಸಿಕೊಳ್ಳುವ ಸಂಕಲ್ಪದ ದಿನವಾಗಬೇಕು...

ಕಸ್ತೂರಿ ರಂಗನ್ ವರದಿ ಮರುಪರಿಶೀಲಿಸಲು ರೈತ ಸಂಘ ಆಗ್ರಹ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮುಂಗಾರು ವೈಫಲ್ಯದಿಂದ ಉಂಟಾಗಿರುವ ಬರ ಪರಿಸ್ಥಿತಿಯನ್ನು ತಕ್ಷಣವೇ ಬರಗಾಲವೆಂದು ಘೋಷಿಸಿ ಪರಿಹಾರ ಕ್ರಮ ಕೈಗೊಳ್ಳಬೇಕು. ಮಲೆನಾಡಿನ 137 ಗ್ರಾಮಗಳಿಗೆ ಕಂಟಕವಾಗಿರುವ ಕಸ್ತೂರಿ ರಂಗನ್ ವರದಿಯನ್ನು ಪುನಃ ಪರಿಶೀಲಿಸಿ ಜನವಸತಿ...

Related Articles

ಅಧಿಕಾರ ಎಂಬ ಮಾಯಾ ಜಿಂಕೆ ಮರೆಯಾಗಿದ್ದು ಏಕೆ ?

ಚಿಕ್ಕಮಗಳೂರು: ಕಳೆದ ನಾಲ್ಕು ವರೆ ವರ್ಷಗಳ ಹಿಂದೆಯೇ ವಿಧಾನ ಪರಿಷತ್ ಸದಸ್ಯರಾಗ ಬೇಕಿದ್ದ ಗಾಯಿತ್ರಿ ಶಾಂತೇಗೌಡ...

ಕಾಂಗ್ರೆಸ್ ಆಡಳಿತದಲ್ಲಿ ಭ್ರಷ್ಟಾಚಾರ-ಲೂಟಿಗಾಗಿ ಪೈಪೋಟಿ

ಚಿಕ್ಕಮಗಳೂರು: ಬಿಜೆಪಿ ಸರ್ಕಾರದಲ್ಲಿ ಶಾಸಕರ ನಡುವೆ ಕ್ಷೇತ್ರದ ಅಭಿವೃದ್ಧಿಗೆ ಪೈಪೋಟಿ ನಡೆದರೆ, ಕಾಂಗ್ರೆಸ್ ಆಡಳಿತದಲ್ಲಿ ಭ್ರಷ್ಟಾಚಾರ,ಲೂಟಿಗಾಗಿ...

ಸ್ವಾವಲಂಬನೆ-ಸಮಾಜ ಅವಕಾಶವೇ ಸಹಕಾರಿ ಚಳುವಳಿ ಉದ್ದೇಶ

ಚಿಕ್ಕಮಗಳೂರು: ಸಹಕಾರಿ ಚಳುವಳಿಯ ಮೂಲತತ್ವವೇ ಸ್ವಾವಲಂಬನೆ, ಪರಸ್ಪರ ಸಹ ಕಾರ, ಸಮಾನ ಅವಕಾಶ ಹಾಗೂ ಸಾಮಾಜಿಕ...

ಅಕ್ರಮ ಮರಳು ಸಾಗಾಟ: 407 ಲಾರಿ ವಶ, ಚಾಲಕ ಪೊಲೀಸ್ ವಶಕ್ಕೆ

ಶೃಂಗೇರಿ: ಪರವಾನಗಿ ಇಲ್ಲದೆ 407 ಲಾರಿಯಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಆರೋಪದ ಮೇಲೆ ಶೃಂಗೇರಿ ಪೊಲೀಸರು...