ಚಿಕ್ಕಮಗಳೂರು : ವಿಕ್ರಂಗೌಡನ ಹತ್ಯೆ ತೀವ್ರ ಖಂಡನೀಯ ಸಿ.ಎಂ ಹಾಗೂ ಗೃಹ ಸಚಿವರು ಎನ್ ಕೌಂಟರ್ ಸಮರ್ಥಿಸಿ ಕೊಂಡಿರೋದು ದುರಾದೃಷ್ಟಕರ ಎಂದು ರಾಜ್ಯ ಸರ್ಕಾರದ ವಿರುದ್ಧ ಮಾಜಿ ನಕ್ಸಲ್ ನಿಲಗುಳಿ ಪದ್ಮನಾಭ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು ವಿಕ್ರಂ ಗೌಡನ ಹತ್ಯೆ ಅತ್ಯಂತ ಖಂಡನೀಯವಾಗಿದ್ದು ಯಾರು ಅದನ್ನು ಒಪ್ಪುವಂತದ್ದಲ್ಲ, ಸತ್ಯವನ್ನು ತಿಳಿದುಕೊಳ್ಳದೆ ಒಮ್ಮುಖ ವರದಿ ನೋಡಿ ಹತ್ಯೆಯ ಸಮರ್ಥನೆ ಮಾಡಿಕೊಳ್ಳುತ್ತಿರುವುದು ಯಾರೂ ಕೂಡ ಒಪ್ಪುಲ್ಲ. ಪೊಲೀಸರ ಎನ್ ಕೌಂಟರ್ ಕಥೆಯನ್ನು ಎನ್ಕೌಂಟರ್ ಗೊತ್ತಿರೋರು ಯಾರೂ ಕೂಡ ಒಪ್ಪಿಕೊಳ್ಳುವುದಿಲ್ಲ. ಇದು ಪ್ರಜಾತಂತ್ರವಾದಿಯೂ ಒಪ್ಪುವ ವಿಚಾರವೇ ಅಲ್ಲ. ಹತ್ಯೆ ಕಪೋಲ ಕಲ್ಪಿತವಾಗಿ ಸೃಷ್ಟಿ ಮಾಡಿರುವ ಎನ್ಕೌಂಟರ್. ಎಲ್ಲೋ ಹಿಡಿದು ಹಿಂಸೆ ನೀಡಿ ಸಾಯಿಸಿ ಕೊನೆಗೆ ಪೀತಬೈಲಿಗೆ ತಂದು ಮೃತ ದೇಹ ಹಾಕಿದ್ದಾರೆ.
ಇದರ ಜೊತೆಗೆ ಹತ್ಯೆಯ ಬಗ್ಗೆ ಮಾಧ್ಯಮದವರಿಗೂ ತಿಳಿಯದಂತೆ ಯಾರಿಗೂ ಮುಖ ತೋರಿಸದೆ ಎಲ್ಲಾ ವಿಚಾರವನ್ನು ವಂಚಿಸಿದ್ದಾರೆ. ಆರೋಪಿಯನ್ನು ಕೊಲೆ ಮಾಡಿ ಎಂದು ಎಲ್ಲೂ ಕೂಡ ಸಂವಿಧಾನದಲ್ಲಿ ಹೇಳಿಲ್ಲ. ವಿಕ್ರಂ ಗೌಡ ಎನ್ ಕೌಂಟರ್ ಬಗ್ಗೆ ಕೂಲಂಕುಶ ನ್ಯಾಯಾಂಗ ತನಿಖೆ ಆಗಬೇಕೆಂದು ಮಾಜಿ ನಕ್ಸಲ್ ನಿಲಗುಳಿ ಪದ್ಮನಾಭ್ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
Leave a comment