ಚಿಕ್ಕಮಗಳೂರು : ಹಣಕಾಸಿನ ವಿಚಾರಕ್ಕೆ ವೃದ್ಧ ದಂಪತಿಯನ್ನು ಮೊಮ್ಮಗನೇ ಕೊಲೆ ಮಾಡಿರುವ ಘಟನೆ ಮಲ್ಲಂದೂರು ಸಮೀಪದ ಕೊಳಗಾಮೆ ಗ್ರಾಮದಲ್ಲಿ ನಡೆದಿದೆ.
ಮೊಗಣ್ಣಗೌಡ ಎಂಬುವವರ ಕಾಫಿ ತೋಟದಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ಬಸಪ್ಪ (65) ಹಾಗೂ ಲಲಿತಮ್ಮ (58) ಮೂಲತಃ ಗುಬ್ಬಿ ತಾಲೂಕಿನವರಾಗಿದ್ದು ಕಳೆದ 25 ವರ್ಷಗಳಿಂದ ಕೊಳಗಾಮೆಯಲ್ಲಿ ವಾಸವಿದ್ದರು.
ಕಳೆದ ರಾತ್ರಿ ಬಸಪ್ಪನ ಅಣ್ಣನ ಮಗಳ ಮಗ ನಿಶಾಂತ್ ಇಬ್ಬರನ್ನು ಕೊಲೆ ಮಾಡಿ ಪರಾರಿಯಾಗಿದ್ದಾನೆ. ಬೆಂಗಳೂರಿನವನಾದ ನಿಶಾಂತ್ ವೃದ್ಧ ದಂಪತಿಯ ಮನೆಗೆ ಆಗಾಗ್ಗೆ ಬಂದು ಹಣಕ್ಕಾಗಿ ಪೀಡಿಸುತ್ತಿದ್ದ ಎನ್ನಲಾಗಿದ್ದು ನಿನ್ನೆ ರಾತ್ರಿ ಲಲಿತಮ್ಮ ಹಾಗೂ ಬಸಪ್ಪ ಇಬ್ಬರಿಗೂ ದೊಣ್ಣೆ ಯಿಂದ ಹೊಡೆದು ಹತ್ಯೆ ಮಾಡಿದ್ದಾನೆ
ಮಲ್ಲಂದೂರು ಪೊಲೀಸರು ಸ್ಥಳಕ್ಕೆ ತೆರಳಿ ಮೃತದೇಹಗಳನ್ನು ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯಲ್ಲಿ ಶವ ಪರೀಕ್ಷೆಗೆ ರವಾನೆ ಮಾಡಿದ್ದಾರೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ವಿಕ್ರಮ್ ಅಮಟೆ ಘಟನಾಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಕೊಳಗಾಮೆಯಲ್ಲಿ ಮೃತ ದಂಪತಿಗೆ ಯಾರೂ ಸಂಬಂಧಿಗಳಿಲ್ಲದ ಕಾರಣ ಬಸಣ್ಣನ ಮನೆಯವರಿಗೆ ವಿಷಯ ತಲುಪಿಸಿದ್ದು ಗುಬ್ಬಿಯಿಂದ ಅವರು ಬಂದ ನಂತರ ಮೃತದೇಹಗಳನ್ನು ಹಸ್ತಾಂತರ ಮಾಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
Leave a comment