Home Latest News ತರೀಕೆರೆ ತಾಲೂಕಿನಲ್ಲೂ ಕಾಡಾನೆಗಳ ಹಾವಳಿ : ಜನರು ಆಕ್ರೋಶ
Latest News

ತರೀಕೆರೆ ತಾಲೂಕಿನಲ್ಲೂ ಕಾಡಾನೆಗಳ ಹಾವಳಿ : ಜನರು ಆಕ್ರೋಶ

Share
Share

ಚಿಕ್ಕಮಗಳೂರು : ಜಿಲ್ಲೆಯಲ್ಲಿ ಪ್ರಾಣಿಗಳ ಹಾವಳಿ ನಿನ್ನೆ,ಮೊನ್ನೆ ಯದಲ್ಲ.ಅದರಲ್ಲೂ ಆನೆಗಳು ಹಿಂಡು,ಹಿಂಡಾಗಿ ಬಂದು ಬೆಳೆ ನಾಶ ಮಾಡುತ್ತಿರುವುದು ಬೆಳೆಗಾರರು ಮತ್ತು ರೈತರು ಸಂಕಷ್ಟಕ್ಕೆ ಸಿಲುಕಿ ನಲುಗುತ್ತಿದ್ದಾರೆ.ಹಲವರು ಪ್ರಾಣ ಕಳೆದು ಕೊಂಡಿದ್ದಾರೆ.

ಇತ್ತೀಚೆಗೆ ತರೀಕೆರೆ ಸುತ್ತಮುತ್ತ ಆನೆ ಹಾವಳಿ ಹೆಚ್ಚಾಗಿದೆ ಎಂದು ರೈತರು ದೂರಿದ್ದಾರೆ.ಮೂರು ಕ್ಕೂ ಹೆಚ್ಚು ಆನೆಗಳು ಕಳೆದ ಒಂದು ವಾರದಿಂದ ಅಮ್ಮಣ್ಣಿ ಕಾವಲ್,ಜೋಡಿ ತಿಮ್ಮಪುರ ಮತ್ತು ಭದ್ರ ಮೇಲ್ದಂಡೆ ಕಾಲುವೆ ಪಕ್ಕ ಹೆಚ್ಚಾಗಿ ಕಾಣಿಸಿಕೊಳ್ಳುವ ಆನೆಗಳನ್ನು ಅರಣ್ಯ ಇಲಾಖೆಯವರು ಪಟಾಕಿ ಸಿಡಿಸಿ ಓಡಿಸಿದರು ಕೂಡ ಮತ್ತೆ ಮತ್ತೆ ಆನೆಗಳು ದಾಳಿ ಮಾಡಿ ಅಡಿಕೆ, ತೆಂಗು,ರಾಗಿ ಮತ್ತು ತರಕಾರಿ ಬೆಳೆಗಳನ್ನು ನಾಶ ಮಾಡಿವೆ ಎಂದು ರೈತರು ದೂರಿದ್ದಾರೆ.

ಲಿಂಗದಳ್ಳಿ ಹೋಬಳಿಯ ತಣಿಗೆಬಯಲು, ನಂದಿಬಟ್ಟಲು, ಕೃಷ್ಣಾಪುರ ಮತ್ತು ಉಡೆವಾ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆನೆಗಳ ಕಾಟ ಹೇಳತೀರದಾಗಿದೆ. ಅರಣ್ಯ ಇಲಾಖೆಯವರು ನಿರ್ಲಕ್ಷ್ಯ ಮಾಡುತ್ತಿದ್ದಾರೆ ರೈತರು ಜನರು ದೂರಿದಾಗ ಕಾಟಚಾರಕ್ಕೆ ಪಟಾಕಿ ಸಿಡಿಸುವ ಬದಲು ಇನ್ನಾದರು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳು ಬೇಕು ಇಲ್ಲದಿದ್ದರೆ ರೋಷಿರುವ ರೈತರು ಮತ್ತು ಬೆಳೆಗಾರರು ಕಾಡನೆಗಳನ್ನು ಅರಣ್ಯ ಇಲಾಖೆ ಕಛೇರಿಗೆ ನುಗ್ಗಿಸಿದರೂ ಆಶ್ಚರ್ಯ ಪಡುವಂತಿಲ್ಲ.

Share

Leave a comment

Leave a Reply

Your email address will not be published. Required fields are marked *

Don't Miss

ಮನೆಯ ಮೇಲ್ಛಾವಣಿಯ ಹೆಂಚು ತೆಗೆದು ನುಗ್ಗಿ ಸರಗಳ್ಳತನ

ನರಸಿಂಹರಾಜಪುರ: ಮನೆಯಲ್ಲಿ ದಂಪತಿ ಮಲಗಿದ್ದ ವೇಳೆ ಮೇಲ್ಛಾವಣಿಯ ಹೆಂಚು ತೆಗೆದು ಒಳನುಗ್ಗಿದ ಕಳ್ಳನೊಬ್ಬ ಮಹಿಳೆಯ ಕೊರಳಿನಲ್ಲಿದ್ದ ಸುಮಾರು ₹1.70 ಲಕ್ಷ ಮೌಲ್ಯದ ಚಿನ್ನದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾಗಿರುವ ಘಟನೆ ನರಸಿಂಹರಾಜಪುರ...

ಕನಸು ಫೈನಾನ್ಸ್ ಹೆಸರಿನಲ್ಲಿ ₹1.60 ಲಕ್ಷ ವಂಚನೆ ಆರೋಪ

ಕಡೂರು: ಪ್ರತಿದಿನ ಉಳಿತಾಯದ ಹಣವನ್ನು ಸ್ವೀಕರಿಸಿ ಶೇ.7ರಷ್ಟು ಬಡ್ಡಿ ನೀಡುವುದಾಗಿ ನಂಬಿಸಿ, ಹಣವನ್ನು ವಾಪಸ್ ನೀಡದೆ ಫೈನಾನ್ಸ್ ಕಚೇರಿಗೆ ಬೀಗ ಹಾಕಿ ಮಾಲೀಕರು ನಾಪತ್ತೆಯಾಗಿರುವ ಆರೋಪದಡಿ ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ...

Related Articles

2 ಲಕ್ಷರೂಗಳ ಲಂಚ ಪಡೆಯುವಾಗ ಲೋಕಯುಕ್ತ ಬಲೆಗೆ ಸರ್ವೆಯರ್ ದೊರೆರಾಜು

ಚಿಕ್ಕಮಗಳೂರು: ಇಲ್ಲಿನ ತಾಲ್ಲೂಕು ಕಛೇಯಲ್ಲಿ ಸರ್ವೆಯರ್ ಧೊರೆರಾಜು ಮತ್ತು ರಂಗನಾಥ್ ರವರು 2 ಲಕ್ಷರೂಗಳ ಲಂಚ...

ಲಾರಿ ಡಿಕ್ಕಿಗೆ ಪಶುವೈದ್ಯಕೀಯ ಇಲಾಖೆ ಸಿಬ್ಬಂದಿ ಸಾವು

ಅಜ್ಜಂಪುರ: ಕರ್ತವ್ಯಕ್ಕೆ ತೆರಳುತ್ತಿದ್ದ ಸ್ಕೂಟಿಗೆ ಹಿಂದಿನಿಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಪಶುವೈದ್ಯಕೀಯ ಇಲಾಖೆಯ ಅಟೆಂಡರ್...

ವಿದ್ಯುತ್ ಸ್ಪರ್ಶ: ಬೇಲಿ ಕಟಾವು ಮಾಡುತ್ತಿದ್ದ ವಾಚ್‌ಮನ್ ಸಾವು

ತರೀಕೆರೆ: ತೋಟದ ಬೇಲಿ ಕಟಾವು ಮಾಡುತ್ತಿದ್ದ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿ ವಾಚ್‌ಮನ್ ಮೃತಪಟ್ಟಿರುವ ಘಟನೆ...

ಕಡಿಮೆ ಬೆಲೆಗೆ ಬಟ್ಟೆ ಕೊಡಿಸುವುದಾಗಿ ನಂಬಿಸಿ ₹20.19 ಲಕ್ಷ ವಂಚನೆ ಆರೋಪ

ಕಡೂರು: ವ್ಯಾಪಾರಕ್ಕಾಗಿ ಕಡಿಮೆ ಬೆಲೆಯಲ್ಲಿ ಬಟ್ಟೆಗಳನ್ನು ಖರೀದಿಸಿ ಕೊಡಿಸುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಂದ ₹17.58 ಲಕ್ಷ ಪಡೆದು,...