ಚಿಕ್ಕಮಗಳೂರು: ಅಧಿಕಾರಿಗಳ ವರ್ಗಾವಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರಗೆ ತೆರಿಗೆ ಕಟ್ಟಬೇಕು ಎಂಬ ಮಾತು ಕಾಂಗ್ರೆಸ್ ವಲಯದಲ್ಲಿ ಕೇಳಿ ಬರುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.
ಶುಕ್ರವಾರ ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಈ ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಅವರ ಪುತ್ರ ಅಲ್ಲೊಂದು, ಇಲ್ಲೊಂದರಲ್ಲಿ ಹಸ್ತಕ್ಷೇಪ ಮಾಡುತ್ತಿದ್ದರು. ಆದರೆ, ಈಗ ಯತೀಂದ್ರ ಎಲ್ಲದರಲ್ಲೂ ಹಸ್ತಕ್ಷೇಪ ಮಾಡುತ್ತಿದ್ದಾರೆಂದು ಕಾಂಗ್ರೆಸ್ನವರೇ ಹೇಳುತ್ತಿದ್ದಾರೆ ಎಂದರು.
ನಾನು ಅವರ ಬಳಿ ಹೋಗಿಲ್ಲ, ಹಾಗಾಗಿ ನನಗೆ ಅದರ ಅನುಭವ ಆಗಿಲ್ಲ ಎಂದ ಅವರು, ಈ ಅವಧಿಯಲ್ಲಿ ಅವರ ಕುಟುಂಬ ದೊಡ್ಡ ಪ್ರಮಾಣದಲ್ಲಿ ಹಸ್ತಕ್ಷೇಪ ಮಾಡುತ್ತಿದೆ ಎಂಬ ದೂರು ಎರಡು ವರ್ಷದಿಂದ ಕೇಳಿ ಬರುತ್ತಿದೆ ಎಂದು ಹೇಳಿದರು.
ಇಷ್ಟೇ ಅಲ್ಲ ಸಿದ್ದರಾಮಯ್ಯ ಅವರು ಸಂದರ್ಭಕ್ಕೆ ತಕ್ಕಂತೆ ಬಣ್ಣ ಬದಲಾಯಿಸುತ್ತಾರೆಂಬ ದೂರು ಇದೆ. ಪಡೆದ ಹಣದಲ್ಲಿ ಹೈಕಮಾಂಡ್ಗೆ ತಲುಪಿಸುತ್ತಾರೋ, ಅವರ ಹೆಸರಿನಲ್ಲಿ ಇವರ ಖಜಾನೆ ಭರ್ತಿಯಾಗುತ್ತೋ ಗೊತ್ತಿಲ್ಲ, ಅಧಿಕಾರಿಗಳ ವರ್ಗಾವಣೆ ದಂಧೆಯಾಗಿರುವುದಂತೂ ನಿಜ ಎಂದು ದೂರಿದರು.
Yathindra should be paid tax on transfer of officers
Leave a comment