Home namma chikmagalur ಶ್ರೀ ಗುರು ದತ್ತಾತ್ರೇಯ ಪೀಠದ ವ್ಯಾಜ್ಯ – ಹಿಂದೂ–ಮುಸ್ಲಿಮರ ನಡುವೆ ಅಲ್ಲ
namma chikmagalurchikamagalurHomeLatest News

ಶ್ರೀ ಗುರು ದತ್ತಾತ್ರೇಯ ಪೀಠದ ವ್ಯಾಜ್ಯ – ಹಿಂದೂ–ಮುಸ್ಲಿಮರ ನಡುವೆ ಅಲ್ಲ

Share
????????????????????????????????????
Share

ಚಿಕ್ಕಮಗಳೂರು: ‘ಶ್ರೀ ಗುರುದತ್ತಾತ್ರೇಯ ಪೀಠದ ವ್ಯಾಜ್ಯ ಇರುವುದು ಶಾಖಾದ್ರಿ ವಂಶಸ್ಥರಿಗೂ ಹಾಗೂ ದತ್ತಪೀಠ ಸಂವರ್ಧನಾ ಸಮಿತಿಯ ನಡುವೆ. ಹಿಂದೂ–ಮುಸ್ಲಿಮರ ನಡುವೆ ಅಲ್ಲ’ ಎಂದು ವಿಶ್ವ ಹಿಂದೂ ಪರಿಷದ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ.ರಂಗನಾಥ ತಿಳಿಸಿದರು.

ಇನಾಂ ದತ್ತಾತ್ರೇಯ ಪೀಠದ ಒಟ್ಟು ಆಸ್ತಿ 1861 ಎಕರೆ ಇದ್ದು, ಹಿಂದೆ ಇದ್ದ ಗೌಸ್ ಮೊಹಿದ್ದೀನ್ ಶಾಖಾದ್ರಿ ಹಾಗೂ ಪೀರ್ ಮೊಹಿದ್ದೀನ್ ಶಾಖಾದ್ರಿ ಈ ಆಸ್ತಿಯಲ್ಲಿ ಸಾಕಷ್ಟು ಪರಭಾರೆ ಮಾಡಿ ಸ್ವಂತಕ್ಕೆ ಬಳಸಿಕೊಂಡಿದ್ದಾರೆ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ದತ್ತಪೀಠವು ಮತ್ತು ಬಾಬಾಬುಡನ್ ದರ್ಗಾವು ಬೇರೆ ಬೇರೆ ಕಡೆ ಇರುವುದರಿಂದ ದತ್ತಪೀಠಕ್ಕೂ ಬಾಬಾಬುಡನ್‌ ದರ್ಗಾಕ್ಕೂ ಯಾವುದೇ ಸಂಬಂಧ ಇಲ್ಲ. ಬಾಬಾಬುಡನ್ ದರ್ಗಾ ಚಿಕ್ಕಮಗಳೂರು ತಾಲ್ಲೂಕು, ಜಾಗರ ಹೋಬಳಿ, ನಾಗೇನಹಳ್ಳಿ ಗ್ರಾಮದ ಸರ್ವೆ ನಂಬರ್– 57ರಲ್ಲಿ 111 ಎಕರೆ ಇದೆ.

ಈ ಆಸ್ತಿಗಳಲ್ಲಿ ಅನೇಕ ಆಸ್ತಿಗಳನ್ನು ಶಾ–ಖಾದ್ರಿಗಳು ಮಾರಾಟ ಮಾಡಿದ್ದಾರೆ ಎಂದು ದೂರಿದರು. ಡಿ.4 ರಂದು ದತ್ತಜಯಂತಿ ನಡೆಸಲಾಗುತ್ತಿದೆ. ಡಿ.2 ರಂದು ಅನುಸೂಯದೇವಿ ಅವರ ಪೂಜೆ ಹಾಗೂ ಸಂಕೀರ್ತನಾ ಯಾತ್ರೆ ನಡೆಯಲಿದೆ. ಡಿ.3 ರಂದು ನಗರದಲ್ಲಿ ಶೋಭಾಯಾತ್ರೆ ನಡೆಯುತ್ತದೆ.

ಡಿ.4 ರಂದು ದತ್ತಪೀಠದಲ್ಲಿ ದತ್ತಹೋಮ, ಪಾದುಕೆ ಪೂಜೆ, ಔದುಂಬರ ವೃಕ್ಷದ ಪೂಜೆ ನಡೆಸಲಾಗುತ್ತದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ವಿಶ್ವಹಿಂದೂ ಪರಿಷದ್ ಉಪಾಧ್ಯಕ್ಷ ಯೋಗರಾಜ್ ಅರಸ್, ಮಠ ಮಂದಿರಗಳ ಪ್ರಮುಖ್ ಶಿವಣ್ಣ, ಪುಷ್ಪ, ನಯನ್, ಸುನೀಲ್ ಉಪಸ್ಥಿತರಿದ್ದರು.

The dispute over the Sri Guru Dattatreya Peetha – not between Hindus and Muslims

Share

Leave a comment

Leave a Reply

Your email address will not be published. Required fields are marked *

Don't Miss

ದನದ ಮಾಂಸ ಮಾರಾಟದಲ್ಲಿ 40 ಕೆ.ಜಿ ಮಾಂಸ, ಕತ್ತಿ–ಚಾಕುಗಳು ಜಪ್ತಿ

ಚಿಕ್ಕಮಗಳೂರು: ನಗರದ ಅಯ್ಯಪ್ಪನಗರದ ಸಮೀಪದ ಶೆಡ್‌ನಲ್ಲಿ ಯಾವುದೇ ಪರವಾನಗಿ ಇಲ್ಲದೆ ದನದ ಮಾಂಸ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ನಗರ ಠಾಣೆ ಪೊಲೀಸರು ವ್ಯಕ್ತಿಯೊಬ್ಬನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆ.9ರಂದು ಮಧ್ಯಾಹ್ನ...

ವಕೀಲ ವಿ.ಕೆ.ರಘು ಸಾಧನೆ ಯೋಗ ಮಾಡುವವರಿಗೆ ಪ್ರೇರಣೆ

ಚಿಕ್ಕಮಗಳೂರು: ಯೊಗ ನಮ್ಮ ಪ್ರಾಚೀನ ಋಷಿಮುನಿಗಳು ಜಗತ್ತಿಗೆ ಕೊಟ್ಟಂತಹ ಕೊಡುಗೆ. ವಕೀಲ ವಿ.ಕೆ.ರಘು ಅವರ ಯೋಗದ ಸಾಧನೆ ಯೋಗ ಮಾಡುವವರಿಗೆ ಒಂದು ಪ್ರೇರಣೆ ಕೊಡುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಡಾ.ಸಿ.ಟಿ.ರವಿ...

Related Articles

ಕೇಬಲ್ ಕಳ್ಳರೆಂದು ಶಂಕಿಸಿ ಮೂವರ ಮೇಲೆ ಹಲ್ಲೆ

ಕಡೂರು: ಪಂಪ್‌ಸೆಟ್‌ ಮೋಟಾರ್‌ ಕೇಬಲ್‌ ಕಳ್ಳರೆಂದು ಅನುಮಾನಿಸಿ ಮೂವರು ಯುವಕರ ಮೇಲೆ ಗುಂಪೊಂದು ಗಂಭೀರವಾಗಿ ಹಲ್ಲೆ...

₹5 ಲಕ್ಷ ಮೌಲ್ಯದ ಶ್ರೀಗಂಧದ ಮರಗಳ ಕಳವು

ತರೀಕೆರೆ: ಕೃಷಿ ತೋಟಕ್ಕೆ ನುಗ್ಗಿದ ಕಳ್ಳರು ಸುಮಾರು 15 ಶ್ರೀಗಂಧದ ಮರಗಳನ್ನು ಕಡಿದು ಕಳವು ಮಾಡಿಕೊಂಡು...

ಸ್ಕೂಟರ್‌ ಅಪಘಾತ: ಚಿಕಿತ್ಸೆ ಫಲಿಸದೆ ಸಾವು

ಕಡೂರು: ರಸ್ತೆಯಲ್ಲಿ ಅಡ್ಡಬಂದ ನಾಯಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಸ್ಕೂಟರ್‌ ನಿಯಂತ್ರಣ ತಪ್ಪಿ ಬಿದ್ದು...

ಧ್ವಜಾರೋಹಣದ ಕೆಲವೇ ಗಂಟೆಗಳಲ್ಲಿ ಕೆಳಗಿಳಿಸಿದ ರಾಷ್ಟ್ರಧ್ವಜ …?

ಚಿಕ್ಕಮಗಳೂರು: ಸ್ವಾತಂತ್ರ್ಯ ದಿನಾಚರಣೆಯಂದೇ ಚಿಕ್ಕಮಗಳೂರಿನಲ್ಲಿ ರಾಷ್ಟ್ರಧ್ವಜಕ್ಕೆ ಸಂಬಂಧಿಸಿದಂತೆ ವಿವಾದವೊಂದು ಭುಗಿಲೆದ್ದಿದ್ದು, ಕರ್ನಾಟಕ ರಾಜ್ಯ ರೈತ ಸಂಘದ...