Home namma chikmagalur chikamagalur ಆಧುನಿಕ ಭಾರತ ನಿರ್ಮಾಣಕ್ಕೆ ರಾಜೀವ್‌ಗಾಂಧಿ ಕೊಡುಗೆ ಅಪಾರ
chikamagalurHomeLatest Newsnamma chikmagalur

ಆಧುನಿಕ ಭಾರತ ನಿರ್ಮಾಣಕ್ಕೆ ರಾಜೀವ್‌ಗಾಂಧಿ ಕೊಡುಗೆ ಅಪಾರ

Share
Share

ಚಿಕ್ಕಮಗಳೂರು: ಮಾಹಿತಿ ತಂತ್ರಜ್ಞಾನ, ದೂರಸಂಪರ್ಕ ಕ್ರಾಂತಿ ಹಾಗೂ ಯುವಜನರಿಗೆ ಮತದಾನದ ಹಕ್ಕು ತರುವುದರ ಮೂಲಕ ರಾಜೀವ್‌ಗಾಂಧಿಯವರು ಆಧುನಿಕ ಭಾರತದ ನಿರ್ಮಾಣಕ್ಕೆ ಬ ಲವಾದ ಅಡಿಪಾಯ ಹಾಕಿದವರು ಎಂದು ಶಾಸಕ ಹೆಚ್.ಡಿ.ತಮ್ಮಯ್ಯ ಹೇಳಿದರು.

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಾಜಿ ಪ್ರಧಾನಿ ದಿ|| ರಾಜೀವ್‌ಗಾಂಧೀಯವರ ಪುಣ್ಯಸ್ಮರಣೆ ಅಂಗವಾಗಿ ಬ್ಲಾಕ್ ಕಾಂಗ್ರೆಸ್ ಆಯೋಜಿಸಿದ್ಧ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿ ರಾಜೀವ್ ಗಾಂಧಿ ಅವರು ಕಾಂಗ್ರೆಸ್ ಪಕ್ಷದ ಯುವ ನೇತಾರರಾಗಿದ್ದರು. ವೃತ್ತಿಪರ ಪೈಲಟ್ ಆಗಿಯೂ ಅವರು ಕಾರ್ಯನಿರ್ವಹಿಸಿದ್ದಾರೆ. ಇಂದಿರಾಗಾಂಧಿ ಅವರ ಮರಣದ ನಂತರ ರಾಜೀವ್ ಗಾಂಧಿ ಅವರು ಪ್ರಧಾನಮಂತ್ರಿ ಹುದ್ದೆಯನ್ನು ಅಲಂಕರಿಸಿ ದೇಶದ ಅಭಿವೃದ್ಧಿಗೆ ಅಪಾರವಾಗಿ ಶ್ರಮಿಸಿದವರು ಎಂದರು.

ಡಿಜಿಟಲ್ ಇಂಡಿಯಾ ಆರಂಭವಾಗಿದ್ದೆ ರಾಜೀವ್ ಗಾಂಧಿಯವರ ತೀರ್ಮಾನಗಳಿಂದ ಎಂಬುದು ಅನೇಕರಿಗೆ ತಿಳಿದಿಲ್ಲ. ದೇಶದಲ್ಲಿ ಕಂಪ್ಯೂಟರ್, ಟೆಲಿಫೋನ್ ಕ್ರಾಂತಿ, ನವೋದಯ ಶಾಲೆಗಳ ನಿರ್ಮಾಣ, ಗಂಗಾನದಿಯ ಮಾಲಿನ್ಯ ನಿಯಂತ್ರಣ ಯೋಜನೆ, ಆರ್ಥಿಕ ಉದಾರೀಕರಣಕ್ಕೆ ಸುಧಾರಣಾ ಕ್ರಮಗಳನ್ನು ಕೈ ಗೊಂಡು ಭಾರತವನ್ನು ಮುನ್ನೆಡೆಸಿದವರು ಎಂದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ|| ಕೆ.ಪಿ.ಅಂಶುಮಂತ್ ಮಾತನಾಡಿ ಯುವಜನರು ೧೮ನೇ ವಯಸ್ಸಿಗೆ ಮತ ಚಲಾಯಿಸುವ ಹಕ್ಕನ್ನು ಒದಗಿಸಿದ ಧೀಮಂತ ನಾಯಕ ರಾಜೀವ್‌ಗಾಂಧಿ. ಭಾರತ ದೇಶವನ್ನು ಆರ್ಥಿ ಕವಾಗಿ ಉನ್ನತ ಶಿಖರಕ್ಕೆ ಕೊಂಡೊಯ್ಯುವ ಕನಸು ಕಂಡಿದ್ದ ದೇಶದ ಅಪರೂಪದ ಜನನಾಯಕ ಎಂದು ತಿಳಿಸಿದರು.

ಕಾಂಗ್ರೆಸ್ ಮುಖಂಡ ಎಂ.ಎಲ್.ಮೂರ್ತಿ ಮಾತನಾಡಿ ಗ್ರಾಮೀಣ ಭಾರತದ ಸಮಗ್ರ ಅಭಿವೃದ್ದಿ ದೃಷ್ಟಿ ಯಲ್ಲಿ ರಾಜೀವ್‌ಗಾಂಧಿ ಕೈಗೊಂಡ ಯೋಜನೆಗಳು ಇಂದಿಗೂ ಸರ್ವಕಾಲಿಕ. ಇದರಿಂದ ಗ್ರಾಮೀಣ ಜನರಿ ಗೆ ಸರ್ಕಾರದ ಕಾರ್ಯಕ್ರಮಗಳು ನೇರವಾಗಿ ಮುಟ್ಟುವಂತಾಯಿತು. ಈ ಅಭಿವೃದ್ದಿಗೆ ರಾಜೀವ್‌ಗಾಂಧಿ ಕೊ ಡುಗೆ ಅಪಾರವಿದೆ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಪಿ.ಮಂಜೇಗೌಡ ಮಾತನಾಡಿ ದೇಶದ ಯುವಸಮೂಹಕ್ಕೆ ಆಧುನಿಕದ ಮಾಹಿತಿಯನ್ನು ಪರಿಚಯಿಸಲು ಮೊದಲು ಹೆಜ್ಜೆಯಿಟ್ಟವರು ರಾಜೀವ್‌ಗಾಂಧಿ. ಈ ನಾಯಕರ ಅವಧಿಯಲ್ಲಿ ದೇಶವು ಇಂದು ಅಭಿವೃದ್ದಿಗೊಳ್ಳಲು ಪ್ರೇರಣೆಯಾಗಿರುವುದು ಮರೆಯಬಾರದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಸಿ.ಶಿವಾನಂದಸ್ವಾಮಿ, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಸೈಯದ್ ಹನೀಫ್, ತಾಲ್ಲೂಕು ಅಧ್ಯಕ್ಷ ಪ್ರದೀಪ್, ನಗರಸಭೆ ಸದಸ್ಯರಾದ ಮುನೀರ್ ಅಹ್ಮ ದ್, ಲಕ್ಷ್ಮಣ್, ಶಾದಬ್, ಖಲಂಧರ್, ಮುಖಂಡರುಗಳಾದ ತನೋಜ್ ನಾಯ್ಡು, ಪ್ರಸಾದ್ ಅಮೀನ್, ಮೊ ಹಮ್ಮದ್ ನಯಾಜ್, ಹಿರೇಮಗಳೂರು ರಾಮಚಂದ್ರ, ಶ್ರೀಕಾಂತ್, ಮಲ್ಲೇಶ್‌ಸ್ವಾಮಿ, ರಾಜೇಶ್, ನಾಗೇಶ್ ಮತ್ತಿತರರಿದ್ದರು.

Rajiv Gandhi’s contribution to the construction of modern India is immense

Share

Leave a comment

Leave a Reply

Your email address will not be published. Required fields are marked *

Don't Miss

ಮೆಸ್ಕಾಂ ಇಂಜಿನಿಯರ್ ತಿರುಪತಿ ನಾಯ್ಕ್ ಲೋಕಾಯುಕ್ತ ಬಲೆಗೆ.

ಕಡೂರು: ಕಡೂರಿನ ಮೆಸ್ಕಾಂ ನಲ್ಲಿ ಸಹಾಯಕ ಇಂಜಿನಿಯರ್ ತಿರುಪತಿ ನಾಯ್ಕ್ ಲೋಕೇಶ್ ಎಂಬುವರಿಂದ 5,000 ರೂ ಲಂಚ ಪೆಡೆಯುವಾಗ ಲೋಕಾಯುಕ್ತಾದವರು ದಾಳಿ ನಡೆಸಿ ಬಂಧಿಸಿದ್ದಾರೆ. ಲೋಕೇಶ್ ಶಿರಾ ಮೂಲದವರಾಗಿದ್ದು ಕಡೂರಿನ‌ ತಂಗಲಿ...

ಮಕ್ಕಳಿಗೆ ಶಿಕ್ಷಣ ನೀಡಿ ಬದುಕನ್ನು ಹಸನಾಗಿಸಬೇಕು

ಚಿಕ್ಕಮಗಳೂರು : ಕೃಷಿಕರು, ಮಕ್ಕಳಿಗೆ ಶಿಕ್ಷಣ ನೀಡಿ ಅವರ ಬದುಕನ್ನು ಹಸನಾಗಿಸಬೇಕು ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ಅವರು ಹೇಳಿದರು. ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ೨೦೨೫-೨೬...

Related Articles

ಮಹಿಳೆಯ ಒಂದುವರೆ ಲಕ್ಷ ರೂಪಾಯಿ ಮೌಲ್ಯದ ಚಿನ್ನದ ನೆಕ್ಲೀಸ್ ಕಳವು

ಚಿಕ್ಕಮಗಳೂರು: ಬಸ್ ನಿಲ್ದಾಣದಲ್ಲಿ ಬಸ್ ಹತ್ತುವ ತರಾತುರಿಯಲ್ಲಿದ್ದ ಮಹಿಳೆಯೊಬ್ಬರ ಗಮನವನ್ನು ಬೇರೆಡೆ ಸೆಳೆದು, ಅವರ ವ್ಯಾನಿಟಿ...

ನಗರಸಭೆ ನೂತನ ಅಧ್ಯಕ್ಷರಾಗಿ ಭವ್ಯ ಮಂಜುನಾಥ್ ಅವಿರೋಧ ಆಯ್ಕೆ

ಚಿಕ್ಕಮಗಳೂರು-ನಗರಸಭೆ ನೂತನ ಅಧ್ಯಕ್ಷರಾಗಿ ೩೨ನೇ ವಾರ್ಡಿನ ಬಿಜೆಪಿ ಸದಸ್ಯೆ ಭವ್ಯ ಮಂಜುನಾಥ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಗರಸಭೆ...

ಕೇಂದ್ರ ಸರ್ಕಾರ ಕಾರ್ಮಿಕರ ಹಕ್ಕು ಮೊಟಕುಗೊಳಿಸುವ ಹುನ್ನಾರ

ಚಿಕ್ಕಮಗಳೂರು: – ಕಾರ್ಮಿಕರ ಹಕ್ಕನ್ನು ಮೊಟಕುಗೊಳಿಸಲು ಕೇಂದ್ರ ಸರ್ಕಾರ ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ಜಾರಿಗೊಳಿಸಿ ಹಕ್ಕನ್ನು...

ರಸ್ತೆ ಅಭಿವೃದ್ಧಿ ವಿಚಾರದಲ್ಲಿ ಕಾಂಗ್ರೆಸ್‌-ಬಿಜೆಪಿ ನಡುವೆ ಜಟಾಪಟಿ

ಚಿಕ್ಕಮಗಳೂರು: ರಸ್ತೆ ಅಭಿವೃದ್ಧಿ ವಿಚಾರದಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ಜಟಾಪಟಿ ನಡೆದಿದ್ದು, ಕಾರ್ಯಕರ್ತರು ಗುರುವಾರ...