ಚಿಕ್ಕಮಗಳೂರು: ಮಾಹಿತಿ ತಂತ್ರಜ್ಞಾನ, ದೂರಸಂಪರ್ಕ ಕ್ರಾಂತಿ ಹಾಗೂ ಯುವಜನರಿಗೆ ಮತದಾನದ ಹಕ್ಕು ತರುವುದರ ಮೂಲಕ ರಾಜೀವ್ಗಾಂಧಿಯವರು ಆಧುನಿಕ ಭಾರತದ ನಿರ್ಮಾಣಕ್ಕೆ ಬ ಲವಾದ ಅಡಿಪಾಯ ಹಾಕಿದವರು ಎಂದು ಶಾಸಕ ಹೆಚ್.ಡಿ.ತಮ್ಮಯ್ಯ ಹೇಳಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಾಜಿ ಪ್ರಧಾನಿ ದಿ|| ರಾಜೀವ್ಗಾಂಧೀಯವರ ಪುಣ್ಯಸ್ಮರಣೆ ಅಂಗವಾಗಿ ಬ್ಲಾಕ್ ಕಾಂಗ್ರೆಸ್ ಆಯೋಜಿಸಿದ್ಧ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿ ರಾಜೀವ್ ಗಾಂಧಿ ಅವರು ಕಾಂಗ್ರೆಸ್ ಪಕ್ಷದ ಯುವ ನೇತಾರರಾಗಿದ್ದರು. ವೃತ್ತಿಪರ ಪೈಲಟ್ ಆಗಿಯೂ ಅವರು ಕಾರ್ಯನಿರ್ವಹಿಸಿದ್ದಾರೆ. ಇಂದಿರಾಗಾಂಧಿ ಅವರ ಮರಣದ ನಂತರ ರಾಜೀವ್ ಗಾಂಧಿ ಅವರು ಪ್ರಧಾನಮಂತ್ರಿ ಹುದ್ದೆಯನ್ನು ಅಲಂಕರಿಸಿ ದೇಶದ ಅಭಿವೃದ್ಧಿಗೆ ಅಪಾರವಾಗಿ ಶ್ರಮಿಸಿದವರು ಎಂದರು.
ಡಿಜಿಟಲ್ ಇಂಡಿಯಾ ಆರಂಭವಾಗಿದ್ದೆ ರಾಜೀವ್ ಗಾಂಧಿಯವರ ತೀರ್ಮಾನಗಳಿಂದ ಎಂಬುದು ಅನೇಕರಿಗೆ ತಿಳಿದಿಲ್ಲ. ದೇಶದಲ್ಲಿ ಕಂಪ್ಯೂಟರ್, ಟೆಲಿಫೋನ್ ಕ್ರಾಂತಿ, ನವೋದಯ ಶಾಲೆಗಳ ನಿರ್ಮಾಣ, ಗಂಗಾನದಿಯ ಮಾಲಿನ್ಯ ನಿಯಂತ್ರಣ ಯೋಜನೆ, ಆರ್ಥಿಕ ಉದಾರೀಕರಣಕ್ಕೆ ಸುಧಾರಣಾ ಕ್ರಮಗಳನ್ನು ಕೈ ಗೊಂಡು ಭಾರತವನ್ನು ಮುನ್ನೆಡೆಸಿದವರು ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ|| ಕೆ.ಪಿ.ಅಂಶುಮಂತ್ ಮಾತನಾಡಿ ಯುವಜನರು ೧೮ನೇ ವಯಸ್ಸಿಗೆ ಮತ ಚಲಾಯಿಸುವ ಹಕ್ಕನ್ನು ಒದಗಿಸಿದ ಧೀಮಂತ ನಾಯಕ ರಾಜೀವ್ಗಾಂಧಿ. ಭಾರತ ದೇಶವನ್ನು ಆರ್ಥಿ ಕವಾಗಿ ಉನ್ನತ ಶಿಖರಕ್ಕೆ ಕೊಂಡೊಯ್ಯುವ ಕನಸು ಕಂಡಿದ್ದ ದೇಶದ ಅಪರೂಪದ ಜನನಾಯಕ ಎಂದು ತಿಳಿಸಿದರು.
ಕಾಂಗ್ರೆಸ್ ಮುಖಂಡ ಎಂ.ಎಲ್.ಮೂರ್ತಿ ಮಾತನಾಡಿ ಗ್ರಾಮೀಣ ಭಾರತದ ಸಮಗ್ರ ಅಭಿವೃದ್ದಿ ದೃಷ್ಟಿ ಯಲ್ಲಿ ರಾಜೀವ್ಗಾಂಧಿ ಕೈಗೊಂಡ ಯೋಜನೆಗಳು ಇಂದಿಗೂ ಸರ್ವಕಾಲಿಕ. ಇದರಿಂದ ಗ್ರಾಮೀಣ ಜನರಿ ಗೆ ಸರ್ಕಾರದ ಕಾರ್ಯಕ್ರಮಗಳು ನೇರವಾಗಿ ಮುಟ್ಟುವಂತಾಯಿತು. ಈ ಅಭಿವೃದ್ದಿಗೆ ರಾಜೀವ್ಗಾಂಧಿ ಕೊ ಡುಗೆ ಅಪಾರವಿದೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಪಿ.ಮಂಜೇಗೌಡ ಮಾತನಾಡಿ ದೇಶದ ಯುವಸಮೂಹಕ್ಕೆ ಆಧುನಿಕದ ಮಾಹಿತಿಯನ್ನು ಪರಿಚಯಿಸಲು ಮೊದಲು ಹೆಜ್ಜೆಯಿಟ್ಟವರು ರಾಜೀವ್ಗಾಂಧಿ. ಈ ನಾಯಕರ ಅವಧಿಯಲ್ಲಿ ದೇಶವು ಇಂದು ಅಭಿವೃದ್ದಿಗೊಳ್ಳಲು ಪ್ರೇರಣೆಯಾಗಿರುವುದು ಮರೆಯಬಾರದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಸಿ.ಶಿವಾನಂದಸ್ವಾಮಿ, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಸೈಯದ್ ಹನೀಫ್, ತಾಲ್ಲೂಕು ಅಧ್ಯಕ್ಷ ಪ್ರದೀಪ್, ನಗರಸಭೆ ಸದಸ್ಯರಾದ ಮುನೀರ್ ಅಹ್ಮ ದ್, ಲಕ್ಷ್ಮಣ್, ಶಾದಬ್, ಖಲಂಧರ್, ಮುಖಂಡರುಗಳಾದ ತನೋಜ್ ನಾಯ್ಡು, ಪ್ರಸಾದ್ ಅಮೀನ್, ಮೊ ಹಮ್ಮದ್ ನಯಾಜ್, ಹಿರೇಮಗಳೂರು ರಾಮಚಂದ್ರ, ಶ್ರೀಕಾಂತ್, ಮಲ್ಲೇಶ್ಸ್ವಾಮಿ, ರಾಜೇಶ್, ನಾಗೇಶ್ ಮತ್ತಿತರರಿದ್ದರು.
Rajiv Gandhi’s contribution to the construction of modern India is immense
Leave a comment