ಚಿಕ್ಕಮಗಳೂರು : ಕಾಡಾನೆ ಬೀಟಮ್ಮ ಗ್ಯಾಂಗ್ ಸ್ಥಳಾಂತರಕ್ಕೆ ಒತ್ತಾಯಿಸಿ ಅರಣ್ಯ ಇಲಾಖೆಯ ಡಿಎಫ್ ಓ ಕಚೇರಿಗೆ ಮುತ್ತಿಗೆ ಹಾಕುವ ಮೂಲಕ ರೈತ ಸಂಘ ಇಂದು ಪ್ರತಿಭಟನೆ ನಡೆಸಿತು. ಇದಕ್ಕೂ ಮೊದಲು ನಗರದ ತಾಲೂಕು ಕಚೇರಿಯಿಂದ ಆಜಾದ್ ಪಾರ್ಕ್ ವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿ ಮಾನವ ಸರಪಳಿ ನಿರ್ಮಿಸಿ ರಸ್ತೆ ತೆಡೆ ನಡೆಸಿದರು.
ನಿರಂತರ ಆನೆ ಹಾವಳಿಗೆ ಕಂಗೆಟ್ಟ ಮಲೆನಾಡಿಗರ ಆಕ್ರೋಶ ಇಂದು ಕಟ್ಟೆ ಹೊಡೆದಿತ್ತು, ಕರ್ನಾಟಕ ರೈತ ಸಂಘ ಇಂದು ಬೀದಿಗಿಳಿದು ಚಳುವಳಿ ನಡೆಸಿದ್ದು ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಮಾನವ ಸರಪಳಿ ನಡೆಸಿ ಅರಣ್ಯ ಇಲಾಖೆ ವಿರುದ್ಧ ಸಿಡಿದೆದ್ದಿದ್ದರು ನಂತರ ಅರಣ್ಯ ಇಲಾಖೆಗೆ ಮುತ್ತಿಗೆ ಹಾಕಲು ಮುಂದಾದ ರೈತರು ಡಿಎಫ್ಓ ಕಚೇರಿಗೆ ತೆರಳಿದರು.
ಚಿಕ್ಕಮಗಳೂರು ತಾಲೂಕಿನ ಮಲೆನಾಡು ಭಾಗದ ರೈತರಿಗೆ ಕಳೆದ ತಿಂಗಳಿನಿಂದ ಕಂಗಾಲಾಗಿದ್ದಾರೆ
26 ಆನೆಗಳ ಹಾವಳಿಯಿಂದ ಹೈರಾಣಾಗಿರೋ ಮಲೆನಾಡಿಗರಿಗೆ ಅಡಿಕೆ, ಕಾಫಿ-ಮೆಣಸು, ಬಾಳೆ-ಭತ್ತ ಯಾವ ಬೆಳೆಯನ್ನೂ ಬಿಡದೆ ಆನೆಗಳ ಹಿಂಡು ನಾಶಪಡಿಸುತ್ತಿವೆ
20 ದಿನದಲ್ಲಿ 30 ಲಕ್ಷಕ್ಕೂ ಅಧಿಕ ನಾನಾ ಬೆಳೆಗಳನ್ನು ನಾಶಪಡಿಸಿ ಇನ್ನೂ ಅಲ್ಲಿಯೇ ಬೀಡು ಬಿಟ್ಟಿರುವ ಬೀಟಮ್ಮ ಗ್ಯಾಂಗ್ ಕಾಫಿ ಗಿಡಗಳನ್ನ ಬುಡಸಮೇತ ಕಿತ್ತು ಹಾಕುತ್ತಿವೆ.
ಚಿಕ್ಕಮಗಳೂರು ನಗರದ ಸುತ್ತಳತೆಯಲ್ಲಿರೋ ಕಾಡಾನೆಗಳ ಹಿಂಡು ಇನ್ನೂ ಇದ್ದು ಕೂಡಲೇ ಆನೆ ಹಾವಳಿಗೆ ಬ್ರೇಕ್ ಹಾಕಬೇಕೆಂದು ರೈತರು ಆಗ್ರಹಿಸಿದ್ದಾರೆ. ಪ್ರತಿಭಟನೆ ನಂತರ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಗುರುಶಾಂತಪ್ಪ ಸರ್ಕಾರ ಬೆಳೆಹಾನಿಗೆ ದಯಾಪರಿಹಾರ ಕೊಡ್ತೀವಿ ಅನ್ನುತ್ತೆ, 1 ಲಕ್ಷ ನಷ್ಟವಾಗಿದ್ರೆ ಕೇವಲ 5 ಸಾವಿರ ಕೊಟ್ರೆ ಆನೆ ಬಾಯಿಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗುತ್ತೆ. ವೈಜ್ಞಾನಿಕ ಪರಿಹಾರ ನೀಡಬೇಕು. ಆನೆ ಹಾವಳಿಗೆ ಶಾಶ್ವತ ಬ್ರೇಕ್ ಹಾಕಬೇಕು ಎಂದು ಒತ್ತಾಯಿಸಿದರು.
Leave a comment