ಚಿಕ್ಕಮಗಳೂರು: ಸರ್ಕಾರಿ ಕಚೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ನೌ ಕರರಿಗೆ ಕಾರ್ಮಿಕ ಆಯುಕ್ತರ ಆದೇಶದಂತೆ ಕನಿಷ್ಟ ವೇತನ ಜಾರಿಗೊಳಿಸಬೇಕು ಆಗ್ರಹಿಸಿ ನೌಕರರು ಕಚೇರಿ ಕೆಲಸ ಸ್ಥಗಿತಗೊಳಿಸಿ ಸೋಮವಾರ ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಜಿಲ್ಲಾ ಸರ್ಕಾರಿ ಹೊರಗುತ್ತಿಗೆ ನೌಕರರ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಎಲ್.ಮಂಜು ಆರ್ಥಿಕ, ಕಾರ್ಮಿಕ ಇಲಾ ಖೆ ಸೇರಿದಂತೆ ಎಲ್ಲಾ ಮೇಲಾಧಿಕಾರಿಗಳಿಗೆ ಕನಿಷ್ಟ ವೇತನ ನೀಡಲು ಅಗತ್ಯ ಕ್ರಮ ವಹಿಸಲು ನಿರ್ದೇಶನ ನೀಡಬೇಕು. ಈ ವಿಚಾರವಾಗಿ ಮುಂದೆ ವಿಧಾನಸಭಾ ಅಧಿವೇಶನದೊಳಗೆ ಕನಿಷ್ಟ ವೇತನದ ತೀರ್ಮಾನ ಮಾಡಬೇಕು ಎಂದು ಒತ್ತಾಯಿಸಿದರು.
ಸರ್ಕಾರಿ ಕಚೇರಿಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಹೊರಗುತ್ತಿಗೆ, ಗುತ್ತಿಗೆ, ದಿನಗೂಲಿ, ಗೌರವಧನ ಆ ಧಾರದ ಮೇಲೆ ಕೆಲಸ ನಿರ್ವಹಿಸುತ್ತಿರುವ ನೌಕರರಿಗೆ ಸರ್ಕಾರದಿಂದ ಹೊರಡಿಸಿರುವ ಉಲ್ಲೇಖದ ಅಧಿಸೂ ಚನೆಯಂತೆ ಕನಿಷ್ಟ ವೇತನವನ್ನು ಪಾವತಿಸಬೇಕು ಎಂದು ಆಗ್ರಹಿಸಿದರು.
ಸರ್ಕಾರ, ಕಾರ್ಮಿಕ ಇಲಾಖೆಯಿಂದ ಸೂಕ್ತ ಕ್ರಮ ಕೈಗೊಳ್ಳುವ ಕುರಿತು ಎಲ್ಲಾ ಇಲಾಖೆಗಳಿಗೆ ನಿರ್ದೇ ಶನವಿದ್ದು ಆದರೂ ಆರ್ಥಿಕ ಇಲಾಖೆಯಿಂದ ಹೊರಡಿಸಲಾದ ಮೌಖಿಕ ಆದೇಶದ ಮೇರೆಗೆ ಕನಿಷ್ಟ ವೇತ ನವನ್ನು ಜಿಲ್ಲಾ ಮಟ್ಟದ ಅಧಿಕಾರಿಗಳು ತಡೆಹಿಡಿದಿದ್ದಾರೆ ಎಂದು ಆರೋಪಿಸಿದರು.
ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ನೌಕರರಿಗೆ ಸರ್ಕಾರದ ಆದೇಶವಿದ್ದರೂ ಕನಿಷ್ಟ ವೇ ತನ ಜಾರಿಗೊಳಿಸಿಲ್ಲ. ಕೆಲವೊಮ್ಮೆ ವೇತನವನ್ನು ಹಿಂಪಡೆಯಲಾಗುತ್ತಿದೆ. ಹೀಗಾಗಿ ಸರ್ಕಾರ ಆರ್ಥಿಕ ಇಲಾ ಖೆಗೆ ಸೂಚಿಸಿ ಕನಿಷ್ಟ ಜಾರಿಗೊಳಿಸದಿದ್ದಲ್ಲಿ ಉಗ್ರ ಹೋರಾಟ ರೂಪಿಸಲಾಗುವುದು ಎಂದು ಹೇಳಿದರು.
ಆದ್ದರಿಂದ ಕೂಡಲೇ ರಾಜ್ಯಸರ್ಕಾರ ತಡೆಹಿಡದಿರುವ ಹೊಸ ವೇತನ ಪರಿಷ್ಕರಣೆಯನ್ನು ಜಾರಿಗೆ ಬರುವಂತೆ ಇಲಾಖಾ ಮುಖ್ಯಸ್ಥರುಗಳಿಗೆ ಕೂಡಲೇ ನಿರ್ದೇಶನ ನೀಡಬೇಕು. ಒಂದು ಪಕ್ಷ ನಿರ್ಲಕ್ಷ್ಯ ವಹಿಸಿ ದರೆ ಸಂಘವು ಮುಂದಿನ ದಿನಗಳಲ್ಲಿ ರಾಜ್ಯಮಟ್ಟದ ಹೋರಾಟ, ಅನಿರ್ದಿಷ್ಟ ಉಪವಾಸ ಪ್ರತಿಭಟನೆ ನಡೆ ಸಲಿದೆ ಎಂದು ಎಚ್ಚರಿಸಿದರು.
ಇದೇ ವೇಳೆ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಂದ ೩೫೦ಕ್ಕೂ ಹೆಚ್ಚು ಹೊರಗುತ್ತಿಗೆ ನೌಕರರು ಪ್ರತಿಭಟನೆ ಯಲ್ಲಿ ಭಾಗಿಯಾಗಿ ಹಕ್ಕೋತ್ತಾಯವನ್ನು ಮಂಡಿಸಿದರು.
ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷ ಮಣಿಕುಮಾರ್, ಪ್ರಧಾನ ಕಾರ್ಯದರ್ಶಿ ಪ್ರದೀಪ್, ರಾಜ್ಯ ಕಮಿಟಿ ಸದಸ್ಯರಾದ ಜೀವಿತಾ, ಅಣ್ಣಪ್ಪ, ತಾಲ್ಲೂಕು ಅಧ್ಯಕ್ಷ ರಾಕೇಶ್, ಮೂಡಿಗೆರೆ ಅಧ್ಯಕ್ಷೆ ಶೈಲಾ, ಕಳಸ ಅಧ್ಯಕ್ಷ ಪೃಥ್ವಿ, ತರೀಕೆರೆ ಅಧ್ಯಕ್ಷ ನವೀನ್, ಅಜ್ಜಂಪುರ ಅಧ್ಯಕ್ಷ ಸಂದೀಪ್, ಎನ್.ಆರ್.ಪುರ ಅಧ್ಯಕ್ಷ ಗುರುಶಾ ಂತಪ್ಪ, ಕೊಪ್ಪ ಅಧ್ಯಕ್ಷ ರಾಖಿಲ್, ನೌಕರ ಸುಬ್ರಹ್ಮಣ್ಯ ಮುಂತಾದವರು ಹಾಜರಿದ್ದರು.\Outsourced employees
protest demanding implementation of minimum wage
Leave a comment