Home Latest News ರಾಗಿ ಖರೀದಿ ಕೇಂದ್ರಗಳಲ್ಲಿ ಅನ್ನದಾತರ ಪರದಾಟ : ಕೇಳೊರಿಲ್ಲ ಗೋಳು
Latest News

ರಾಗಿ ಖರೀದಿ ಕೇಂದ್ರಗಳಲ್ಲಿ ಅನ್ನದಾತರ ಪರದಾಟ : ಕೇಳೊರಿಲ್ಲ ಗೋಳು

Share
Share

ಚಿಕ್ಕಮಗಳೂರು : ಸರ್ಕಾರ ರೈತರ ಅನುಕೂಲಕ್ಕಾಗಿ ರಾಗಿ ಖರೀದಿ ಕೇಂದ್ರಗಳನ್ನು ರಾಜ್ಯ ಸಹಕಾರ ಮಹಾ ಮಂಡಳದ ಮೂಲಕ ತೆರೆದಿದೆ, ರಾಗಿ ಬೆಳೆಯುವ ಪ್ರದೇಶದಲ್ಲಿ ಖರೀದಿ ಕೇಂದ್ರ ಕೆಲ ದಿನಗಳು ಮಾತ್ರ ತೆರೆದಿತ್ತವೆ. ನಂತರ ಇಲ್ಲಿನ ಗೋಳು ಕೇಳುವವರಿಲ್ಲ,

ಜಿಲ್ಲೆಯ ಚಿಕ್ಕಮಗಳೂರು, ಕಡೂರು, ತರೀಕೆರೆ ಮತ್ತು ಅಜ್ಜಂಪುರ ತಾಲ್ಲೂಕಿನಲ್ಲಿ ರಾಗಿ ಖರೀದಿ ಕೇಂದ್ರಗಳನ್ನ ತೆರೆಯಲಾಗಿದೆ, ಇಲ್ಲಿ ರೈತರು ಸಾಲುಗಟ್ಟಿ ನಿಂತು ಪರದಾಡುವುದು ನೋಡಿದರೆ ಅಯ್ಯೋ ಪಾಪ ಎನ್ನಿಸುವುದರ ಜೊತೆಗೆ ಜನಪ್ರತಿನಿಧಿಗಳು ಅಧಿಕಾರಿಗಳು ಬದುಕಿದ್ದಾರಾ ಎಂಬ ಆಕ್ರೋಶ ಬರುತ್ತದೆ. ಇನ್ನು ವಿರೋಧ ಪಕ್ಷದವರು ತುಟಿ ಬಿಚ್ಚುವುದಿಲ್ಲ. ರೈತ ಸಂಘಗಳ ಕೂಗು ಇವರಿಗೆ ಕೇಳಿಸುವುದಿಲ್ಲ. ಖಾತೆದಾರ ರೈತರು ಖರೀದಿ ಕೇಂದ್ರಗಳಲ್ಲಿ ಮೊದಲು ರಿಜಿಸ್ಟರ್ ಮಾಡಿಸಬೇಕು. ರೈತರು ಬೆಳಗ್ಗೆ ನಾಲ್ಕು ಗಂಟೆಗೆ ಸರದಿ ಸಾಲಿನಲ್ಲಿ ನಿಂತರೆ ಮುಗಿತು ದಿನವೂ ಕಾಫಿ,ತಿಂಡಿ,ಊಟ ಇಲ್ಲ ಕೊನೆಗೆ ನೀರು ಸಿಗುವುದಿಲ್ಲ. ಈ ಚಳಿಯಲ್ಲಿ ಗಡಗಡ ನಡುಗುವ ಹಿರಿಯ ವಯಸ್ಸಿನವರು ಮತ್ತು ಮಹಿಳೆಯರ ಪರದಾಟ ನೋಡಿದರೆ ಅಯ್ಯೋ ಪಾಪ ಎನ್ನಿಸುತ್ತದೆ .ಇದರ ಮಧ್ಯೆ ಪದೇ,ಪದೇ ಕೈಕೊಡುವ ವಿದ್ಯುತ್ ಮತ್ತು ಸರ್ವರ್ ರಿಂದಾಗಿ ದಿನವೂ ಸರದಿ ಸಾಲಿನಲ್ಲಿ ನಿಲ್ಲಲೇ ಬೇಕು.

ಮಾರ್ಕೆಟಿನಲ್ಲಿ ರಾಗಿ ಬೆಲೆ ಮೂರು ಸಾವಿರ ಸಿಕ್ಕರೆ ಹೆಚ್ಚು ಸರ್ಕಾರ ಬೆಂಬಲ ಬೆಲೆ ಕೊಡುವುದರಿಂದ 4290 ರೂ ಸಿಗುತ್ತದೆ ಎಂದು ರೈತರು ಪರದಾಡುತ್ತಿದ್ದಾರೆ. ಕಳೆದ ವರ್ಷ ರಿಜಿಸ್ಟರ್ ಮಾಡಿಸಿದ ಹಲವು ರೈತರಿಗೆ ಇನ್ನೂ ಹಣ ಪಾವತಿ ಆಗಿಲ್ಲ ಎಂಬ ದೂರುಗಳು ಸಾಕಷ್ಟು ಇವೆ.
ಇನ್ನು ಜನಪ್ರತಿನಿಧಿಗಳು ರೈತರೇ ದೇಶದ ಬೆನ್ನೆಲುಬು ಎಂದು ಭಾಷಣ ಮಾಡಿ ಹೋದವನು ಬಾರ್_ಟೂರು ಕ್ವಾರೆ ಕಮೀಷನ್ ಲೆಕ್ಕಾಚಾರದಲ್ಲಿ ಇದ್ದಾರೆ. ವಿರೋಧ ಪಕ್ಷದವರು ಇವರ ಜೊತೆಗೆ ಸಾಟಿ ವ್ಯವಹಾರದಲ್ಲಿ ಇದ್ದರೆ ರೈತ ಸಂಘದ ಮಾತುಗಳು ಕೇಳುವವರೇ ಇಲ್ಲ ಜೊತೆಗೆ ಅಧಿಕಾರಿಗಳು ಮಾತ್ರ ಯಾವುದಕ್ಕೂ ತಲೆಕೆಡಿಸಿಕೊಳ್ಳುವ ಗೋಜಿಗೆ ಹೋಗುವುದಿಲ್ಲ. ರೈತರು ಮಾತ್ರ ಜೀವನ ಪೂರ ಪರದಾಡುತ್ತಲೇ ಜೀವ ಬಿಡಬೇಕಾಗಿದೆ.

Share

Leave a comment

Leave a Reply

Your email address will not be published. Required fields are marked *

Don't Miss

ದನದ ಮಾಂಸ ಮಾರಾಟದಲ್ಲಿ 40 ಕೆ.ಜಿ ಮಾಂಸ, ಕತ್ತಿ–ಚಾಕುಗಳು ಜಪ್ತಿ

ಚಿಕ್ಕಮಗಳೂರು: ನಗರದ ಅಯ್ಯಪ್ಪನಗರದ ಸಮೀಪದ ಶೆಡ್‌ನಲ್ಲಿ ಯಾವುದೇ ಪರವಾನಗಿ ಇಲ್ಲದೆ ದನದ ಮಾಂಸ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ನಗರ ಠಾಣೆ ಪೊಲೀಸರು ವ್ಯಕ್ತಿಯೊಬ್ಬನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆ.9ರಂದು ಮಧ್ಯಾಹ್ನ...

ವಕೀಲ ವಿ.ಕೆ.ರಘು ಸಾಧನೆ ಯೋಗ ಮಾಡುವವರಿಗೆ ಪ್ರೇರಣೆ

ಚಿಕ್ಕಮಗಳೂರು: ಯೊಗ ನಮ್ಮ ಪ್ರಾಚೀನ ಋಷಿಮುನಿಗಳು ಜಗತ್ತಿಗೆ ಕೊಟ್ಟಂತಹ ಕೊಡುಗೆ. ವಕೀಲ ವಿ.ಕೆ.ರಘು ಅವರ ಯೋಗದ ಸಾಧನೆ ಯೋಗ ಮಾಡುವವರಿಗೆ ಒಂದು ಪ್ರೇರಣೆ ಕೊಡುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಡಾ.ಸಿ.ಟಿ.ರವಿ...

Related Articles

ಕೇಬಲ್ ಕಳ್ಳರೆಂದು ಶಂಕಿಸಿ ಮೂವರ ಮೇಲೆ ಹಲ್ಲೆ

ಕಡೂರು: ಪಂಪ್‌ಸೆಟ್‌ ಮೋಟಾರ್‌ ಕೇಬಲ್‌ ಕಳ್ಳರೆಂದು ಅನುಮಾನಿಸಿ ಮೂವರು ಯುವಕರ ಮೇಲೆ ಗುಂಪೊಂದು ಗಂಭೀರವಾಗಿ ಹಲ್ಲೆ...

₹5 ಲಕ್ಷ ಮೌಲ್ಯದ ಶ್ರೀಗಂಧದ ಮರಗಳ ಕಳವು

ತರೀಕೆರೆ: ಕೃಷಿ ತೋಟಕ್ಕೆ ನುಗ್ಗಿದ ಕಳ್ಳರು ಸುಮಾರು 15 ಶ್ರೀಗಂಧದ ಮರಗಳನ್ನು ಕಡಿದು ಕಳವು ಮಾಡಿಕೊಂಡು...

ಸ್ಕೂಟರ್‌ ಅಪಘಾತ: ಚಿಕಿತ್ಸೆ ಫಲಿಸದೆ ಸಾವು

ಕಡೂರು: ರಸ್ತೆಯಲ್ಲಿ ಅಡ್ಡಬಂದ ನಾಯಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಸ್ಕೂಟರ್‌ ನಿಯಂತ್ರಣ ತಪ್ಪಿ ಬಿದ್ದು...

ಧ್ವಜಾರೋಹಣದ ಕೆಲವೇ ಗಂಟೆಗಳಲ್ಲಿ ಕೆಳಗಿಳಿಸಿದ ರಾಷ್ಟ್ರಧ್ವಜ …?

ಚಿಕ್ಕಮಗಳೂರು: ಸ್ವಾತಂತ್ರ್ಯ ದಿನಾಚರಣೆಯಂದೇ ಚಿಕ್ಕಮಗಳೂರಿನಲ್ಲಿ ರಾಷ್ಟ್ರಧ್ವಜಕ್ಕೆ ಸಂಬಂಧಿಸಿದಂತೆ ವಿವಾದವೊಂದು ಭುಗಿಲೆದ್ದಿದ್ದು, ಕರ್ನಾಟಕ ರಾಜ್ಯ ರೈತ ಸಂಘದ...