Home Latest News Jumbo Circus:ನಗರದಲ್ಲಿ ಜಂಬೂ ಸರ್ಕಸ್-ಸಾಹಸ ಚಟುವಟಿಕೆಗಳ ಪ್ರದರ್ಶನ
Latest NewsHomenamma chikmagalur

Jumbo Circus:ನಗರದಲ್ಲಿ ಜಂಬೂ ಸರ್ಕಸ್-ಸಾಹಸ ಚಟುವಟಿಕೆಗಳ ಪ್ರದರ್ಶನ

Share
ಸರ್ಕಸ್ ಫ್ಯಾನ್ಸ್ ಫೇರ್‌ವೆಲ್ ಅಸೋಷಿಯೇಷನ್ ಅಧ್ಯಕ್ಷ ನಾಗೇಶ್ ಸುದ್ದಿಗೋಷ್ಠಿ
ಸರ್ಕಸ್ ಫ್ಯಾನ್ಸ್ ಫೇರ್‌ವೆಲ್ ಅಸೋಷಿಯೇಷನ್ ಅಧ್ಯಕ್ಷ ನಾಗೇಶ್ ಸುದ್ದಿಗೋಷ್ಠಿ
Share

ಚಿಕ್ಕಮಗಳೂರು:  ಏಷ್ಯ ಖಂಡದಲ್ಲೇ ಅತಿ ದೊಡ್ಡ ಸರ್ಕಸ್ ತಂಡವಾದ ಜಂಬೂ ಸರ್ಕಸ್‌ರವರಿಂದ ನಗರದ ಬೈಪಾಸ್ ರಸ್ತೆ, ಕಲ್ಯಾಣ ನಗರದಲ್ಲಿ ಅತ್ಯದ್ಭುತ ಸರ್ಕಸ್ ಪ್ರದರ್ಶನಗೊಳ್ಳುತ್ತಿದ್ದು ಕಲಾಭಿಮಾನಿಗಳೂ ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ವೀಕ್ಷಿಸಿ ಪ್ರೋತ್ಸಾಹಿಸಬೇಕೆಂದು ಸರ್ಕಸ್ ಫ್ಯಾನ್ಸ್ ಫೇರ್‌ವೆಲ್ ಅಸೋಷಿಯೇಷನ್ ಅಧ್ಯಕ್ಷ ನಾಗೇಶ್ ಹೇಳಿದರು

ಅವರು ಇಂದು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ ಜಂಬೂ ಸರ್ಕಸ್ ತಂಡವೂ ೧೯೭೭ರ ಅಕ್ಟೋಬರ್ ೨ರಂದು ಎಂ.ವಿ ಶಂಕರನ್ ಅವರ ಮಾಲೀಕತ್ವದಲ್ಲಿ ಬಿಹಾರಿನ ದಾನಪುರದಲ್ಲಿ ಪ್ರಾರಂಭವಾಗಿದ್ದು. ಪ್ರಸ್ತುತ ಅವರ ಮಕ್ಕಳಾದ ಅಜಯ್‌ಶಂಕರ್ ಹಾಗೂ ಅಶೋಕ್‌ಶಂಕರ್ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಈ ತಂಡದಲ್ಲಿ ನೂರು ಜನ ಕಲಾವಿದರು, ಮಹಿಳೆಯರು, ಪುರು?ರು, ಕಚೇರಿ ನೌಕರರು ಇತರ ಸಹಾಯಕ ನೌಕರರು ಸೇರಿದಂತೆ ಒಟ್ಟು ೩೦೦ಕ್ಕೂ ಹೆಚ್ಚು ಜನ ಸರ್ಕಸ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದರು.

ಸರ್ಕಸ್ಸಿನಲ್ಲಿ ಆಫ್ರಿಕಾ, ರಷ್ಯಾದ ವಿದೇಶಿ ಕಲಾವಿದರು ಒಳಗೊಂಡಂತೆ ದೇಶದ ವಿವಿದ ರಾಜ್ಯಗಳ ಕಲಾವಿದರು ಮೈ ಜುಮ್ ಎನಿಸುವಂತಹ ಸಾಹಸಗಳು, ಅಮೆರಿಕನ್ ಸ್ಪೀಡ್ ವೀಲ್, ಡಬಲ್ ರಿಂಗ್ ಅಕ್ರೋಬ್ಯಾಟ್, ಪೀಕಾಕ್ ಡ್ಯಾನ್ಸ್, ಗ್ಲೋಬಲ್ ಡೆತ್ ಇನ್ ಡಾರ್ಕ್‌ನೆಸ್ ಹಾಗೂ ರೊಮ್ಯಾಂಟಿಕ್ ಸ್ಯಾರಿ ಡ್ಯಾನ್ ಸೇರಿದಂತೆ ವಿವಿದ ಸಾಹಸಮಯ ಚಟುಚಟಿಕೆಗಳನ್ನು ಪ್ರದರ್ಶಿಸುತ್ತಾರೆ,

ಬಹು ಭಾಷಾ ಚಿತ್ರಗಳಲ್ಲಿ ಈ ಸರ್ಕಸ್‌ನ ಬಳಸಿ ಹಲವಾರು ಚಿತ್ರಗಳನ್ನು ಚಿತ್ರಿಸಲಾಗಿದೆ. ನೆಹರು, ಇಂದಿರಾಗಾಂಧಿ, ವಿದೇಶಿ ಗಣ್ಯರು, ಅಮಿತಾ ಬಚ್ಚನ್, ಧಮೇಂದ್ರ ರಾಜೇಶ್ ಖನ್ನ, ಹೇಮಮಾಲಿನಿ ಸೇರಿದಂತೆ ಇನ್ನೂ ಅನೇಕ ಚಲನಚಿತ್ರ ನಟ-ನಟಿಯರು ಸರ್ಕಸ್ ವೀಕ್ಷಿಸಿ ಅಚ್ಚರಿ ವ್ಯಕ್ತಪಡಿಸಿ ಹೆಮ್ಮೆಯಿಂದ ಬೆನ್ನು ತಟ್ಟಿದ್ದಾರೆ ಎಂದರು.

ಸರ್ಕಸ್‌ನ ಕಲಾವಿದರು ವ?ವಿಡಿ ಭಾರತದ ಉದ್ದಗಲಕ್ಕು ಸಂಚರಿಸಿ ಜನರನ್ನು ರಂಜಿಸಿ ಮೆಚ್ಚಿಸಿದ್ದಾರೆ. ಇದೀಗ ಚಿಕ್ಕಮಗಳೂರಿನಲ್ಲಿ ಪ್ರಾರಂಭಿಸಿದ್ದು ಮಧ್ಯಾಹ್ನ ೧ ಗಂಟೆ, ಸಂಜೆ ೪ ಗಂಟೆ ಹಾಗೂ ರಾತ್ರಿ ೭ ಗಂಟೆಗೆ ಪ್ರತಿ ದಿನ ೩ ಆಟಗಳು ಪ್ರದರ್ಶಿಸಲಾಗುತ್ತಿದೆ ಎಂದು ತಿಳಿಸಿದರು.

ಪದರ್ಶನಕ್ಕೆ ಮುಂಗಡ ಬುಕಿಂಗ್ ಸೌಲಭ್ಯವಿದ್ದು  ದೂ.ಸಂ ೬೨೩೮೩೪೭೦೦೬, ೮೨೮೧೬೦೬೮೯೨ ಅಥವಾ ೮೮೦೯೦೦೦೧೭೫.ಗೆ ಕರೆ ಮಾಡಿ ಬುಕಿಂಗ್ ಮಾಡಿಕೊಳ್ಳಬಹುದು ಎಂದರು. ಈ ಸಂದರ್ಭದಲ್ಲಿ ರಾಜೀವ್, ವರ್ಗೀಸ್, ಅಂಥೋಣಿ, ಮೂರ್ತಿ ಉಪಸ್ಥಿತರಿದ್ದರು.

Jumbo Circus-Adventure activities show in the city

Share

Leave a comment

Leave a Reply

Your email address will not be published. Required fields are marked *

Don't Miss

ದನದ ಮಾಂಸ ಮಾರಾಟದಲ್ಲಿ 40 ಕೆ.ಜಿ ಮಾಂಸ, ಕತ್ತಿ–ಚಾಕುಗಳು ಜಪ್ತಿ

ಚಿಕ್ಕಮಗಳೂರು: ನಗರದ ಅಯ್ಯಪ್ಪನಗರದ ಸಮೀಪದ ಶೆಡ್‌ನಲ್ಲಿ ಯಾವುದೇ ಪರವಾನಗಿ ಇಲ್ಲದೆ ದನದ ಮಾಂಸ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ನಗರ ಠಾಣೆ ಪೊಲೀಸರು ವ್ಯಕ್ತಿಯೊಬ್ಬನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆ.9ರಂದು ಮಧ್ಯಾಹ್ನ...

ವಕೀಲ ವಿ.ಕೆ.ರಘು ಸಾಧನೆ ಯೋಗ ಮಾಡುವವರಿಗೆ ಪ್ರೇರಣೆ

ಚಿಕ್ಕಮಗಳೂರು: ಯೊಗ ನಮ್ಮ ಪ್ರಾಚೀನ ಋಷಿಮುನಿಗಳು ಜಗತ್ತಿಗೆ ಕೊಟ್ಟಂತಹ ಕೊಡುಗೆ. ವಕೀಲ ವಿ.ಕೆ.ರಘು ಅವರ ಯೋಗದ ಸಾಧನೆ ಯೋಗ ಮಾಡುವವರಿಗೆ ಒಂದು ಪ್ರೇರಣೆ ಕೊಡುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಡಾ.ಸಿ.ಟಿ.ರವಿ...

Related Articles

ಕೇಬಲ್ ಕಳ್ಳರೆಂದು ಶಂಕಿಸಿ ಮೂವರ ಮೇಲೆ ಹಲ್ಲೆ

ಕಡೂರು: ಪಂಪ್‌ಸೆಟ್‌ ಮೋಟಾರ್‌ ಕೇಬಲ್‌ ಕಳ್ಳರೆಂದು ಅನುಮಾನಿಸಿ ಮೂವರು ಯುವಕರ ಮೇಲೆ ಗುಂಪೊಂದು ಗಂಭೀರವಾಗಿ ಹಲ್ಲೆ...

₹5 ಲಕ್ಷ ಮೌಲ್ಯದ ಶ್ರೀಗಂಧದ ಮರಗಳ ಕಳವು

ತರೀಕೆರೆ: ಕೃಷಿ ತೋಟಕ್ಕೆ ನುಗ್ಗಿದ ಕಳ್ಳರು ಸುಮಾರು 15 ಶ್ರೀಗಂಧದ ಮರಗಳನ್ನು ಕಡಿದು ಕಳವು ಮಾಡಿಕೊಂಡು...

ಸ್ಕೂಟರ್‌ ಅಪಘಾತ: ಚಿಕಿತ್ಸೆ ಫಲಿಸದೆ ಸಾವು

ಕಡೂರು: ರಸ್ತೆಯಲ್ಲಿ ಅಡ್ಡಬಂದ ನಾಯಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಸ್ಕೂಟರ್‌ ನಿಯಂತ್ರಣ ತಪ್ಪಿ ಬಿದ್ದು...

ಧ್ವಜಾರೋಹಣದ ಕೆಲವೇ ಗಂಟೆಗಳಲ್ಲಿ ಕೆಳಗಿಳಿಸಿದ ರಾಷ್ಟ್ರಧ್ವಜ …?

ಚಿಕ್ಕಮಗಳೂರು: ಸ್ವಾತಂತ್ರ್ಯ ದಿನಾಚರಣೆಯಂದೇ ಚಿಕ್ಕಮಗಳೂರಿನಲ್ಲಿ ರಾಷ್ಟ್ರಧ್ವಜಕ್ಕೆ ಸಂಬಂಧಿಸಿದಂತೆ ವಿವಾದವೊಂದು ಭುಗಿಲೆದ್ದಿದ್ದು, ಕರ್ನಾಟಕ ರಾಜ್ಯ ರೈತ ಸಂಘದ...