Home ಲಂಚ-ಲಂಚ-ಲಂಚ ತಾಣವಾಗಿರುವ ತರೀಕೆರೆ ತಾಲ್ಲೂಕು ?
HomeLatest Newsnamma chikmagalur

ಲಂಚ-ಲಂಚ-ಲಂಚ ತಾಣವಾಗಿರುವ ತರೀಕೆರೆ ತಾಲ್ಲೂಕು ?

Share
Share

ತರೀಕೆರೆ: ತರೀಕೆರೆ ಕ್ಷೇತ್ರದಲ್ಲಿ ಲಂಚದ ಕೂಗು ಮಾರಿ ಅಬ್ಬರ ಹೇಳತೀರದಾಗಿದೆ.ಸಣ್ಣ, ಸಣ್ಣ ಕೆಲಸ ಕಾರ್ಯಗಳಿಗೂ ಲಂಚ.ಕೂನೆಗೆ ಮಾತನಾಡಿಸ ಬೇಕು ಎಂದರೆ ಲಂಚ ಕೊಡುವ ಪರಿಪಾಠ ಬೆಳೆದಿದೆ. ಯಾಥಾ,ಜನಪ್ರತಿನಿಧಿ ಯಾಥಾ ಅಧಿಕಾರಿಗಳು ಎನ್ನುವ ದುಸ್ಥಿತಿ ತಾಂಡವವಾಡುತ್ತಿದೆ.ವಿರೋಧ ಪಕ್ಷಗಳು ಕಣ್ಣು ಮುಚ್ಚಿ ನಾವು ಅವರೇ ನೀವು ಅವರೇ ತಿನ್ನಿ,ತಿನ್ನಿ ಎಂಬಂತೆ ಕೊಡಾಡುತ್ತಿದ್ದಾರೆ.

ತರೀಕೆರೆ ಕ್ಷೇತ್ರದಲ್ಲಿ ಸುಮಾರು ಹತ್ತಕ್ಕೂ ಹೆಚ್ಯ ಅಧಿಕಾರಿ, ನೌಕರರು ಲಂಚ ಪಡೆಯುವಾಗ ಲೋಕಾಯುಕ್ತಾದವರು ಬಂಧಿಸಿರುವುದೆ ಸಾಕ್ಷಿ. ಪೊಲೀಸ್ ಇಲಾಖೆ, ಕಂದಾಯ ಇಲಾಖೆ ಮತ್ತು ಪಿ.ಡಿ.ಒ ಗಳು ಹಗಲು ರಾತ್ರಿ ಎನ್ನದೆ ಲಂಚ, ಲಂಚ ಎಂದು ಜೊಲ್ಲು ಸುರಿಸಿಕೊಂಡು ತಿರುಗುತ್ತಿದ್ದಾರೆ.

ಜನರಿಂದ ಸೈಟ್ ಕೊಡುತ್ತೇವೆ ಎಂದು ಲಕ್ಷಾಂತರ ಹಣ ವಸೂಲಿ ಮಾಡಿರುವ ಘಟನೆ ಲಿಂಗದಹಳ್ಳಿ ಹೋಬಳಿ ತಿಗಡ ಗ್ರಾಮ ಪಂಚಾಯತಿಯ ಮಂಚೇತವಾರ ಗ್ರಾಮದಲ್ಲಿ ನಡೆದು ದೂರು,ಪ್ರತಿದೂರು ದಾಖಲಾಗಿರುವುದು ಲಂಚದ ಹಾವಳಿಗೆ ಸಾಕ್ಷಿ ಅಲ್ಲವೇ.

ಅರಣ್ಯ ಇಲಾಖೆ ಮತ್ತು ಹುಲ್ಲು ಬನ್ನಿ ಖಾರಬು ಜಾಗ ನಿವೇಶನರಹಿತರಿಗೆ ನೀಡುವುದಾಗಿ ಹೇಳಿ ಸರ್ವೆ ನಂಬರ್ ಒಂದರ 35, ಎಕರೆ ಮತ್ತು96.10 ಎಕರೆ ಜಾಗ ತೋರಿಸಿ ಲಕ್ಷ ಲಕ್ಷ ಹಣ ಎತ್ತಿಕೊಂಡು ಜನರಿಗೆ ಕಿರುಕುಳ ನೀಡಲಾಗಿದ್ದು ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷೆ ಶ್ರೀದೇವಿ ಪತಿ ಕುಟ್ಟಿ ಪಿ.ಡಿ.ಒ ಶಿವಮೂರ್ತಿ ಸೇರಿ ಯಾವುದೋ ಜಾಗದಲ್ಲಿ ಬೇಲಿ ಹಾಕಿಸಿದ್ದಲ್ಲದೇ ಜೆಸಿಬಿ ಯಲ್ಲಿ ಮರ ಗಿಡಗಳನ್ನು ತೆಗಿಸಿದರು ಅರಣ್ಯ ಇಲಾಖೆ ಮೌನವಾಗಿರುವುದು ನೋಡಿದರೆ ಹಣಕ್ಕಾಗಿ ಒತ್ತಡ ಇರುವವರು ಶಿಫಾರಸ್ಸು ಕೆಲಸ ಮಾಡಿದೆ ಎಂದು ಜನ ಮಾತನಾಡುತ್ತಿದ್ದಾರೆ.

ಅರಣ್ಯ ಇಲಾಖೆಯ ಗಮನಕ್ಕೆ ಬಾರದಿರುವುದು ನೋಡಿ ಜನ ತಾ ಮುಂದು,ನಾ,ಮುಂದು ಎಂದು ಹಣ ಕೊಟ್ಟು ಈಗ ಪೊಲೀಸ್ ಠಾಣೆಗೆ ಹೋಗುವಂತೆ ಆಗಿದೆ. ಪಿ.ಡಿ.ಒ.ಶಿವಮೂರ್ತಿ ಕೈವಾಡ ಹೆಚ್ಚಾಗಿರುವುದು ಕಂಡುಬಂದಿದೆ ಎಂದು ಜನ ಹೇಳುತ್ತಿದ್ದಾರೆ.ಲಂಚದ ಮೇಲಿನವರಿಗೆ ತಲುಪಿರಿವುದರಿಂದ ಎಲ್ಲವೂ ಮೌನ,ಮೌನ ಎನ್ನುತ್ತಿದ್ದಾರೆ.ಇನ್ನಾದರೂ ಈ ಬಗ್ಗೆ ಕ್ರಮ ಕೈಗೊಳ್ಳುತ್ತಾರೆ ಎಂದು ನಿರೀಕ್ಷೆ ಮಾಡಬಹುದು ಇಲ್ಲದಿದ್ದರೆ ಕಳಕೊಂಡವ ಕೊಡಂಗಿ,ಇಸಕೊಂಡವನು ವೀರಭದ್ರ ಎನ್ನಬೇಕಾಗುತ್ತದೆ.

Is Tarikere taluk a place of bribery  bribery bribery ?

Share

Leave a comment

Leave a Reply

Your email address will not be published. Required fields are marked *

Don't Miss

ಬಾವಿ ಕ್ಲೀನ್ ಮಾಡುವಾಗ ಆಮ್ಲಜನಕದ ಕೊರತೆಯಿಂದ ಕಾರ್ಮಿಕ ಸಾವು

ಚಿಕ್ಕಮಗಳೂರು : ಬಾವಿ ಕ್ಲೀನ್ ಮಾಡಲು ಇಳಿದಿದ್ದ ವ್ಯಕ್ತಿಯೊಬ್ಬರು ಆಮ್ಲಜನಕದ ಕೊರತೆಯಿಂದ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ನಗರದ ಉಂಡೇದಾಸರಹಳ್ಳಿ ಬಡಾವಣೆಯಲ್ಲಿ ನಡೆದಿದೆ. ದರ್ಶನ್ ಎಂಬುವರ ಮನೆಯ ಬಾವಿಯನ್ನು ಸ್ವಚ್ಛಗೊಳಿಸುವ ಉದ್ದೇಶದಿಂದ ಮೋಹನ್...

ಬಿ.ಎಲ್.ಶಂಕರ್ ರ ರಾಜಕೀಯ ಹಪ ಹಪಿಗೆ ಮತ್ತೆ ಮತ್ತೆ ತಣ್ಣೀರು !

ಬಿ.ಎಲ್.ಶಂಕರ್ ಕಾಂಗ್ರೆಸ್ ನ ರಾಜ್ಯ ನಾಯಕರು ನಿಜ,ಆದರೆ ಇವರು ಚಿಕ್ಕಮಗಳೂರು ಜಿಲ್ಲೆಯ ಕಾಂಗ್ರೆಸ್ ನಲ್ಲಿ ಕಡ್ಡಿ ಆಡಿಸುವುದರಲ್ಲಿ ನಿಪುಣ. ಕಾಂಗ್ರೆಸ್ ಸೇರಿ ಎಲ್ಲಾ ಚುನಾವಣೆಯಲ್ಲಿ ಸೋತು ದಾಖಲೆ ಮಾಡಿದ್ದಾರೆ.ಚಿತ್ರಕಲಾ ಪರಿಷತ್ತಗೆ ಗೂಟಾ...

Related Articles

ಕೆ.ಬಿ.ಎಂಗೆ ಆತ್ಮೀಯ ಅಭಿಮಾನಾರ್ಪಣೆ

ಬೀರೂರ: ಜನಾನುರಾಗಿ ಸೇವೆ ಸಲ್ಲಿಸಿ ಅಜಾತಶತ್ರು ಪಟ್ಟಣದ ಹಿರಿಯ ಮುತ್ಸದಿ ಮಾಜಿ ಶಾಸಕ ಕೆ.ಬಿ. ಮಲ್ಲಿಕಾರ್ಜುನ್...

ದೇಶದ ಅಭಿವೃದ್ಧಿ ವಿಷಯದಲ್ಲಿ ರಾಜಕಾರಣ ಇಲ್ಲ

ಬೀರೂರು: ‘ದೇಶದ ಅಭಿವೃದ್ಧಿ ವಿಷಯದಲ್ಲಿ ರಾಜಕಾರಣ ಇಲ್ಲದೆ ಮುಂದಿನ ಪೀಳಿಗೆಗೆ ಕೊಡುಗೆಯಾಗುವಂಥ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ’ ಎಂದು...

ಅಜ್ಜಂಪುರದ ರೈಲ್ವೆ ಲೆವೆಲ್ ಕ್ರಾಸಿಂಗ್ ರಸ್ತೆ ಮೇಲ್ಸೇತುವೆ ಕಾಮಗಾರಿಗೆ ಚಾಲನೆ

ಚಿಕ್ಕಮಗಳೂರು:  ದೇಶದ ಅಭಿವೃದ್ಧಿಯ ಸಂಕೇತವೇ ರೈಲ್ವೆಯಾಗಿದ್ದು, ರೈಲ್ವೆ ಇಲಾಖೆಯನ್ನು ಎಷ್ಟು ಮಟ್ಟಿಗೆ ಅಭಿವೃದ್ಧಿಪಡಿಸುತ್ತೇವೆಯೋ ಅಷ್ಟು ದೇಶಕ್ಕೆ...

ಗುಡುಗು ಸಿಡಿಲಿನ ಆರ್ಭಟಕ್ಕೆ ಬಸ್ ತಂಗುದಾಣದನಲ್ಲಿದ್ದ ದಂಪತಿ ಗಾಯ

ಎನ್.ಆ‌ರ್.ಪುರ: ಕಾಫಿನಾಡಿನಲ್ಲಿ ಮುಂಗಾರುಪೂರ್ವ ಮಳೆಯ ಅಬ್ಬರ ಜೋರಾಗಿದ್ದು, ಗುಡುಗು ಸಿಡಿಲಿನ ಆರ್ಭಟಕ್ಕೆ ದಂಪತಿ ಗಾಯಗೊಂಡಿರುವ ಘಟನೆ...