ಚಿಕ್ಕಮಗಳೂರು: ದೆಹಲಿಯ ಜಂತರ್ ಮಂತರ್ನಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ನಡೆದ ಪ್ರಹಾರವನ್ನು ಖಂಡಿಸಿರುವ ಸಿಪಿಐ(ಎಂ.ಎಲ್)ರೆಡ್ಸ್ಟಾರ್ ಪಕ್ಷವು, ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಾಗಿದ್ದು, ಕೇಂದ್ರದ ಶಿಕ್ಷಣ ಸಚಿವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕೆಂದು ಒತ್ತಾಯಿಸಿ ಪಕ್ಷದ ಮುಖಂಡರು ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.
ನಗರದ ಆಜಾದ್ ವೃತ್ತದಲ್ಲಿ ಶುಕ್ರವಾರ ಪ್ರತಿಭಟನಾ ಧರಣಿ ನಡೆಸಿದ ಪಕ್ಷದ ಮುಖಂಡರು ನೀಟ್ ಪ್ರಶ್ನೆ ಸೋರಿಕೆ ಹಿನ್ನಲೆಯಲ್ಲಿ ನೈತಿಕ ಹೊಣೆಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರಪ್ರಧಾನ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.
ಪ್ರತಿಭಟನಾ ನಿರತರನ್ನುದ್ದೇಶಿಸಿ ಮಾತನಾಡಿದ ಪಕ್ಷದ ರಾಜ್ಯ ಸಮಿತಿ ಸದಸ್ಯ ಬಿ.ರುದ್ರಯ್ಯ,ಕಳೆದ ೨೦೧೬ರಲ್ಲಿ ಕಿನ್ಯಾದ ರಾಜಧಾನಿ ನರೋಬಿಯಲ್ಲಿ ನಡೆದ ವಿಶ್ವವ್ಯಾಪಾರ ಸಂಘಟನೆ ವಿಶ್ವ ಸಮ್ಮೇಳನದಲ್ಲಿ ಉನ್ನತ ಶಿಕ್ಷಣದ ಶೇ.೫೦ ಸೀಟುಗಳನ್ನು ಖಾಸಗಿಯವರಿಗೆ ನೀಡಬೇಕೆಂಬ ಸಲಹೆಗೆ ಮೊದಲು ಸಹಿಹಾಕಿದವರು ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಹಾಗಾಗಿ ಉನ್ನತ ಶಿಕ್ಷಣದ ಪ್ರವೇಶಕ್ಕೆ ನಡೆಯುವ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಲು ಕಾರಣವಾಗುತ್ತಿವೆ ಎಂದು ಆರೋಪಿಸಿದರು.
ಕೇಂದ್ರ ಸರ್ಕಾರ ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸಬೇಕು. ತಪ್ಪಿದ್ದಲ್ಲಿ ದೇಶಾದ್ಯಂತ ಎಲ್ಲಾ ಜನಪರ ಶಕ್ತಿಗಳೊಂದಿಗೆ ಉಗ್ರಹೋರಾಟ ರೂಪಿಸಲು ಮುಂದಾಗಬೇಕಾಗುತ್ತದೆ ಎಂದು ಸಿಪಿಐ(ಎಂ.ಎಲ್)ರೆಡ್ಸ್ಟಾರ್ ಪಕ್ಷ ಎಚ್ಚರಿಸಿದೆ.
ಪ್ರತಿಭಟನಾಕಾರರದ್ದೇಶಿಸಿ ಉಮೇಶ್ ಮಾತನಾಡಿದರು. ಪಕ್ಷ ಜಿಲ್ಲಾ ಕಾರ್ಯದರ್ಶಿ ಬಿ.ಆರ್.ಸಂದೀಪ, ಮುಖಂಡರುಗಳಾದ ಕೃಷ್ಣಪ್ಪ, ಬಸವರಾಜು, ನಾಗೇಶ್, ಶಂಕರ್, ಭಾಗ್ಯ, ಸುಧಾ, ಸುರೇಶ್, ಪುಟ್ಟಸ್ವಾಮಿ, ಹರೀಶ್ ಇದ್ದರು.
CPI(ML) Red Star protests demanding the dismissal of the Union Education Minister
Leave a comment