Home namma chikmagalur ಸಾಹಿತ್ಯ ಸಮ್ಮೇಳನ ಅಧ್ಯಕ್ಷತೆಗೆ ಬುರುಡೆ ಮಂಜುನಾಥ್ !
namma chikmagalurchikamagalurHomeLatest News

ಸಾಹಿತ್ಯ ಸಮ್ಮೇಳನ ಅಧ್ಯಕ್ಷತೆಗೆ ಬುರುಡೆ ಮಂಜುನಾಥ್ !

Share
Share

ಅಜ್ಜಂಪುರ: ದ್ವೇಷ, ಅಸೂಯೆ, ಕುಟುಂಬ ಕಂಟಕ , ಅಪರಿಚಿತ ಎ.ಎನ್.ಮಂಜುನಾಥ್ ನನ್ನು ತಾಲ್ಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಆಯ್ಕೆಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.

ಅಜ್ಜಂಪುರದಲ್ಲಿ ಹುಟ್ಟಿದ್ದು ಬಿಟ್ಟರೆ ಮಂಜುನಾಥ್ ಗೂ ಅಜ್ಜಂಪುರಕ್ಕೂ ಸಂಬಂಧವಿಲ್ಲ. ಇಂತವರನ್ನು ಆಯ್ಕೆ ಮಾಡಿದ್ದು ಏಕೆ ಎಂದು ಇಲ್ಲಿನ ಜನ ಪ್ರಶ್ನೆ ಮಾಡಿದ್ದಾರೆ. ಜನತಾದಳದ ಮುಖಂಡರ ಎಸ್,ಶಿವಾನಂದ್ ಮತ್ತಿತರರು ಈ ಬಗ್ಗೆ ನೈಜ ಪ್ರಶ್ನೆ ಎತ್ತಿದ್ದಾರೆ.

ಬುರುಡೆ ಮಂಜುನಾಥ್ ಮತ್ತು ಅಣ್ಣಾ ದತ್ತಾ ಫೈನಾನ್ಸ್ ಮಾಡಲು ಹಲವು ಶಿಕ್ಷಕರು ಮತ್ತು ನಿವೃತ್ತ ಶಿಕ್ಷಕರು ಹಾಗೂ ಬಡ ವ್ಯಾಪಾರಿಗಳಿಂದ ಹಣ ವಸೂಲಿ ಮಾಡಿದ್ದು ನಂತರ ದತ್ತಾ ಆತ್ಮಹತ್ಯೆ ಮಾಡಿಕೊಂಡರು. ಆಗಾ ಮಂಜುನಾಥ್ ಅಳಿದು ಉಳಿದ ಹಣ ಇಟ್ಟುಕೊಂಡು ಊರು ಬಿಟ್ಟವನು ಈಗ ಸಮ್ಮೇಳನದ ಅಧ್ಯಕ್ಷನಾಗಿ ಮೆರವಣಿಗೆ ಮಾಡಿಸಿಕೊಳ್ಳುವುದು ಮತ್ತು ಮಾಡುವುದು ಎಷ್ಟರಮಟ್ಟಿಗೆ ಸರಿ ಎಂದು ಆಕ್ರೋಶ ವ್ಯಕ್ತವಾಗಿದೆ.

ಮಂಜುನಾಥ್ ಅಣ್ಣಾ ದತ್ತಾ ಸತ್ತ ನಂತರ ಅತ್ತಿಗೆ ಇನ್ನೊಂದು ಮದುವೆಯಾಗಲು ಪ್ರಯತ್ನಿಸಿದಾಗ ಮಂಜುನಾಥ್ ಕುಟುಂಬಕ್ಕೆ ಕಿರುಕುಳ ಕೊಟ್ಟ ಆರೋಪ ಸೇರಿದಂತೆ ಹಲವು ದೂರುಗಳು ಇವೆ.ಹೆಂಡತಿ ಹೆಸರಿನಲ್ಲಿ ಲೇಖನಗಳನ್ನು ಬರೆಯುತ್ತಿದ್ದರು ಮತ್ತು ಲಾಭಿ ಮಾಡುವುದರಲ್ಲಿ ಎಕ್ಸ್ ಫರ್ಟ್ ಇರುವ ಈ ಬುರುಡೆ ಮಂಜುನಾಥ್ ದ್ವೇಷ ,ಅಸೂಯೆ ಬರಹದಲ್ಲಿ ಕೂಡಾ ನಿಪುಣ ಎನ್ನುತ್ತಾರೆ.

ಜಿಲ್ಲೆಯಲ್ಲಿ ಸಾಹಿತ್ಯ ಪರಿಷತ್ತು ಚಟುವಟಿಕೆಯಿಂದ ಇದೆ.ಹೊಸ, ಹೊಸ ಹೆಸರಿನ ಪ್ರಶಸ್ತಿಗಳ ಜನಕ ಸೂರಿ ಶ್ರೀನಿವಾಸ್ ಊರು ಕೂಡ ಅಜ್ಜಂಪುರ ಇಲ್ಲಿ ರಗಳೆ ನಡೆಯುವುದನ್ನು ತಪ್ಪಿಸದಿದ್ದರೆ ಜನ ಪ್ರತಿಭಟನೆ ಮಾಡುವುದು ಖಚಿತ.

ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ್ ಜೋಷಿ ಅಟಾಟೋಪ ನೋಡಿ ಪ್ರತಿಭಟನೆ, ತನಿಖೆ ನೋಡಿ ಆಡಳಿತಾಧಿಕಾರಿ ನೇಮಕ ಮಾಡಿ ಸರ್ಕಾರ ಆದೇಶ ಮಾಡಿದೆ. ಸರ್ಕಾರದಿಂದ ಬೇಕಾಬಿಟ್ಟಿ ಅನುದಾನ ಪಡೆಯುವ ಜೊತೆಗೆ ಸಮ್ಮೇಳನ ಅಧ್ಯಕ್ಷರಿಂದ ಹಣ,ಊಟ ಉಪಚಾರ ಕಾರು ಪಡೆದು ಓಡಾಡುವ ಮತ್ತು ಸಾರ್ವಜನಿಕರಿಂದ ಹಣ ವಸೂಲಿ ಮಾಡಿ ಸಮ್ಮೇಳನ ನಡೆಸುವವರು ಎಚ್ಚರಿಕೆ ವಹಿಸದಿದ್ದರೆ ಅಜ್ಜಂಪುರದಲ್ಲಿ ಪ್ರತಿಭಟನೆ ನಡೆಯುವುದು ಖಚಿತ.

ಸರ್ವ ಜನಾಂಗದ ಶಾಂತಿಯ ತೋಟದಂತಿರುವ ಅಜ್ಜಂಪುರ ಶಾಂತಿಗೆ ಮತ್ತು ಎಲ್ಲಾ ಜನರು ಒಂದೇ ಎಂಬ ಸೂರಿನಲ್ಲಿ ಇರುವಂತೆ ಇರುವ ಜನರ ಊರಲ್ಲಿ ಸಮ್ಮೇಳನಕ್ಕೆ ಗೌರವ ತರುವ ಸಾಹಿತಿಗಳು ,ಕಲಾವಿದರು ಮತ್ತು ಸಾಮಾಜಿಕ ಬದ್ದತ್ತೆ ಇರುವ ವ್ಯಕ್ತಿಗಳನ್ನು ಆಯ್ಕೆ ಮಾಡಿದರೆ ಒಳ್ಳೆಯದು.

Burude Manjunath to chair the literature conference!

Share

Leave a comment

Leave a Reply

Your email address will not be published. Required fields are marked *

Don't Miss

ಅಜ್ಜಂಪುರದ ಇಲಿಗೆ ‘ಹಣದ ಮೋಹ’

ಚಿಕ್ಕಮಗಳೂರು : ತುಮಕೂರಿನಲ್ಲಿ ಇತ್ತೀಚೆಗೆ ಇಲಿಯೊಂದು ಚಿನ್ನದ ಆಭರಣಗಳನ್ನು ಎಗರಿಸಿ ಸುದ್ದಿಯಾಗಿದ್ದರೆ, ಇತ್ತ ಚಿಕ್ಕಮಗಳೂರಿನಲ್ಲಿ ಮತ್ತೊಂದು ಚಾಣಾಕ್ಷ ಇಲಿ ಒಂದು ಹೆಜ್ಜೆ ಮುಂದೆ ಹೋಗಿ ನೇರವಾಗಿ ಹಣವನ್ನೇ ಕದ್ದು ತನ್ನ ಸಾಮ್ರಾಜ್ಯ...

ಜಿಲ್ಲಾಧಿಕಾರಿ ಭಂವರ್ ಸಿಂಗ್ ಮೀನಾ ಹೆಸರಿನಲ್ಲಿಯೂ ನಕಲಿ ವಾಟ್ಸಪ್ ಖಾತೆ

ಚಿಕ್ಕಮಗಳೂರು: ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಂ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದ್ದು, ಹ್ಯಾಕರ್‌ಗಳು ಮತ್ತು ವಂಚಕರು ವಾಟ್ಸಪ್, ಫೇಸ್‌ಬುಕ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಪ್ರಮುಖರ ಹೆಸರನ್ನು ದುರ್ಬಳಕೆ ಮಾಡಿಕೊಂಡು ಜನರನ್ನು...

Related Articles

ಮುಳ್ಳಯ್ಯನಗಿರಿ ಕ್ರಾಸ್ ಬಳಿ ಟಿಟಿ ವಾಹನ ಮರಕ್ಕೆ ಡಿಕ್ಕಿ

ಚಿಕ್ಕಮಗಳೂರು: ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಮುಳ್ಳಯ್ಯನಗಿರಿ ಕ್ರಾಸ್ ಬಳಿ ಶುಕ್ರವಾರ ಇನೋವಾ ಕಾರು ನಿಯಂತ್ರಣ...

ಹಾಸ್ಟೆಲ್‌ ವಿದ್ಯಾರ್ಥಿ ಆತ್ಮಹತ್ಯೆಗೆ ಯತ್ನ

ಚಿಕ್ಕಮಗಳೂರು: ಸಮಗ್ರ ಗಿರಿಜನ ಕಲ್ಯಾಣ ಇಲಾಖೆ (ಐಟಿಡಿಪಿ) ವ್ಯಾಪ್ತಿಯ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಯ...

ಮನೆಯ ಮೇಲ್ಛಾವಣಿಯ ಹೆಂಚು ತೆಗೆದು ನುಗ್ಗಿ ಸರಗಳ್ಳತನ

ನರಸಿಂಹರಾಜಪುರ: ಮನೆಯಲ್ಲಿ ದಂಪತಿ ಮಲಗಿದ್ದ ವೇಳೆ ಮೇಲ್ಛಾವಣಿಯ ಹೆಂಚು ತೆಗೆದು ಒಳನುಗ್ಗಿದ ಕಳ್ಳನೊಬ್ಬ ಮಹಿಳೆಯ ಕೊರಳಿನಲ್ಲಿದ್ದ...

ಕನಸು ಫೈನಾನ್ಸ್ ಹೆಸರಿನಲ್ಲಿ ₹1.60 ಲಕ್ಷ ವಂಚನೆ ಆರೋಪ

ಕಡೂರು: ಪ್ರತಿದಿನ ಉಳಿತಾಯದ ಹಣವನ್ನು ಸ್ವೀಕರಿಸಿ ಶೇ.7ರಷ್ಟು ಬಡ್ಡಿ ನೀಡುವುದಾಗಿ ನಂಬಿಸಿ, ಹಣವನ್ನು ವಾಪಸ್ ನೀಡದೆ...