ಚಿಕ್ಕಮಗಳೂರು: ಗ್ರಾಮೀಣ ಉಪವಿಭಾಗದ ವ್ಯಾಪ್ತಿಯಲ್ಲಿ ಬರುವ ಹೊಸದಾದ ಗಾಣದಾಳು ವಿ.ವಿ ಕೇಂದ್ರದ ೧೧ ಕೆ.ವಿ ಲಿಂಕ್ ಲೈನ್ ಕಾಮಗಾರಿ ಕೈಗೊಳ್ಳುತ್ತಿರುವುದರಿಂದ ಆಗಸ್ಟ್ ೧೪ ಮತ್ತು ೧೬ ರಂದು ಹಿರೇಮಗಳೂರು ೬೬/೧೧ ಕೆ.ವಿ ವಿ.ವಿ ಕೇಂದ್ರದಿಂದ ಹೊರಹೊಮ್ಮುವ ಚಿಕ್ಕನಹಳ್ಳಿ ೧೧ ಕೆ.ವಿ. ಫೀಡರ್ಗಳಿಗೆ ವಿದ್ಯುತ್ ಸರಬರಾಜು ನಿಲುಗಡೆಯಾಗುತ್ತದೆ.
ಈ ಹಿನ್ನೆಲೆಯಲ್ಲಿ ಈ ಫೀಡರ್ಗಳ ವ್ಯಾಪ್ತಿಗೆ ಬರುವ ಮಲ್ಲೇದೇವರಹಳ್ಳಿ, ಚಿಕ್ಕನಹಳ್ಳಿ, ಹೊಸಲಕ್ಯಾ, ಗಾಣದಾಳು, ಕ್ಯಾತನಬೀಡು, ಕಣಿವೆಹಳ್ಳಿ ಮತ್ತು ಸುತ್ತಮುತ್ತಲಿನ ಗ್ರಾಮಗಳಿಗೆ ಆ ಎರಡು ದಿನಗಳಂದು ಬೆಳಿಗ್ಗೆ ೧೦ ರಿಂದ ಸಂಜೆ ೫ ಗಂಟೆಯವರೆಗೆ ವಿದ್ಯುತ್ ನಿಲುಗಡೆಯಾಗಲಿದೆ.
ಈ ದಿನಾಂಕದಂದು ಬೆಳಿಗ್ಗೆ ೫ ರಿಂದ ಬೆಳಿಗ್ಗೆ ೧೦ ಗಂಟೆವರೆಗೆ ೩ ಫೇಸ್ ವಿದ್ಯುತ್ ಸರಬರಾಜು ಮಾಡಲಾಗುವುದು. ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಕಾರ್ಯ ಮತ್ತು ಪಾಲನಾ ಗ್ರಾಮೀಣ ಉಪವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗ್ರಾಮೀಣ ಉಪವಿಭಾಗ ವ್ಯಾಪ್ತಿಯ ಕಳಸಾಪುರ ೬೬/೧೧ ಕೆ.ವಿ. ಕೇಂದ್ರದಲ್ಲಿ ತುರ್ತು ಕಾಮಗಾರಿ ನಿಮಿತ್ತ ಕಳಸಾಪುರ ೬೬ ಕೆ.ವಿ. ಫೀಡರ್ ಮಾರ್ಗ ಮುಕ್ತತೆ ಪಡೆಯುವುದರಿಂದ ಆಗಸ್ಟ್ ೧೩ ರಂದು ೧೧ ಕೆ.ವಿ ದೇವಗೊಂಡನಹಳ್ಳಿ, ಮಠ, ಸಿಂದಿಗೆರೆ, ಮಾಚೇನಹಳ್ಳಿ, ಈಶ್ವರಹಳ್ಳಿ, ಕೆ.ಬಿ.ಹಾಳು, ಗಾಳಿಹಳ್ಳಿ ಮತ್ತು ಕಳಸಾಪುರ ಫೀಡರ್ಗಳ ೧೧ ಕೆ.ವಿ ಮಾರ್ಗದಲ್ಲಿ ವಿದ್ಯುತ್ ಸರಬರಾಜು ನಿಲುಗಡೆಯಾಗಲಿದೆ.
ಈ ಫೀಡರ್ಗಳ ವ್ಯಾಪ್ತಿಗೆ ಒಳಪಡುವ ಕಳಸಾಪುರ, ದೇವಗೊಂಡನಹಳ್ಳಿ. ಲಕ್ಕುಮನಹಳ್ಳಿ, ಕುನ್ನಾಳು, ಸಿರಬಡಿಗೆ, ಭೂಚೇನಹಳ್ಳಿ, ಬೆಳವಾಡಿ, ನರಸೀಪುರ, ಸಿಂದಿಗೆರೆ, ಮಾಚೇನಹಳ್ಳಿ. ಈಶ್ವರಹಳ್ಳಿ, ಕೆ.ಬಿ.ಹಾಳು, ಗಾಳಿಹಳ್ಳಿ ಮತ್ತು ಸುತ್ತಮುತ್ತಲಿನ ಗ್ರಾಮಗಳಿಗೆ ಅಂದು ಬೆಳಿಗ್ಗೆ ೧೦ ಗಂಟೆಯಿಂದ ಸಂಜೆ ೫ ಗಂಟೆಯವರೆಗೆ ವಿದ್ಯುತ್ ಸರಬರಾಜು ನಿಲುಗಡೆಯಾಗಲಿದೆ.
ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಕಾರ್ಯ ಮತ್ತು ಪಾಲನಾ ಗ್ರಾಮೀಣ ಉಪವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Power outage on August 14 and 16
Leave a comment