ಚಿಕ್ಕಮಗಳೂರು: ವೃದ್ದರ ಮಾಶಾಸನ ಬಿಡುಗಡೆ ಹಾಗೂ ಬಿಡದಿಯಲ್ಲಿ ರೈತರ ಜೀವನ ಉಳಿಸಬೇಕು ಎಂದು ಆಗ್ರಹಿಸಿ ಕರವೇ (ಪ್ರವೀಣ್ಶೆಟ್ಟಿ)ಬಣ ಜಿಲ್ಲಾ ಘಟಕದಿಂದ ನಗರದ ಆಜಾದ್ಪಾರ್ಕ್ ವೃತ್ತದಲ್ಲಿ ಬುಧವಾರ ಪ್ರತಿಭಟನೆ ನಡೆಸುವ ಮೂಲಕ ರಾಜ್ಯಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಕರವೇ ಜಿಲ್ಲಾ ಉಸ್ತುವಾರಿ ಅಧ್ಯಕ್ಷ ದಿನೇಶ್ ಶಿವಪುರ ಮಾತನಾಡಿ ರಾಜ್ಯದ ನೂತನ ಮುಖ್ಯ ಮಂತ್ರಿಗಳು ವಿಧವಾ, ವೃದ್ದಾಪ್ಯ, ಅಂಗವಿಕಲ ಮಾಶಾಸನ ಬಿಡುಗಡೆ ಮಾಡುತ್ತಿಲ್ಲ. ಅಲ್ಲದೇ ಬಿಡದಿಯಲ್ಲಿ ರೈತರ ಜಮೀನನ್ನು ಟೌಪ್ಶಿಪ್ ಮಾಡುವ ಮುಖೇನಾ ಜನವಿರೋಧಿ ನಡೆ ಅನುಸರಿಸುತ್ತಿದೆ ಎಂದರು.
ರಾಜ್ಯದಲ್ಲಿ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿ ಕಾಲದಲ್ಲಿ ಯಾವುದೇ ಮಾಶಾಸನ ಬಂದ್ಗೊಳಿಸಿ ಲ್ಲ. ಬದಲಾಗಿ ರೈತರ ವಿರುದ್ಧವಾಗಿ ಯಾವುದೇ ನಿರ್ಣಯವು ಕೈಗೊಂಡಿರಲಿಲ್ಲ. ಆದರೆ ಡಿಕೆಶಿ ಮುಖ್ಯಮಂ ತ್ರಿಯಾದ ಮೇಲೆ ಗೃಹಲಕ್ಷ್ಮೀ ಸೇರಿದಂತೆ ಯಾವುದೇ ಮಾಶಾಸನ ಒದಗಿಸುತ್ತಿಲ್ಲ ಎಂದು ದೂರಿದರು.
ಈ ಸಂದರ್ಭದಲ್ಲಿ ಕರವೇ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಯಣ್ಣ, ತಾಲ್ಲೂಕು ಅಧ್ಯಕ್ಷ ವೇದಕುಮಾ ರ್, ಗೌರವಾಧ್ಯಕ್ಷ ರಾಜಣ್ಣ, ಮುಖಂಡರುಗಳಾದ ಪರಮೇಶ್, ನಿರಂಜನಮೂರ್ತಿ, ಗಿರೀಶ್, ನಿಂಗಪ್ಪ, ಗೋವಿಂದಪ್ಪ, ಶಿವು ಮುಂತಾದವರು ಉಪಸ್ಥಿತರಿದ್ದರು.
Karave (Praveen Shetty) faction protests demanding release of elderly people
Leave a comment