ಚಿಕ್ಕಮಗಳೂರು: ಹೈಕಮಾಂಡ್ ದೆಹಲಿಯಿಂದ ಕಳುಹಿಸಿದ ಪಟ್ಟಿಯಲ್ಲಿ ಗಾಯಿತ್ರಿ ಶಾಂತೇಗೌಡರು ಮಂತ್ರಿಯಾಗುತ್ತಾರೆ ಎಂದು ಅವರ ಅಭಿಮಾನಿಗಳು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಕುಣ್ಣಿದು ಕುಪ್ಪಳಿಸಿ ಕಣ್ ಗೆ ತುಂಬಿಕೊಳ್ಳುವ ತವಕಕ್ಕೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎಳ್ಳು, ನೀರು ಬಿಟ್ಟರು. ಗಾಯಿತ್ರಿ ಶಾಂತೇಗೌಡ ದುಃಖ ಉಮ್ಮಳಿಸಿಕೊಂಡು ಬಂದವರು ಮತ್ತೆ ಮಂತ್ರಿ ಯಾಗಲು ಶತ ಪ್ರಯತ್ನ ಪಡುತ್ತಿದ್ದಾರೆ. ಜಿಲ್ಲೆಯ ಹಲವರು ಖುಷಿಯಾದರೆ ಮತ್ತೆ ಕೆಲವರು ಮೋಟಮ್ಮನವರ ರೀತಿ ಅಪಸ್ವರ ತೆಗೆದಿದ್ದಾರೆ.
ವಿಧಾನ ಪರಿಷತ್ ಸದಸ್ಯರಾಗಲು ಕೋರ್ಟ್ ನಲ್ಲಿ ನಾಲ್ಕೂವರೆ ವರ್ಷಗಳ ಕಾಲ ಬಡಿದಾಡಿ ಪ್ರಮಾಣ ಸ್ಪೀಕರಿಸುವ ಮುನ್ನವೇ ಮಂತ್ರಿ ಸ್ಥಾನಕ್ಕೆ ಹೆಸರು ಪ್ರಕಟವಾಗಿದ್ದು ಜಿಲ್ಲೆಯ ವರು ಮಂತ್ರಿ ಆಗುತ್ತಾರೆ ಎನ್ನುವಾಗ ಸಿದ್ದರಾಮಯ್ಯ ಹಾಕಿದ ಬ್ರೇಕ್ ಗೆ ಕಾಂಗ್ರೆಸ್ ನಡುಗುವಂತೆ ಮಾಡಿದೆ. ರಾಜ್ಯದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಗಮನಕ್ಕೂ ಬಾರದೆ ಗಾಯಿತ್ರಿ ಶಾಂತೇಗೌಡ ಹೆಸರು ಪ್ರಕಟವಾಗಿದ್ದು ಆಶ್ಚರ್ಯ ಮತ್ತು ಅನುಮಾನದ ಜೊತೆಗೆ ನೋಟು ಘಾಟಿನ ವಿಚಾರದಲ್ಲಿ ಫಿಕ್ಸಿಂಗ್, ಫಿಕ್ಸಿಂಗ್ ಎಂಬ ಮಾತುಗಳು ಕಾಂಗ್ರೆಸ್ ಪಡಶಾಲೆಯಲ್ಲಿ ಕೇಳಿಬರುತ್ತಿವೆ.
ಸಿದ್ದರಾಮಯ್ಯ ಉತ್ತರ ಕರ್ನಾಟಕದ ಕುರುಬ ಜನಾಂಗದ ಹಿರಿಯ ಶಾಸಕರಾದ ಬಸವರಾಜ್ ಶಿವಣ್ಣರನ್ನು ಮಂತ್ರಿ ಮಾಡಬೇಕು ಎಂದು ಹಟ ಹಿಡಿದು ಕುಳಿತರೆ ಹೈಕಮಾಂಡ್ ನಾವೋ?ನೀವೂ ಎಂದು ಹಗ್ಗಜಗ್ಗಟಾದಲ್ಲಿ ನಿರತವಾಗಿದೆ.ಸುರ್ಜಿವಾಲ ಕ್ಯಾಶ್ ಅಂಡ್ ಕ್ಯಾರಿಯರ್ ಮನುಷ್ಯ ಹೀಗಾಗಿ ಒಂದು ಮಂತ್ರಿ ಸ್ಥಾನ ಕಾಂಗ್ರೆಸ್ ನ ವ್ಯವಹಾರದ ಬಗ್ಗೆ ಹಾದಿ,ಬೀದಿಯ ಮಾತಾಗಿದೆ.ಅಂತೂ ಸಿದ್ದರಾಮಯ್ಯನವರ ಹಟ ಗೆಲ್ಲುತ್ತದೋ? ಹೈಕಮಾಂಡ್ ಕ್ಯಾಶ್ ಗೆಲ್ಲುತ್ತದೋ ಎಂಬುದು ಇನ್ನು ಒಂದು ವಾರದಲ್ಲಿ ತಿಳಿಯಲಿದೆ.
ಲಾಸ್ಟ್ ಸಿಫ್: ಜಿಲ್ಲೆಗಳಿಗೆ ಉಸ್ತುವಾರಿ ನೇಮಕ ಪ್ರಕ್ರಿಯೆ ಮುಗಿದಿದ್ದು ಮತ್ತೊಮ್ಮೆ ಕಿವಿ,ಕಣ್ಣು, ಕಿವಿ ಕೇಳದ ಜಾರ್ಜ್ ಉಸ್ತುವಾರಿ ನಿರ್ವಹಣೆ ಮಾಡಲಿದ್ದು ಅವರ ಕಾಫಿ ತೋಟ ಮತ್ತು ರಿಯಲ್ ಎಸ್ಟೇಟ್ ದಂಧೆಗೆ ಅನುಕೂಲ ಮಾಡಿಕೊಟ್ಟಿದ್ದು ರೇಟ್ ಫಿಕ್ಸಿಂಗ್ ಖಚಿತವಾಗಿ ಕೊಟ್ಟು ಬಂದಿದ್ದಾರೆ ಎಂದು ಕಾಂಗ್ರೆಸ್ ನವರು ಮಾತನಾಡಿದರೆ ಜನ ಮಾತ್ರ ಇವನ್ಯಾರೋ ಟ್ರಂಪ್ ತಮ್ಮ ಇರಬೇಕು ಎನ್ನುತ್ತಿದ್ದಾರೆ.ಇನ್ನೊಂದು ವರ್ಷ ತಳ್ಳಿಕೊಂಡು ನೂಕಿ ಕೊಂಡು ಅಥವಾ ತೆವಳಿ ಕೊಂಡು ಹೋಗುವ ಸರ್ಕಾರ ಮತ್ತು ಮಂತ್ರಿ ಸಿಕ್ಕಿದ್ದಾರೆ ಎಂದು ಗೊಣಗಿ ಕೊಂಡು ಕಾರ್ಯಕರ್ತರು ಮತ್ತು ಜನ ಓಡಾಡುತ್ತಿದ್ದಾರೆ.
Note to the high command! A rift in the Congress
Leave a comment