ಚಿಕ್ಕಮಗಳೂರು: ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಅನಧಿಕೃತ ಮತ್ತು ಅಕ್ರಮ ಜೀಪ್ ಗಳ ಹಾವಳಿ ತಡೆಗಟ್ಟಿ ಪ್ರವಾಸಿಗರ ಸುರಕ್ಷತೆ ಕಾಪಾಡಬೇಕು ಎಂದು ಆಗ್ರಹಿಸಿ ಜಿಲ್ಲೆಯ ಸ್ಥಳೀಯ ನಾಗರೀ ಕರು ಸೋಮವಾರ ಅಪರ ಜಿಲ್ಲಾಧಿಕಾರಿ ನಂಜುಂಡೇಗೌಡ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಹೆಚ್.ಕೆ.ಕೇಶವಮೂರ್ತಿ ಜಿಲ್ಲೆ ಮುಳ್ಳಯ್ಯನಗಿರಿ, ದತ್ತಪೀಠ, ಕೆಮ್ಮಣ್ಣಗುಂಡಿ, ಝರಿ ಜಲಪಾತದ ಪರಿಸರದಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿರುವ ಅನಧಿಕೃತ ಹಾಗೂ ಗುಣಮಟ್ಟದವಿ ಲ್ಲದೇ ಜೀಪ್ಗಳ ಸಂಚಾರ ಹಾವಳಿ ಹೆಚ್ಚಳಗೊಳ್ಳುತ್ತಿದೆ ಎಂದರು.
ದೇಶ-ವಿದೇಶಗಳಿಂದ ಮಲೆನಾಡಿನ ಪರಿಸರ ಸವಿಯಲು ಪ್ರವಾಸಿಗರು ಆಗಮಿಸುತ್ತಾರೆ. ಆದರೆ ಕೆಲ ವು ಪ್ರವಾಸಿ ತಾಣಗಳಿಗೆ ತೆರಳಲು ಜೀಪ್ ಮಾಲೀಕರು ಮತ್ತು ಚಾಲಕರು ಸಾರ್ವಜನಿಕರಿಗೆ ಹಾಗೂ ಪರಿ ಸರಕ್ಕೆ ತೀವ್ರ ತೊಂದರೆ ಉಂಟು ಮಾಡುತ್ತಿದ್ದಾರೆ ಎಂದರು.
ಗಿರಿಪ್ರದೇಶದಲ್ಲಿ ಸಂಚರಿಸುವ ಜೀಫ್ಗಳು ಯಾವುದೇ ಪರವಾನಗಿ ಪಡೆಯದೇ ಪ್ರವಾಸಿಗರ ಸಾಗಣೆ ಗೆ ಬಳಸಲಾಗುತ್ತಿದೆ. ಈ ವಾಹನಕ್ಕೆ ವಿಮೆ ಕೂಡಾ ಇರುವುದಿಲ್ಲ. ಅಲ್ಲದೇ ಗಿರಿಪ್ರದೇಶ ಅಪಾಯಕಾರಿ ಚಾಲ ನೆ, ಕಿರಿದಾದ ಘಾಟಿ ರಸ್ತೆಗಳಲ್ಲಿ ಜೀಪ್ ಚಾಲಕರು ಅತಿವೇಗ, ಬೇಜವಾಬ್ದಾರಿಯಿಂದ ವಾಹನ ಚಲಾಯಿಸು ವ ಮೂಲಕ ಪ್ರವಾಸಿಗರ ಜೀವಕ್ಕೆ ಕುತ್ತು ತರುತ್ತಿದ್ದಾರೆ ಎಂದರು.
ಪ್ರವಾಸಿಗರಿಗೆ ಕಿರುಕುಳ, ಸುಲಿಗೆ ಜೊತೆಗೆ ನಿಗಧೀತ ದರಕ್ಕಿಂತ ದುಪ್ಪಟ್ಟು ಹಣವನ್ನು ಪ್ರವಾಸಿ ಗರಿಂದ ವಸೂಲಿ ಮಾಡಲಾಗುತ್ತಿದೆ. ದರದ ಬಗ್ಗೆ ಪ್ರಶ್ನಿಸಿದರೆ ಪ್ರವಾಸಿಗರೊಂದಿಗೆ ಅಸಭ್ಯವಾಗಿ ವರ್ತಿಸಲಾ ಗುತ್ತಿದೆ. ಸಂಚಾರ ದಟ್ಟಣೆಯಿಂದ ಜೀಪ್ಗಳು ರಸ್ತೆ ಬದಿಯಲ್ಲೇ ಎಲ್ಲೆಂದರಲ್ಲಿ ಪಾರ್ಕ್ ಮಾಡುವುದರಿಂದ ವಿಪರೀತ ಜಾಮ್ ಉಂಟಾಗುತ್ತಿದೆ ಎಂದರು.
ದತ್ತಪೀಠ ಹಾಗೂ ಮುಳ್ಳಯ್ಯನಗಿರಿ ಪ್ರದೇಶಕ್ಕೆ ತೆರಳುವ ಪ್ರವಾಸಿಗರಿಂದ ತೆರಿಗೆ ರೂಪದಲ್ಲಿ ಸಾಕಷ್ಟು ಹಣ ಸಂಗ್ರಹವಾದರೂ, ಅಲ್ಲಂಪುರ ಗ್ರಾಮದಿಂದ ಹೊನ್ನಮ್ಮನಹಳ್ಳವರೆಗೂ ಜಿಲ್ಲಾಡಳಿತ ಶೌಚಾಲಯದ ವ್ಯವಸ್ಥೆ ಕಲ್ಪಿಸಿಲ್ಲ. ಹೀಗಾಗಿ ಬಗ್ಗೆ ಜಿಲ್ಲಾಧಿಕಾರಿಗಳು ಗಮನಹರಿಸಬೇಕು ಎಂದು ಒತ್ತಾಯಿಸಿದರು.
ಅನಧಿಕೃತ ಜೀಪ್ಗಳ ಮಾಫಿಯಾ ನಿಲ್ಲಿಸಿ ಸ್ಥಳೀಯ ಯುವಕರಿಗೆ ಅಧಿಕೃತ ಪರವಾನಗಿ ನೀಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ವಿಧಾನಸಭೆಯಲ್ಲಿ ಪ್ರಶ್ನಿಸಿದ್ದಾರೆ. ಹೀಗಾಗಿ ಕೂಡಲೇ ಪರವಾನ ಗಿ ಹೊಂದಿರದ ಜೀಫ್ಗಳು ಜಪ್ತಿ ಮಾಡಬೇಕು. ಜಿಲ್ಲಾಡಳಿತವೇ ಅಧಿಕೃತ ದರಪಟ್ಟಿ ನಿಗಧಿಪಡಿಸಬೇಕು ಎಂ ದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸ್ಥಳೀಯ ನಾಗರೀಕರಾದ ಜೆ.ಡಿ.ಲೋಕೇಶ್, ಸೀತರಾಮಭರಣ್ಯ, ಬೊಗಸೆ ವಿನೋ ದ್, ಎಸ್ಡಿಎಂ ಮಂಜು, ಬೆನಡಿಕ್ಟ್ ಜೇಮ್ಸ್ ಮುಂತಾದವರು ಉಪಸ್ಥಿತರಿದ್ದರು.
Appeal to the district administration to prevent the menace of unauthorized jeeps
Leave a comment