Home namma chikmagalur chikamagalur ರಾಜೇಗೌಡರಿಗೆ ರಾಜಕೀಯ ಮೈಲೇಜ್ – ಜೀವರಾಜ್ ಗೆ ಕೊನೆ ಮೊಳೆ ?
chikamagalurHomeLatest Newsnamma chikmagalur

ರಾಜೇಗೌಡರಿಗೆ ರಾಜಕೀಯ ಮೈಲೇಜ್ – ಜೀವರಾಜ್ ಗೆ ಕೊನೆ ಮೊಳೆ ?

Share
Share

ಶೃಂಗೇರಿ: ಕಳೆದ ಹತ್ತು ದಿನಗಳಿಂದ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ” ಶಾಸಕತ್ವ” ದ ಬಗ್ಗೆ ಎರಡು ಪಕ್ಷದವರಿಂದ ಪಟಾಕಿ,ಮೆರವಣಿಗೆ, ವಿಜಯೋತ್ಸವ ಸಾಲು ಸಾಲಾಗಿ ನಡೆಸಿ ರಾಜಕೀಯ ಜಿದ್ದಾ ಜಿದ್ದಿಗೆ ಈಗ ಸುಪ್ರೀಂ ಕೋರ್ಟ್ ಬ್ರೇಕ್ ಹಾಕುವ ಸಂಭವ ಹೆಚ್ಚಿದೆ.

2023 ರ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನ ರಾಜೇಗೌಡ 205 ಮತಗಳಿಂದ ಜಯಗಳಿಸಿ ಕಳೆದ ಮೂರು ವರ್ಷಗಳಿಂದ ರಾಜೇಗೌಡರು ಆಡಳಿತ ಪಕ್ಷದಲ್ಲಿ ಇದ್ದರು.205 ಮತಗಳಿಂದ ಜಯಗಳಿಸಿದ್ದನ್ನು ಪರಾಜಿತ ಅಭ್ಯರ್ಥಿ ಡಿ.ಎನ್.ಜೀವರಾಜ್ ಪ್ರಶ್ನೆ ಮಾಡಿ ಹೈಕೋರ್ಟ್ ನಲ್ಲಿ ದಾವೆ ಸಲ್ಲಿಸಿದ್ದರು.

ಕಳೆದ ಮೂರು ವರ್ಷಗಳಿಂದ ವಿಚಾರಣೆ ನಡೆಸಿ ಮರು ಮತ ಎಣಿಕೆ ಗೆ ಮೇ ಎರಡರಂದು ದಿನ ನಿಗದಿ ಮಾಡಿತ್ತು .ಅದರಲ್ಲಿ ಜೀವರಾಜ್ ಜಯಗಳಿಸಿ ರಾಜೇಗೌಡ ಪರಾಜಿತ ಎಂದು ಘೋಷಣೆ ಮಾಡಲಾಯಿತು.ನಂತರ ಗೆಲುವಿನ ದಾಖಲೆ ಪಡೆಯಲು ಜೀವರಾಜ್ ಹಗಲಿರುಳು ಓಡಾಟ ನಡೆಸಿದ ನಂತರ ವಿಧಾನ ಸಭಾ ಸದಸ್ಯ ಎಂದು ಪ್ರಮಾಣ ವಚನ ತೆಗೆದುಕೊಳ್ಳಲು ಮತ್ತೆ ಹೋರಾಟಮಾಡಿದ್ದರು.

ಜಿಲ್ಲಾ ಮಟ್ಟದಲ್ಲಿ ಅಷ್ಟೇ ಅಲ್ಲ ರಾಜ್ಯ ಮಟ್ಟದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ಜಟಾಪಟಿ ನಡೆದಿತ್ತು. ರಾಜೇಗೌಡರು ಇದನ್ನೆಲ್ಲ ಪ್ರಶ್ನೆಸಿ ಸುಪ್ರೀಂ ಕೋರ್ಟ್ ಕದ ತಟ್ಟಿದ್ದರು.ಇಂದು ಸುಪ್ರೀಂ ಕೋರ್ಟ್ ರಾಜೇಗೌಡರು ಶಾಸಕರಾಗಿ ಮುಂದುವರೆಯಲು ತಾತ್ಕಾಲಿಕ ತಡೆ ನೀಡಿರುವುದು ರಾಜೇಗೌಡರಿಗೆ ರಾಜಕೀಯ ಶಕ್ತಿ ಇಮ್ಮಡಿ ಆಗಿದೆ ಎಂದು ರಾಜಕೀಯ ಮತ್ತು ಕಾನೂನು ತಜ್ಞರ ಅಭಿಪ್ರಾಯವಾಗಿದೆ.

ಜೀವರಾಜ್ ಗೆ ರಾಜಕೀಯ ಹಿನ್ನಡೆ ಆಗಿದೆ.ಒಟ್ಟಾರೆ ಶೃಂಗೇರಿ ಕ್ಷೇತ್ರದ ಮತ ತಿರುವು ಪ್ರಕರಣ ದಿನಕ್ಕೊಂದು ಬಣ್ಣ,ಕ್ಷಣಕ್ಕೊಂದು ಬಣ್ಣ ಬದಲಾಯಿಸಿ ಹಲವರ ಹೃದಯ ಬಡಿತಕ್ಕೆ ಕಾರಣವಾಗಿತ್ತು. ಇನ್ನೂ ಮುಂದೆ ಇಬ್ಬರು ಕೋರ್ಟ್ ನಲ್ಲಿ ಮುಂದುವರೆದರು ವಿಧಾನ ಸಭಾ ಅವಧಿ ಮುಗಿದಿರುತ್ತದೆ.

Political mileage for Rajegowda – the final nail in the coffin for Jeevaraj?

Share

Leave a comment

Leave a Reply

Your email address will not be published. Required fields are marked *

Don't Miss

ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರಿಂದ ಸಿಹಿ ಹಂಚಿ ಸಂಭ್ರಮಾಚರಣೆ

ಚಿಕ್ಕಮಗಳೂರು:  ದಾವಣಗೆರೆ ಮತ್ತು ಬಾಗಲಕೋಟೆ ಕ್ಷೇತ್ರದ ಉಪಚುನಾವಣೆ ಹಾಗೂ ಕೇರಳ ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ವಿಜಯ ಪತಾಕೆ ಹಾರಿಸಿದ ಹಿನ್ನೆಲೆಯಲ್ಲಿ ಸೋಮವಾರ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು ನಗರದ ಹನುಮಂತಪ್ಪ...

ಮರಗಸಿ ಮಾಡುವಾಗ ವಿದ್ಯುತ್ ಶಾಕ್ ತಗುಲಿ ಕಾರ್ಮಿಕ ಬಲಿ

ಚಿಕ್ಕಮಗಳೂರು: ಸಿಲ್ವರ್ ಮರ ಮರಗಸಿ ಮಾಡುವ ಕೆಲಸದಲ್ಲಿ ತೊಡಗಿದ್ದ ಕಾರ್ಮಿಕರೊಬ್ಬರು ವಿದ್ಯುತ್ ಶಾಕ್ ತಗುಲಿ ಸ್ಥಳದಲ್ಲೇ ಸಾವನ್ನಪ್ಪಿರುವ ಕರುಣಾಜನಕ ಘಟನೆ ಚಿಕ್ಕಮಗಳೂರು ತಾಲೂಕಿನ ಕೆರೆಮನೆ ಎಸ್ಟೇಟ್‌ನಲ್ಲಿ ಸಂಭವಿಸಿದೆ. ಮೃತ ದುರ್ದೈವಿಯನ್ನು ತಮಿಳುನಾಡು...

Related Articles

ಮಣ್ಣುಮುಕ್ಕ ಹಾವು ಮಾರಾಟಕ್ಕೆ ಯತ್ನ: ಐವರು ಬಂಧನ

ಚಿಕ್ಕಮಗಳೂರು: ಅಪರೂಪದ ವನ್ಯಜೀವಿಯಾದ ಮಣ್ಣುಮುಕ್ಕ ಹಾವು (Red Sand Boa) ಮಾರಾಟಕ್ಕೆ ಯತ್ನಿಸುತ್ತಿದ್ದ ಐವರು ಆರೋಪಿಗಳನ್ನು...

ಚಾರ್ಮಾಡಿ ಘಾಟ್‌ನ 10ನೇ ತಿರುವಿನಲ್ಲಿ ಒಂಟಿ ಸಲಗ

ಚಿಕ್ಕಮಗಳೂರು: ಚಾರ್ಮಾಡಿ ಘಾಟ್‌ನ 10ನೇ ತಿರುವಿನಲ್ಲಿ ಒಂಟಿ ಸಲಗ ರಸ್ತೆ ಮಧ್ಯೆ ನಿಂತ ಪರಿಣಾಮ ವಾಹನ ಸವಾರರು...

ಭಾರತ ಸಾರ್ವಭೌಮ ಪ್ರಜಾ ಪ್ರಭುತ್ವ ರಾಷ್ಟ್ರ

ಚಿಕ್ಕಮಗಳೂರು:  ಭಾರತ ಸಾರ್ವಭೌಮ, ಸಮಾಜವಾದಿ, ಧರ್ಮನಿರಪೇಕ್ಷ ದೊಡ್ಡ ಪ್ರಜಾ ಪ್ರಭುತ್ವ ರಾಷ್ಟ್ರ ಇಲ್ಲಿ ಸರ್ವರಿಗೂ ಸಮಪಾಲು,...

ಕೊಲೆ ಆರೋಪಿ ಗಲ್ಲಿಗೇರಿಸಲು ಆಗ್ರಹಿಸಿ ಪ್ರತಿಭಟನೆ

ಚಿಕ್ಕಮಗಳೂರು: ಕೊಡಗು ಜಿಲ್ಲೆಯ ಪತ್ರಿಕೋದ್ಯಮದ ವಿದ್ಯಾರ್ಥಿನಿ ರಂಜಿತಾ ಅವರನ್ನು ಅತ್ಯಾಚಾರ ಮಾಡಿ ಕೊಲೆಗೈದಿರುವ ಆರೋಪಿಗಳನ್ನು ಗಲ್ಲಿಗೇರಿಸುವಂತೆ...