ಶೃಂಗೇರಿ: ಕಳೆದ ಹತ್ತು ದಿನಗಳಿಂದ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ” ಶಾಸಕತ್ವ” ದ ಬಗ್ಗೆ ಎರಡು ಪಕ್ಷದವರಿಂದ ಪಟಾಕಿ,ಮೆರವಣಿಗೆ, ವಿಜಯೋತ್ಸವ ಸಾಲು ಸಾಲಾಗಿ ನಡೆಸಿ ರಾಜಕೀಯ ಜಿದ್ದಾ ಜಿದ್ದಿಗೆ ಈಗ ಸುಪ್ರೀಂ ಕೋರ್ಟ್ ಬ್ರೇಕ್ ಹಾಕುವ ಸಂಭವ ಹೆಚ್ಚಿದೆ.
2023 ರ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನ ರಾಜೇಗೌಡ 205 ಮತಗಳಿಂದ ಜಯಗಳಿಸಿ ಕಳೆದ ಮೂರು ವರ್ಷಗಳಿಂದ ರಾಜೇಗೌಡರು ಆಡಳಿತ ಪಕ್ಷದಲ್ಲಿ ಇದ್ದರು.205 ಮತಗಳಿಂದ ಜಯಗಳಿಸಿದ್ದನ್ನು ಪರಾಜಿತ ಅಭ್ಯರ್ಥಿ ಡಿ.ಎನ್.ಜೀವರಾಜ್ ಪ್ರಶ್ನೆ ಮಾಡಿ ಹೈಕೋರ್ಟ್ ನಲ್ಲಿ ದಾವೆ ಸಲ್ಲಿಸಿದ್ದರು.
ಕಳೆದ ಮೂರು ವರ್ಷಗಳಿಂದ ವಿಚಾರಣೆ ನಡೆಸಿ ಮರು ಮತ ಎಣಿಕೆ ಗೆ ಮೇ ಎರಡರಂದು ದಿನ ನಿಗದಿ ಮಾಡಿತ್ತು .ಅದರಲ್ಲಿ ಜೀವರಾಜ್ ಜಯಗಳಿಸಿ ರಾಜೇಗೌಡ ಪರಾಜಿತ ಎಂದು ಘೋಷಣೆ ಮಾಡಲಾಯಿತು.ನಂತರ ಗೆಲುವಿನ ದಾಖಲೆ ಪಡೆಯಲು ಜೀವರಾಜ್ ಹಗಲಿರುಳು ಓಡಾಟ ನಡೆಸಿದ ನಂತರ ವಿಧಾನ ಸಭಾ ಸದಸ್ಯ ಎಂದು ಪ್ರಮಾಣ ವಚನ ತೆಗೆದುಕೊಳ್ಳಲು ಮತ್ತೆ ಹೋರಾಟಮಾಡಿದ್ದರು.
ಜಿಲ್ಲಾ ಮಟ್ಟದಲ್ಲಿ ಅಷ್ಟೇ ಅಲ್ಲ ರಾಜ್ಯ ಮಟ್ಟದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ಜಟಾಪಟಿ ನಡೆದಿತ್ತು. ರಾಜೇಗೌಡರು ಇದನ್ನೆಲ್ಲ ಪ್ರಶ್ನೆಸಿ ಸುಪ್ರೀಂ ಕೋರ್ಟ್ ಕದ ತಟ್ಟಿದ್ದರು.ಇಂದು ಸುಪ್ರೀಂ ಕೋರ್ಟ್ ರಾಜೇಗೌಡರು ಶಾಸಕರಾಗಿ ಮುಂದುವರೆಯಲು ತಾತ್ಕಾಲಿಕ ತಡೆ ನೀಡಿರುವುದು ರಾಜೇಗೌಡರಿಗೆ ರಾಜಕೀಯ ಶಕ್ತಿ ಇಮ್ಮಡಿ ಆಗಿದೆ ಎಂದು ರಾಜಕೀಯ ಮತ್ತು ಕಾನೂನು ತಜ್ಞರ ಅಭಿಪ್ರಾಯವಾಗಿದೆ.
ಜೀವರಾಜ್ ಗೆ ರಾಜಕೀಯ ಹಿನ್ನಡೆ ಆಗಿದೆ.ಒಟ್ಟಾರೆ ಶೃಂಗೇರಿ ಕ್ಷೇತ್ರದ ಮತ ತಿರುವು ಪ್ರಕರಣ ದಿನಕ್ಕೊಂದು ಬಣ್ಣ,ಕ್ಷಣಕ್ಕೊಂದು ಬಣ್ಣ ಬದಲಾಯಿಸಿ ಹಲವರ ಹೃದಯ ಬಡಿತಕ್ಕೆ ಕಾರಣವಾಗಿತ್ತು. ಇನ್ನೂ ಮುಂದೆ ಇಬ್ಬರು ಕೋರ್ಟ್ ನಲ್ಲಿ ಮುಂದುವರೆದರು ವಿಧಾನ ಸಭಾ ಅವಧಿ ಮುಗಿದಿರುತ್ತದೆ.
Political mileage for Rajegowda – the final nail in the coffin for Jeevaraj?
Leave a comment