ತರೀಕೆರೆ: ನಂದಿಬಟ್ಟಲು ಗ್ರಾಮದ ಕೆರೆಯನ್ನು ಮೂರು ವರ್ಷಗಳ ಅವಧಿಗೆ ಗುತ್ತಿಗೆಗೆ ಪಡೆದು ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಮೀನು ಸಾಕಾಣಿಕೆ ಮಾಡುತ್ತಿದ್ದ ರಂಗನಾಥ್ ಎಂಬುವವರ ಕೆರೆಯ ನೀರನ್ನು ಜೆಸಿಬಿ ಮೂಲಕ ಗೊಂದಲಗೊಳಿಸಿ ಮೀನುಗಳು ಸಾಯುವಂತೆ ಮಾಡಿ ನಷ್ಟ ಉಂಟುಮಾಡಿದ ಘಟನೆ ಲಿಂಗದಹಳ್ಳಿಯಲ್ಲಿ ನಡೆದಿದೆ.
ಈ ನಷ್ಟದ ಕುರಿತು ಕೆರೆಯ ಬಳಿ ಹೋದ ರಂಗನಾಥ್ ಅವರ ಪತ್ನಿ ರೂಪ ಅವರು ಜೆಸಿಬಿ ಚಾಲಕ ವಿಜಿ ಅಲಿಯಾಸ್ ಜಯಣ್ಣ ಎಂಬುವವರನ್ನು ಪ್ರಶ್ನಿಸಿದಾಗ, ಆತ ಮಹಿಳೆಗೆ ಅವಾಚ್ಯವಾಗಿ ನಿಂದಿಸಿ ತಲೆಕೂದಲು ಹಿಡಿದು ಎಳೆದಾಡಿ, ಕಪಾಳಕ್ಕೆ ಹೊಡೆದು ಕುತ್ತಿಗೆ ಹಿಸುಕಿ ಮತ್ತೊಮ್ಮೆ ಕೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.
ಹಲ್ಲೆಯಿಂದ ಗಾಯಗೊಂಡ ರೂಪ ಅವರು ತರೀಕೆರೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಲಿಂಗದಹಳ್ಳಿ ಪೊಲೀಸ್ ಠಾಣೆಗೆ ಬಂದು ನೀಡಿದ ಕಂಪ್ಯೂಟರ್ ಮುದ್ರಿತ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Woman attacked to death by JCB driver
Leave a comment