Home namma chikmagalur chikamagalur ಕಾಫಿನಾಡಿನಲ್ಲಿ ಲಾಂಗು – ಮಚ್ಚುಗದ್ದೆ ಸುದ್ದಿ
chikamagalurHomeLatest Newsnamma chikmagalur

ಕಾಫಿನಾಡಿನಲ್ಲಿ ಲಾಂಗು – ಮಚ್ಚುಗದ್ದೆ ಸುದ್ದಿ

Share
Share

ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಲಾಂಗು ಮತ್ತು ಮಚ್ಚುಗಳಂತಹ ಮಾರಕಾಸ್ತ್ರಗಳು ಬಳಕೆ ತೀರಾ ಸಾಮಾನ್ಯ ಎಂಬಂತಾಗಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

ಕೇಕ್ ಕತ್ತರಿಸುವ ಸಂಭ್ರಮಾಚರಣೆ ಇರಲಿ ಅಥವಾ ರಾಜಕೀಯ ನಾಯಕರ ನಡುವಿನ ಜಗಳವೇ ಇರಲಿ, ಎಲ್ಲದಕ್ಕೂ ಮಾರಕಾಸ್ತ್ರಗಳನ್ನು ಬಳಸುವ ಕೆಟ್ಟ ಸಂಸ್ಕೃತಿ ಹೆಚ್ಚಾಗುತ್ತಿದೆ. ಸೌಹಾರ್ದತೆಯಿಂದ ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳುವ ಬದಲು, ಸಣ್ಣಪುಟ್ಟ ವಿಷಯಗಳಿಗೂ ಕೈಗೆ ಲಾಂಗು-ಮಚ್ಚುಗಳನ್ನು ತೆಗೆದುಕೊಳ್ಳುವ ಪ್ರವೃತ್ತಿ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ.

ಇದಕ್ಕೆ ಮತ್ತೊಂದು ಆಘಾತಕಾರಿ ಸೇರ್ಪಡೆ ಎಂಬಂತೆ, ಮೂಡಿಗೆರೆ ತಾಲೂಕಿನ ಜೇನುಬೈಲು ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ಲಾಂಗ್ ಹಿಡಿದು ಜಗಳವಾಡಿರುವ ಘಟನೆ ನಡೆದಿದೆ. ಗ್ರಾಮದಲ್ಲಿ ತಲೆ ಎತ್ತಿದ್ದ ಅಕ್ರಮ ಕಟ್ಟಡವೊಂದರ ಬಗ್ಗೆ ತಾರೇಶ್ ಎಂಬುವವರು ಪ್ರಶ್ನೆ ಮಾಡಿದ್ದೇ ಈ ಘಟನೆಗೆ ಮುಖ್ಯ ಕಾರಣವಾಗಿದೆ.

ಇದರಿಂದ ತೀವ್ರ ಕೋಪಗೊಂಡ ಉದಯ್ ತಾರೇಶ್ ಅವರ ಮೇಲೆ ನೇರವಾಗಿ ಮಚ್ಚು ಹಿಡಿದು ಹಲ್ಲೆ ನಡೆಸಲು ಮುಂದಾಗಿದ್ದಾನೆ. ಘಟನೆಯ ತೀವ್ರತೆಯನ್ನು ಅರಿತ ಸ್ಥಳೀಯರು ತಕ್ಷಣವೇ ಮಧ್ಯಪ್ರವೇಶಿಸಿ ಇಬ್ಬರ ನಡುವಿನ ಜಗಳವನ್ನು ಬಿಡಿಸಿ ಕಳುಹಿಸುವ ಮೂಲಕ ಗಲಾಟೆಯನ್ನು ತಪ್ಪಿಸಿದ್ದಾರೆ. ನಡು ರಸ್ತೆಯಲ್ಲಿ ಲಾಂಗ್ ಹಿಡಿದ ವಿಡಿಯೋ ವೈರಲ್ ಆಗಿದ್ದು ಗೋಣಿಬೀಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

The news of the long-awaited arrival of the coffee tree in the country of coffee

Share

Leave a comment

Leave a Reply

Your email address will not be published. Required fields are marked *

Don't Miss

ರಾಜಕಾರಣದಲ್ಲಿ ಮಠಗಳ, ಸಂಘಟನೆಗಳ “ಆರ್ಭಟ”

ರಾಜ್ಯ ರಾಜಕಾರಣದಲ್ಲಿ ಇತ್ತೀಚಿನ ವರ್ಷಗಳಲ್ಲಿ ಮಠಗಳ ಪ್ರಭಾವ ಮತ್ತು ಸಂಘಟನೆಗಳು ಆರ್ಭಟ ಮಾಡುತ್ತಿರುವುದು ನೋಡಿದರೆ ಎತ್ತ ಸಾಗುತ್ತಿದ್ದೇವೆ ಎನ್ನಿಸುತ್ತದೆ. ಮಠಗಳು ಮಿತಿ ದಾಟಿದರೆ ಸಂಘಟನೆಗಳು ಲಾಭಿ ಮಾಡುತ್ತಿರುವುದು “ಸೇವೆಗಾಗಿಯೋ” ಜಾತಿಗಾಗಿಯೋ ಆಥವಾ...

ಕಾಫಿ ಮೂಟೆ ಸಾಗಿಸುತ್ತಿದ್ದ ಲಾರಿ ಅಪಘಾತ

ಚಿಕ್ಕಮಗಳೂರು: ಕಾಫಿ ಮೂಟೆಗಳನ್ನು ಸಾಗಿಸುತ್ತಿದ್ದ ಲಾರಿಯೊಂದು ಚಿಕ್ಕಮಗಳೂರು ನಗರದ ಕೆ.ಎಂ. ರಸ್ತೆಯಲ್ಲಿ ಸಂಚರಿಸುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ತಡೆಗೋಡೆಗೆ ಡಿಕ್ಕಿ ಹೊಡೆದ ಘಟನೆ ನಡೆದಿದೆ. ಲಾರಿ ಕಣಿವೆಯ...

Related Articles

ಮುದುಗುಂಡಿ ಗ್ರಾಮದಲ್ಲಿ ಹೆಣ್ಣು ಚಿರತೆ ಸೆರೆ

ತರೀಕೆರೆ: ತಾಲ್ಲೂಕಿನ ಮುದುಗುಂಡಿ ಗ್ರಾಮದಲ್ಲಿ ಸುಮಾರು 3 ವರ್ಷ ವಯಸ್ಸಿನ ಹೆಣ್ಣು ಚಿರತೆಯನ್ನು ಅರಣ್ಯ ಇಲಾಖೆ...

ಮಕ್ಕಳ ಲೈಂಗಿಕ ಶೋಷಣೆ ಚಿತ್ರ ದೃಶ್ಯ ಹಂಚಿಕೊಂಡ ನಗರದ ಮಹಿಳೆ

ಚಿಕ್ಕಮಗಳೂರು: ಮಕ್ಕಳ ಲೈಂಗಿಕ ಶೋಷಣೆ ಮತ್ತು ಆಕ್ಷೇಪಣಾರ್ಹ ಚಿತ್ರ ದೃಶ್ಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಆರೋಪದ...

ನಂಜೇಶ್ ಬೆಣ್ಣೂರು ನವಮಾಧ್ಯಮದ ನವತಾರೆಯಾಗಿ ಬೆಳಗಲಿ…

ಚಿಕ್ಕಮಗಳೂರು:  ಜನಮುಖಿ ಮನಸ್ಸಿನ ನವಮಾಧ್ಯಮದ ಸಂವಹನಕಾರ ನಂಜೇಶ್ ಆರ್ ಬೆಣ್ಣೂರು ಈಗ ಭಾರತದ ಮಟ್ಟದಲ್ಲಿ ನವ...

ಲೈಂಗಿಕ ದೌರ್ಜನ್ಯ ಎಸಗಿದ ಇಬ್ಬರು ಶಿಕ್ಷಕರ ಮೇಲೆ ಪೋಕೋ ಪ್ರಕರಣ

ಕಡೂರು: ತಾಲೂಕಿನ ಸರ್ಕಾರಿ ಶಾಲೆಯೊಂದರಲ್ಲಿ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆಘಾತಕಾರಿ ಘಟನೆ ಬೆಳಕಿಗೆ...