ಚಿಕ್ಕಮಗಳೂರು: ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಪಿ.ಹೆಚ್.ಡಿ.ಪದವಿ ಪಡೆದ ಬೆನ್ನ ಹಿಂದೆಯೇ ಚಿಕ್ಕಮಗಳೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನ ಅಧ್ಯಕ್ಷ ರಾಗಿ ಅವಿರೋಧ ಆಯ್ಕೆಯಾಗಿದ್ದಾರೆ.
ಭಾರತದಲ್ಲಿ ಸಮ್ಮಿಶ್ರ ಸರ್ಕಾರಗಳ ಸಮಸ್ಯೆಗಳು ಮತ್ತು ಸವಾಲುಗಳ ಕುರಿತು ಪ್ರಾಧ್ಯಾಪಕ ಡಾ//ಸುರೇಶ್ ರವರ ಮಾರ್ಗದರ್ಶನದಲ್ಲಿ ಪಿ.ಹೆಚ್.ಡಿ ಪಡೆದಿದ್ದಾರೆ.
ನ್ಯೂಸ್ ಕಿಂಗ್ ಸಿ.ಟಿ.ರವಿ ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷರಾಗ ಬೇಕು ಎಂದು ಸಹಕಾರ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟಿದ್ದಾರೆ ಎಂಬ ವರದಿಯಂತೆ ಇಂದು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನ ಅಧ್ಯಕ್ಷರಾದರೆ ದಿನೇಶ್ ಹೊಸೂರು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ನಿನ್ನೆ ನಡೆದ ಕೋರ್ ಕಮಿಟಿ ಸಭೆಯಲ್ಲಿ ಹಾಲಿ ಅಧ್ಯಕ್ಷ ಡಿ.ಎಸ್.ಸುರೇಶ್ ಮತ್ತೊಮ್ಮೆ ಅಧ್ಯಕ್ಷರಾಗ ಬೇಕು ಎಂದು ಪಟ್ಟು ಹಿಡಿದು ಹಟ ಮಾಡಿದರೂ ಪ್ರಯೋಜನವಾಗಿಲ್ಲ ಎನ್ನಲಾಗುತ್ತಿದೆ.
ಬಿ.ಜೆ.ಪಿ.ಯಲ್ಲಿ ತೀವ್ರ ಅಸಮಾಧಾನ ಮೂಡಿಸ ಬಹುದು ಎಂದು ಚರ್ಚೆ ನಡೆಯುತ್ತಿರುವಾಗ ಸದ್ದು ಗದ್ದಲದ ಮಧ್ಯೆ ಸುರೇಶ್ ಅಸಮಾಧಾನವಾಗಿದ್ದರು ಎಲ್ಲಾ ಸರಿ ಹೋಗುತ್ತದೆ ಎನ್ನಲಾಗಿದೆ.
ಸಿ.ಟಿ.ರವಿಗೆ ಮತ್ತೊಂದು ಹೊಸ ದಾರಿಯಲ್ಲಿ ರಾಜಕಾರಣ ಮಾಡುವ ಅವಕಾಶ ದೊರೆತಿದ್ದು ಮುಂದಿನ ದಿನಗಳ ರಾಜಕಾರಣಕ್ಕೆ ಹೊಸ ದಾರಿ ಸಿಕ್ಕಿದೆ ಎನ್ನುವವರು ಇದ್ದಾರೆ ಇದರ ಪರಿಣಾಮ ಎದುರಿಸ ಬೇಕಾಗಬಹುದು ಎಂದು ಅವರ ವಿರೋಧಿಗಳು ಇದ್ದಾರೆ .
Double blow for C.T. Ravi: PhD and Bank Chairman
Leave a comment