Home namma chikmagalur chikamagalur ಅನಂತ್‌ಸುಬ್ಬರಾವ್ ಕಾರ್ಮಿಕರ ವರ್ಗದ ನಂದಾದೀಪ
chikamagalurHomeLatest Newsnamma chikmagalur

ಅನಂತ್‌ಸುಬ್ಬರಾವ್ ಕಾರ್ಮಿಕರ ವರ್ಗದ ನಂದಾದೀಪ

Share
Share

ಚಿಕ್ಕಮಗಳೂರು: – ಶೋಷಿತರು ಮತ್ತು ಕಾರ್ಮಿಕರ ಪರವಾಗಿ ಬೃಹತ್ ಚಳುವಳಿ ಹಮ್ಮಿ ಕೊಂಡು ನ್ಯಾಯಯುತ ಬೇಡಿಕೆ ಈಡೇರಿಸಲು ಹೋರಾಡಿದ ದಿ|| ಹೆಚ್.ವಿ.ಅನಂತ್ ಸುಬ್ಬರಾವ್ ಅವರು ಕಾರ್ಮಿಕರ ವರ್ಗದ ನಂದಾದೀಪ ಎಂದು ಸಿಪಿಐ ಜಿಲ್ಲಾ ಕಾರ್ಯದರ್ಶಿ ಜಿ.ರಘು ಹೇಳಿದರು.

ನಗರದ ಜಿಲ್ಲಾ ಸಿಪಿಐ ಕಚೇರಿಯಲ್ಲಿ ಗುರುವಾರ ಎಐಟಿಯುಸಿ ರಾಜ್ಯಾಧ್ಯಕ್ಷ ಹಾಗೂ ಸಿಪಿಐ ಹಿರಿಯ ಮುಖಂಡ ದಿ|| ಹೆಚ್.ವಿ.ಅನಂತ್‌ಸುಬ್ಬರಾವ್ ಅಕಾಲಿನ ನಿಧನದ ಹಿನ್ನೆಲೆ ಜಿಲ್ಲಾ ಘಟಕದ ಮುಖಂಡರು ಗಳು ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಶ್ರದ್ದಾಂಜಲಿ ಅರ್ಪಿಸಿದರು.

ವಿಶೇಷವಾಗಿ ಸರ್ಕಾರಿ ಬಸ್ ನೌಕರರರಿಗೆ ಸಂಘದ ಕೊರತೆ ಎದುರಿಸಿದ್ಧ ಕಾಲಘಟ್ಟದಲ್ಲಿ ತಾವು ಸಂಘ ಟನೆ ನೇತೃತ್ವ ವಹಿಸಿಕೊಂಡು ಬಸ್ ನೌಕರರಿಗೆ ಸಮೃದ್ಧಿ ಜೀವನಕ್ಕೆ ದಾರಿಮಾಡಿಕೊಟ್ಟ ಮಹಾಚೇತನ. ಅವ ರ ಹೋರಾಟ, ಚಿಂತನೆಗಳು ದುಡಿಯುವ ಕೈಗಳಿಗೆ ಇನ್ನಷ್ಟು ಬಲತುಂಬಿಸುತ್ತಿತ್ತು ಎಂದು ಹೇಳಿದರು.

ಕಮ್ಯೂನಿಸ್ಟ್ ಪಕ್ಷದ ನಾಯಕರಾಗಿ ಸಮಾಜದ ವಿವಿಧ ಸ್ಥರಗಳಲ್ಲಿ ದುಡಿಯುವ ಪ್ಲಾಂಟೇಷನ್, ಕಾ ರ್ಖಾನೆ ಕಾರ್ಮಿಕ ವರ್ಗದವರಿಗೆ ಹೋರಾಟದ ಮುಖೇನಾ ಆಸರೆಯಾಗಿದ್ದರು. ಅವರ ಅಧ್ಯಯನಶೀಲ, ನಾಯಕತ್ವ ಗುಣವು ಮುಂದಿನ ಹೋರಾಟ ಹಾದಿಯಲ್ಲಿರುವ ಯುವಹೋರಾಟಗಾರರಿಗೆ ಆದರ್ಶಪ್ರಾಯ ಎಂದು ತಿಳಿಸಿದರು.

ಸಿಪಿಐ ರಾಜ್ಯ ಸಮಿತಿ ಸದಸ್ಯ ಡೊಂಗ್ರೆ ಮಾತನಾಡಿ ಕಮ್ಯೂನಿಸ್ಟ್ ಪಕ್ಷವು ಸೇರುವ ಮುನ್ನ ಎಲ್‌ಐಸಿ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ಧ ಸುಬ್ಬರಾವ್ ಅವರು ಬಡವರು, ಶೋಷಿತರ ಪರವಾಗಿ ಅಪಾರವಾ ದ ಕಾಳಜಿ ಹೊಂದಿದ್ದರು. ಹಣಕಾಸಿನ ಲೆಕ್ಕಚಾರದಲ್ಲೂ ಕಟ್ಟುನಿಟ್ಟು, ಪ್ರಾಮಾಣಿಕತೆ ಕಾಪಾಡುತ್ತಿದ್ದರು ಎಂ ದು ಹೇಳಿದರು.

ಅಂದಿನ ಕಾಲದಲ್ಲಿ ಸರ್ಕಾರಿ ಬಸ್ ನೌಕರರ ಸಮಸ್ಯೆ ಸ್ಪಂದಿಸದಿರುವಾಗ ತಮ್ಮ ಎಲ್‌ಐಸಿ ಹುದ್ದೆಗೆ ರಾ ಜೀನಾಮೆ ಸಲ್ಲಿಸಿ ಪೂರ್ಣಪ್ರಮಾಣ ನೌಕರರ ಬೇಡಿಕೆಗೆ ಸಂಘಟನಾತ್ಮಕವಾಗಿ ಹೋರಾಟ ರೂಪಿಸುವ ಮೂಲಕ ನ್ಯಾಯ ಒದಗಿಸಿದ್ದರು. ಪಕ್ಷಕ್ಕೆ ೧೦ ರೂ. ಹಣ ದೇಣಿಗೆ ನೀಡಿದರೂ, ಅದನ್ನು ರಶೀದಿ ನೀಡುವ ಪ್ರಾಮಾಣಿಕ ಗುಣವಿತ್ತು ಎಂದರು.

ಸಿಪಿಐ ಮುಖಂಡ ವಿಜಯ್‌ಕುಮಾರ್ ಮಾತನಾಡಿ ರಾಜ್ಯದಲ್ಲಿ ಯಾವುದೇ ಸರ್ಕಾರವಿದ್ದರೂ ಅನಂ ತ್ ಅವರ ಮಾತಿಗೆ ಕಿವಿಕೊಟ್ಟು ಕೇಳುವ ವಾತಾವರಣವಿತ್ತು. ಕೇವಲ ಒಂದು ಕರೆಯಲ್ಲೇ ಇಡೀ ರಾಜ್ಯಾದ್ಯಂ ತ ಸರ್ಕಾರಿ ಬಸ್ ಸಂಚಾರ ಬಂದ್‌ಗೊಳಿಸುವ ಸಾಮರ್ಥ್ಯ ಅವರ ಮಾತಿನಲ್ಲಿತ್ತು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಿಪಿಐ ಮುಖಂಡರಾದ ರಾಧಾಸುಂದ್ರೇಶ್, ಜಿಲ್ಲಾ ಸಹ ಕಾರ್ಯದರ್ಶಿ ಕುಮಾರ್, ತಾಲ್ಲೂಕು ಕಾರ್ಯದರ್ಶಿ ಕೆರೆಮಕ್ಕಿ ರಮೇಶ್, ನಗರ ಕಾರ್ಯದರ್ಶಿ ಜಿ.ರಮೇಶ್, ಮುಖಂಡ ಸಿ.ವಸಂತ್ ಕುಮಾರ್, ಜಿ.ಕೆ.ಕಾರ್ತೀಕ್, ಕಾಂಗ್ರೆಸ್ ಮುಖಂಡ ಭರತ್‌ಜೆಟ್ಟಿಯಾರ್ ಉಪಸ್ಥಿತರಿದ್ದರು.

Ananth Subbarao is the Nandadeepa of the working class.

Share

Leave a comment

Leave a Reply

Your email address will not be published. Required fields are marked *

Don't Miss

ರೈತರಿಗೆ ತೋಟಗಾರಿಕೆ ಬೆಳೆಗಳ ಬಗ್ಗೆ ಮಾಹಿತಿ ನೀಡುವುದೇ ಚೈತ್ರೋತ್ಸವದ ಉದ್ದೇಶ

ಚಿಕ್ಕಮಗಳೂರು: ಜಿಲ್ಲೆಯರೈತರು ಮತ್ತು ಬೆಳೆಗಾರರಿಗೆ ತೋಟಗಾರಿಕೆ ಬೆಳೆಗಳ ಬಗ್ಗೆ ಉಪಯುಕ್ತ ಮಾಹಿತಿ ನೀಡುವುದೇಚೈತ್ರೋತ್ಸವದಉದ್ದೇಶಎಂದುಜಿಲ್ಲಾಧಿಕಾರಿಎಂ.ಎನ್ ನಾಗರಾಜ್ ತಿಳಿಸಿದರು. ಅವರುಇಂದು ನಗರದ ನೇತಾಜಿ ಸುಭಾಷ್‌ಚಂದ್ರಬೋಸ್‌ಜಿಲ್ಲಾಆಟದ ಮೈದಾನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಪಶುಪಾಲನಾ ಮತ್ತು ಪಶು...

ಸಂಗೊಳ್ಳಿ ರಾಯಣ್ಣ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ

ಚಿಕ್ಕಮಗಳೂರು:  ಸಂಗೊಳ್ಳಿ ರಾಯಣ್ಣ ನಾಡು ಅಪ್ರತಿಮೆ ಸ್ವಾತಂತ್ರ್ಯ ಹೋರಾಟಗಾರ. ಬ್ರಿಟಿಷರ ಕಪಿಮುಷ್ಠಿಯಿಂದ ನಲುಗುತ್ತಿದ್ಧ ಭಾರತೀಯರಿಗೆ ನ್ಯಾಯ ಒದಗಿಸಲು ಪ್ರಾಣವನ್ನೆ ಅರ್ಪಿಸಿದ ಧೀ ಮಂತ ಮಹಾಪುರುಷ ಎಂದು ಶಾಸಕಿ ನಯನ ಮೋಟಮ್ಮ ಹೇಳಿದರು....

Related Articles

ಸಿಡಿಎ ಅಧ್ಯಕ್ಷರಾಗಿ ಎಚ್‌.ಪಿ. ಮಂಜೇಗೌಡ ನೇಮಕ

ಚಿಕ್ಕಮಗಳೂರು: ಚಿಕ್ಕಮಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ (ಸಿಡಿಎ) ಚಿಕ್ಕಮಗಳೂರು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಚ್‌.ಪಿ. ಮಂಜೇಗೌಡ ಅವರನ್ನು...

ಕಾಂಗ್ರೆಸ್ ನಲ್ಲಿ ಸಿ.ಡಿ.ಎ. ಫೈಟ್ – ಕಾಂಗ್ರೆಸ್ ನಲ್ಲಿ ಸಿ.ಡಿ.ಎ. ಫೈಟ್ – ರಾಮಚಂದ್ರ ಬಿಗಿ ಪಟ್ಟು

ಚಿಕ್ಕಮಗಳೂರು: ಹಿರೇಮಗಳೂರು ರಾಮಚಂದ್ರ ಸಿ.ಡಿ.ಎ.ಅಧ್ಯಕ್ಷ ಸ್ಥಾನ ಪಡೆಯಲು ಬಿಗಿ ಪಟ್ಟು ಹಿಡಿದು ಒತ್ತಾಯ ಮಾಡುತ್ತಿದ್ದಾರೆ. ಕಳೆದ...

ಪ್ರತ್ಯೇಕ ಅಪಘಾತ ಪ್ರಕರಣಗಳಲ್ಲಿ ಮೂವರು ಸಾವು

ಚಿಕ್ಕಮಗಳೂರು :ಜಿಲ್ಲೆಯಲ್ಲಿ ನಡೆದ ಮೂರು ಪ್ರತ್ಯೇಕ ಅಪಘಾತ ಪ್ರಕರಣಗಳಲ್ಲಿ ಮೂವರು ಸಾವಪ್ಪಿದ್ದಾರೆ. ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್...

ಸಾಮಾಜಿಕ ಪರಿವರ್ತನೆಗೆ ಮಾಚಿದೇವರ ಕೊಡುಗೆ ಅಪಾರ

ಚಿಕ್ಕಮಗಳೂರು: ಸಾಮಾಜಿಕ ಪರಿವರ್ತನೆ ಮತ್ತು ಸಾಹಿತ್ಯ ಪರಿವರ್ತನೆಗೆ ಮಡಿವಾಳ ಮಾಚಿದೇವರು ತಮ್ಮದೇ ಆದ ಕೊಡುಗೆ ನೀಡಿದ್ದಾರೆ...