Home namma chikmagalur chikamagalur ಅನಂತ್‌ಸುಬ್ಬರಾವ್ ಕಾರ್ಮಿಕರ ವರ್ಗದ ನಂದಾದೀಪ
chikamagalurHomeLatest Newsnamma chikmagalur

ಅನಂತ್‌ಸುಬ್ಬರಾವ್ ಕಾರ್ಮಿಕರ ವರ್ಗದ ನಂದಾದೀಪ

Share
Share

ಚಿಕ್ಕಮಗಳೂರು: – ಶೋಷಿತರು ಮತ್ತು ಕಾರ್ಮಿಕರ ಪರವಾಗಿ ಬೃಹತ್ ಚಳುವಳಿ ಹಮ್ಮಿ ಕೊಂಡು ನ್ಯಾಯಯುತ ಬೇಡಿಕೆ ಈಡೇರಿಸಲು ಹೋರಾಡಿದ ದಿ|| ಹೆಚ್.ವಿ.ಅನಂತ್ ಸುಬ್ಬರಾವ್ ಅವರು ಕಾರ್ಮಿಕರ ವರ್ಗದ ನಂದಾದೀಪ ಎಂದು ಸಿಪಿಐ ಜಿಲ್ಲಾ ಕಾರ್ಯದರ್ಶಿ ಜಿ.ರಘು ಹೇಳಿದರು.

ನಗರದ ಜಿಲ್ಲಾ ಸಿಪಿಐ ಕಚೇರಿಯಲ್ಲಿ ಗುರುವಾರ ಎಐಟಿಯುಸಿ ರಾಜ್ಯಾಧ್ಯಕ್ಷ ಹಾಗೂ ಸಿಪಿಐ ಹಿರಿಯ ಮುಖಂಡ ದಿ|| ಹೆಚ್.ವಿ.ಅನಂತ್‌ಸುಬ್ಬರಾವ್ ಅಕಾಲಿನ ನಿಧನದ ಹಿನ್ನೆಲೆ ಜಿಲ್ಲಾ ಘಟಕದ ಮುಖಂಡರು ಗಳು ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಶ್ರದ್ದಾಂಜಲಿ ಅರ್ಪಿಸಿದರು.

ವಿಶೇಷವಾಗಿ ಸರ್ಕಾರಿ ಬಸ್ ನೌಕರರರಿಗೆ ಸಂಘದ ಕೊರತೆ ಎದುರಿಸಿದ್ಧ ಕಾಲಘಟ್ಟದಲ್ಲಿ ತಾವು ಸಂಘ ಟನೆ ನೇತೃತ್ವ ವಹಿಸಿಕೊಂಡು ಬಸ್ ನೌಕರರಿಗೆ ಸಮೃದ್ಧಿ ಜೀವನಕ್ಕೆ ದಾರಿಮಾಡಿಕೊಟ್ಟ ಮಹಾಚೇತನ. ಅವ ರ ಹೋರಾಟ, ಚಿಂತನೆಗಳು ದುಡಿಯುವ ಕೈಗಳಿಗೆ ಇನ್ನಷ್ಟು ಬಲತುಂಬಿಸುತ್ತಿತ್ತು ಎಂದು ಹೇಳಿದರು.

ಕಮ್ಯೂನಿಸ್ಟ್ ಪಕ್ಷದ ನಾಯಕರಾಗಿ ಸಮಾಜದ ವಿವಿಧ ಸ್ಥರಗಳಲ್ಲಿ ದುಡಿಯುವ ಪ್ಲಾಂಟೇಷನ್, ಕಾ ರ್ಖಾನೆ ಕಾರ್ಮಿಕ ವರ್ಗದವರಿಗೆ ಹೋರಾಟದ ಮುಖೇನಾ ಆಸರೆಯಾಗಿದ್ದರು. ಅವರ ಅಧ್ಯಯನಶೀಲ, ನಾಯಕತ್ವ ಗುಣವು ಮುಂದಿನ ಹೋರಾಟ ಹಾದಿಯಲ್ಲಿರುವ ಯುವಹೋರಾಟಗಾರರಿಗೆ ಆದರ್ಶಪ್ರಾಯ ಎಂದು ತಿಳಿಸಿದರು.

ಸಿಪಿಐ ರಾಜ್ಯ ಸಮಿತಿ ಸದಸ್ಯ ಡೊಂಗ್ರೆ ಮಾತನಾಡಿ ಕಮ್ಯೂನಿಸ್ಟ್ ಪಕ್ಷವು ಸೇರುವ ಮುನ್ನ ಎಲ್‌ಐಸಿ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ಧ ಸುಬ್ಬರಾವ್ ಅವರು ಬಡವರು, ಶೋಷಿತರ ಪರವಾಗಿ ಅಪಾರವಾ ದ ಕಾಳಜಿ ಹೊಂದಿದ್ದರು. ಹಣಕಾಸಿನ ಲೆಕ್ಕಚಾರದಲ್ಲೂ ಕಟ್ಟುನಿಟ್ಟು, ಪ್ರಾಮಾಣಿಕತೆ ಕಾಪಾಡುತ್ತಿದ್ದರು ಎಂ ದು ಹೇಳಿದರು.

ಅಂದಿನ ಕಾಲದಲ್ಲಿ ಸರ್ಕಾರಿ ಬಸ್ ನೌಕರರ ಸಮಸ್ಯೆ ಸ್ಪಂದಿಸದಿರುವಾಗ ತಮ್ಮ ಎಲ್‌ಐಸಿ ಹುದ್ದೆಗೆ ರಾ ಜೀನಾಮೆ ಸಲ್ಲಿಸಿ ಪೂರ್ಣಪ್ರಮಾಣ ನೌಕರರ ಬೇಡಿಕೆಗೆ ಸಂಘಟನಾತ್ಮಕವಾಗಿ ಹೋರಾಟ ರೂಪಿಸುವ ಮೂಲಕ ನ್ಯಾಯ ಒದಗಿಸಿದ್ದರು. ಪಕ್ಷಕ್ಕೆ ೧೦ ರೂ. ಹಣ ದೇಣಿಗೆ ನೀಡಿದರೂ, ಅದನ್ನು ರಶೀದಿ ನೀಡುವ ಪ್ರಾಮಾಣಿಕ ಗುಣವಿತ್ತು ಎಂದರು.

ಸಿಪಿಐ ಮುಖಂಡ ವಿಜಯ್‌ಕುಮಾರ್ ಮಾತನಾಡಿ ರಾಜ್ಯದಲ್ಲಿ ಯಾವುದೇ ಸರ್ಕಾರವಿದ್ದರೂ ಅನಂ ತ್ ಅವರ ಮಾತಿಗೆ ಕಿವಿಕೊಟ್ಟು ಕೇಳುವ ವಾತಾವರಣವಿತ್ತು. ಕೇವಲ ಒಂದು ಕರೆಯಲ್ಲೇ ಇಡೀ ರಾಜ್ಯಾದ್ಯಂ ತ ಸರ್ಕಾರಿ ಬಸ್ ಸಂಚಾರ ಬಂದ್‌ಗೊಳಿಸುವ ಸಾಮರ್ಥ್ಯ ಅವರ ಮಾತಿನಲ್ಲಿತ್ತು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಿಪಿಐ ಮುಖಂಡರಾದ ರಾಧಾಸುಂದ್ರೇಶ್, ಜಿಲ್ಲಾ ಸಹ ಕಾರ್ಯದರ್ಶಿ ಕುಮಾರ್, ತಾಲ್ಲೂಕು ಕಾರ್ಯದರ್ಶಿ ಕೆರೆಮಕ್ಕಿ ರಮೇಶ್, ನಗರ ಕಾರ್ಯದರ್ಶಿ ಜಿ.ರಮೇಶ್, ಮುಖಂಡ ಸಿ.ವಸಂತ್ ಕುಮಾರ್, ಜಿ.ಕೆ.ಕಾರ್ತೀಕ್, ಕಾಂಗ್ರೆಸ್ ಮುಖಂಡ ಭರತ್‌ಜೆಟ್ಟಿಯಾರ್ ಉಪಸ್ಥಿತರಿದ್ದರು.

Ananth Subbarao is the Nandadeepa of the working class.

Share

Leave a comment

Leave a Reply

Your email address will not be published. Required fields are marked *

Don't Miss

ಅಮಾನವೀಯ ಜಾನುವಾರು ಸಾಗಾಟ – ಮೂವರ ಬಂಧನ

ಎನ್.ಆರ್. ಪುರ: ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಹಾಗೂ ಅಮಾನವೀಯ ಜಾನುವಾರು ಸಾಗಾಟ ಪ್ರಕರಣವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಈ ಸಂಬಂಧ ಮೂವರನ್ನು ಬಂಧಿಸಿ, ವಾಹನ ಮತ್ತು ಜಾನುವಾರುಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆ...

ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವ ಕೆಲಸ ಮಾಧ್ಯಮಗಳು ಮಾಡಬೇಕು

ಚಿಕ್ಕಮಗಳೂರು: ಬಡವರ ಕಷ್ಟಗಳನ್ನು, ಸಮಸ್ಯೆಗಳನ್ನು ಸಮಾಜದ ಮತ್ತು ಸರ್ಕಾರದ ಗಮನಕ್ಕೆ ತರುವ ಕೆಲಸವನ್ನು ಮಾಧ್ಯಮಗಳು ಮಾಡಬೇಕು ಎಂದು ಶಾಸಕ ಎಚ್.ಡಿ.ತಮ್ಮಯ್ಯ ಸಲಹೆ ಮಾಡಿದರು. ಹೊನ್ನ ಬಿತ್ತೇವು ಹೊಲಕೆಲ್ಲ ಮತ್ತು ನ್ಯೂಸ್ ಕಿಂಗ್...

Related Articles

ನೀರುಗಂಟಿ ಆತ್ಮಹತ್ಯೆ ಪ್ರಕರಣದಲ್ಲಿ ಎಫ್‌ಐಆರ್ ದಾಖಲು

ಚಿಕ್ಕಮಗಳೂರು: ಅಣೂರು ಗ್ರಾಮ ಪಂಚಾಯಿತಿಯಲ್ಲಿ ನೀರುಗಂಟಿಯಾಗಿ ಕೆಲಸ ಮಾಡುತ್ತಿದ್ದ ರಮೇಶ್ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ,...

ಹೇಮಾವತಿ ನದಿಯ ಅಕ್ರಮವಾಗಿ ಮರಳು ಸಾಗಣೆ ಪ್ರಕರಣ ಪತ್ತೆ

ಮೂಡಿಗೆರೆ: ಜೀವನದಿ ಹೇಮಾವತಿಯ ಒಡಲಿಗೆ ಕನ್ನ ಹಾಕಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಜಾಲದ ಮೇಲೆ ಗೋಣಿಬೀಡು...

ಕಾಫಿನಾಡಿನಲ್ಲಿ ರಂಜಾನ್ ಅಂಗವಾಗಿ ಸಾಮೂಹಿಕ ಪ್ರಾರ್ಥನೆ

ಚಿಕ್ಕಮಗಳೂರು : ಕಾಫಿನಾಡಿನಲ್ಲಿ ಪವಿತ್ರ ರಂಜಾನ್ ಹಬ್ಬದ ಸಂಭ್ರಮವು ಸಡಗರ ಹಾಗೂ ಸೌಹಾರ್ದತೆಯಿಂದ ಕಳೆಗಟ್ಟಿತ್ತು. ಕೆಂಪನಹಳ್ಳಿಯ...

ಕಾಫಿ ತೋಟದಲ್ಲಿ ಮರಗಸಿ – ಕಾರ್ಮಿಕನ ಸಾವು

ಚಿಕ್ಕಮಗಳೂರು : ಕಾಫಿ ತೋಟದ ಮಾಲೀಕರು ಮತ್ತು ಮೇಸ್ತ್ರಿಗಳ ನಿರ್ಲಕ್ಷ್ಯಕ್ಕೆ ಅಮಾಯಕ ಕಾರ್ಮಿಕನೊಬ್ಬ ಬಲಿಯಾದ ದಾರುಣ...