Home ಅಜ್ಜಿ-ಅಪ್ಪಾನೇ ದಂಧೆ ಕೋರರು-ವೇಶ್ಯೆ ವಾಟಿಕೆಯಲ್ಲಿ ನರಳಿದ ಅಪ್ರಾಪ್ತೆ
HomeKadurLatest Newsnamma chikmagalur

ಅಜ್ಜಿ-ಅಪ್ಪಾನೇ ದಂಧೆ ಕೋರರು-ವೇಶ್ಯೆ ವಾಟಿಕೆಯಲ್ಲಿ ನರಳಿದ ಅಪ್ರಾಪ್ತೆ

Share
Share

ಬೀರೂರು: ಮನುಷ್ಯತ್ವ ಮರೆತು ಹಣಕ್ಕಾಗಿ ಹದಿನಾರರ ಬಾಲಕಿಯನ್ನು ಅಜ್ಜಿ ನಾಗಮ್ಮ ಮತ್ತು ಅಪ್ಪ ಗಿರೀಶ್ ವೇಶ್ಯೆ ವಾಟಿಕೆಯ ಕಿಂಗ್ ಪಿನ್ ಗಳಾದ ಭರತ್ ಶೆಟ್ಟಿಯ ಜೊತೆಗೆ ಡೀಲಿಂಗ್ ನಡೆಸಿದ ಅಮಾನವೀಯ ಘಟನೆ ಅಜ್ಜಂಪುರ ತಾಲ್ಲೂಕಿನ ಬೀರೂರು ಪೊಲೀಸ್ ಠಾಣೆಯ ವ್ಯಾಪ್ತಿಯ ನಾಗವಂಗಲದಲ್ಲಿ ನಡೆದಿದೆ .

ಅಜ್ಜಿ ನಾಗಮ್ಮ(65) ಭರತ್ ಶೆಟ್ಟಿ ಗೆ(52) ಮೊದಲಿನಿಂದಲೂ ಗೆಳೆತನ ಇತ್ತು ಎನ್ನಲಾಗಿದೆ. ವೇಶ್ಯೆವಾಟಿಕೆಗೆ ಸಂಬಂಧಿಸಿದ ದೂರು ಕಡೂರು ಪೊಲೀಸ್ ಠಾಣೆಯಲ್ಲಿ ನಾಗಮ್ಮನ ಮೇಲೆ ದೂರು ದಾಖಾಲಾಗಿದೆ.ಇದೇ ರೀತಿಯಲ್ಲಿ ಭರತ್ ಶೆಟ್ಟಿ ಮೇಲೆ ಮೂಡಬಿದಿರೆ ಮತ್ತು ಕಾರ್ಕಳ ದಲ್ಲಿ ದೂರುಗಳು ದಾಖಲಾಗಿವೆ.

ಡಿಸೆಂಬರ್ 20 ರಂದು ಅಜ್ಜಿ ನಾಗಮ್ಮ ಬಾಲಕಿ ಅಪ್ಪ ಗಿರೀಶ್ ಸೇರಿ ಬಾಲಕಿಯನ್ನು ಪುಸಲಾಯಿಸಿ ಮೂಡಬಿದಿರೆಗೆ ಕರೆದುಕೊಂಡು ಹೋಗಿ ಶೇಖರ್ ಶೆಟ್ಟಿ ಎಂಬುವನ ಮನೆಯಲ್ಲಿ ಇರಿಸಿ ವೇಶ್ಯೆ ವಾಟಿಕೆ ನಡೆಸಿದ್ದಾರೆ.ಇಲ್ಲಗೆ ಹಲವಾರು ಗಿರಾಕಿಗಳು ಬಂದು ಹೋಗಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.

ಹಲವು ದಿನಗಳು ಕಾಣೆಯಾಗಿದ್ದ ಬಾಲಕಿ ಹಿಂತಿರುಗಿ ಊರಿಗೆ ಬಂದಾಗ ಅತ್ತೆ ಪವಿತ್ರ ವಿಚಾರಿಸಿದಾಗ ಅನುಮಾನ ಬರವಂತೆ ವರ್ತಿಸಿದ್ದಾಳೆ ಮತ್ತಷ್ಟು ಪ್ರಶ್ನೆ ಮಾಡಿದಾಗ ವಿಚಾರ ತಿಳಿದು ಬಂದಿದೆ ತಕ್ಷಣ ಬೀರೂರು ಪೊಲೀಸ್ ಠಾಣೆಗೆ ಕರೆದುಕೊಂಡು ಬಂದು ದೂರು ದಾಖಲಿಸಿದ್ದಾರೆ.ಪೋಕ್ಸೊ ಮತ್ತು ಅಟ್ರಾಸಿಟಿ ದೂರು ದಾಖಲಿಸಿ ಕಿಂಗ್ ಪಿನ್ ಭರತ್ ಶೆಟ್ಟಿ ,ನಾಗಮ್ಮ, ಗಿರೀಶ್, ಶೇಖರ್ ಶೆಟ್ಟಿ ಮತ್ತಿತರರನ್ನು ಬಂಧಿಸಿ ಜೈಲು ದಾರಿ ತೋರಿಸಿದ್ದಾರೆ.

ಎಸ್.ಪಿ.ದಯಾಮಾ ಮಾರ್ಗದರ್ಶನದಲ್ಲಿ ಅಡಿಶನಲ್ ಎಸ್.ಪಿ ಮತ್ತು ಡಿ.ವೈ.ಎಸ್.ಪಿ.ಪರುಶರಾಮಪ್ಪ ಮಾರ್ಗದರ್ಶನದಲ್ಲಿ ಠಾಣಾಧಿಕಾರಿ ತಿಪ್ಪೇಶ್ ಮತ್ತು ಸಿಬ್ಬಂದಿ ತಕ್ಷಣ ಕಾರ್ಯಪ್ರವೃತ್ತರಾಗಿ ಆರೋಪಿಗಳನ್ನು ಬಂಧಿಸಿದ್ದಾರೆ. ಅಜ್ಜಿ ನಾಗಮ್ಮನ ಚಟ,ತಂದೆ ಗಿರೀಶ್ ನಿಗೆ ಹಣದಾಸೆ ಭರತ್ ಶೆಟ್ಟಿ ಮತ್ತು ಶೇಖರ್ ಶೆಟ್ಟಿಗೆ ಹಣಗಳಿಸುವ ಆಸೆ ಅಪ್ರಾಪ್ತ ಬಾಲಕಿ ನರಳಿರುವ ಅಮಾನವೀಯ ಘಟನೆಗಳನ್ನು ನೋಡಿದಾಗ ಈ ಸಮಾಜ ಸರಿ ಹೋಗಲು ಸಾಧ್ಯವೇ ಎಂಬ ಪ್ರಶ್ನೆ ಸದಾಕಾಲವೂ ಕಾಡುತ್ತದೆ.

A minor who suffered from his father’s prostitution racket

Share

Leave a comment

Leave a Reply

Your email address will not be published. Required fields are marked *

Don't Miss

ಎತ್ತಿನ ಗಾಡಿ ತೆರಿಗೆ ಬಡಿದು ಒಬ್ಬರಿಗೆ ಗಂಭೀರ ಗಾಯ

ಚಿಕ್ಕಮಗಳೂರು : ಇತಿಹಾಸ ಪ್ರಸಿದ್ಧ ಅಂತರಘಟ್ಟೆ ಜಾತ್ರಾ ಮಹೋತ್ಸವದಲ್ಲಿ ಎತ್ತಿನ ಗಾಡಿ ತೆರಿಗೆ ಬಡಿದು ಒಬ್ಬರಿಗೆ ಗಂಭೀರ ಗಾಯವಾಗಿದೆ. ರೇಸಿಗೆ ಬಿದ್ದ ಎತ್ತಿನಗಾಡಿಗಳ ಪೈಪೋಟಿ ಮಧ್ಯೆ ಎತ್ತಿನ ಗಾಡಿ ತೇರಿಗೆ ಡಿಕ್ಕಿಯೊಡೆದಿದೆ....

ಕಡೂರು ಪುರಸಭೆಯ ಇಬ್ಬರು ದ್ವಿತೀಯ ದರ್ಜೆ ಸಹಾಯಕರ ಅಮಾನತು

ಚಿಕ್ಕಮಗಳೂರು: ಆಸ್ತಿ ಗುರುತಿನ ಸ್ವತ್ತಿನ ಚಕ್ಕುಬಂಧಿಯನ್ನು ಅಕ್ರಮವಾಗಿ ತಿದ್ದುಪಡಿ ಮಾಡಿರುವ ಹಿನ್ನೆಲೆಯಲ್ಲಿ ಕಡೂರು ಪುರಸಭೆಯ ಇಬ್ಬರು ದ್ವಿತೀಯ ದರ್ಜೆ ಸಹಾಯಕರನ್ನು ಜಿಲ್ಲಾಧಿಕಾರಿ ಎನ್.ಎಂ. ನಾಗರಾಜ್ ಸೇವೆಯಿಂದ ಅಮಾನತ್ತುಗೊಳಿಸಿ ಬುಧವಾರ ಆದೇಶಿಸಿದ್ದಾರೆ. ಪಟ್ಟಣದ...

Related Articles

ಜಿಲ್ಲೆಯಲ್ಲಿ ಮಲೆನಾಡು ಡ್ರೈವಿಂಗ್ ಸ್ಕೂಲ್ ಅಸೋಸಿಯೇಷನ್ ಸ್ಥಾಪನೆ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮಲೆನಾಡು ಡ್ರೈವಿಂಗ್ ಸ್ಕೂಲ್ ಅಸೋಸಿಯೇಶನ್ ಸ್ಥಾಪಿಸಿದ್ದು, ಮುಂದಿನ ದಿನಗಳಲ್ಲಿ ರಸ್ತೆ ಸುರಕ್ಷತೆ ಬಗ್ಗೆ...

ಮೂಡಿಗೆರೆ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅಭಿವೃದ್ಧಿ ಶೂನ್ಯ

ಚಿಕ್ಕಮಗಳೂರು: ಮೂಡಿಗೆರೆ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅಭಿವೃದ್ಧಿ ಶೂನ್ಯ ಸಾಧನೆ ಮಾಡಿರುವ ಶಾಸಕರು ಉಳಿದಿರುವ...

ಅಕ್ರಮವಾಗಿ ಜಾನುವಾರು ಸಾಗಿಸುತ್ತಿದ್ದ ವಾಹನ ವಶ

ಚಿಕ್ಕಮಗಳೂರು : ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ವಾಹನವೊಂದನ್ನು ಪೊಲೀಸರು ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ. ಕೆಎಂ ರಸ್ತೆಯ...

ಮನೆಯಿಂದ ಲಕ್ಷಾಂತರ ರೂಪಾಯಿ ಮೌಲ್ಯದ ನಗ-ನದದು ಕಳವು

ಚಿಕ್ಕಮಗಳೂರು : ತಾಲೂಕಿನ ಕಂಚೇನಹಳ್ಳಿಯಲ್ಲಿ ಹಾಡಹಗಲೇ ಕಳ್ಳತನ ನಡೆದಿದ್ದು ರೈತ ಉಮೇಶ್ ಎಂಬುವವರ ಮನೆಯಿಂದ ಲಕ್ಷಾಂತರ...