ಚಿಕ್ಕಮಗಳೂರು: ಸತ್ಯ ಹೇಳಲು ಎದೆಗಾರಿಕೆ ಬೇಕು ಸುಳ್ಳು ಹೇಳುವುದಕ್ಕೆ ಬುಕಿಟ್ ಇದ್ದರೆ ಸಾಕು.ಕಳೆದ ವಾರ ಲೈಫ್ ಲೈನ್ ಫೀಡ್ಸ್ ನ ಕಿಶೋರ್ ಕುಮಾರ್ ಹೆಗ್ಡೆ ಮನೆ,ಕಛೇರಿ ಮತ್ತು ಗೆಸ್ಟ್ ಹೌಸ್ ಸೇರಿದಂತೆ ಹಲವು ಕಡೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿ ಸತತ ಐದು ದಿನಗಳು ಜಾಲಾಡಿದ ಸುದ್ದಿ “ಗುಮ್ಮ” ನಂತೆ ಇರುವುದು ಏಕೆ ಈ ಬಗ್ಗೆ ನಿಗೂಢವಾಗಿರುವುದು ಏಕೆ ?ಎಂದು ಹಲವು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.
ಕಳೆದ ಇಪ್ಪತ್ತೈದು ವರ್ಷಗಳ ಹಿಂದೆ ಸಣ್ಣದಾದ ಉದ್ಯಮ ಪ್ರಾರಂಭಿಸಿ ಇಂದು ಬೃಹತ್ ಉದ್ಯಮವಾಗಿ ರೂಪಿಸಿ ಸಾವಿರಾರು ಜನರಿಗೆ ಉದ್ಯೋಗ ನೀಡಿದ್ದಾರೆ. ಕೋಟ್ಯಂತರ ವಹಿವಾಟು ನಡೆಸುವ ಹೆಗ್ಡೆ ಬೃಹತ್ ಫ್ಯಾಕ್ಟರಿ ಸೇರಿದಂತೆ ಜಮೀನು ಖರೀದಿಸಿದ್ದಾರೆ ನೂರಾರು ವಾಹನಗಳು ಬೆಲೆ ಬಾಳುವ ವಸ್ತುಗಳ ಮಾಲೀಕರಾಗಿದ್ದಾರೆ.ಅವರಾಯಿತು ಅವರ ಉದ್ಯಮವಾಯಿತು ಎಂಬಂತೆ ಇದ್ದವರು ಕಳೆದ ಎರಡು ವರ್ಷಗಳಿಂದ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದವರ ಮೇಲೆ ಏಕಾ,ಏಕಿ ರೈಡ್ ನಡೆದಿರುವ ಉದ್ದೇಶ ಗೊತ್ತಾಗುತ್ತಿಲ್ಲಾ ಎನ್ನುತ್ತಾರೆ.
ಪ್ರತಿಯೊಂದು ವ್ಯವಹಾರ ಲೆಕ್ಕಾಚಾರವಾಗಿ ಮಾಡುತ್ತಿದ್ದರು ಎಂದರೆ ಐದು ದಿನ ಹಗಲು ರಾತ್ರಿ ನಡೆಸಿರುವ ತನಿಖೆಯಾದರು ಏನು. ಆದಾಯ ತೆರಿಗೆ ಇಲಾಖೆಯವರು ಕಳೆದ ಕೆಲ ವರ್ಷಗಳಿಂದ ಇವರ ವ್ಯವಹಾರ ಮೇಲೆ ಹದ್ದಿನ ಕಣ್ಣು ಇಟ್ಟು ಮೊನ್ನೆ ಹೆಗ್ಡೆ ಸೇರಿದಂತೆ ಅವರ ನೌಕರ ವರ್ಗದವರಿಗೆ ನಲವತ್ತಕ್ಕೂ ಹೆಚ್ಚು ಅಧಿಕಾರಿಗಳು ತೀವ್ರ ತನಿಖೆ ನಡೆಸಿ ಇಂಚು,ಇಂಚು ಮಾಹಿತಿ ಸಂಗ್ರಹಿಸಿದ್ದಾರೆ ಜೊತೆಗೆ ದಾಖಲೆಗಳನ್ನು ತೆಗೆದುಕೊಂಡು ಹೋಗಿದ್ದಾರೆ ಎನ್ನಲಾಗುತ್ತಿದೆ.ತನಿಖೆಯ ಸಮಯದಲ್ಲಿ ಮಾನಸಿಕ ದೈಹಿಕ ಹಿಂಸೆ ಅನುಭವಿಸಿದವರು ಅಲ್ಲಿ ಇಲ್ಲಿ ಮಾತನಾಡುತ್ತಿದ್ದಾರೆ.
ಆದಾಯ ತೆರಿಗೆ ಇಲಾಖೆ ತನಿಖೆಯಿಂದ ವ್ಯವಹಾರದ ಮೇಲೆ ಪೆಟ್ಟು ಬೀಳುವುದರಲ್ಲಿ ಅನುಮಾನವಿಲ್ಲ ಎಂದು ಪರಿಣಿತರ ಅಭಿಪ್ರಾಯವಾಗಿದೆ.ಇಷ್ಟೆಲ್ಲಾ ನಡೆದರೂ ಪತ್ರಿಕೆಗಳಲ್ಲಿ ಸುದ್ದಿ ಆಗದಿರುವುದರ ಹಿಂದೆ ಆದಾಯ ಇಲಾಖೆಯವರ ಭಯವೋ ಅಥವಾ ಹೆಗ್ಡೆ ಮೇಲಿನ ಪ್ರೀತಿಯೋ ಎಂದು ಹಲವರು ಪ್ರಶ್ನೆ ಮಾಡುತ್ತಿದ್ದಾರೆ.
IT Raid – Lifeline Feeds in the Middle?
Leave a comment