Home namma chikmagalur chikamagalur 1 ಕೆ.ಜಿ ಚಿನ್ನ ಕೊಡುವ ಆಮಿಷ ಪ್ರಕರಣದಲ್ಲಿ ₹10 ಲಕ್ಷ ವಂಚನೆ
chikamagalurCrime NewsHomeLatest Newsnamma chikmagalur

1 ಕೆ.ಜಿ ಚಿನ್ನ ಕೊಡುವ ಆಮಿಷ ಪ್ರಕರಣದಲ್ಲಿ ₹10 ಲಕ್ಷ ವಂಚನೆ

Share
Share

ಕಡೂರು: 900 ವರ್ಷಗಳ ಹಳೆಯ ಒಂದು ಕೆ.ಜಿ.ಯಷ್ಟು ಚಿನ್ನ ಕೊಡುವುದಾಗಿ ನಂಬಿಸಿ ಕೇರಳದ ವ್ಯಕ್ತಿಯಿಂದ ₹10 ಲಕ್ಷ ಪಡೆದು ವಂಚಿಸಿರುವ ಪ್ರಕರಣ ಸಖರಾಯಪಟ್ಟಣ ಠಾಣೆಯಲ್ಲಿ ದಾಖಲಾಗಿದೆ.

ಕೇರಳ ಕಣ್ಣೂರು ಜಿಲ್ಲೆಯ ನೀರಕಡುವು ಪಟ್ಟಣದ ಸುಮಿತ್ ವಾಲಿಯಾ ವೀಟ್ಟಿಲ್ ಎಂಬುವರು ಕಡೂರಿನ ವಿಷ್ಣು ಎಂಬ ವ್ಯಕ್ತಿಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.

*9 ತಿಂಗಳ ಹಿಂದೆ ಪರಿಚಯವಾಗಿದ್ದ ವಿಷ್ಣು. ನಮ್ಮ ಜಮೀನಿನಲ್ಲಿ 1 ತಿಂಗಳು ಕೆಲಸ ಮಾಡಿದ್ದ. ಇತ್ತೀಚೆಗೆ ಕರೆ ಮಾಡಿ ಸರ್ಕಾರಿ ಜಮೀನು ಖರೀದಿ ಮಾಡಿದ್ದೇನೆ. ಜಮೀನಿನ ಕೆಲಸ ಮಾಡುವಾಗ ಮಣ್ಣಿನಲ್ಲಿ ಒಂದು ಕೆ.ಜಿ.ಯಷ್ಟು ಚಿನ್ನ ಸಿಕ್ಕಿದ್ದು, ಅದು 900 ವರ್ಷಗಳ ಹಿಂದಿನ ಕಾಲದ ಚಿನ್ನ. ಅದನ್ನು ನಾನು ಮಾರಾಟ ಮಾಡಲು ಸಾಧ್ಯವಿಲ್ಲ, ₹50 ಲಕ್ಷ ನೀಡಿ ನೀವೇ ಖರೀದಿ ಮಾಡಿ ಎಂದು ಹೇಳಿದ್ದ. ಅದನ್ನು ನಂಬಿ ಬಂದಿದ್ದೆವು’ ಎಂದು ದೂರಿನಲ್ಲಿ ತಿಳಿಸಿದ್ದಾರೆ.

‘ಸ್ನೇಹಿತ ಅಭಿಲಾಷ್ ಜತೆಗೆ ಬಂದಾಗ ಚಿನ್ನದ ಎರಡು ತುಂಡುಗಳನ್ನು ವಿಷ್ಣು ನೀಡಿದ್ದ. ಪರಿಶೀಲಿಸಿದಾಗ ಅದು ಅಸಲಿ ಚಿನ್ನವಾಗಿತ್ತು. ನಂತರ ವಾಪಸ್ ಕೇರಳಕ್ಕೆ ಹೋಗಿದ್ದೆವು. ಸ್ನೇಹಿತ ಬಿಜಿಲ್ ಹಾಗೂ ಫೈಜಲ್ ಜತೆ ಜೂನ್ 1ರಂದು ಕಡೂರಿಗೆ ಬಂದು ವಿಷ್ಣುಗೆ ಕರೆ ಮಾಡಿದಾಗ ಚಿಕ್ಕಮಗಳೂರು ರಸ್ತೆಗೆ ಬರಲು ಹೇಳಿದ. ಸಖರಾಯಪಟ್ಟಣದಿಂದ ಕೊಂಚ ಹಿಂದೆ ನಿಂತಿದ್ದಾಗ ಎರಡು ಬೈಕ್‌ನಲ್ಲಿ ವಿಷ್ಣು ಸೇರಿ ಆರು ಜನ ಬಂದರು.

ಮೊದಲು ₹10 ಲಕ್ಷ ನೀಡಿದರೆ ಚಿನ್ನ ಒಪ್ಪಿಸಲಾಗುವುದು, ಉಳಿದ ಮೊತ್ತವನ್ನು ಚಿನ್ನ ಅಸಲಿ ಎಂದು ಪರೀಕ್ಷಿಸಿದ ನಂತರ ಕೊಡಿ ಎಂದು ಹೇಳಿದರು. ಅದರಂತೆ ₹10 ಲಕ್ಷ ನೀಡಿದ ಕೂಡಲೇ ಅಲ್ಲಿಂದ ಬೈಕ್‌ನಲ್ಲಿ ಪರಾರಿಯಾದರು’ ಎಂದು ವಿವರಿಸಿದ್ದಾರೆ.

ಚಿನ್ನ ಕೊಡುವುದಾಗಿ ನಂಬಿಸಿ ಮೋಸ ಮಾಡಿದವರನ್ನು ಹಿಡಿದು ಹಣ ವಾಪಸ್ ಕೊಡಿಸುವಂತೆ ದೂರಿನಲ್ಲಿ ವಿನಂತಿಸಿದ್ದಾರೆ.

₹10 lakh fraud in 1 kg gold lure case

Share

Leave a comment

Leave a Reply

Your email address will not be published. Required fields are marked *

Don't Miss

ಬೈಕ್‌ಗೆ ಡಿಕ್ಕಿಯಾಗಿ ತೋಟಕ್ಕೆ ನುಗ್ಗಿದ ಕೆ.ಎಸ್.ಆರ್.ಟಿ.ಸಿ ಬಸ್

ಚಿಕ್ಕಮಗಳೂರು : ಜಿಲ್ಲೆ ಅಜ್ಜಂಪುರ ತಾಲೂಕಿನ ನಾರಾಯಣಪುರ ಗ್ರಾಮದಲ್ಲಿ ರಸ್ತೆ ದಾಟುತ್ತಿದ್ದ ನಾಗರಹಾವನ್ನು ಕಂಡು ಬೈಕ್ ಸವಾರ ಏಕಾಏಕಿ ವಾಹನ ನಿಲ್ಲಿಸಿದ ಪರಿಣಾಮ, ಹಿಂದಿನಿಂದ ಬರುತ್ತಿದ್ದ ಸರ್ಕಾರಿ ಬಸ್ ಬೈಕ್‌ಗೆ ಡಿಕ್ಕಿಯಾಗಿ...

ಬೈಕ್ ಅಪಘಾದಲ್ಲಿ ಖಾಸಗಿ ಕಂಪನಿ ಉದ್ಯೋಗಿ ಸಾವು

ತರೀಕೆರೆ :ರಸ್ತೆ ಗುಂಡಿ ತಪ್ಪಿಸಲು ಹೋಗಿ  ಬೈಕ್ ಸ್ಕಿಡ್ ಆದ ಪರಿಣಾಮ ಖಾಸಗಿ ಕಂಪನಿ ಉದ್ಯೋಗಿ ತೀವ್ರವಾಗಿ ಗಾಯಗೊಂಡು, ಚಿಕಿತ್ಸೆ ಫಲಿಸದೆ ಮೃತಪಟ್ಟಿರುವ ಘಟನೆ ಅಜ್ಜಂಪುರ-ತರೀಕೆರೆ ರಸ್ತೆಯ ಬೆಟ್ಟತಾವರೆಕೆರೆ ಸೇತುವೆ ಬಳಿ...

Related Articles

ಮನೆ ಬಾಗಿಲು ಮುರಿದು ಚಿನ್ನಾಭರಣ ಕಳವು

ಬೀರೂರು: ಮನೆಯ ಮಾಲೀಕರು ಊರಿಗೆ ತೆರಳಿದ್ದ ವೇಳೆ ಕಳ್ಳರು ಮನೆಯ ಬಾಗಿಲು ಮುರಿದು ಒಳನುಗ್ಗಿ ₹1.45...

ಪೌರಕಾರ್ಮಿಕರ ಆರೋಗ್ಯ ಭದ್ರತೆಗೆ ಸರ್ಕಾರ ಬದ್ಧ

ಚಿಕ್ಕಮಗಳೂರು:  ನಿಮ್ಮ ಆರೋಗ್ಯವನ್ನು ಪಣಕ್ಕಿಟ್ಟು ನಗರವನ್ನು ಸ್ವಚ್ಛವಾಗಿಡುವ ಪೌರಕಾರ್ಮಿಕರ ಕಷ್ಟ-ಸುಖಗಳನ್ನು ನಾನು ಹತ್ತಿರದಿಂದ ಬಲ್ಲೆ. ನಿಮ್ಮ...

ರಸಗೊಬ್ಬರ ಮಾರಾಟದಲ್ಲಿ ಭಾರಿ ಮೋಸ ಆರೋಪ

ಚಿಕ್ಕಮಗಳೂರು: ರಸಗೊಬ್ಬರ ಪೂರ್ವಕ್ಕೆಯಲ್ಲಿ ರೈತರಿಗೆ ನಿರಂತರವಾಗಿ ಮೋಸ ನಡೆಯುತ್ತಿದ್ದು, ಕರ್ನಾಟಕ ರಾಜ್ಯ ಒಂದರಲ್ಲೇ ಪ್ರತಿವರ್ಷ ರೈತರಿಂದ...

ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ಹುಲಿ ….?

ಚಿಕ್ಕಮಗಳೂರು: ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ಇತ್ತೀಚೆಗೆ ಹುಲಿಯೊಂದು ಉರುಳಿಗೆ ಬಿದ್ದ ಪ್ರಕರಣ ಬೆನ್ನಲ್ಲೇ ಇದೀಗ ಮತ್ತೆರಡು ಹುಲಿಗಳು...