ಚಿಕ್ಕಮಗಳೂರು: ಹಣ ಸಿಗಲಿಲ್ಲ ಎಂಬ ಕಾರಣಕ್ಕೆ ಮನನೊಂದ ಯುವಕನೋರ್ವ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಬನ್ನೂರು ಗ್ರಾಮದಲ್ಲಿ ನಡೆದಿದೆ. ಟಿಂಬರ್ ಸೇರಿದಂತೆ ಇನ್ನಿತರ ಕೆಲಸ ಮಾಡಿಕೊಂಡಿದ್ದ ಬನ್ನೂರಿನ ಪ್ರದೀಪ್ (27) ಮೃತಪಟ್ಟ ದುರ್ದೈವಿ.
ಪ್ರದೀಪ್ ಕಳೆದ ಕೆಲವು ದಿನಗಳಿಂದ ಹಣಕ್ಕಾಗಿ ಪೋಷಕರಲ್ಲಿ ಪಟ್ಟು ಹಿಡಿದಿದ್ದ ಎನ್ನಲಾಗಿದೆ. ಆದರೆ, ಪೋಷಕರು ಹಣ ನೀಡಲು ನಿರಾಕರಿಸಿ, ಸ್ವಂತವಾಗಿ ದುಡಿದು ಸಂಪಾದಿಸುವಂತೆ ಬುದ್ದಿವಾದ ಹೇಳಿದ್ದರು.
ಇದರಿಂದ ಸಮಾಧಾನಗೊಳ್ಳದ ಪ್ರದೀಪ್, ಸಂಘದಿಂದ ತನಗೆ ಸಾಲ ಕೊಡಿಸುವಂತೆ ಮಗದೊಮ್ಮೆ ಪೋಷಕರಲ್ಲಿ ಒತ್ತಾಯಿಸಿದ್ದಾನೆ. ಪೋಷಕರು ಇದಕ್ಕೂ ಒಪ್ಪದಿದ್ದಾಗ ತೀವ್ರ ಬೇಸರಗೊಂಡು ಭಾನುವಾರ ಸಂಜೆ ಮನೆಯವರೊಂದಿಗೆ ಜಗಳವಾಡಿ ಆಕ್ರೋಶದಿಂದ ಹೊರನಡೆದಿದ್ದಾನೆ.
ಮನೆಯಿಂದ ಹೋದವನು ವಾಪಸ್ ಬಾರದಿದ್ದಾಗ ಆತಂಕಗೊಂಡ ಪೋಷಕರು ಆತನ ಹುಡುಕಾಟ ನಡೆಸಿದ್ದಾರೆ. ಈ ವೇಳೆ ಪೋಷಕರು ಕೆಲಸ ಮಾಡುವ ಕಾಫಿ ತೋಟದ ಕೆರೆಯ ಬಳಿ ಪ್ರದೀಪ್ ಮೃತದೇಹ ಪತ್ತೆಯಾಗಿದೆ.
ಹಣ ಸಿಗದ ಬೇಸರದಲ್ಲಿ ಆತ ಕೆರೆಗೆ ಹಾರಿ ಪ್ರಾಣ ಕಳೆದುಕೊಂಡಿರುವುದು ಪ್ರಾಥಮಿಕವಾಗಿ ಬೆಳಕಿಗೆ ಬಂದಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಆಲ್ಲೂರು ಠಾಣೆಯ ಪೊಲೀಸರು, ಸ್ಥಳೀಯ ಈಜುಗಾರರ ಸಹಾಯದಿಂದ ಮೃತದೇಹವನ್ನು ಮೇಲಕ್ಕೆತ್ತಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
Young man commits suicide by jumping into lake after not getting money
Leave a comment