ಚಿಕ್ಕಮಗಳೂರು: ಆರೋಗ್ಯಪೂರ್ಣ ಶರೀರ ಸಂಪಾದಿಸಲು ನಡಿಗೆ ಅತ್ಯವಶ್ಯಕ. ಈ ಹಾ ದಿಯಲ್ಲಿ ಪ್ರತಿಯೊಬ್ಬರು ಹೆಚ್ಚು ತೊಡಗಿಸಿಕೊಂಡು ದೇಹ ದಂಡಿಸುವ ಜೊತೆಗೆ ನಡಿಗೆಯ ಹವ್ಯಾಸ ಬೆಳೆಸಿ ಕೊಂಡಲ್ಲಿ ಬಹುಕಾಲ ಜೀವಿಸಬಹುದು ಎಂದು ಹೆಡ್ಕಾನ್ಸ್ಟೇಬಲ್ ಗಿರೀಶ್ ಹೇಳಿದರು.
ನಗರದ ಸುಭಾಶ್ಚಂದ್ರ ಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಶನಿವಾರ ಮುಂಜಾನೆ ವಂದೇ ಮಾತರಂ ಟ್ರಸ್ಟ್ ವತಿಯಿಂದ ತ್ರಿಲೋಕ ಸಂಚಾರಿ ನಾರದ ಮುನಿಗಳ ಜಯಂತಿ ಪ್ರಯುಕ್ತ ಆಯೋಜಿಸಿದ್ದ ೬೦ ವರ್ಷ ಮೇಲ್ಪಟ್ಟವರಿಗೆ ನಡಿಗೆ ಸ್ಪರ್ಧೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಮಾನವ ಜೀವನದಲ್ಲಿ ನಡಿದಷ್ಟು ದೀರ್ಘಾಯುಷ್ಯಿಯಾಗಿ ಜೀವಿಸಬಲ್ಲನು. ಆ ಹಿನ್ನೆಲೆ ಸರ್.ಎಂ.ವಿಶ್ವೇ ಶ್ವರಯ್ಯ ನಡಿಗೆಯಿಂದಲೇ ಹೆಚ್ಚು ಕಾಲ ಜೀವಿಸಿ ಸಾಧನೆ ಮಾಡಿದ್ದಾರೆ. ಆ ಮಹಾಸಾಧಕರು ಪ್ರತಿದಿನ ೪ ಗಂಟೆಗೆ ಎಚ್ಚರಗೊಂಡು ನಡಿಗೆ ಆರಂಭಿಸುತ್ತಿದ್ದು. ನಾವುಗಳು ಈ ಆದರ್ಶಗಳನ್ನು ಮೈಗೂಡಿಸಿಕೊಂಡು ಮುನ್ನೆಡೆದರೆ ಆರೋಗ್ಯಭರಿತ ಜೀವನ ಪಡೆದುಕೊಳ್ಳಬಹುದು ಎಂದರು.
ಪ್ರಸ್ತುತ ಗ್ರಾಮೀಣ ಭಾಗದಲ್ಲಿ ರೈತರು ತೋಟ ಅಥವಾ ಜಮೀನುಗಳಿಗೆ ತೆರಳಲು ಕಾಲ್ನಡಿಗೆಯಲ್ಲಿ ತೆರ ಳುತ್ತಾರೆ. ಹಾಗಾಗಿಯೇ ಹಳ್ಳಿಜನರ ಆರೋಗ್ಯ ಸದೃಢವಾಗಿದೆ. ಆದರೆ ಇತ್ತೀಚಿನ ಆಧುನಿಕ ಕಾಲದಲ್ಲಿ ಅನಾ ರೋಗ್ಯದ ಹಿನ್ನೆಲೆ ನಡಿಗೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಮಕ್ಕಳಿಗೆ ಪಾಲಕರು ಬಾಲ್ಯದಿಂದಲೇ ಈ ರೀತಿ ಆರೋಗ್ಯ ಚಟುವಟಿಕೆಗೆ ಪ್ರೋತ್ಸಾಹಿಸಬೇಕು ಎಂದರು.
ಹಿರಿಯರು, ಯುವಜನತೆ ಹಾಗೂ ಮಕ್ಕಳಿಗೆ ಸ್ಪೂರ್ತಿ ನೀಡುವಂಥ ಕಾರ್ಯಕ್ರಮ ವಂದೇ ಮಾತರಂ ಟ್ರಸ್ಟ್ ಅನೇಕ ವರ್ಷಗಳಿಂದ ನಡೆಸಿಕೊಂಡು ಬರುತ್ತಿದೆ. ಅಲ್ಲದೇ ನಾರದ ಜಯಂತಿ ಪ್ರಯುಕ್ತ ಹಿರಿಯ ನಾಗರೀಕರಿಗೆ ನಡಿಗೆ ಸ್ಪರ್ಧೆ ನಡೆಸಿರುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದು ತಿಳಿಸಿದರು.
ವಂದೇ ಮಾತರಂ ಟ್ರಸ್ಟ್ ಅಧ್ಯಕ್ಷ ಪ್ರೀತೇಶ್ ಮಾತನಾಡಿ ತ್ರಿಲೋಕ ಸಂಚಾರಿ ನಾದರ ಮುನಿಗಳು ಲೋ ಕ ಕಲ್ಯಾಣಗಾಗಿ ನಾಮಸ್ಮರಣೆ ಹಾಗೂ ನಡಿಗೆಯಿಂದ ಹಲವು ಲೋಕಗಳಲ್ಲಿ ಸಂಚರಿಸುತ್ತಿದ್ದರು. ಈ ಉದ್ದೇ ಶದಿಂದ ಸಾರ್ವಜನಿಕರು ನಾರದ ಮಹಾತ್ಮೆ ಮೂಡಿಸಲು ನಡಿಗೆ ಸ್ಫರ್ಧೆ ಆಯೋಜಿಸಿ ಸರ್ವರಿಗೂ ಉಚಿ ತವಾಗಿ ಅವಕಾಶ ಕಲ್ಪಿಸಿಕೊಡಲಾಗಿದೆ ಎಂದರು.
ಸ್ಪರ್ಧೆ ವಿಜೇತರು : ಪುರುಷರ ವಿಭಾಗ :- ಸಿ.ನಿಂಗಪ್ಪ ಪ್ರಥಮ, ಶಾಂತಕುಮಾರ್ ದ್ವೀತಿಯ, ಸಿ.ಆರ್. ಸುಧಾಕರ್ ತೃತೀಯ. ಮಹಿಳಾ ವಿಭಾಗ :- ಟಿ.ಮಂಜುಳಾ ಪ್ರಥಮ, ಎಸ್.ತಾರಾ ದ್ವೀತಿಯ, ಹೆಚ್.ಎಂ. ಪುಷ್ಪಲತಾ ತೃತೀಯ ಪಡೆದಿದ್ದು ಪ್ರಮಾಣ ಪತ್ರ ಹಾಗೂ ನಗದು ಪುರಸ್ಕಾರ ನೀಡಲಾಯಿತು.
ಈ ಸಂದರ್ಭದಲ್ಲಿ ಹಿರಿಯ ಕ್ರೀಡಾಪಟು ಶಂಕರ್, ಸ್ಥಳಿಯರಾದ ಶ್ರೀಧರ್, ಮಂಜುನಾಥ್, ವಂ ದೇ ಮಾತರಂ ಟ್ರಸ್ಟ್ ಪದಾಧಿಕಾರಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
Walking is essential for a healthy body.
Leave a comment