ಚಿಕ್ಕಮಗಳೂರು: ಕಾರ್ಮಿಕರ ಹಕ್ಕುಗಳು, ಹೋರಾಟಗಳು ಮತ್ತು ಸಮಾಜಕ್ಕೆ ಅವರು ನೀಡಿದ ಕೊಡುಗೆಯನ್ನು ಸ್ಮರಿಸುವ ದಿನವಾಗಿ ಮೇ ೧ ರಂದು ಅಂತರಾಷ್ಟ್ರೀಯ ಕಾರ್ಮಿಕರ ದಿನಾಚಾರಣೆಯಾಗಿ ಆಚರಣೆ ಮಾಡಲಾಗುತ್ತಿದೆ ಎಂದು ಐಎನ್ಟಿಯುಸಿ ರಾಜ್ಯಾಧ್ಯಕ್ಷ ಲಕ್ಷ್ಮೀ ವೆಂಕಟೇಶ್ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಐಎನ್ಟಿಯುಸಿ ಕಾರ್ಮಿಕರಿಂದ ಚುನಾಯಿಸಲ್ಪಟ್ಟ ಸಂಘಟನೆಯಾಗಿದ್ದು. ೧೮೮೬ ರಲ್ಲಿ ಅಮೆರಿಕಾದ ಚಿಕಾಗೋದಲ್ಲಿ ನೆಡೆದ ಹೇಮಾರ್ಕೆಟ್ ಹೊರಾಟದಲ್ಲಿ ದಿನಕ್ಕೆ ೮ ಗಂಟೆ ಕೆಲಸದ ಬೇಡಿಕೆಗಾಗಿ ನೆಡೆದ ಹೋರಾಟ ದಿನವಾದ ಮೇ ೧ ರಂದು ಅದರ ನೆನಪಿಗಾಗಿ ಕಾರ್ಮಿಕರ ದಿನಾಚಾರಣೆಯನ್ನಾಗಿ ಆಚರಿಸಲಾಗುತ್ತಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ಕಾರ್ಮಿಕರ ಹೋರಾಟಕ್ಕೆ ಬೆಂಬಲ ಇಲ್ಲದಂತಾಗಿದೆ, ಈ ಹಿಂದೆ ಇದ್ದ ೨೧ ಕಾನೂನುಗಳಿಂದ ೪ಕ್ಕೆ ಇಳಿಕೆ ಮಾಡುವ ಮೂಲಕ ನರೇಂದ್ರ ಮೋದಿ ಅವರ ಸರ್ಕಾರ ಕಾರ್ಮಿಕರ ಹಕ್ಕುಗಳನ್ನು ಕಿತ್ತುಕೊಳ್ಳುವ ಕೆಲಸ ಮಾಡುತ್ತಿದೆ ಎಂದರು.
೧೦-೧೫ ಸಾವಿರ ಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದ ಹೆಚ್ಎಂಟಿ, ಐಟಿ ಯಂತಹ ಅನೇಕ ದೊಡ್ಡ-ದೊಡ್ಡ ಕಾರ್ಖಾನೆಗಳನ್ನು ಖಾಸಗಿಕರಣ ಮಾಡಿ ಇಂದು ೧೫೦-೨೦೦ ಜನ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ, ಇಂದು ರಾಜಕಾರಣಿಗಳು ಉದ್ಯಮಿಗಳ ಕೈಗೊಂಬೆಯಾಗಿದ್ದಾರೆ ಎಂದು ಆರೋಪಿಸಿದರು.
ಕಾರ್ಮಿಕ ಸಂಘಟನೆಗಳು ಕುಸಿಯತೊಡಗಿದೆ ಯಾವುದೇ ಸೌಲಭ್ಯಗಳು ದೊರೆಯುತ್ತಿಲ್ಲ, ಇದರಿಂದಾಗಿ ಕಾರ್ಮಿಕರು ಪರದಾಡುವ ಸ್ಥಿತಿ ತಲುಪುವಂತಾಗಿದೆ ಅವರು ತಮ್ಮ ಹಕ್ಕುಗಳಿಗಾಗಿ ಈ ಹಿಂದೆ ಚಿಕಾಗೋದಲ್ಲಿ ನೆಡೆದ ಹೋರಾಟದಂತೆ ಹೋರಾಟ ಮಾಡುವ ಸ್ಥಿತಿ ಎದುರಾಗಿದೆ ಎಂದರು.
ಗ್ಯಾರಂಟಿ ಯೋಜನೆ ಜಿಲ್ಲಾಧ್ಯಕ್ಷ ಶಿವಾನಂದಸ್ವಾಮಿ ಮಾತನಾಡಿ ಹಲವು ವರ್ಷಗಳ ಹಿಂದೆ ಕಾರ್ಮಿಕರು ತಮ್ಮ ಹಕ್ಕಿಗಾಗಿ ಒಂದಲ್ಲ ಒಂದು ರೀತಿಯ ಹಲವಾರು ಹೋರಾಟಗಳನ್ನು ಮಾಡಬೇಕಾಗಿತ್ತು ಆದರೆ ಇಂದು ಕಾರ್ಮಿಕರ ಸ್ಥಿತಿಯಲ್ಲಿ ಬದಲಾವಣೆ ಕಂಡಿದೆ ಎಂದರು.
ದೇಶದಲ್ಲಿ ಅತಿ ಹೆಚ್ಚುಕಾಲ ಆಡಳಿತದಲ್ಲಿದ್ದ ಕಾಂಗ್ರೆಸ್ ಪಕ್ಷ ಸೇರಿದಂತೆ ಹಲವು ಪಕ್ಷಗಳು ಕಾರ್ಮಿಕರ ಪರವಾದ ಕಾನೂನು ಜಾರಿಗೊಳಿಸಿ ಅವರು ನೆಮ್ಮದಿಯಾಗಿ ಬದುಕನ್ನು ಸಾಗಿಸಲು ಅನುಕೂಲ ಮಾಡಿದೆ ಎಂದರು.
ನಮ್ಮ ಭಾರತ ದೇಶದಲ್ಲಿ ಕಾರ್ಮಿಕರು, ಮಾಲೀಕರು ಮತ್ತು ಕೈಗಾರಿಕೆಗಳ ಪರವಾದ ೨೧ ಕಾನೂನುಗಳಿದ್ದವು, ಕಾಂಗ್ರೆಸ್ ಸರ್ಕಾರ ೪ ಸಂಪುಟಗಳ ಬದಲಾವಣೆ ಮಾಡುವ ಮೂಲಕ ಸಾಫ್ಟ್ವೇರ್ ಕೆಲಸ ಪ್ರಾರಂಭಿಸಿ ಇಂದು ಹಲವು ಜನರ ಕೆಲಸವನ್ನು ಕಸಿದುಕೊಳ್ಳುವಂತಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕಾರ್ಮಿಕ ಮುಖಂಡ ಎ.ಪಿ ಸೆಲ್ವಂ, ಕೆ.ರಾಮಚಂದ್ರ ಒಡೆಯರ್ ಉಪಸ್ಥಿತರಿದ್ದರು
There seems to be no support for the workers’ struggle in recent times.
Leave a comment