ಅಜ್ಜಂಪುರ: ಅಜ್ಜಂಪುರ ಎಂದರೆ ಜಾನಪದ ಕಲೆಗಳ ತವರೂರು, ನಾಟಕ ಪ್ರತಿಭೆ, ಸಾಹಿತ್ಯ, ಸಂಸ್ಕೃತಿಗಳ ನೆಲೆವೀಡು ಅಂದು ಜಾನಪದ ಇಂದು ತಾಂತ್ರಿಕ ಕೌಶಲ್ಯ ಗಳ ದಾಖಲೆ.
ಅಜ್ಜಂಪುರ ಕನ್ನಡ ನೂತನ ಶಾಲೆಯ ವಿದ್ಯಾರ್ಥಿ”ತನ್ವಿತಾ”ಪ್ರತಿಷ್ಠಿತ ಐ,ಐ,ಟಿ.ಗೆ (Indian institute Techanalogy) ಆಯ್ಕೆ ಆಗುವ ಮೂಲಕ ಗ್ರಾಮೀಣ ಪ್ರತಿಭೆ ಕೂಡ ಸಾಧನೆ ಮಾಡಬಹುದು ಎಂಬುದನ್ನು ನಿರೂಪಿಸಿದ್ದಾಳೆ.ಈಗಾಗಲೇ ಐ.ಐ.ಟಿಗೆ ಸೇರ್ಪಡೆಯಾಗಿದ್ದು ಇದರಿಂದ ಇನ್ನಷ್ಟು ಮತ್ತಷ್ಟು ಸಾಧನೆ ಮಾಡುವವರಿಗೆ ದಾರಿ ದೀಪವಾಗಿರುವುದು ಶಾಲೆ ಮತ್ತು ಅಜ್ಜಂಪುರಕ್ಕೆ ಕೀರ್ತಿ ತಂದಿರುವ ಪ್ರತಿಭೆ.
ಮಾಜಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ಎಸ್,ತಿಪ್ಪೇರುದ್ರಪ್ಪನವರ ತಮ್ಮ ನಾಗರಾಜ್ ಮೊಮ್ಮಗಳಾದ ತನ್ವಿತಾ ಓದಿನಲ್ಲಿ ಅತೀವ ಆಸಕ್ತಿ ಫಲ ನೇರ ಆಯ್ಕೆಗೆ ಸಹಕಾರಿಯಾಗಿದೆ.
ಅಜ್ಜಂಪುರ ಸೇರಿದಂತೆ ಗ್ರಾಮೀಣ ಮಕ್ಕಳಿಗೆ ವಿದ್ಯೆ ನೀಡುವ ಕನಸು ಕಂಡ ಸೋಮಶೇಖರ್ ರವರ ನೂತನ ಶಾಲೆ ವಿದ್ಯಾರ್ಥಿ ತನ್ವಿತಾ ಐ.ಐ.ಟಿ ಆಯ್ಕೆಯಾಗಲು ನಿತ್ಯವೂ ಓದುವ ಹವ್ಯಾಸ ಮತ್ತು ಶ್ರಮ ಇಂದು ಏರೋನಾಟಿಕ್ಸ್ ಸ್ವೀಸ್ ಮತ್ತು ತಾಂತ್ರಿಕ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಲು ಅವಕಾಶ ದೊರೆತಿದೆ.
ಶಾಲೆಗೆ ,ಪೋಷಕರಿಗೆ ಕೀರ್ತಿ ತಂದಿರುವ ತನ್ವಿತಾ ಇನ್ನಷ್ಟು ಮತ್ತಷ್ಟು ಸಾಧನೆ ಮಾಡಲಿ ಎಂದು “ನ್ಯೂಸ್ ಕಿಂಗ್” ಶುಭ ಹಾರೈಸುತ್ತದೆ.
“Tanvita” an IIT talent who blossomed in a rural area
Leave a comment