Home namma chikmagalur chikamagalur ಅಡಿಕೆ ಕಳವು ಪ್ರಕರಣದ ಆರೋಪಿಗಳ ಬಂಧನ
chikamagalurCrime NewsHomeLatest Newsnamma chikmagalur

ಅಡಿಕೆ ಕಳವು ಪ್ರಕರಣದ ಆರೋಪಿಗಳ ಬಂಧನ

Share
Share

ಬಾಳೆಹೊನ್ನೂರು: ಇಲ್ಲಿಗೆ ಸಮೀಪದ ಜಕ್ಕಣಕ್ಕಿಯ ರೈತರ ಗೋದಾಮಿನಲ್ಲಿಟ್ಟಿದ್ದ ಅಡಿಕೆಯನ್ನು ಕಳವು ಮಾಡಿದ ಆರೋಪದಲ್ಲಿ ಪೊಲೀಸರು ಇಬ್ಬರನ್ನು ಬಂಧಿಸಿ ಅಡಿಕೆ ಹಾಗೂ ಕೃತ್ಯಕ್ಕೆ ಬಳಸಿದ್ದ ವಾಹನವನ್ನು ವಶಪಡಿಸಿಕೊಂಡಿದ್ದಾರೆ.

ಹಾದಿ ಓಣಿ ಗ್ರಾಮದ ಅಮ್ಮಿ ನಿವಾಸಿ ಕೃಷ್ಣಮೂರ್ತಿ ಅವರು ಜಕ್ಕಣಕ್ಕಿಯಲ್ಲಿರುವ ತೋಟದ ಗೋದಾಮಿನಲ್ಲಿ ಶೇಖರಿಸಿ ಇಟ್ಟಿದ ಅಡಿಕೆ ಮೂಟೆಗಳಲ್ಲಿ 70 ಕೆ.ಜಿ.ಯ 7 ಮೂಟೆಗಳು ಕಳವಾಗಿವೆ ಎಂದು ಠಾಣೆಗೆ ದೂರು ನೀಡಿದ್ದರು.

ತನಿಖೆ ಕೈಗೊಂಡ ಠಾಣಾಧಿಕಾರಿ ಅಂಬರೀಷ್ ನೇತೃತ್ವದ ತಂಡ ಆರೋಪಿಗಳಾದ ಮೂಡಿಗೆರೆ ಸಮೀಪದ ದಾರದಹಳ್ಳಿಯಲ್ಲಿ ಚಾಲಕ ವೃತ್ತಿ ನಡೆಸುವ ಮಂಜು ಅಲಿಯಾಸ್ ಸನ್ನು, ಬಿಳಗುಳ ಗ್ರಾಮದ ಇಂದಿರಾನಗರದ ಸಂತೋಷ್ ಎಂಬುವರನ್ನು ಬಂಧಿಸಿ ಸುಮಾರು ₹2.7 ಲಕ್ಷ ಮೌಲ್ಯದ 10 ಚೀಲ ಅಡಿಕೆ, ಕೃತ್ಯಕ್ಕೆ ಬಳಸಿದ್ದ ಸುಮಾರು ₹ 3 ಲಕ್ಷ ಮೌಲ್ಯದ ಮಾರುತಿ ಅಮ್ಮಿ ಹಾಗೂ ಗೂಡ್ಸ್ ವಾಹನವನ್ನು ವಶಪಡಿಸಿಕೊಂಡಿದ್ದಾರೆ.

ಸಿಪಿಐ ಗುರುದತ್ ಕಾಮತ್, ಸಿಬ್ಬಂದಿ ಶಂಕರ್, ಮನು, ಶಂಕರಪ್ಪ, ಆನಂದ್ ಬಿರಾದಾರ್, ಚನ್ನಯ್ಯ, ಕಿರಣ್ ಕುಮಾರ್, ಭೀಮಸೇಸ್ ಕೆ.ರಘು, ಗಿರೀಶ್ ಕುಮಾರ್, ತಾಂತ್ರಿಕ ವಿಭಾಗದ ನಯಾಜ್ ಭಾಗವಹಿಸಿದ್ದರು.

Suspects in areca nut theft case arrested

Share

Leave a comment

Leave a Reply

Your email address will not be published. Required fields are marked *

Don't Miss

ಕೇಂದ್ರ ಶಿಕ್ಷಣ ಸಚಿವರ ವಜಾಕ್ಕೆ ಆಗ್ರಹಿಸಿ ಸಿಪಿಐ(ಎಂ.ಎಲ್)ರೆಡ್‌ಸ್ಟಾರ್ ಪ್ರತಿಭಟನೆ

ಚಿಕ್ಕಮಗಳೂರು: ದೆಹಲಿಯ ಜಂತರ್ ಮಂತರ್‌ನಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ನಡೆದ ಪ್ರಹಾರವನ್ನು ಖಂಡಿಸಿರುವ ಸಿಪಿಐ(ಎಂ.ಎಲ್)ರೆಡ್‌ಸ್ಟಾರ್ ಪಕ್ಷವು, ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಾಗಿದ್ದು, ಕೇಂದ್ರದ ಶಿಕ್ಷಣ ಸಚಿವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕೆಂದು ಒತ್ತಾಯಿಸಿ...

ಕಾಫಿ ತೋಟದ ಮಾಲೀಕ ಹಾರಿಸಿದ ಗುಂಡೇಟಿನಿಂದ ಬಾಲಕನಿಗೆ ಗಾಯ

ಮೂಡಿಗೆರೆ: ಕೂಲಿ ಹಣದ ವಿಚಾರವಾಗಿ ಕಾಫಿ ತೋಟದ ಮಾಲೀಕ ಹಾಗೂ ಕಾರ್ಮಿಕರ ನಡುವೆ ಮಾತಿನ ಚಕಮಕಿ ನಡೆದಾಗ, ತೋಟದ ಮಾಲೀಕ ಹಾರಿಸಿದ ಗುಂಡು 4 ವರ್ಷದ ಬಾಲಕನ ತಲೆಗೆ ತಾಗಿದ ಘಟನೆ...

Related Articles

ತಾಕತ್ತಿದ್ದರೆ ಸಿ.ಟಿ. ರವಿಯನ್ನು ತಡೆಯಿರಿ

  ಚಿಕ್ಕಮಗಳೂರು, ಜು.30: ಮಾಜಿ ಸಚಿವರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಡಾ. ಸಿ.ಟಿ. ರವಿ...

ಜಲಯೋಗ ಸಾಧನೆಯಲ್ಲಿ ವಕೀಲ ವಿ.ಕೆ.ರಘು ವಿಶ್ವ ದಾಖಲೆ

ಚಿಕ್ಕಮಗಳೂರು: ನಗರದ ವಕೀಲ ವಿ.ಕೆ.ರಘು ಅವರು ಜಲಯೋಗ ಸಾಧನೆಯಲ್ಲಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಈ ಬಾರಿಯ...

ಬ್ಯಾಂಕ್ ಸಾಲದಿಂದ ಮುಕ್ತಿ ಹೊಂದಲು ಕ್ಯಾನ್ ಅದಾಲತ್

ಚಿಕ್ಕಮಗಳೂರು: ಬ್ಯಾಂಕ್ ಸುಸ್ತಿದಾರ ಬೆಳೆಗಾರರ ಅನುಕೂಲಕ್ಕಾಗಿ ಕೆನರಾ ಬ್ಯಾಂಕ್ ಕಾಫಿ ಬೆಳೆಯುವ ಜಿಲ್ಲೆಗಳ ಆಯ್ದ ಕೆಲವು...

ರಾಜ್ಯ ಮಟ್ಟದ ಕಬಡ್ಡಿಯಲ್ಲಿ ಚಿಕ್ಕಮಗಳೂರು ಮಹಿಳಾ ತಂಡಕ್ಕೆ ಚಾಂಪಿಯನ್ ಪಟ್ಟ

ಚಿಕ್ಕಮಗಳೂರು: ಕರ್ನಾಟಕ ಸರ್ಕಾರದ ಸಾರಿಗೆ ಸಚಿವರಾದ ಶ್ರೀ ಬೈರತಿ ಸುರೇಶ್ ಅವರ ನೇತೃತ್ವದಲ್ಲಿ ಜುಲೈ 27ರಿಂದ...