Home ಸಿದ್ದರಾಮ ಜಯಂತಿಯೋ ! – ಶ್ರೀನಿವಾಸನ ಬಹುಪಾರಕ್ ?
HomeLatest Newsnamma chikmagalurTarikere

ಸಿದ್ದರಾಮ ಜಯಂತಿಯೋ ! – ಶ್ರೀನಿವಾಸನ ಬಹುಪಾರಕ್ ?

Share
Share

ಅಜ್ಜಂಪುರ: ನೊಳಂಬ ವೀರಶೈವ ಲಿಂಗಾಯತ ಸಮಾಜದವರು ಪ್ರತಿ ವರ್ಷವೂ ಜನವರಿ 14 ಮತ್ತು 15 ರಂದು ಶ್ರೀ ಸಿದ್ದರಾಮೇಶ್ವರರ ಜಯಂತಿ ಯನ್ನು ರಾಜ್ಯದ ವಿವಿಧ ಭಾಗಗಳಲ್ಲಿ ಆಚರಿಸುತ್ತಾರೆ. ಇದರಲ್ಲಿ ಲಕ್ಷಂತರ ಜನರು ಸೇರುತ್ತಾರೆ. ಕಳೆದ ಹತ್ತು ವರ್ಷಗಳಿಂದ ಮಾಜಿ ಶಾಸಕ ಎಸ್.ಎಂ.ನಾಗರಾಜ್ ರ ಮೂಗಿನ ನೇರಕ್ಕೆ ನಡೆಯುತ್ತದೆ ಇವರ ಕುಟುಂಬದವರು ವೇದಿಕೆ ಮೇಲೆ ಇರುತ್ತಾರೆ.ಇದರಿಂದ ಬಹಳ ಜನರಿಗ ನೋವಾಗಿದೆ.ಇದರ ಬಗ್ಗೆ ಪ್ರತಿಭಟಿಸದೆ ಅವರನ್ನು ಹಾಡಿ ಹೊಗಳಿದವರು ಮತ್ತೊಂದು ಜಯಂತಿ ಮಾಡುವ ನೆಪದಲ್ಲಿ ಶ್ರೀನಿವಾಸ್ ಗೆ ಬೌಪರಾಕ್ ಹೇಳಲು ಸೊಲ್ಲಾಫುರದಲ್ಲಿ ತಯಾರಿ ನಡೆಸಿದ್ದಾರೆ.

ಈ ವರ್ಷ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯಲ್ಲಿ ಜಯಂತಿ ನಡೆಯುತ್ತಿದ್ದು ಇದಕ್ಕೆ ಪರ್ಯಾಯವಾಗಿ ಸೊಲ್ಲಾಪುರದಲ್ಲೂ ಜಯಂತಿ ನಡೆಸಲು ಹೊರಟಿರುವವರು ಗ್ಯಾಸ್ ರಾಜಪ್ಪ ಮತ್ತು ಜಿಲ್ಲಾ ಗ್ಯಾರಂಟಿ ಸಮಿತಿಯ ಅಧ್ಯಕ್ಷ ಶಿವಾನಂದಸ್ವಾಮಿ, ಇಬ್ಬರು ಎಸ್.ಎಂ.ನಾಗರಾಜರ ಕಾಲಾಳುಗಳಾಗಿ ಹೊಗಳಿ, ಹೊಗಳಿ ಇಟ್ಟಿದ್ದವರು. ಸಿದ್ದರಾಮ ಜಯಂತಿ ನೆಪದಲ್ಲಿ ಶ್ರೀನಿವಾಸ್ ಉತ್ಸವ ನಡೆಸಲು ಹಾತೊರಿಯುತ್ತಿದ್ದಾರೆ ಎಂದು ಜನರಾಡಿ ಕೊಳ್ಳತ್ತಿದ್ದಾರೆ.

ಗ್ಯಾಸ್ ಏಜೆನ್ಸಿಗೆ ಸಂಬಂಧಿಸಿದಂತೆ ರಾಜಪ್ಪನನ್ನು ಅಣಿಯಲು ನೋಡಿದಾಗ ಅವರ ಬೆಂಬಲಕ್ಕೆ ನಿಂತವರ ಮರೆತು ನಾಗರಾಜ್ ಜೊತೆಗೆ ಸೇರಿಕೊಂಡವರು ಇನ್ನೂ ಶಿವಾನಂದಸ್ವಾಮಿ ನಾಗರಾಜ್ ಎಂದರೆ ಸಮಾಜದ ಜೀವಾ ಎನ್ನುತ್ತಿದ್ದವರು ಏಕಾಏಕಿ ಈಗ ಸಮಾಜ ಕಟ್ಟುವ ಚಟ ಬಂದಿರುವುದು ಮಾತ್ರ ಶ್ರೀನಿವಾಸ್ ಮೆಚ್ಚಿಸಲು ಎಂದು ಜನರಾಡಿಕೊಳ್ಳುತ್ತಿದ್ದಾರೆ.

ಸಮಾಜದವರಿಗೆ ನೋವಾದಾಗ ಕದ್ದು ಮುಚ್ಚಿ ಓಡಾಟ ಮಾಡಿದವರು ಕೇವಲ ಆಹ್ವಾನ ಪತ್ರಿಕೆಯಲ್ಲಿ ನಮ್ಮ ಹೆಸರು ಮುದ್ರಿಸಿಲ್ಲ ಎಂದು ನಮ್ಮ ಕರೆಯಲಿಲ್ಲ,ಸನ್ಮಾನ ಮಾಡಲಿಲ್ಲ ಎಂಬ ನೆಪ ಮಾಡಿಕೊಂಡು ಇನ್ನೊಬ್ಬರ ಮೆಚ್ಚಿಸುವುದು ಎಷ್ಟರ ಮಟ್ಟಿಗೆ ಸರಿ .ರಾಜಪ್ಪಗೆ ಇಷ್ಟೊಂದು ರೋಷ ಬಂದಿರುವುದು ನೋಡಿದರೆ ಮುಂಬರುವ ಜಿಲ್ಲಾ ಪಂಚಾಯಿತಿಗೆ ಎಸ್.ಎಂ.ನಾಗರಾಜ್ ಮಗ ಲೋಹಿತನ ವಿರುದ್ಧ ಚುನಾವಣೆಗೆ ನಿಂತು ಶೌರ್ಯ ತೋರಿಸಲಿ ಎನ್ನುವವರು ಇದ್ದಾರೆ.ತಿರುಪತಿ ಶ್ರೀನಿವಾಸ್ ಗೆ ಮುಡಿ ಕೊಡಲು ನಿಂತಿದ್ದಾರೆ.

ಎಸ್.ಎಂ.ನಾಗರಾಜ್ ಕೂಡ ಸುರೇಶ್ ಜೊತೆಗೆ ಕೆಲ ವರ್ಷ ಶ್ರೀನಿವಾಸ್ ಜೊತೆಗೆ ಕೆಲ ವರ್ಷ ಕಾಲ ಹಾಕಿ ತನಗೆ ಬೇಕಾದವರ ಹೆಸರು ಬರುವಂತೆ ನೋಡಿಕೊಂಡು ಲಾಭ ಪಡೆದುಕೊಂಡವರು.ಜೊತೆಗೆ ತಾಲ್ಲೂಕಿನಲ್ಲಿ ನೊಳಂಬ ಸಮಾಜ ಕಟ್ಟದೆ ಕೊಟ್ಟ ಮಾತು ಉಳಿಸಿಕೊಳ್ಳದೆ ಪಕ್ಷಾಂತರ ಪ್ರವೀಣ್ ಎಂಬ ಬಿರುದು ಪಡೆದುಕೊಂಡು ರಾಜ್ಯದಲ್ಲಿ ನೊಳಂಬ ಸಮಾಜ ಕಟ್ಟುವ ಬದಲಾಗಿ ಚಿಂದಿ ಮಾಡಿ ಜೇಬು ಭರ್ತಿ ಮಾಡುವ ಕಲೆಗಾರಿಕೆ ನಿಪುಣ .

ಕಷ್ಟದಲ್ಲಿ ಕೊರಗದೆ ಇರುವವರಿಂದ ಸಮಾಜದ ಏಳಿಗೆ ಸಾಧ್ಯವೇ ? ಜಯಂತಿ ಒಂದು ಜನ ಸೇರುವ ಸಂಭ್ರಮ ಇದರಲ್ಲೂ ರಾಜಕೀಯ,ಗುಂಪುಗಾರಿಕೆ, ಹಣ ಕದಿಯುವ ಚಟಗಾರರ ಮಧ್ಯೆ ಸಮಾಜದ ಜೈ ಸಿದ್ದರಾಮ ಕೇಕೆ ಹಾಕಿ ಮನೆ ಸೇರಿಕೊಳ್ಳುತ್ತಾರೆ.

Siddarama Jayanti! – Srinivasan Bauparako?

Share

Leave a comment

Leave a Reply

Your email address will not be published. Required fields are marked *

Don't Miss

ಅಜ್ಜಂಪುರದ ಇಲಿಗೆ ‘ಹಣದ ಮೋಹ’

ಚಿಕ್ಕಮಗಳೂರು : ತುಮಕೂರಿನಲ್ಲಿ ಇತ್ತೀಚೆಗೆ ಇಲಿಯೊಂದು ಚಿನ್ನದ ಆಭರಣಗಳನ್ನು ಎಗರಿಸಿ ಸುದ್ದಿಯಾಗಿದ್ದರೆ, ಇತ್ತ ಚಿಕ್ಕಮಗಳೂರಿನಲ್ಲಿ ಮತ್ತೊಂದು ಚಾಣಾಕ್ಷ ಇಲಿ ಒಂದು ಹೆಜ್ಜೆ ಮುಂದೆ ಹೋಗಿ ನೇರವಾಗಿ ಹಣವನ್ನೇ ಕದ್ದು ತನ್ನ ಸಾಮ್ರಾಜ್ಯ...

ಜಿಲ್ಲಾಧಿಕಾರಿ ಭಂವರ್ ಸಿಂಗ್ ಮೀನಾ ಹೆಸರಿನಲ್ಲಿಯೂ ನಕಲಿ ವಾಟ್ಸಪ್ ಖಾತೆ

ಚಿಕ್ಕಮಗಳೂರು: ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಂ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದ್ದು, ಹ್ಯಾಕರ್‌ಗಳು ಮತ್ತು ವಂಚಕರು ವಾಟ್ಸಪ್, ಫೇಸ್‌ಬುಕ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಪ್ರಮುಖರ ಹೆಸರನ್ನು ದುರ್ಬಳಕೆ ಮಾಡಿಕೊಂಡು ಜನರನ್ನು...

Related Articles

ಮುಳ್ಳಯ್ಯನಗಿರಿ ಕ್ರಾಸ್ ಬಳಿ ಟಿಟಿ ವಾಹನ ಮರಕ್ಕೆ ಡಿಕ್ಕಿ

ಚಿಕ್ಕಮಗಳೂರು: ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಮುಳ್ಳಯ್ಯನಗಿರಿ ಕ್ರಾಸ್ ಬಳಿ ಶುಕ್ರವಾರ ಇನೋವಾ ಕಾರು ನಿಯಂತ್ರಣ...

ಹಾಸ್ಟೆಲ್‌ ವಿದ್ಯಾರ್ಥಿ ಆತ್ಮಹತ್ಯೆಗೆ ಯತ್ನ

ಚಿಕ್ಕಮಗಳೂರು: ಸಮಗ್ರ ಗಿರಿಜನ ಕಲ್ಯಾಣ ಇಲಾಖೆ (ಐಟಿಡಿಪಿ) ವ್ಯಾಪ್ತಿಯ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಯ...

ಮನೆಯ ಮೇಲ್ಛಾವಣಿಯ ಹೆಂಚು ತೆಗೆದು ನುಗ್ಗಿ ಸರಗಳ್ಳತನ

ನರಸಿಂಹರಾಜಪುರ: ಮನೆಯಲ್ಲಿ ದಂಪತಿ ಮಲಗಿದ್ದ ವೇಳೆ ಮೇಲ್ಛಾವಣಿಯ ಹೆಂಚು ತೆಗೆದು ಒಳನುಗ್ಗಿದ ಕಳ್ಳನೊಬ್ಬ ಮಹಿಳೆಯ ಕೊರಳಿನಲ್ಲಿದ್ದ...

ಕನಸು ಫೈನಾನ್ಸ್ ಹೆಸರಿನಲ್ಲಿ ₹1.60 ಲಕ್ಷ ವಂಚನೆ ಆರೋಪ

ಕಡೂರು: ಪ್ರತಿದಿನ ಉಳಿತಾಯದ ಹಣವನ್ನು ಸ್ವೀಕರಿಸಿ ಶೇ.7ರಷ್ಟು ಬಡ್ಡಿ ನೀಡುವುದಾಗಿ ನಂಬಿಸಿ, ಹಣವನ್ನು ವಾಪಸ್ ನೀಡದೆ...