Home namma chikmagalur chikamagalur ಶಾಸಕ ರಾಜೇಗೌಡರ ಕಣ್ಣೀರು ಕಾಂಗ್ರೆಸ್ ನವರ ಆಕ್ರೋಶ-ಬಿ.ಜೆ.ಪಿಯ ತಲ್ಲಣ
chikamagalurHomeLatest Newsnamma chikmagalur

ಶಾಸಕ ರಾಜೇಗೌಡರ ಕಣ್ಣೀರು ಕಾಂಗ್ರೆಸ್ ನವರ ಆಕ್ರೋಶ-ಬಿ.ಜೆ.ಪಿಯ ತಲ್ಲಣ

Share
Share

ಶೃಂಗೇರಿ: ಶೃಂಗೇರಿ ವಿಧಾನ ಸಭಾ ಕ್ಷೇತ್ರದಲ್ಲಿ ಕಳೆದ ಮೂರು ವರ್ಷಗಳಿಂದ ಶಾಸಕ ರಾಜೇಗೌಡರ ವಿರುದ್ಧ ಬಿಜೆಪಿ ನಿಗಿ,ನಿಗಿ ಎಂದು ಕೆಂಡ ಕಾರುತ್ತಿದೆ.

ನ್ಯೂಸ್ ಕಿಂಗ್ ಶೃಂಗೇರಿ ಕ್ಷೇತ್ರದಲ್ಲಿ ನಡೆಯುತ್ತಿರುವ ಲಡಾಯಿ ಬಗ್ಗೆ ಸುದ್ದಿ ಪ್ರಕಟಿಸಿದೆ.ಮಲೆನಾಡು ಅದರಲ್ಲೂ ಧಾರ್ಮಿಕ ಕ್ಷೇತ್ರದಲ್ಲಿ ಇಂತಹ ಪರಿಸ್ಥಿತಿ ನಿರ್ಮಾಣಕ್ಕೆ ಯಾವ ಜನ ಹಿತವು ಇಲ್ಲ. ಇದು ಕೇವಲ ಅಧಿಕಾರ ದಾಹ ಎನ್ನುವುದು ಗೊತ್ತಿರುವ ವಿಷಯ.

ಕಳೆದ ವಾರ ಆನೆ ದಾಳಿಗೆ ಎರಡು ಜನ ಪ್ರಾಣ ಕಳೆದುಕೊಂಡರು ಇದಕ್ಕಾಗಿ ಬಿಜೆಪಿ ಮತ್ತಿತರ ಸಂಘಟನೆಯವರು ಬೀದಿಗೆ ಇಳಿದು ರಂಪಾಟ ಮಾಡಿದರು. ಮೃತ ದೇಹ ತೆಗೆದುಕೊಂಡು ಹೋಗಲು ಅಡ್ಡಿ ಮಾಡಿದರು ಶಾಸಕ ರಾಜೇಗೌಡರ ವಿರುದ್ಧ ಕೆಂಡ ಕಾರಿದರು

ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ನವರು ಪ್ರತಿಭಟನೆಯ ಸಭೆ ನಡೆಸಿ ಬಿಜೆಪಿ ಮತ್ತು ಮಾಜಿ ಶಾಸಕ ಜೀವರಾಜ್ ರವರ ನಡವಳಿಕೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.ರಾಜೇಗೌಡರು ಒಂದು ಹೆಜ್ಜೆ ಮುಂದೆ ಹೋಗಿ ಕಣ್ಣೀರು ಸುರಿಸಿ ಜೀವರಾಜ್ ನಡವಳಿಕೆ ಮತ್ತು ಅವರ ನಡೆ,ನುಡಿಯ ಬಗ್ಗೆ ಇಂಚಿಂಚು ಮಾಹಿತಿ ನೀಡಿ ಮುಂದಿನ ಚುನಾವಣೆಯಲ್ಲಿ ಜೀವರಾಜ್ ಸ್ಪರ್ಧೆ ಮಾಡಬಾರದು ನಾನು ಕೂಡ ಇದಕ್ಕೆ ಬದ್ದ ಎಂದಿದ್ದಾರೆ.

ರಾಜೇಗೌಡರ ಕಣ್ಣೀರಿನ ಆಕ್ರೋಶ ಆರ್ಭಟ ನೋಡಿದರೆ ಮುಂದಿನ ಚುನಾವಣೆಗೆ ಮಾರಿ ಹಬ್ಬ ಖಚಿತ ಎನ್ನಿಸುತ್ತಿದೆ. ಅಧಿಕಾರ ಬರುತ್ತದೆ ಹೋಗುತ್ತದೆ ಇದ್ದಾಗ ಜನ ಪರ ಕೆಲಸ ಮಾಡುವ ಜವಾಬ್ದಾರಿ ಬಿಟ್ಟು ಬರೀ ಕಿತ್ತಾಡುತ್ತಾ ಹೋಗುವುದು ಎಷ್ಟರ ಮಟ್ಟಿಗೆ ಸರಿ ಜೀವರಾಜ್ ಈ ಪರಿ ಕಾಡುತ್ತಿರುವುದು ನೋಡಿದರೆ ಮುಂದೆ ಕಷ್ಟ, ಕಷ್ಟ.

ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಕೇವಲ ಇನ್ನೂರು ಚಿಲ್ಲರೆ ಮತಗಳಿಂದ ಗೆಲುವು ಸಾಧಿಸಿದ ರಾಜೇಗೌಡರ ಬೆನ್ನು ಬಿದ್ದಿರುವುದು ನೋಡಿದರೆ ಮುಂದಿನ ಚುನಾವಣೆ ಇಬ್ಬರಿಗೂ ಅಗ್ನಿ ಪರೀಕ್ಷೆ ಎಂಬುದರಲ್ಲಿ ಎರಡು ಮಾತಿಲ್ಲ.

ಗೆದ್ದವ ಗದ್ದುಗೆ ಹಿಡಿದು ಗಹಿಗಹಿಸಿ ನಕ್ಕರೆ ಸೋತವನು ರಾಜಕೀಯಕ್ಕೆ ಟಾಟ,ಟಾಟ ಎನ್ನಬೇಕು ಏಕೆಂದರೆ ವಯಸ್ಸು ಮತ್ತೆ,ಮತ್ತೆ ಉಕ್ಕಿ ಬರಲ್ಲಾ ಮತ್ತೆ ಕಿತ್ತಾಟ ನಡೆಯುವುದಿಲ್ಲ. ಇದರಲ್ಲಿ ರಾಜೇಗೌಡರು ಎರಡು ಹೆಜ್ಜೆ ಮುಂದಿದ್ದಾರೆ.ಜೀವರಾಜ್ ಕೂಗಾಡಿ ಎರಡು ಹೆಜ್ಜೆ ಹಿಂದೆ ಇದ್ದಾರೆ ಎಂಬ ಅಭಿಪ್ರಾಯ ಜನರಿಂದ ಕೇಳಿ ಬರುತ್ತಿದೆ.

MLA Rajegowda’s tears anger Congress

Share

Leave a comment

Leave a Reply

Your email address will not be published. Required fields are marked *

Don't Miss

ಲೋಕಾಯುಕ್ತ ಬಲೆಗೆ ತಂಗಲಿ ಗ್ರಾಮ ಪಂಚಾಯಿತಿಯ ಪಿಡಿಒ

ಕಡೂರು : ಸೈಟ್ ಗೆ ಎನ್.ಒ.ಸಿ (NOC) ನೀಡಲು ಲಂಚದ ಬೇಡಿಕೆಯಿಟ್ಟಿದ್ದ ಕಡೂರು ತಾಲೂಕಿನ ತಂಗಲಿ ಗ್ರಾಮ ಪಂಚಾಯಿತಿಯ ಪಿಡಿಒ ಗುರುವಾರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ತಿಮ್ಮಶೆಟ್ಟಿ ಎಂಬುವವರಿಗೆ ಸೇರಿದ...

ಕಳಪೆ ಕಾಮಗಾರಿ ತಡೆಗಟ್ಟುವಂತೆ ಜಿಲ್ಲಾಡಳಿತಕ್ಕೆ ಒತ್ತಾಯ

ಚಿಕ್ಕಮಗಳೂರು: ಕಡೂರು ತಾಲೂಕಿನ ಐತಿಹಾಸಿಕ ಮದಗದ ಕೆರೆ ಕಾಲುವೆಯ (ಚಾನಲ್) ಕಳಪೆ ಕಾಮಗಾರಿಯನ್ನು ತಡೆಗಟ್ಟುವಂತೆ ಕರ್ನಾಟಕ ಮಾಹಿತಿ ಹಕ್ಕು ಕಾರ್ಯಕರ್ತರ ಸಂಘಟನೆ ಜಿಲ್ಲಾಡಳಿತವನ್ನು ಒತ್ತಾಯಿಸಿದೆ. ಅಪರ ಜಿಲ್ಲಾಧಿಕಾರಿ ನಾರಾಯಣ ರೆಡ್ಡಿ ಕನಕರೆಡ್ಡಿ...

Related Articles

ದಲಿತ ಸಂಘಟನೆಗಳ ಒಕ್ಕೂಟದ ವಿಭಿನ್ನ ಹೋರಾಟ

ಚಿಕ್ಕಮಗಳೂರು : ನಗರ ಸಮೀಪದ ಗೌಡನಹಳ್ಳಿ ವಾಸಿ ಮಂಜುನಾಥ್ ಯಾನೆ ಹೇಮಂತ್ ಎಂಬುವವರಿಗೆ ಸೇರಿದ ಜೆ.ಸಿ.ಬಿ...

ಅರವಿಂದ್ ಕೇಜ್ರವಾಲ್ ದೋಷಮುಕ್ತ ಪಕ್ಷಕ್ಕೆ ಸಂದ ಜಯ

ಚಿಕ್ಕಮಗಳೂರು : ಕೇಂದ್ರ ಸರ್ಕಾರದ ಪಿತೂರಿಯಿಂದ ದೆಹಲಿಯ ಅಬಕಾರಿ ಹಗರಣದಲ್ಲಿ ಸಿಲುಕಿಸಲಾಗಿದ್ದ ಅರವಿಂದ್ ಕೇಜ್ರವಾಲ್ ಮತ್ತು...

ಬಿಜೆಪಿ ಟಿಕೆಟ್ ಭ್ರಮೆಯಿಂದ ವೆಂಕಟೇಶ್ ಹೊರಬರಲಿ

ಚಿಕ್ಕಮಗಳೂರು : ಶಾಸಕ ಹೆಚ್.ಡಿ ತಮ್ಮಯ್ಯನವರನ್ನು ಪ್ರತಿ ನಿತ್ಯ ವಿರೋಧಿಸಿದರೆ ಮೂಡಿಗೆರೆ ಮೀಸಲು ಕ್ಷೇತ್ರಕ್ಕೆ ಬಿಜೆಪಿ...

ಕೈವಾರ ತಾತಯ್ಯ ವಿಶ್ವ ಶ್ರೇಷ್ಠ ಸಂತ

ಚಿಕ್ಕಮಗಳೂರು: ಮಹಾನ್ ಕಾಲಜ್ಞಾನಿ ಮತ್ತು ತತ್ವಜ್ಞಾನಿ ಶ್ರೀ ಯೋಗಿ ನಾರೇಯಣ ಯತೀಂದ್ರರು (ಕೈವಾರ ತಾತಯ್ಯ) ಕೇವಲ...