Home namma chikmagalur ಮಂತ್ರಿಯಂತೆ, ಮಂತ್ರಿ – ಹಗಲುಗನಿಸಿನ ಶಾಸಕರು ?
namma chikmagalurchikamagalurHomeLatest News

ಮಂತ್ರಿಯಂತೆ, ಮಂತ್ರಿ – ಹಗಲುಗನಿಸಿನ ಶಾಸಕರು ?

Share
Share

ಚಿಕ್ಕಮಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ನ ಕುರ್ಚಿ ಕಿತ್ತಾಟ ನಡೆಯುತ್ತಿದೆ.ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರ ಬಿಟ್ಟು ಕೊಡುತ್ತಿಲ್ಲ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕುರ್ಚಿ ಕೊಡಿ ಕುರ್ಚಿ ಕೊಡಿ ಎಂದು ಹಲವು ಪಟ್ಟುಗಳನ್ನು ಬಿಗಿಗೊಳಿಸುತ್ತಿದ್ದಾರೆ.ಇದರ ಮಧ್ಯೆ ಹಲವರು ಮಂತ್ರಿಗಳಾಗಲು ಹರ ಸಾಹಸ ಪಡುತ್ತಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಐವರು ಕಾಂಗ್ರೆಸ್ ಶಾಸಕರಿದ್ದಾರೆ.ಪ್ರಥಮ ಬಾರಿಗೆ ಹೆಚ್.ಡಿ.ತಮ್ಮಯ್ಯ, ನಯನಾ ಮೋಟಮ್ಮ ಆಯ್ಕೆಯಾಗಿದ್ದಾರೆ.ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಸತತ ಎರಡನೇ ಬಾರಿ ಶಾಸಕರಾಗಿದ್ದು ತರೀಕೆರೆ ಶಾಸಕ ಶ್ರೀನಿವಾಸ್ ಕೂಡಾ ಎರಡು ಬಾರಿ ಶಾಸಕರಾಗಿದ್ದಾರೆ.ಇಬ್ಬರು ಮಂತ್ರಿ ಆಗಬೇಕು ಎಂದು ಕುರ್ಚಿ ಮೇಲೆ ಟವಲ್ ಇಟ್ಟಿದ್ದಾರೆ.

ರಾಜೇಗೌಡರು ಡಿ.ಕೆ.ಜೊತೆಗೆ ಗುರ್ತಿಸಿ ಕೊಂಡರೆ ಶ್ರೀನಿವಾಸ್ ಸಿದ್ದರಾಮಯ್ಯರ ಗುಂಪಿನಲ್ಲಿ ಟಳಾಯಿಸುತ್ತಿದ್ದಾರೆ. ರಾಜೇಗೌಡರು ಒಕ್ಕಲಿಗರ ಕೋಟಾದಲ್ಲಿ ಸಚಿವರಾಗುವ ಪ್ರಯತ್ನಕ್ಕೆ ತುಂಬಾ ಕಷ್ಟ ಪಡ ಬೇಕಾಗಿದೆ.ಏಕೆಂದರೆ ಒಕ್ಕಲಿಗರಲ್ಲಿ 6 ರಿಂದ 7 ಜನ ಮಂತ್ರಿಗಳಾಗಲು ಘಟಾನುಘಟಿಗಳಿದ್ದಾರೆ.ಡಿ.ಕೆ.ಶಿವಕುಮಾರ್ , ಮತ್ತು ರಾಮಲಿಂಗ ರೆಡ್ಡಿ ಹಾಲಿ ಮಂತ್ರಿಗಳು ಇವರು ಸ್ಥಾನ ಗಟ್ಟಿ. ಮಾಗಡಿ ಬಾಲಕೃಷ್ಣ, ಕೋಲಾರದ ನಂಜೇಗೌಡ ಮತ್ತು ನಾರಯಣ ಸ್ವಾಮಿ ಮಂತ್ರಿಗಳಾಗಲು ಪೈಪೋಟಿ ನಡೆಸಿದ್ದಾರೆ. ಜೊತೆಗೆ ನಾಲ್ಕು ಬಾರಿ ಗೆದ್ದು ಸೀನಿಯರ್ ಇದ್ದಾರೆ.ಅರಸೀಕೆರೆ ಶಿವಲಿಂಗೇಗೌಡ ,ಶಿರಾದ ಡಿ.ಟಿ.ಜಯಕುಮಾರ್ ಮತ್ತು ಶರತ್ ಬಚ್ಚೇಗೌಡರನ್ನು ಮೀರಿ ಮಂತ್ರಿಯಾಗುವುದು ಕಷ್ಟ, ಕಷ್ಟ. ಹೀಗಾಗಿ ರಾಜೇಗೌಡರ ಪ್ರಯತ್ನ ತೀರಾ ಸುಲುಭವಾಗಿಲ್ಲಾ.

ತರೀಕೆರೆ ಶಾಸಕ ಶ್ರೀನಿವಾಸ್ ಕೂಡ ಮಂತ್ರಿಯಾಗಲು ಪ್ರಯತ್ನ ನಡೆಸಿದ್ದಾರೆ.2013 ರಲ್ಲಿ ಗೆದ್ದು 2018 ರಲ್ಲಿ ಸೋತಿದ್ದವರು 2023 ರಲ್ಲಿ ಮತ್ತೆ ಶಾಸಕರಾಗಿ ಮಂತ್ರಿ ಸ್ಥಾನಕ್ಕೆ ಆಸೆ ಪಡುವುದು ಸಹಜ .ಸಿದ್ದರಾಮಯ್ಯ ಅಧಿಕಾರದಲ್ಲಿ ಮುಂದುವರೆದರೆ ಬೈರತಿ ಸುರೇಶ್ ಮಂತ್ರಿ ಸ್ಥಾನದಲ್ಲಿ ಮುಂದುವರೆಯಲಿದ್ದಾರೆ.ಸಿದ್ದರಾಮಯ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಿದರೆ ಮಗ ಯತೀಂದ್ರ ಮಂತ್ರಿ ಆಗುವುದು ಖಚಿತ. ಹೊಸದುರ್ಗದ ಗೋವಿಂದಪ್ಪ ಐದು ಬಾರಿ ಶಾಸಕರಾಗಿದ್ದರು ಮಂತ್ರಿಯಾಗಿಲ್ಲ ಹಿರಿತನದ ಅಧಾರದ ಮೇಲೆ ಗೋವಿಂದಪ್ಪ ಮಂತ್ರಿ ಸ್ಥಾನ ಸಿಗಬೇಕು. ರಾಜೇಗೌಡ ಮತ್ತು ಶ್ರೀನಿವಾಸ್ ಹಗಲು ಕನಸು ಕಾಣುತ್ತಿದ್ದಾರೆ ಎಂದು ಕಾಂಗ್ರೆಸ್ ನವರು ನಗೆಯಾಡುತ್ತಿದ್ದಾರೆ.

ಇಪ್ಪತ್ತೈದು ವರ್ಷಗಳಿಂದ ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಬೇರೆ ಜಿಲ್ಲೆಯವರು ಬಂದ ಪುಟ್ಟ, ಹೋದಾ ಪುಟ್ಟ ಎನ್ನುವಂತೆ ಬಂದು ಹೋಗುತ್ತಿದ್ದಾರೆ.ಜಿಲ್ಲೆಯ ಸಮಸ್ಯೆಗಳ ಬಗ್ಗೆ ಅರಿವಿಲ್ಲದೆ ಸಭೆ,ಸಮಾರಂಭ ಮೀಟಿಂಗ್ ಇಟಿಂಗ್ ಮುಗಿಸಿ ಹೋಗುವುದರಿಂದ ಅಧಿಕಾರಿಗಳಿಗೆ ಹಬ್ಬವಾಗಿದೆ.ಇದರಿಂದ ಜಿಲ್ಲೆಯವರು ಮಂತ್ರಿಗಳಾದರೆ ಒಳ್ಳೆಯದು ಆದರೆ ಜಾತಿ ಲೆಕ್ಕಾಚಾರದಲ್ಲಿ ಮಂತ್ರಿಗಳನ್ನು ಮಾಡುವುದರಿಂದ ಚಿಕ್ಕಮಗಳೂರು ಜಿಲ್ಲೆಯವರು ಮಂತ್ರಿಗಳಾಗಲು ಹಗಲು ಕನಸು ಕಾಣುತ್ತಾ ಜುಬರಿಸ ಬೇಕಾಗಿದೆ.

Like a minister  a minister – a daydreaming legislator?

Share

Leave a comment

Leave a Reply

Your email address will not be published. Required fields are marked *

Don't Miss

ಸಾಲದ ಹಣ ಕೇಳಿದ್ದಕ್ಕೆ ಹಲ್ಲೆ; ತಾಯಿ-ಮಗನ ವಿರುದ್ಧ ಪ್ರಕರಣ

ಕಡೂರು: ಸಾಲವಾಗಿ ನೀಡಿದ್ದ ₹50 ಸಾವಿರವನ್ನು ಹಿಂದಿರುಗಿಸುವಂತೆ ಕೇಳಿದ್ದಕ್ಕೆ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಯಗಟಿ ಪೊಲೀಸ್ ಠಾಣೆಯಲ್ಲಿ ತಾಯಿ-ಮಗನ ವಿರುದ್ಧ ಪ್ರಕರಣ ದಾಖಲಾಗಿದೆ. ಯಗಟಿ ಗ್ರಾಮದ ಮುದಿಯಪ್ಪ ಬಡಾವಣೆಯ...

ಹುಬ್ಬಳ್ಳಿಯಲ್ಲಿ ಆಗಸ್ಟ್ 9ರಂದು ರಾಜ್ಯಮಟ್ಟದ 32ನೇ ವಿಶ್ವ ಆದಿವಾಸಿ ದಿನಾಚರಣೆ

ಚಿಕ್ಕಮಗಳೂರು: ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್ ಹಾಗೂ ಆದಿವಾಸಿ ಹರಣ ಶಿಖಾರಿ ಪಾರಿ ಸಮಾಜ ಕ್ಷೇಮಾಭಿವೃದ್ಧಿ ಸಂಘದ ಸಂಯುಕ್ತಾಶ್ರಯದಲ್ಲಿ ಆಗಸ್ಟ್ 9ರಂದು ಹುಬ್ಬಳ್ಳಿಯಲ್ಲಿ ರಾಜ್ಯಮಟ್ಟದ 32ನೇ ವಿಶ್ವ ಆದಿವಾಸಿ ದಿನಾಚರಣೆ ಅಂಗವಾಗಿ...

Related Articles

ಗ್ರಾಮೀಣ ಪ್ರದೇಶದಲ್ಲಿ ವಲಸೆ ತಡೆಗೆ ವಿಬಿ ಜಿ ರಾಮ್ ಜಿ ಆಸರೆ

ಚಿಕ್ಕಮಗಳೂರು: ಗ್ರಾಮೀಣ ಭಾಗದ ಜನರು ಉದ್ಯೋಗಕ್ಕಾಗಿ ನಗರ ಪ್ರದೇಶಗಳಿಗೆ ವಲಸೆ ಹೋಗುವುದನ್ನು ತಪ್ಪಿಸಿ, ತಮ್ಮ ಗ್ರಾಮಗಳಲ್ಲಿಯೇ...

ಆಗಸ್ಟ್ 14 ಮತ್ತು 16 ರಂದು ವಿದ್ಯುತ್ ನಿಲುಗಡೆ

ಚಿಕ್ಕಮಗಳೂರು:  ಗ್ರಾಮೀಣ ಉಪವಿಭಾಗದ ವ್ಯಾಪ್ತಿಯಲ್ಲಿ ಬರುವ ಹೊಸದಾದ ಗಾಣದಾಳು ವಿ.ವಿ ಕೇಂದ್ರದ ೧೧ ಕೆ.ವಿ ಲಿಂಕ್...

ವೃದ್ದರ ಮಾಶಾಸನ ಬಿಡುಗಡೆ ಆಗ್ರಹಿಸಿ ಕರವೇ (ಪ್ರವೀಣ್‌ಶೆಟ್ಟಿ)ಬಣ ಪ್ರತಿಭಟನೆ

ಚಿಕ್ಕಮಗಳೂರು: ವೃದ್ದರ ಮಾಶಾಸನ ಬಿಡುಗಡೆ ಹಾಗೂ ಬಿಡದಿಯಲ್ಲಿ ರೈತರ ಜೀವನ ಉಳಿಸಬೇಕು ಎಂದು ಆಗ್ರಹಿಸಿ ಕರವೇ...

ವಿದ್ಯುತ್ ಸ್ಪರ್ಶದಿಂದ ಎರಡು ಜಾನುವಾರುಗಳ ಸಾವು

ನರಸಿಂಹರಾಜಪುರ: ಜಮೀನಿಗೆ ಅಳವಡಿಸಿದ್ದ ಐಬೆಕ್ಸ್ ತಂತಿ ಬೇಲಿಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿದ್ದ ಪರಿಣಾಮ ಎರಡು...