Home ಡಿ.ಕೆ.ಗೆ ಪ್ರಾರಂಭದಲ್ಲಿ ಡಿಚ್ಚಿ ! ಹರಿ ಬ್ರೇಕ್, ಸಿದ್ದು ಸ್ಟೀರಿಂಗ್ ಯಾವ ಕಡೆ ತಿರುಗುತ್ತದೆ
HomeLatest NewsNational NewsPolitical News

ಡಿ.ಕೆ.ಗೆ ಪ್ರಾರಂಭದಲ್ಲಿ ಡಿಚ್ಚಿ ! ಹರಿ ಬ್ರೇಕ್, ಸಿದ್ದು ಸ್ಟೀರಿಂಗ್ ಯಾವ ಕಡೆ ತಿರುಗುತ್ತದೆ

Share
Share

ಬೆಂಗಳೂರು:  ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಯಾರನ್ನು ನಂಬಿದ್ದರು ಅವರೇ ಕೈ ಕೊಡುವ ಸೂಚನೆ ಅರಿತು ರಾಹುಲ್ ಮಾತು ಕೇಳಿದ ಮೇಲೆ ರಾಜೀನಾಮೆ ಕೊಟ್ಟಿದ್ದು ,ಯಾವ ಕಿತ್ತಾಟವೂ ನಡೆಯಲಿಲ್ಲಾ ಅಷ್ಟೊಂದು ತಣ್ಣಗೆ ಪ್ರತಿಕ್ರಿಯೆ ಮುಗಿಯಿತು ಎಂದು ಶಭಾಷ್ ಎನ್ನುತ್ತಿರುವಾಗ ನಡೆಯುತ್ತಿರುವ ಮೇಲಾಟಗಳನ್ನು ನೋಡಿದರೆ ಕಾಂಗ್ರೆಸ್ ನಲ್ಲಿ ಏನೋ ನಡೆಯುತ್ತಿದೆ ಎನ್ನಿಸುತ್ತದೆ.

ವಿಶೇಷವಾಗಿ ಕಣ್ಣು ಇಟ್ಟಿದ್ದ ಸತೀಶ್ ಜಾರಕಿಹೊಳೆಗೆ ಕಾಲೇಳೆಯಲು ಸಿದ್ದರಾಮಯ್ಯ ಮುಂದಾಗಿದ್ದಾರೆ ಎನ್ನಲಾಗುತ್ತಿದೆ.ಇದರ ಭಾಗವಾಗಿ ಡಿ.ಕೆ.ವಿರೋಧಿಸುತ್ತಿರುವ ಬಿ.ಕೆ.ಹರಿಪ್ರಸಾದ್ ಕೆ.ಪಿ.ಸಿ.ಸಿ ಅಧ್ಯಕ್ಷರಾಗುತ್ತಾರೆ ಎನ್ನಲಾಗುತ್ತಿದೆ.ಡಿ.ಕೆ.ಬಾಲ ಬಿಚ್ಚದಂತೆ ನೋಡಿಕೊಳ್ಳಲು ಎಲ್ಲಾ ರೀತಿಯ ತಯಾರಿ ನಡೆದಿದೆ ಎಂದು ರಾಜಕೀಯ ವಿಶ್ಲೇಷಣೆ ಮಾಡಲಾಗುತ್ತಿದೆ.

ಮೂರು ಜನ ಉಪ ಮುಖ್ಯಮಂತ್ರಿಗಳನ್ನು ನೇಮಿಸುವ ಬಿ ಪ್ಲಾನ್ ಇತ್ತು ಈಗ ಪರಮೇಶ್ವರ್ ಡಿ.ಸಿ.ಎಂ.ಆಗುತ್ತಿರುವುದು ಡಿ.ಕೆ.ಗೆ ಕೊಕ್ಕೆ ಹಾಕಲು ಎಂಬ ವಿಶ್ಲೇಷಣೆ ಮಾಡುವುದರ ಜೊತೆಗೆ ಸಿದ್ದರಾಮಯ್ಯ ಬೆಂಬಲದವರು ಸಂಪುಟಕ್ಕೆ ಹೆಚ್ಚು ಜನ ಸೇರಿದ ರೀತಿ ಮತ್ತು ಸ್ವತಃ ಸಿದ್ದರಾಮಯ್ಯ ಕಾಂಗ್ರೆಸ್ ನ ಉನ್ನತ ಸಮಿತಿ ಸಿ,ಡ,ಬ್ಲೂ ಸಿ,ಸಿ ಕಮಿಟಿಗೆ ನೇಮಕವಾಗಿರುವುದು ಡಿ.ಕೆ.ನಿದ್ದೆ ಕೆಡಿಸಿರಬಹುದು ಎಂದು ಅಂದಾಜಿಸಲಾಗಿದೆ.

ಸಿದ್ದರಾಮಯ್ಯ ಸುಮ್ಮನಿರಲು ಸಾಧ್ಯವಿಲ್ಲ ಏಕೆಂದರೆ ಅವರನ್ನು ಹತ್ತಿರದಿಂದ ಬಲ್ಲವರ ಪ್ರಕಾರ ನನ್ನ ಎರಡು ಕಣ್ಣು ಹೋದರೂ ಪರವಾಗಿಲ್ಲ ಅವರ ವಿರೋಧಿಗಳ ಒಂದು ಕಣ್ಣದರೂ ಸರಿ ತೆಗೆಯ ಬೇಕು ಎಂದು ಪಣ ತೊಡುವುದರಲ್ಲಿ ನಿಪುಣರು ಎನ್ನಲಾಗುತ್ತಿದೆ. ಡಿ.ಕೆ.ಕೂಡ ಉನ್ನತ ಸ್ಥಾನ ಬಯಸಿ ಕೊನೆಯ ಹಂತ ತಲುಪಿದ್ದಾರೆ.ಇತ್ತೀಚೆಗಿನ ಧ್ವನಿ ಕೂಡ ತಗ್ಗಿದೆ.ಆದರೆ ದಿನಕ್ಕೊಂದು ಸವಾಲ್ ಎದುರಿಸಿ ಆಡಳಿತ ಮಾಡಬೇಕಾದ ಅಡಕತ್ತರಿಯಲ್ಲಿ ಇರುವುದು ಮಾತ್ರ ನಿಜ.ಇನ್ನೊಂದು ವರ್ಷ ಮಾತ್ರ ಅಧಿಕಾರ ನಂತರ ಚುನಾವಣೆಗೆ ತಯಾರಿ ನಡೆಸ ಬೇಕಾಗುತ್ತದೆ.

ಹರಿ, ಡಿ.ಕೆ.ಗಳಸ್ಯ ಕಂಠಸ್ಯದಂತಿದ್ದರು ಸಿದ್ದು -ಹರಿ ಹಾವು,ಮುಂಗುಸಿಯಂತಿದ್ದರು ಆದರೆ ಈಗ ಅದಲು ಬದಲುಗಿದ್ದಾರೆ.ಡಿ.ಕೆ.ಸ್ಥಾನ ಪಡೆದಿರುವ ಹರಿಪ್ರಸಾದ್ ರಾಜ್ಯ ಕಾಂಗ್ರೆಸ್ ನ ಅಧ್ಯಕ್ಷರಾಗಿರುವುದು ಡಿ.ಕೆ.ಗೆ ಬಿಸಿತುಪ್ಪವಾಗಿದೆ.

ಇದರಲ್ಲಿ ಸಿದ್ದರಾಮಯ್ಯ ಕೈ ಮೇಲಾಗಿದೆ.ಸಚಿವ ಸಂಪುಟದಲ್ಲಿ ಸಿದ್ದರಾಮಯ್ಯ ನವರ ನಂಬಿಕಸ್ಥರು ಏಳೆಂಟು ಜನರಿದ್ದಾರೆ ಇನ್ನುಳಿದ ಮೂರ್ ನಾಲ್ಕು ಜನ ಹೈಕಮಾಂಡ್ ನವರ ನಂಬಿಕ್ಥರು ಡಿ.ಕೆ.ತಾನು ಮುಖ್ಯಮಂತ್ರಿ ಎನ್ನಿಸಿಕೊಳ್ಳುವುದು ಬಿಟ್ಟರೆ ಮುಂದಿನ ಹೆಜ್ಜೆಗಳನ್ನು ಸುಲಭವಾಗಿ ಇಡಲು ಕಷ್ಟ,ಕಷ್ಟ.ಎಲ್ಲದಕ್ಕೂ ಕೊಕ್ಕೆ ಗ್ಯಾರಂಟಿ. ಓಡುವ ಬದಲು ತೆವಳಿ ದಡ ಮುಟ್ಟಬಹುದು ಇಲ್ಲ ಕಾಂಗ್ರೆಸ್ ನ ಕಿತ್ತಾಟ ಬಹುತೇಕ ಮುಂದುವರೆಯಲಿದೆ.ಹರಿಪ್ರಸಾದ್,ಬ್ರೇಕ್, ಸಿದ್ದರಾಮಯ್ಯ ರ ಸ್ಟೀರಿಂಗ್ ಗಾಡಿ ಯಾವಕಡೆ ಹೋಗುತ್ತದೆ ಎಂಬುದನ್ನು ಮುಂದಿನ ದಿನಗಳಲ್ಲಿ ತಿಳಿಯಲಿದೆ.

ಈಗಾಗಲೇ ಕೋಲ್ಡ್ ವಾರ್ ಪ್ರಾರಂಭವಾಗಿದೆ ಎನ್ನುವುದಕ್ಕೆ ಬಿ.ಕೆ.ಹರಿಪ್ರಸಾದ್ ಅಧ್ಯಕ್ಷರಾದ ದಿನವೇ ಅಧಿಕಾರ ಬೇಕಾದವರು ಡಿ.ಕೆ.ಶಿವಕುಮಾರ್ ಜೊತೆಗೆ ಹೋಗಿ ಪಕ್ಷ ಬೇಕಾದವರು ನಮ್ಮ ಜೊತೆಗೆ ಬನ್ನಿ ಎಂಬ ವಿವಾದಾತ್ಮಕ ಹೇಳಿಕೆ ಬೆಂಕಿಗೆ ಪೆಟ್ರೋಲ್ ಸೇರಿದಂತೆ ಆಗಿದೆ ಬೆಂಕಿ ಜ್ವಾಲೆ ಎಲ್ಲಾ ಕಡೆ ವ್ಯಾಪಿಸಲು ಹೆಚ್ಚು ದಿನ ಬೇಕಾಗಿಲ್ಲ.

Hari brakes Sidhu which way does the steering turn?

Share

Leave a comment

Leave a Reply

Your email address will not be published. Required fields are marked *

Don't Miss

ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕ ಹುದ್ದೆಗೆ ಅರ್ಜಿಅಹ್ವಾನ

ಚಿಕ್ಕಮಗಳೂರು: ಕಾಲೇಜು ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ (ಸರ್ಕಾರಿ ಸಂಸ್ಕೃತ ಹಾಗೂ ಚಿತ್ರಕಲಾ ಕಾಲೇಜುಗಳು ಒಳಗೊಂಡಂತೆ) ೨೦೨೬-೨೭ನೇ ಶೈಕ್ಷಣಿಕ ಸಾಲಿಗೆ ಖಾಯಂ ಉಪನ್ಯಾಸಕರಿಗೆ ಕಾರ್ಯಭಾರ ಹಂಚಿಕೆ ಮಾಡಿದ...

ಆಯುಷ್ಮಾನ್ ಆರೋಗ್ಯ ಕೇಂದ್ರದ ಕಾಮಗಾರಿಗೆ ಗುದ್ದಲಿ ಪೂಜೆ

ಚಿಕ್ಕಮಗಳೂರು: ಆರೋಗ್ಯ, ಶಿಕ್ಷಣ ಮತ್ತು ಜನರ ಬದುಕಿಗಾಗಿ ಆದ್ಯತೆಯ ಮೇಲೆ ಕೆಲಸ ಮಾಡಬೇಕಾಗಿರುವುದು ಚುನಾಯಿತ ಪ್ರತಿನಿಧಿಗಳ ಕರ್ತವ್ಯ ಆಗಿರುತ್ತದೆ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ಅವರು ಹೇಳಿದರು. ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ...

Related Articles

ಅಂಬೇಡ್ಕರ್ ವಸತಿ ಶಾಲೆಯಲ್ಲಿ ತರಗತಿ ಬಹಿಷ್ಕರಿಸಿ ವಿದ್ಯಾರ್ಥಿಗಳ ಬೃಹತ್ ಪ್ರತಿಭಟನೆ

ಚಿಕ್ಕಮಗಳೂರು: ಅಂಬೇಡ್ಕರ್ ವಸತಿ ಶಾಲೆಯಲ್ಲಿ ಕಳಪೆ ಮಟ್ಟದ ಹಾಗೂ ಅರೆಬೆಂದ ಆಹಾರ ನೀಡಲಾಗುತ್ತಿದೆ ಎಂದು ಆರೋಪಿಸಿ...

15.99 ಲಕ್ಷ ಜನರ ಸಂಧ್ಯಾ ಸುರಕ್ಷಾ ಯೋಜನೆಯ ರದ್ದು

ಚಿಕ್ಕಮಗಳೂರು: ರಾಜ್ಯ ಸರಕಾರ ನೀಡುತ್ತಿರುವ ಸಂಧ್ಯಾ ಸುರಕ್ಷಾ ಯೋಜನೆಯ ಪ್ರಯೋಜನ ೧೫.೯೯ ಲಕ್ಷ ಜನರಿಗೆ ರದ್ದಾಗಿದ್ದು...

ಅಯೋದ್ಯೆ ಹಣ ಕಳವು-ಸುಪ್ರೀಂನಿಂದ ಪಾರದರ್ಶಕ ತನಿಖೆಯಾಗಲಿ

ಚಿಕ್ಕಮಗಳೂರು: ಶ್ರೀರಾಮನ ಹೆಸರಲ್ಲಿ ಅಕಾರಕ್ಕೆ ಬಂದ ಬಿಜೆಪಿ ಶ್ರೀರಾಮನ ಟ್ರಸ್ಟ್ ಮೂಲಕ ಹಣಲೂಟಿ ಮಾಡಿದ್ದೇ ಸಾಧನೆಯಾಗಿದೆ....

ಚಿಕ್ಕಮಗಳೂರು ಜಿಲ್ಲೆಯ ಯಾರಿಗೂ ಸಚಿವ ಸ್ಥಾನವಿಲ್ಲ

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ಯಾವ ಶಾಸಕರಿಗೂ ಮಂತ್ರಿ ಸ್ಥಾನ ಸಿಗುವುದಿಲ್ಲ ಎಂದು ಖಚಿತ ಮಾಹಿತಿ ಇದೆ....