ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಯಾರನ್ನು ನಂಬಿದ್ದರು ಅವರೇ ಕೈ ಕೊಡುವ ಸೂಚನೆ ಅರಿತು ರಾಹುಲ್ ಮಾತು ಕೇಳಿದ ಮೇಲೆ ರಾಜೀನಾಮೆ ಕೊಟ್ಟಿದ್ದು ,ಯಾವ ಕಿತ್ತಾಟವೂ ನಡೆಯಲಿಲ್ಲಾ ಅಷ್ಟೊಂದು ತಣ್ಣಗೆ ಪ್ರತಿಕ್ರಿಯೆ ಮುಗಿಯಿತು ಎಂದು ಶಭಾಷ್ ಎನ್ನುತ್ತಿರುವಾಗ ನಡೆಯುತ್ತಿರುವ ಮೇಲಾಟಗಳನ್ನು ನೋಡಿದರೆ ಕಾಂಗ್ರೆಸ್ ನಲ್ಲಿ ಏನೋ ನಡೆಯುತ್ತಿದೆ ಎನ್ನಿಸುತ್ತದೆ.
ವಿಶೇಷವಾಗಿ ಕಣ್ಣು ಇಟ್ಟಿದ್ದ ಸತೀಶ್ ಜಾರಕಿಹೊಳೆಗೆ ಕಾಲೇಳೆಯಲು ಸಿದ್ದರಾಮಯ್ಯ ಮುಂದಾಗಿದ್ದಾರೆ ಎನ್ನಲಾಗುತ್ತಿದೆ.ಇದರ ಭಾಗವಾಗಿ ಡಿ.ಕೆ.ವಿರೋಧಿಸುತ್ತಿರುವ ಬಿ.ಕೆ.ಹರಿಪ್ರಸಾದ್ ಕೆ.ಪಿ.ಸಿ.ಸಿ ಅಧ್ಯಕ್ಷರಾಗುತ್ತಾರೆ ಎನ್ನಲಾಗುತ್ತಿದೆ.ಡಿ.ಕೆ.ಬಾಲ ಬಿಚ್ಚದಂತೆ ನೋಡಿಕೊಳ್ಳಲು ಎಲ್ಲಾ ರೀತಿಯ ತಯಾರಿ ನಡೆದಿದೆ ಎಂದು ರಾಜಕೀಯ ವಿಶ್ಲೇಷಣೆ ಮಾಡಲಾಗುತ್ತಿದೆ.
ಮೂರು ಜನ ಉಪ ಮುಖ್ಯಮಂತ್ರಿಗಳನ್ನು ನೇಮಿಸುವ ಬಿ ಪ್ಲಾನ್ ಇತ್ತು ಈಗ ಪರಮೇಶ್ವರ್ ಡಿ.ಸಿ.ಎಂ.ಆಗುತ್ತಿರುವುದು ಡಿ.ಕೆ.ಗೆ ಕೊಕ್ಕೆ ಹಾಕಲು ಎಂಬ ವಿಶ್ಲೇಷಣೆ ಮಾಡುವುದರ ಜೊತೆಗೆ ಸಿದ್ದರಾಮಯ್ಯ ಬೆಂಬಲದವರು ಸಂಪುಟಕ್ಕೆ ಹೆಚ್ಚು ಜನ ಸೇರಿದ ರೀತಿ ಮತ್ತು ಸ್ವತಃ ಸಿದ್ದರಾಮಯ್ಯ ಕಾಂಗ್ರೆಸ್ ನ ಉನ್ನತ ಸಮಿತಿ ಸಿ,ಡ,ಬ್ಲೂ ಸಿ,ಸಿ ಕಮಿಟಿಗೆ ನೇಮಕವಾಗಿರುವುದು ಡಿ.ಕೆ.ನಿದ್ದೆ ಕೆಡಿಸಿರಬಹುದು ಎಂದು ಅಂದಾಜಿಸಲಾಗಿದೆ.
ಸಿದ್ದರಾಮಯ್ಯ ಸುಮ್ಮನಿರಲು ಸಾಧ್ಯವಿಲ್ಲ ಏಕೆಂದರೆ ಅವರನ್ನು ಹತ್ತಿರದಿಂದ ಬಲ್ಲವರ ಪ್ರಕಾರ ನನ್ನ ಎರಡು ಕಣ್ಣು ಹೋದರೂ ಪರವಾಗಿಲ್ಲ ಅವರ ವಿರೋಧಿಗಳ ಒಂದು ಕಣ್ಣದರೂ ಸರಿ ತೆಗೆಯ ಬೇಕು ಎಂದು ಪಣ ತೊಡುವುದರಲ್ಲಿ ನಿಪುಣರು ಎನ್ನಲಾಗುತ್ತಿದೆ. ಡಿ.ಕೆ.ಕೂಡ ಉನ್ನತ ಸ್ಥಾನ ಬಯಸಿ ಕೊನೆಯ ಹಂತ ತಲುಪಿದ್ದಾರೆ.ಇತ್ತೀಚೆಗಿನ ಧ್ವನಿ ಕೂಡ ತಗ್ಗಿದೆ.ಆದರೆ ದಿನಕ್ಕೊಂದು ಸವಾಲ್ ಎದುರಿಸಿ ಆಡಳಿತ ಮಾಡಬೇಕಾದ ಅಡಕತ್ತರಿಯಲ್ಲಿ ಇರುವುದು ಮಾತ್ರ ನಿಜ.ಇನ್ನೊಂದು ವರ್ಷ ಮಾತ್ರ ಅಧಿಕಾರ ನಂತರ ಚುನಾವಣೆಗೆ ತಯಾರಿ ನಡೆಸ ಬೇಕಾಗುತ್ತದೆ.
ಹರಿ, ಡಿ.ಕೆ.ಗಳಸ್ಯ ಕಂಠಸ್ಯದಂತಿದ್ದರು ಸಿದ್ದು -ಹರಿ ಹಾವು,ಮುಂಗುಸಿಯಂತಿದ್ದರು ಆದರೆ ಈಗ ಅದಲು ಬದಲುಗಿದ್ದಾರೆ.ಡಿ.ಕೆ.ಸ್ಥಾನ ಪಡೆದಿರುವ ಹರಿಪ್ರಸಾದ್ ರಾಜ್ಯ ಕಾಂಗ್ರೆಸ್ ನ ಅಧ್ಯಕ್ಷರಾಗಿರುವುದು ಡಿ.ಕೆ.ಗೆ ಬಿಸಿತುಪ್ಪವಾಗಿದೆ.
ಇದರಲ್ಲಿ ಸಿದ್ದರಾಮಯ್ಯ ಕೈ ಮೇಲಾಗಿದೆ.ಸಚಿವ ಸಂಪುಟದಲ್ಲಿ ಸಿದ್ದರಾಮಯ್ಯ ನವರ ನಂಬಿಕಸ್ಥರು ಏಳೆಂಟು ಜನರಿದ್ದಾರೆ ಇನ್ನುಳಿದ ಮೂರ್ ನಾಲ್ಕು ಜನ ಹೈಕಮಾಂಡ್ ನವರ ನಂಬಿಕ್ಥರು ಡಿ.ಕೆ.ತಾನು ಮುಖ್ಯಮಂತ್ರಿ ಎನ್ನಿಸಿಕೊಳ್ಳುವುದು ಬಿಟ್ಟರೆ ಮುಂದಿನ ಹೆಜ್ಜೆಗಳನ್ನು ಸುಲಭವಾಗಿ ಇಡಲು ಕಷ್ಟ,ಕಷ್ಟ.ಎಲ್ಲದಕ್ಕೂ ಕೊಕ್ಕೆ ಗ್ಯಾರಂಟಿ. ಓಡುವ ಬದಲು ತೆವಳಿ ದಡ ಮುಟ್ಟಬಹುದು ಇಲ್ಲ ಕಾಂಗ್ರೆಸ್ ನ ಕಿತ್ತಾಟ ಬಹುತೇಕ ಮುಂದುವರೆಯಲಿದೆ.ಹರಿಪ್ರಸಾದ್,ಬ್ರೇಕ್, ಸಿದ್ದರಾಮಯ್ಯ ರ ಸ್ಟೀರಿಂಗ್ ಗಾಡಿ ಯಾವಕಡೆ ಹೋಗುತ್ತದೆ ಎಂಬುದನ್ನು ಮುಂದಿನ ದಿನಗಳಲ್ಲಿ ತಿಳಿಯಲಿದೆ.
ಈಗಾಗಲೇ ಕೋಲ್ಡ್ ವಾರ್ ಪ್ರಾರಂಭವಾಗಿದೆ ಎನ್ನುವುದಕ್ಕೆ ಬಿ.ಕೆ.ಹರಿಪ್ರಸಾದ್ ಅಧ್ಯಕ್ಷರಾದ ದಿನವೇ ಅಧಿಕಾರ ಬೇಕಾದವರು ಡಿ.ಕೆ.ಶಿವಕುಮಾರ್ ಜೊತೆಗೆ ಹೋಗಿ ಪಕ್ಷ ಬೇಕಾದವರು ನಮ್ಮ ಜೊತೆಗೆ ಬನ್ನಿ ಎಂಬ ವಿವಾದಾತ್ಮಕ ಹೇಳಿಕೆ ಬೆಂಕಿಗೆ ಪೆಟ್ರೋಲ್ ಸೇರಿದಂತೆ ಆಗಿದೆ ಬೆಂಕಿ ಜ್ವಾಲೆ ಎಲ್ಲಾ ಕಡೆ ವ್ಯಾಪಿಸಲು ಹೆಚ್ಚು ದಿನ ಬೇಕಾಗಿಲ್ಲ.
Hari brakes Sidhu which way does the steering turn?
Leave a comment