ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ಯಾವ ಶಾಸಕರಿಗೂ ಮಂತ್ರಿ ಸ್ಥಾನ ಸಿಗುವುದಿಲ್ಲ ಎಂದು ಖಚಿತ ಮಾಹಿತಿ ಇದೆ.
ಜಿಲ್ಲೆಯಲ್ಲಿ ಕಾಂಗ್ರೆಸ್ ನ ಐದು ಶಾಸಕರಿದ್ದು ಇಬ್ಬರು ವಿಧಾನ ಪರಿಷತ್ ಸದಸ್ಯರಿದ್ದಾರೆ ಹೀಗಾಗಿ ಮಂತ್ರಿ ಸ್ಥಾನಕ್ಕಾಗಿ ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಮತ್ತು ತರೀಕೆರೆ ಶಾಸಕ ಶ್ರೀನಿವಾಸ್ ಎಲ್ಲಾ ರೀತಿಯ ಕಸರತ್ತು ನಡೆಸಿದ್ದರು.
ಹಿಂದಿನಿಂದಲೂ “ನ್ಯೂಸ್ ಕಿಂಗ್” ಜಿಲ್ಲೆಯ ಯಾರಿಗೂ ಮಂತ್ರಿ ಸ್ಥಾನ ಸಿಗುವುದಿಲ್ಲ ಎಂದು ಬರೆದಿತ್ತು. ಏಕೆಂದರೆ ಜಾತಿ ಲೆಕ್ಕಾಚಾರದಲ್ಲಿ ಒಕ್ಕಲಿಗರ ಕೋಟದಡಿ ಹಿರಿಯ ಶಾಸಕರು ಕ್ಯೂ ನಿಂತಿರುವುದು ಈಗಾಗಲೇ ಮೂರು ಜನ ಒಕ್ಕಲಿಗರು ಮಂತ್ರಿಗಳಾಗಿರುವುದು ರಾಜೇಗೌಡರಿಗೆ ಬಿಸಿ ತುಪ್ಪವಾಗಿದೆ.ಇದೇ ರೀತಿ ಕುರುಬರ ಕೋಟದಡಿ ಯತೀಂದ್ರ ಮತ್ತು ಬೈರತಿ ಸುರೇಶ್ ಮಂತ್ರಿಯಾಗಿರುವುದು ಶ್ರೀನಿವಾಸ್ ಗೆ ಕಡುಕಷ್ಟವಾಗಿದೆ.ಜೊತೆಗೆ ಗೆದ್ದಿರುವ ಶಾಸಕರು ಮೊದಲ ಬಾರಿ ಶಾಸಕರಾಗಿರುವುದರಿಂದ ಮಂತ್ರಿ ಸ್ಥಾನ ಕೇಳಲು ಸಾಧ್ಯವಿಲ್ಲ.
ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಗಾಯಿತ್ರಿ ಶಾಂತೇಗೌಡ ಮೊನ್ನೆ ಮುಖ್ಯಮಂತ್ರಿ ಮತ್ತು ಮಾಜಿ ಮುಖ್ಯಮಂತ್ರಿ ಭೇಟಿಯಾಗಿದ್ದಾರೆ.ಜಿಲ್ಲೆಗೆ ಮಂತ್ರಿ ಸ್ಥಾನ ಕೊಡಿ ಎಂದು ಕೇಳಿದಾಗ ಸಿದ್ದರಾಮಯ್ಯ ನಿಮ್ಮ ಜಿಲ್ಲೆಗೆ ಮಂತ್ರಿ ಸ್ಥಾನ ದೊರೆಯುವುದಿಲ್ಲ ಎಂದು ನೇರವಾಗಿ ಹೇಳಿರುವುದು ಖಂಡಿತವಾಗಿ ಮಂತ್ರಿ ಸ್ಥಾನ ದೊರೆಯುವುದಿಲ್ಲ ಎನ್ನಲಾಗುತ್ತದೆ.
ಕಳೆದ ಮೂರು ವರ್ಷಗಳಿಂದ ಕೆ.ಜೆ.ಜಾರ್ಜ್ ಜಿಲ್ಲಾ ಉಸ್ತುವಾರಿಯಾಗಿ ಕಾಟಚಾರಕ್ಕೆ ಕೆ.ಡಿ.ಪಿ ಸಭೆ ನಡೆಸಿದ್ದು ಬಿಟ್ಟರೆ ನಾಡ ಹಬ್ಬಗಳಲ್ಲಿ ಧ್ವಜಾರೋಹಣ ಮಾಡಿದ್ದೆ ಸಾಕ್ಷಿ ಗುಡ್ಡೆ.ಇಲ್ಲ ಎಂದರೆ ಮೂನ್ನುರು ಎಕರೆ ಕಾಫಿತೋಟದ ಜೊತೆಗೆ ಹತ್ತು ಸಾವಿರ ಎಕರೆಯಷ್ಟು ವಿಸ್ತೀರ್ಣ ಮಾಡಿದ್ದುಸಾಧನೆ ಎನ್ನಬೇಕು.
ಇನ್ನೂ ಶಾಸಕರುಗಳುಇವರೇ ಉತ್ತಮ ಎನ್ನುತ್ತಾರೆ ಏಕೆಂದರೆ ವರ್ಗಾವಣೆ ಧಂದೆಗೆ ಇತರ ವ್ಯವಹಾರ ಗಳಿಗೆ ಕಣ್ಣು ಮುಚ್ಚಿ ಸಹಿ ಹಾಕುವವರನ್ನು ಮೆಚ್ಚಲೇ ಬೇಕು.ಅಂತೂ,ಇಂತೂ ಮೂರು ವರ್ಷ ಮುಗಿಸಿ ಇನ್ನೇರಡು ವರ್ಷ ಜಿಲ್ಲೆಗೆ ಜಾರ್ಜ್ ಬೇಕೆ ಬೇಕು ಎನ್ನುತ್ತಾರೆ.
No one in Chikkamagaluru district has a ministerial position.
Leave a comment