Home namma chikmagalur chikamagalur 15.99 ಲಕ್ಷ ಜನರ ಸಂಧ್ಯಾ ಸುರಕ್ಷಾ ಯೋಜನೆಯ ರದ್ದು
chikamagalurHomeLatest Newsnamma chikmagalur

15.99 ಲಕ್ಷ ಜನರ ಸಂಧ್ಯಾ ಸುರಕ್ಷಾ ಯೋಜನೆಯ ರದ್ದು

Share
Share

ಚಿಕ್ಕಮಗಳೂರು: ರಾಜ್ಯ ಸರಕಾರ ನೀಡುತ್ತಿರುವ ಸಂಧ್ಯಾ ಸುರಕ್ಷಾ ಯೋಜನೆಯ ಪ್ರಯೋಜನ ೧೫.೯೯ ಲಕ್ಷ ಜನರಿಗೆ ರದ್ದಾಗಿದ್ದು ಕೂಡಲೇ ಬಾಕಿ ಪಿಂಚಣಿ ಬಿಡುಗಡೆ ಮಾಡುವಂತೆ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಹೋಬಳಿ ಅಧ್ಯಕ್ಷ ಬಿ.ಎಂ.ಲಿಂಗದೇವರು ಆಗ್ರಹಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಂಧ್ಯಾಸುರಕ್ಷಾ ಯೋಜನೆಯಡಿ ೧೨೦೦ ರೂ .ಮಾಸಾಸನ ಪಡೆಯುತ್ತಿದ್ದ ೨೩.೧೩ ಲಕ್ಷ ಪಿಂಚಣಿದಾರರ ಪೈಕಿ ೧೫.೯೯ ಲಕ್ಷ ಜನರ ಪಿಂಚಣಿಯನ್ನು ಸರಕಾರ ತಡೆಹಿಡಿದಿದೆ.

ಇದರಿಂದ ಹಿರಿಯ ನಾಗರೀಕ ಜೀವಗಳಿಗೆ ತಮ್ಮ ಸಣ್ಣಪುಟ್ಟ ಖರ್ಚು, ವೈದ್ಯಕೀಯ ವೆಚ್ಚಗಳಿಗೆ ತೊಂದರೆಯಾಗಿದೆ. ಪರಿಶೀಲನೆ ಹೆಸರಲ್ಲಿ ಪಿಂಚಣಿ ನಿಲ್ಲಿಸಿರುವುದು ಹಿರಿಯ ಜೀವಗಳಿಗೆ ಶಾಪವಾಗಿ ಪರಿಣಮಿಸಿದೆ ಎಂದು ದೂರಿದರು.

ಕೆಲವು ಲಂಚಕೋರ ಅಕಾರಿಗಳ ಲಾಭಕೋರ ತನದಿಂದ ೪೦-೪೫ ವರ್ಷ ದವರಿಗೂ ಮಾಶಾಸನ ನೀಡಿ ಯೋಜನೆಯನ್ನು ಹಳ್ಳಹಿಡಿಸಿರುವುದು ನಿರ್ವಿವಾದ ಎಂದರು.

ಈ ಅನ್ಯಾಯದ ಬಗ್ಗೆ ಧ್ವನಿ ಎತ್ತಬೇಕಾದ ವಿರೋಧ ಪಕ್ಷಗಳು ಜಾಣಮೌನ ವಹಿಸಿವೆ. ಆದರೆ, ರೈತ ಸಂಘ, ಒಕ್ಕೂಟಗಳು ರೈತರಿಗೋಸ್ಕರ ನಿರಂತರ ಹೋರಾಟ ಮಾಡುತ್ತಿವೆ ಎಂದು ಹೇಳಿದರು.

ಹಿಂಬಾಕಿ ಪಿಂಚಣಿಯನ್ನು ತಕ್ಷಣ ಬಿಡುಗಡೆ ಮಾಡಬೇಕು. ಈ ಯೋಜನೆಗೆ ಬಿಪಿಎಲ್ ಕಾರ್ಡ್ ಆದ್ಯತೆ ಮಾಡಿ ಅನರ್ಹರನ್ನು ವಜಾಗೊಳಿಸುವುದು,ತಪ್ಪಿತಸ್ಥ ಅಕಾರಿಗಳನ್ನು ವಜಾ ಮಾಡಬೇಕು ಎಂದು ಒತ್ತಾಯಿಸಿದರು.

Sandhya Suraksha Yojana for 15.99 lakh people cancelled

Share

Leave a comment

Leave a Reply

Your email address will not be published. Required fields are marked *

Don't Miss

ವೀರಶೈವ ಲಿಂಗಾಯತ ಸಮಾರಂಭದಲ್ಲಿ “ಕುರ್ಚಿ” ತಿಕ್ಕಾಟ ಹಲವು ಸ್ವಾಮಿಜೀಗಳ ವಿರೋದ

ಚಿಕ್ಕಮಗಳೂರು: ವಿಗ್ರಹ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಸ್ವಾಮಿಗಳ ಮಧ್ಯೆ ಕುರ್ಚಿಗಾಗಿ ಪ್ರತಿರೋಧ ಪ್ಯಕ್ತಪಡಿಸಿ ಹೊರ ನಡೆದ ಘಟನೆ ಭಕ್ತರನ್ನು ಘಾಸಿಗೊಳಿಸಿದೆ. ಕಡುಭ್ರಷ್ಟ ರಸಿಕ ಭೂಸೇನ ನಿಗಮದ ತಿಪ್ಪಾರೆಡ್ಡಿ ದಾನವಾಗಿ ವಿಗ್ರಹ ಕೊಟ್ಟ ಮೇಲೆ...

ಕಡೂರು ತಾಲ್ಲೂಕಿನಲ್ಲಿ ಬರದ ಆತಂಕ

ಕಡೂರು: ಮುಂಗಾರು ಮಳೆಯ ಕೊರತೆಯಿಂದ ಕಡೂರು ತಾಲ್ಲೂಕಿನಲ್ಲಿ ಬರದ ಆತಂಕ ಎದುರಾಗಿದ್ದು, ಕುಡಿಯುವ ನೀರು, ಜಾನುವಾರುಗಳ ಮೇವು ಹಾಗೂ ರೈತರ ಪರಿಸ್ಥಿತಿಯನ್ನು ಪರಿಶೀಲಿಸಲು ಜುಲೈ 17ರಿಂದ ಹೋಬಳಿವಾರು ಅಧ್ಯಯನ ಪ್ರವಾಸ ಕೈಗೊಳ್ಳಲಾಗುವುದು...

Related Articles

ಬಿಡದಿ ಭೂಸ್ವಾಧೀನ ಪ್ರಕ್ರಿಯೆ ಕೈಬಿಡುವಂತೆ ಕಿಸಾನ್ ಸಂಘ ಆಗ್ರಹ

ಚಿಕ್ಕಮಗಳೂರು : ಬಿಡದಿ ವ್ಯಾಪ್ತಿ ಪ್ರದೇಶದಲ್ಲಿ ಪ್ರಸ್ತಾವಿತ ಟೌನ್‌ಷಿಪ್ ಯೋಜನೆಗಾಗಿ ಫಲವತ್ತಾದ ಕೃಷಿ ಭೂಮಿಯನ್ನು ಭೂಸ್ವಾಧೀನ...

ರೈತ ಸಂಘ-ಹಸಿರು ಸೇನೆಯಿಂದ ಕೇಂದ್ರ-ರಾಜ್ಯ ಸರ್ಕಾರಗಳ ವಿರುದ್ಧದ ಪ್ರತಿಭಟನೆ

ಚಿಕ್ಕಮಗಳೂರು: ತತ್ವ ಸಿದ್ದಾಂತ, ವಿಚಾರಗಳನ್ನು ಬಲಿಕೊಡದೆ ಸಂಘಟನೆಯನ್ನು ಬೆಳೆಸಬೇಕು. ಯುವ ಪೀಳಿಗೆ ಹೋರಾಟದಲ್ಲಿ ತೊಡಗಿಸಿಕೊಳ್ಳಬೇಕು ಎಂದು...

ಜಿಲ್ಲೆಯಲ್ಲಿ ಮೂರು ತಿಂಗಳಿಂದ ಪಿಂಚಣಿ ಹಣ ಸ್ಥಗಿತ

ಚಿಕ್ಕಮಗಳೂರು: ಸಾಮಾಜಿಕ ಭದ್ರತಾ ಯೋಜನೆಗಳಡಿ ವೃದ್ಧಾಪ್ಯ, ವಿಧವಾ ಸೇರಿದಂತೆ ವಿವಿಧ ಮಾಸಿಕ ಪಿಂಚಣಿಗಳನ್ನು ಪಡೆಯುತ್ತಿರುವ ಫಲಾನುಭವಿಗಳಿಗೆ...

ಕಾಡುಕೋಣ ದಾಳಿಗೆ ಕಾರ್ಮಿಕ ಬಲಿ

ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಡುಕೋಣಗಳ ಹಾವಳಿ ಮತ್ತೆ ಜೀವ ಬಲಿ ಪಡೆದಿದೆ. ಕೊಪ್ಪ ತಾಲೂಕಿನ...