ಚಿಕ್ಕಮಗಳೂರು: ರಾಜ್ಯ ಸರಕಾರ ನೀಡುತ್ತಿರುವ ಸಂಧ್ಯಾ ಸುರಕ್ಷಾ ಯೋಜನೆಯ ಪ್ರಯೋಜನ ೧೫.೯೯ ಲಕ್ಷ ಜನರಿಗೆ ರದ್ದಾಗಿದ್ದು ಕೂಡಲೇ ಬಾಕಿ ಪಿಂಚಣಿ ಬಿಡುಗಡೆ ಮಾಡುವಂತೆ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಹೋಬಳಿ ಅಧ್ಯಕ್ಷ ಬಿ.ಎಂ.ಲಿಂಗದೇವರು ಆಗ್ರಹಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಂಧ್ಯಾಸುರಕ್ಷಾ ಯೋಜನೆಯಡಿ ೧೨೦೦ ರೂ .ಮಾಸಾಸನ ಪಡೆಯುತ್ತಿದ್ದ ೨೩.೧೩ ಲಕ್ಷ ಪಿಂಚಣಿದಾರರ ಪೈಕಿ ೧೫.೯೯ ಲಕ್ಷ ಜನರ ಪಿಂಚಣಿಯನ್ನು ಸರಕಾರ ತಡೆಹಿಡಿದಿದೆ.
ಇದರಿಂದ ಹಿರಿಯ ನಾಗರೀಕ ಜೀವಗಳಿಗೆ ತಮ್ಮ ಸಣ್ಣಪುಟ್ಟ ಖರ್ಚು, ವೈದ್ಯಕೀಯ ವೆಚ್ಚಗಳಿಗೆ ತೊಂದರೆಯಾಗಿದೆ. ಪರಿಶೀಲನೆ ಹೆಸರಲ್ಲಿ ಪಿಂಚಣಿ ನಿಲ್ಲಿಸಿರುವುದು ಹಿರಿಯ ಜೀವಗಳಿಗೆ ಶಾಪವಾಗಿ ಪರಿಣಮಿಸಿದೆ ಎಂದು ದೂರಿದರು.
ಕೆಲವು ಲಂಚಕೋರ ಅಕಾರಿಗಳ ಲಾಭಕೋರ ತನದಿಂದ ೪೦-೪೫ ವರ್ಷ ದವರಿಗೂ ಮಾಶಾಸನ ನೀಡಿ ಯೋಜನೆಯನ್ನು ಹಳ್ಳಹಿಡಿಸಿರುವುದು ನಿರ್ವಿವಾದ ಎಂದರು.
ಈ ಅನ್ಯಾಯದ ಬಗ್ಗೆ ಧ್ವನಿ ಎತ್ತಬೇಕಾದ ವಿರೋಧ ಪಕ್ಷಗಳು ಜಾಣಮೌನ ವಹಿಸಿವೆ. ಆದರೆ, ರೈತ ಸಂಘ, ಒಕ್ಕೂಟಗಳು ರೈತರಿಗೋಸ್ಕರ ನಿರಂತರ ಹೋರಾಟ ಮಾಡುತ್ತಿವೆ ಎಂದು ಹೇಳಿದರು.
ಹಿಂಬಾಕಿ ಪಿಂಚಣಿಯನ್ನು ತಕ್ಷಣ ಬಿಡುಗಡೆ ಮಾಡಬೇಕು. ಈ ಯೋಜನೆಗೆ ಬಿಪಿಎಲ್ ಕಾರ್ಡ್ ಆದ್ಯತೆ ಮಾಡಿ ಅನರ್ಹರನ್ನು ವಜಾಗೊಳಿಸುವುದು,ತಪ್ಪಿತಸ್ಥ ಅಕಾರಿಗಳನ್ನು ವಜಾ ಮಾಡಬೇಕು ಎಂದು ಒತ್ತಾಯಿಸಿದರು.
Sandhya Suraksha Yojana for 15.99 lakh people cancelled
Leave a comment